Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
Kartik Purnima 2025: ನಿಮ್ಮ ರಾಶಿ ಪ್ರಕಾರ ನೀವು ಮಾಡಬೇಕಾದ ದಾನಗಳು! ಗ್ರಹ ದೋಷಗಳು ದೂರ
ಕಾರ್ತಿಕ ಪೂರ್ಣಿಮೆಯ ದಿನದಂದು ಈ ದಾನ ಮಾಡಿದರೆ ಭಾಗ್ಯ ಬಾಗಿಲು ತಟ್ಟುತ್ತದೆ! ನಿಮ್ಮ ರಾಶಿ ಪ್ರಕಾರ ತಿಳಿದುಕೊಳ್ಳಿ ಯಾವ ದಾನ ಉತ್ತಮ? ಹೌದು, ಕಾರ್ತಿಕ ಪೂರ್ಣಿಮೆ (Kartik Purnima 2025) ದಿನದಂದು ನಿಮ್ಮ ರಾಶಿಗನುಗುಣವಾಗಿ ದಾನ ಮಾಡುವುದರಿಂದ ಗ್ರಹ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಜೊತೆಗೆ ಉತ್ತಮ ಫಲಗಳು ಲಭಿಸುತ್ತವೆ. ಅದರಂತೆ, ಈ ಪವಿತ್ರ ದಿನದಂದು ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು (kartik purnima 2025 daan) ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಹಿಂದೂ ಧರ್ಮದಲ್ಲಿ ಪ್ರತಿಯೊಂದು ತಿಥಿ ಮತ್ತು ವಾರಕ್ಕೂ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ. ಅವುಗಳಲ್ಲಿ ಕಾರ್ತಿಕ ಪೂರ್ಣಿಮೆ ಕೂಡ ಒಂದು. ಇದನ್ನು ದಾನ, ಸ್ನಾನ ಮತ್ತು ಪೂಜೆಗಳಿಗೆ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಾಡಿದ ದಾನವು ಪಾಪಗಳನ್ನು ನಾಶಪಡಿಸುತ್ತದೆ. ವ್ಯಕ್ತಿಗೆ ಸಂಪತ್ತು, ಸುಖ ಮತ್ತು ದೈವ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಈ ವರ್ಷ (2025) ಕಾರ್ತಿಕ ಪೂರ್ಣಿಮೆಯನ್ನು ನವೆಂಬರ್ 5ರಂದು (Kartik Purnima 2025 Date) ಆಚರಿಸಲಾಗುವುದು. ಈ ದಿನ ಗಂಗಾ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ, ಕಾರ್ತಿಕ ಪೂರ್ಣಿಮೆ ದಿನದಂದು ರಾಶಿಗನುಗುಣವಾಗಿ ದಾನ ಮಾಡಿದರೆ ಅದರ ಫಲಗಳು ಹೆಚ್ಚಿ, ಗ್ರಹ ದೋಷಗಳು ನಿವಾರಣೆಯಾಗುತ್ತವೆ.
ರಾಶಿ ಅನುಸಾರ ದಾನಗಳು
ಮೇಷ ರಾಶಿ
ಕೆಂಪು ವಸ್ತ್ರಗಳು, ಮಸೂರ್ ಬೇಳೆ, ಜೇನುತುಪ್ಪ ಅಥವಾ ಕೆಂಪು ಹಣ್ಣುಗಳನ್ನು ದಾನ ಮಾಡುವುದು ಅತ್ಯಂತ ಶುಭ. ಇದು ಶಕ್ತಿ, ಧೈರ್ಯ ಮತ್ತು ಸಂಪತ್ತನ್ನು ಹೆಚ್ಚಿಸಿ, ಸಾಲದಿಂದ ಮುಕ್ತಿ ನೀಡುತ್ತದೆ.
ವೃಷಭ ರಾಶಿ
ಅಕ್ಕಿ, ತುಪ್ಪ, ಮೊಸರು ಅಥವಾ ಬಿಳಿ ಸಿಹಿತಿಂಡಿಗಳನ್ನು ದಾನ ಮಾಡಿ. ಇದರಿಂದ ಭೌತಿಕ ಸುಖ ಮತ್ತು ಕೌಟುಂಬಿಕ ಸಂತೋಷ ಹೆಚ್ಚಾಗುತ್ತದೆ.
ಮಿಥುನ ರಾಶಿ
ವ್ಯಾಪಾರ ಅಥವಾ ಉದ್ಯೋಗದಲ್ಲಿ ಅಡೆತಡೆ ಎದುರಿಸುತ್ತಿರುವವರು ಹಸಿ ಹೆಸರು ಬೇಳೆ, ಹಸಿರು ತರಕಾರಿಗಳು, ಹಸಿರು ವಸ್ತ್ರಗಳು ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ದಾನ ಮಾಡಬೇಕು. ಇದರಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು.
ಕಟಕ ರಾಶಿ
ಲಕ್ಷ್ಮಿ ದೇವಿಯ ಕೃಪೆ ಪಡೆಯಲು ಕರ್ಕ ರಾಶಿಯವರು ಬಿಳಿ ಸಿಹಿತಿಂಡಿಗಳು, ಬೆಳ್ಳಿ, ಕಲ್ಲು ಸಕ್ಕರೆ ಅಥವಾ ನೀರನ್ನು ದಾನ ಮಾಡಬೇಕು. ಇದು ಮಾನಸಿಕ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.
ಸಿಂಹ ರಾಶಿ
ಗ್ರಹ ದೋಷಗಳನ್ನು ನಿವಾರಿಸಲು ಸಿಂಹ ರಾಶಿಯವರು ತಾಮ್ರದ ಪಾತ್ರೆಗಳು, ಬೆಲ್ಲ, ಕಿತ್ತಳೆ ಬಣ್ಣದ ವಸ್ತ್ರಗಳು ಮತ್ತು ಕೆಂಪು ಹೂವುಗಳನ್ನು ದಾನ ಮಾಡಬೇಕು. ಇದರಿಂದ ಗೌರವ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಬಡವರಿಗೆ ಹಸಿ ಹೆಸರು ಬೇಳೆ, ಹಸಿರು ತರಕಾರಿಗಳು ಅಥವಾ ಹಸಿರು ವಸ್ತ್ರಗಳನ್ನು ದಾನ ಮಾಡಬೇಕು. ಇದು ಆರೋಗ್ಯ ಸುಧಾರಣೆ ಮತ್ತು ಜೀವನದಲ್ಲಿ ಸಮತೋಲನ ತರುತ್ತದೆ.
ತುಲಾ ರಾಶಿ
ಲಕ್ಷ್ಮಿ ದೇವಿಯ ವಿಶೇಷ ಕೃಪೆ ಪಡೆಯಲು ತುಲಾ ರಾಶಿಯವರು ಬಿಳಿ ವಸ್ತ್ರಗಳು, ಸುಗಂಧ ದ್ರವ್ಯಗಳು, ಅಕ್ಕಿ ಮತ್ತು ತುಪ್ಪವನ್ನು ದಾನ ಮಾಡಬೇಕು. ಇದು ಸಂಪತ್ತನ್ನು ಹೆಚ್ಚಿಸುತ್ತದೆ.
ವೃಶ್ಚಿಕ ರಾಶಿ
ಈ ರಾಶಿಯವರು ಬೆಲ್ಲ, ಮಸೂರ್ ಬೇಳೆ, ಕೆಂಪು ಹಣ್ಣುಗಳು ