Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಈ ಶ್ರಾವಣದ ಕೊನೆಯ ಮಂಗಳ ಗೌರಿ ವ್ರತ: ವಿವಾಹ ತಡವಾಗುತ್ತಿದ್ದರೆ ಗೌರಿಯನ್ನು ಈ ರೀತಿ ಆರಾಧಿಸಿ
ಶ್ರಾವಣ ಮಾಸದ ಮಂಗಳಗೌರಿ ವ್ರತಕ್ಕೆ ತುಂಬಾನೇ ಮಹತ್ವವಿದೆ. ವಿವಾಹಿತ ಮಹಿಳೆಯರು, ಅವಾಹಿತ ಮಹಿಳೆಯರು ಬಹಳ ಶ್ರದ್ಧೆಯಿಂದ ಮಂಗಳ ಗೌರಿ ವ್ರತವನ್ನು ಮಾಡುತ್ತಾರೆ. ಮದುವೆಯಾದ 5 ವರ್ಷದೊಳಗೆ ಮಹಿಳೆಯರು ಮಂಗಳಗೌರಿ ವ್ರತವನ್ನು ಮಾಡಿದರೆ ಮದುವೆಯಾಗದ ಹುಡುಗಿಯರು ಒಳ್ಳೆಯ ಪುರುಷ ಸಿಗಲಿ ಎಂದು ಬಯಸಿ ಈ ಮಂಗಳಗೌರಿ ವ್ರತವನ್ನು ಮಾಡಲಾಗುವುದು.
ಸೆಪ್ಟೆಂಬರ್ 12ಕ್ಕೆ ಈ ವರ್ಷದ ಶ್ರಾವಣ ಮಾಸದ ಕೊನೆಯ ಮಂಗಳಗೌರಿ ವ್ರತವನ್ನು ಆಚರಿಸಲಾಗುವುದು. ವಿವಾಹ ಭಾಗ್ಯಕ್ಕಾಗಿ ಮಂಗಳಗೌರಿ ವ್ರತದಂದು ಹೆಣ್ಮಕ್ಕಳು ಈ ರೀತಿ ಮಾಡಿದರೆ ಶಿವ--ಪಾರ್ವತಿ ಕೃಪೆಯಿಂದಾಗಿ ಕಂಕಣ ಭಾಗ್ಯ ದೊರೆಯುವುದು ಎಂದು ಹೇಳಲಾಗುವುದು:

* ಮಂಗಳ ಗೌರಿ ವ್ರತದಂದು ಉಪವಾಸ ಮಾಡಿ: ಮಂಗಳಗೌರಿ ವ್ರತದಂದು ಉಪವಾಸ ಮಾಡಿ. ಈ ರೀತಿ ಉಪವಾಸವಿದ್ದು ವ್ರತ ಮಾಡುವುದರಿಂದ ಸೌಭಾಗ್ಯ ಹೆಚ್ಚಾಗುವುದು.
* ಈ ದಿನ ಕೆಂಪು ವಸ್ತ್ರ ಧರಿಸಿ ಪೂಜೆ ಮಾಡಿ: ಈ ದಿನ ಕೆಂಪು ವಸ್ತ್ರ ಧರಿಸಿ ನೀವು ಗೌರಿಯನ್ನು ಆರಾಧಿಸಿ. ಪಾರ್ವತಿಯನ್ನು ನೀವು ಶ್ರದ್ಧೆ-ಭಕ್ತಿಯಿಂದ ಆರಾಧಿಸಿ.
* ದೇವಿಗೆ ತುಪ್ಪದ ದೀಪವನ್ನು ಹಚ್ಚಿ: ಹಿಟ್ಟಿನಿಂದ ಮಾಡಿದ ದೀಪಕ್ಕೆ 16 ಬತ್ತಿ ಹಾಕಿ ದೀಪ ಹಚ್ಚಿ.
ಷೋಡಶೋಪಚಾರ ಪೂಜೆ ಮಾಡಿ
ಪೂಜೆಗೆ ಬೇಕಾಗುವ ಸಾಮಗ್ರಿ: ಶುದ್ಧ ನೀರು, ಗಂಗಾಜಲ, ಧೂಪ, ದೀಪ, ಸಿಂಧೂರ, ಕುಂಕುಮ, ಚಂದನ, ಮಣೆ, ಯಜ್ಞೋಪವೀತ, ವಸ್ತ್ರ, ಅಕ್ಷತೆ, ಧಾನ್ಯಗಳು, ಕರ್ಪೂರ, ತುಪ್ಪ, ಮೊಸರು, ಸಕ್ಕರೆ, ಹೂವುಗಳು, ವೀಳ್ಯದೆಲೆಗಳು, ವೀಳ್ಯದೆಲೆ, ಸುಗಂಧ ದ್ರವ್ಯ ಇತ್ಯಾದಿಗಳನ್ನು ಭಕ್ತಿಯಿಂದ ಅರ್ಪಿಸಿ.
