Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾರ್ಮಿಕರ ದಿನ: ಪ್ರತಿಯೊಬ್ಬ ಉದ್ಯೋಗಿ ತಮ್ಮ ಈ ಹಕ್ಕುಗಳ ಬಗ್ಗೆ ತಿಳಿದಿರಲೇಬೇಕು
ಮೇ. 1ನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುವುದು. ಕಾರ್ಮಿಕರ ಶ್ರಮವನ್ನು ಗೌರವಿಸಲು ಹಾಗೂ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ನಮ್ಮಲ್ಲಿ ಸ್ವಂತ ವ್ಯವಹಾರ ಅಥವಾ ಉದ್ಯೋಗವನ್ನು ಮಾಡುತ್ತಿರುವವರು ಕೆಲವೇ ಕೆಲವು ಮಂದಿಯಷ್ಟೇ ಇರುತ್ತಾರೆ.
ಬಹುತೇಕರು ಯಾವುದೋ ಕಂಪನಿಗಳಲ್ಲಿ ಕಾರ್ಮಿಕರಾಗು ದುಡಿಯುತ್ತಿರುತ್ತೇವೆ.ಯಾವುದೇ ಚಿಕ್ಕ ಹುದ್ದೆಯಲ್ಲಿ ಇರುವವರಾಗಲಿ ಅಥವಾ ದೊಡ್ಡ ಹುದ್ದೆಯಲ್ಲಿ ಇರುವವರಾಗಲಿ ಒಂದ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುವಾಗ ಅಲ್ಲಿಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಆದರೆ ನಮ್ಮ ಹಕ್ಕುಗಳ ಬಗ್ಗೆ ಗೊತ್ತಿದ್ದರೆ ಕಂಪನಿಯಲ್ಲಿ ಉದ್ಯೋಗಿಗಳಿಗೆ ವಿರುದ್ಧವಾದ ನಿಯಮಗಳನ್ನು ಪಾಲಿಸುತ್ತಿದ್ದರೆ ಧ್ವನಿ ಎತ್ತಬಹುದು ಅಥವಾ ನಿಮ್ಮ ಹಕ್ಕುಗಳಿಗಾಗಿ ಹೋರಾಡಬಹುದು. ಆದ್ದರಿಂದ ಪ್ರತಿಯೊಂದು ಉದ್ಯೋಗಿ ಈ ಸಾಮಾನ್ಯ ಹಕ್ಕುಗಳನ್ನು ತಿಳಿದಿರುವುದು ಒಳ್ಳೆಯದು:
ಕೆಲಸವನ್ನು ಬಿಡುವ ಹಕ್ಕು: ಭಾರತದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿ ಈ ಹಕ್ಕನ್ನು ಹೊಂದಿರುತ್ತಾರೆ. ಕಂಪನಿಯು ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಒತ್ತಾಯ ಹಾಕಿದರೆ ನೋಟೀಸ್ ಪಿರೀಡ್ ನೀಡಬೇಕಾಗುತ್ತದೆ. ಒಂದು ವೇಳೆ ಉದ್ಯೋಗಿಯನ್ನು ಯಾವುದೇ ಕಾರಣ ನೀಡದೆ ತೆಗೆದು ಹಾಕಿದರೆ ಉದ್ಯೋಗಿ ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸುವ ಹಕ್ಕು ಹೊಂದಿರುತ್ತಾರೆ. ಈ ಮೂಲಕ ತಮಗಾದ ನಷ್ಟವನ್ನು ಸರಿದೂಗಿಸುವ ಹಕ್ಕನ್ನು ಬಾರತೀಯ ಸಂವಿಧಾನ ನೀಡಿದೆ.
ಟರ್ಮಿನೇಷನ್ ವಿಧಗಳು
ಉದ್ಯೋಗಿ ಸ್ವಇಚ್ಛೆಯಿಂದ ಕೆಲಸ ಬಿಡುವುದು
ಉದ್ಯೊಗಿ ವೈಯಕ್ತಿಕ ಕಾರಣಗಳಿಂದ ಅಥವಾ ಇತರ ಕಡೆ ಉದ್ಯೋಗ ಸಿಕ್ಕಾಗ ಕಂಪನಿಯನ್ನು ತೊರೆಯುವ ನಿರ್ಧಾರ ಮಾಡುತ್ತಾರೆ. ಉದ್ಯೋಗಿ ಈ ರೀತಿ ನಿರ್ಧಾರ ಮಾಡಿದಾಗ ಒಂದು ತಿಂಗಳ ನೋಟೀಸ್ ಮಾಡಿ ಬಿಡುವಂತೆ ಸೂಚಿಸುವ ಹಕ್ಕನ್ನು ಹೊಂದಿದೆ.
