Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಈ ಶ್ರಾವಣದ ಕೊನೆಯ ಮಂಗಳ ಗೌರಿ ವ್ರತ: ವಿವಾಹ ತಡವಾಗುತ್ತಿದ್ದರೆ ಗೌರಿಯನ್ನು ಈ ರೀತಿ ಆರಾಧಿಸಿ
ಶ್ರಾವಣ ಮಾಸದ ಮಂಗಳಗೌರಿ ವ್ರತಕ್ಕೆ ತುಂಬಾನೇ ಮಹತ್ವವಿದೆ. ವಿವಾಹಿತ ಮಹಿಳೆಯರು, ಅವಾಹಿತ ಮಹಿಳೆಯರು ಬಹಳ ಶ್ರದ್ಧೆಯಿಂದ ಮಂಗಳ ಗೌರಿ ವ್ರತವನ್ನು ಮಾಡುತ್ತಾರೆ. ಮದುವೆಯಾದ 5 ವರ್ಷದೊಳಗೆ ಮಹಿಳೆಯರು ಮಂಗಳಗೌರಿ ವ್ರತವನ್ನು ಮಾಡಿದರೆ ಮದುವೆಯಾಗದ ಹುಡುಗಿಯರು ಒಳ್ಳೆಯ ಪುರುಷ ಸಿಗಲಿ ಎಂದು ಬಯಸಿ ಈ ಮಂಗಳಗೌರಿ ವ್ರತವನ್ನು ಮಾಡಲಾಗುವುದು.
ಸೆಪ್ಟೆಂಬರ್ 12ಕ್ಕೆ ಈ ವರ್ಷದ ಶ್ರಾವಣ ಮಾಸದ ಕೊನೆಯ ಮಂಗಳಗೌರಿ ವ್ರತವನ್ನು ಆಚರಿಸಲಾಗುವುದು. ವಿವಾಹ ಭಾಗ್ಯಕ್ಕಾಗಿ ಮಂಗಳಗೌರಿ ವ್ರತದಂದು ಹೆಣ್ಮಕ್ಕಳು ಈ ರೀತಿ ಮಾಡಿದರೆ ಶಿವ--ಪಾರ್ವತಿ ಕೃಪೆಯಿಂದಾಗಿ ಕಂಕಣ ಭಾಗ್ಯ ದೊರೆಯುವುದು ಎಂದು ಹೇಳಲಾಗುವುದು:

* ಮಂಗಳ ಗೌರಿ ವ್ರತದಂದು ಉಪವಾಸ ಮಾಡಿ: ಮಂಗಳಗೌರಿ ವ್ರತದಂದು ಉಪವಾಸ ಮಾಡಿ. ಈ ರೀತಿ ಉಪವಾಸವಿದ್ದು ವ್ರತ ಮಾಡುವುದರಿಂದ ಸೌಭಾಗ್ಯ ಹೆಚ್ಚಾಗುವುದು.
* ಈ ದಿನ ಕೆಂಪು ವಸ್ತ್ರ ಧರಿಸಿ ಪೂಜೆ ಮಾಡಿ: ಈ ದಿನ ಕೆಂಪು ವಸ್ತ್ರ ಧರಿಸಿ ನೀವು ಗೌರಿಯನ್ನು ಆರಾಧಿಸಿ. ಪಾರ್ವತಿಯನ್ನು ನೀವು ಶ್ರದ್ಧೆ-ಭಕ್ತಿಯಿಂದ ಆರಾಧಿಸಿ.
* ದೇವಿಗೆ ತುಪ್ಪದ ದೀಪವನ್ನು ಹಚ್ಚಿ: ಹಿಟ್ಟಿನಿಂದ ಮಾಡಿದ ದೀಪಕ್ಕೆ 16 ಬತ್ತಿ ಹಾಕಿ ದೀಪ ಹಚ್ಚಿ.
ಷೋಡಶೋಪಚಾರ ಪೂಜೆ ಮಾಡಿ
ಪೂಜೆಗೆ ಬೇಕಾಗುವ ಸಾಮಗ್ರಿ: ಶುದ್ಧ ನೀರು, ಗಂಗಾಜಲ, ಧೂಪ, ದೀಪ, ಸಿಂಧೂರ, ಕುಂಕುಮ, ಚಂದನ, ಮಣೆ, ಯಜ್ಞೋಪವೀತ, ವಸ್ತ್ರ, ಅಕ್ಷತೆ, ಧಾನ್ಯಗಳು, ಕರ್ಪೂರ, ತುಪ್ಪ, ಮೊಸರು, ಸಕ್ಕರೆ, ಹೂವುಗಳು, ವೀಳ್ಯದೆಲೆಗಳು, ವೀಳ್ಯದೆಲೆ, ಸುಗಂಧ ದ್ರವ್ಯ ಇತ್ಯಾದಿಗಳನ್ನು ಭಕ್ತಿಯಿಂದ ಅರ್ಪಿಸಿ.
ಇನ್ನು ಪ್ರೀತಿಸಿ ಮದುವೆಯಾಗ ಬಯಸುವವರು ಈ ರೀತಿ ಮಾಡಿ
* ಮೊದಲಿಗೆ ನೀವು ಒಂದು ಕಡೆ ಕೂತು ಮನಸ್ಸನ್ನು ಧ್ಯಾನದ ಕಡೆಗೆ ಗಮನಹರಿಸಿ
* ನಂತರ ಓಂ ಹನ್ ಗನ್ ಜೂನ್ ವಶ್ಯ ವಶ್ಯ ಸ್ವಾಹಾ । ಈ ಮಂತ್ರ ಪಠಿಸಿ
* ಈ ಮಂತ್ರವನ್ನು ಪಠಣೆ ಮಾಡುವಾಗ ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಫೋಟೋವನ್ನು ಇರಿಸಿ ಮಂತ್ರ ಪಠಿಸಿ.
* ಈ ಮಂತ್ರವನ್ನು ಹೇಳಲು ಪ್ರಾರಂಭಿಸಿದರೆ 21 ದಿನ ಪ್ರತಿದಿನ 108 ಬಾರಿ ಪಠಿಸಬೇಕು.
ಹೀಗೆ ಪೂಜಿಸಿದರೆ ನೀವು ಇಷ್ಟಪಡುವವರನ್ನು ಶೀಘ್ರದಲ್ಲಿಯೇ ಮದುವೆಯಾಗಬಹುದು.
ಮಂಗಳ ದೋಷವಿದ್ದರೆ
* ಸೋಮವಾರ ಉಪವಾಸವಿದ್ದು ಶಿವನನ್ನು ಆರಾಧಿಸಿ
* ಮಂಗಳವಾರ ಉಪವಾಸವಿದ್ದು ಮಂಗಳಗೌರಿಯನ್ನು ಆರಾಧಿಸಿ
* ಮಂಗಳವಾರ ಶಿವ-ಪಾರ್ವತಿಯನ್ನು ಆರಾಧಿಸಿ
* ಶಿವ ಮಂತ್ರ ಪಠಿಸುತ್ತಾ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ.
ಕೆಲವರಿಗೆ ಮಂಗಳ ದೋಷವಿರುತ್ತದೆ, ಮಂಗಳ ದೋಷವಿದ್ದರೆ ವಿವಾಹ ತಡವಾಗುವುದು ಅಥವಾ ವಿವಾಹವಾದರೂ ಅನೇಕ ಸಮಸ್ಯೆಗಳು ಬರುವುದು ಎಂದು ಹೇಳಲಾಗುವುದು. ಮಂಗಳದೋಷವಿರುವವರು ಮಂಗಳ ಗೌರಿ ವ್ರತದಂದು ಈ ಪರಿಹಾರ ಮಾಡಿ
* ಮಂಗಳ ಗೌರಿಗೆ ಪೂಜೆ ಸಲ್ಲಿಸಿದ ಬಳಿದ ಬಡವರಿಗೆ ಕೆಂಪು ಬಟ್ಟೆಗಳನ್ನು ದಾನ ಮಾಡಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನವು ಬಲಗೊಳ್ಳುತ್ತದೆ.
* ಮಂಗಳವಾರದಂದು ರಾಮಚರಿತಮಾನಸದ ಸುಂದರಕಾಂಡವನ್ನು ಪಠಿಸಿ. ಹೀಗೆ ಮಾಡುವುದರಿಂದ ನೀವು ಹನುಮಂತನ ಆಶೀರ್ವಾದವನ್ನು ಪಡೆಯುತ್ತೀರಿ, ಹಾಗೂ ಜಾತಕದಲ್ಲಿನ ಮಂಗಳ ದೋಷ ದೂರಾಗುವುದು.
* "ಓಂ ಗೌರಿ ಶಂಕರಾಯ ನಮಃ" ಪಠಿಸಿ. ಇದರಿಂದ ಮಾತೆ ಮಂಗಳ ಗೌರಿಯ ಆಶೀರ್ವಾದ ದೊರೆಯುತ್ತದೆ, ಮದುವೆಗೆ ಇರುವ ಅಡೆತಡೆಗಳು ದೂರಾಗಲಿದೆ.



Click it and Unblock the Notifications