ಇನ್ನು ಪ್ರೀತಿಸಿ ಮದುವೆಯಾಗ ಬಯಸುವವರು ಈ ರೀತಿ ಮಾಡಿ
* ಮೊದಲಿಗೆ ನೀವು ಒಂದು ಕಡೆ ಕೂತು ಮನಸ್ಸನ್ನು ಧ್ಯಾನದ ಕಡೆಗೆ ಗಮನಹರಿಸಿ
* ನಂತರ ಓಂ ಹನ್ ಗನ್ ಜೂನ್ ವಶ್ಯ ವಶ್ಯ ಸ್ವಾಹಾ । ಈ ಮಂತ್ರ ಪಠಿಸಿ
* ಈ ಮಂತ್ರವನ್ನು ಪಠಣೆ ಮಾಡುವಾಗ ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಫೋಟೋವನ್ನು ಇರಿಸಿ ಮಂತ್ರ ಪಠಿಸಿ.
* ಈ ಮಂತ್ರವನ್ನು ಹೇಳಲು ಪ್ರಾರಂಭಿಸಿದರೆ 21 ದಿನ ಪ್ರತಿದಿನ 108 ಬಾರಿ ಪಠಿಸಬೇಕು.
ಹೀಗೆ ಪೂಜಿಸಿದರೆ ನೀವು ಇಷ್ಟಪಡುವವರನ್ನು ಶೀಘ್ರದಲ್ಲಿಯೇ ಮದುವೆಯಾಗಬಹುದು.
ಮಂಗಳ ದೋಷವಿದ್ದರೆ
* ಸೋಮವಾರ ಉಪವಾಸವಿದ್ದು ಶಿವನನ್ನು ಆರಾಧಿಸಿ
* ಮಂಗಳವಾರ ಉಪವಾಸವಿದ್ದು ಮಂಗಳಗೌರಿಯನ್ನು ಆರಾಧಿಸಿ
* ಮಂಗಳವಾರ ಶಿವ-ಪಾರ್ವತಿಯನ್ನು ಆರಾಧಿಸಿ
* ಶಿವ ಮಂತ್ರ ಪಠಿಸುತ್ತಾ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ.
ಕೆಲವರಿಗೆ ಮಂಗಳ ದೋಷವಿರುತ್ತದೆ, ಮಂಗಳ ದೋಷವಿದ್ದರೆ ವಿವಾಹ ತಡವಾಗುವುದು ಅಥವಾ ವಿವಾಹವಾದರೂ ಅನೇಕ ಸಮಸ್ಯೆಗಳು ಬರುವುದು ಎಂದು ಹೇಳಲಾಗುವುದು. ಮಂಗಳದೋಷವಿರುವವರು ಮಂಗಳ ಗೌರಿ ವ್ರತದಂದು ಈ ಪರಿಹಾರ ಮಾಡಿ
* ಮಂಗಳ ಗೌರಿಗೆ ಪೂಜೆ ಸಲ್ಲಿಸಿದ ಬಳಿದ ಬಡವರಿಗೆ ಕೆಂಪು ಬಟ್ಟೆಗಳನ್ನು ದಾನ ಮಾಡಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನವು ಬಲಗೊಳ್ಳುತ್ತದೆ.
* ಮಂಗಳವಾರದಂದು ರಾಮಚರಿತಮಾನಸದ ಸುಂದರಕಾಂಡವನ್ನು ಪಠಿಸಿ. ಹೀಗೆ ಮಾಡುವುದರಿಂದ ನೀವು ಹನುಮಂತನ ಆಶೀರ್ವಾದವನ್ನು ಪಡೆಯುತ್ತೀರಿ, ಹಾಗೂ ಜಾತಕದಲ್ಲಿನ ಮಂಗಳ ದೋಷ ದೂರಾಗುವುದು.
* "ಓಂ ಗೌರಿ ಶಂಕರಾಯ ನಮಃ" ಪಠಿಸಿ. ಇದರಿಂದ ಮಾತೆ ಮಂಗಳ ಗೌರಿಯ ಆಶೀರ್ವಾದ ದೊರೆಯುತ್ತದೆ, ಮದುವೆಗೆ ಇರುವ ಅಡೆತಡೆಗಳು ದೂರಾಗಲಿದೆ.



Click it and Unblock the Notifications