ಉದ್ಯೋಗ ಕಡಿತ
ಕೆಲವೊಮ್ಮೆ ಕಂಪನಿ ಉದ್ಯೋಗ ಕಡಿತ ಅಥವಾ ತಮ್ಮ ಕಂಪನಿಯಲ್ಲಿ ಕಡಿಮೆ ಉದ್ಯೋಗಿಗಳೊಂದಿಗೆ ತಮ್ಮ ಗುರಿ ಮುಟ್ಟಲು ಪ್ರಯತ್ನಿಸಿ ತುಂಬಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಹುದು. ಆದರೆ ಉದ್ಯೋಗಿಯನ್ನು ಹೀಗೆ ಕೆಲಸದಿಂದ ತೆಗೆಯುವಾಗ ಏಕಾಏಕಿ ತೆಗೆಯುವಂತಿಲ್ಲ, ಏಕೆ ತೆಗೆಯುತ್ತಿದ್ದೇವೆ ಎಂಬ ಕಾರಣ ನೀಡಿ ತೆಗೆಯಬೇಕಾಗುತ್ತದೆ.
ತುರ್ತಾಗಿ ಉದ್ಯೋಗಿಯನ್ನು ಟರ್ಮಿನೇಷನ್ ಮಾಡುವುದು
ಉದ್ಯೋಗಿ ನಡತೆ ಸರಿಯಿಲ್ಲದಿದ್ದರೆ ಅಂದರೆ ಉದ್ಯೋಗಿ ನಡತೆಯಿಂದಾಗಿ ಕಂಪನಿಯ ಗೌರವಕ್ಕೆ ಚ್ಯತಿ ಬರುವಂತಿದ್ದರೆ ಅಂಥ ಉದ್ಯೋಗಿಯನ್ನು ಕಂಪನಿ ತಕ್ಷಣವೇ ತೆಗೆದುಹಾಕುವ ಹಕ್ಕನ್ನು ಹೊಂದಿರುತ್ತದೆ.
ಉದ್ಯೋಗಿಯನ್ನು ಕೆಲಸದಿಂದ ತೆಗೆಯುವುದರ ಬಗ್ಗೆ ಕರ್ನಾಟಕದ ರಾಜ್ಯ ಕಾರ್ಮಿಕ ಕಾನೂನು ಏನು ಹೇಳುತ್ತದೆ?
ಕರ್ನಾಟಕದ 1961ರ ಶಾಪ್ಸ್ ಅಂಡ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ ಮತ್ತು 1947ರ ತಮಿಳುನಾಡು ಶಾಪ್ಸ್ ಅಂಡ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ ಪ್ರಕಾರ ಒಂದು ಉದ್ಯೋಗಿ ಕಂಪನಿಯಲ್ಲಿ 6 ತಿಂಗಳಿಗಿಂತ ಅಧಿಕ ಸಮಯ ಕೆಲಸ ಮಾಡಿದರೆ ಇದ್ದಕ್ಕಿದ್ದಂಯೆ ಕೆಲಸದಿಂದ ವಜಾ ಮಾಡುವಂತಿಲ್ಲ, ಕೆಲಸದಿಂದ ವಜಾ ಮಾಡುವುದಾದರೆ ಸೂಕ್ತ ಕಾರಣಗಳನ್ನು ನೀಡಿ ತೆಗೆಯಬೇಕಾಗುತ್ತದೆ.
2. ಮಾತನಾಡುವ ಹಕ್ಕು
ಪ್ರತಿಯೊಬ್ಬ ಉದ್ಯೋಗಿ ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಈ ಕುರಿತು ಧ್ವನಿ ಎತ್ತುವ ಹಕ್ಕನ್ನು ಹೊಂದಿದೆ. ಪ್ರತಿಯೊಬ್ಬ ಉದ್ಯೋಗಿ ತಾರತಮ್ಯ, ಹಿಂಸೆ ಅನುಭವಿಸುತ್ತಿದ್ದರೆ ಅದರ ವಿರುದ್ಧ ಧ್ವನಿಯೆತ್ತುವ ಹಕ್ಕನ್ನು ಹೊಂದಿದೆ.
ವೈದ್ಯಕೀಯ ಚಿಕಿತ್ಸೆ ಪಡೆಯುವ ಹಕ್ಕು
ಪ್ರತಿಯೊಬ್ಬ ಉದ್ಯೋಗಿ ಏನಾದರೂ ಗಾಯವಾದರೆ ಅಥವಾ ಅನಾರೋಗ್ಯ ಉಂಟಾದರೆ ಕೆಲಸಕ್ಕೆ ರಜೆ ಹಾಕಿ ಚಿಕಿತ್ಸೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
ತಾವು ಎಷ್ಟು ಗಂಟೆ ಕೆಲಸ ಮಾಡಿದ್ದೇವೆ ಅದಕ್ಕೆ ತಕ್ಕ ಹಣವನ್ನು ಪಡೆಯುವ ಹಕ್ಕು
ಉದ್ಯೋಗಿ ತಾನು ಎಷ್ಟು ಗಂಟೆ ಕೆಲಸ ಮಾಡಿದ್ದೇನೋ ಅದಕ್ಕೆ ತಕ್ಕಷ್ಟು ಸಂಬಳ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ರಜಾ ದಿನಗಳಲ್ಲಿ ಅಥವಾ ಕೆಲಸದ ಸಮಯ ಮೀರಿ ಅಧಿಕ ಹೊತ್ತು ಕೆಲಸ ಮಾಡಿದರೆ ಅದಕ್ಕೆ ತಕ್ಕ ಸಂಬಳ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.



Click it and Unblock the Notifications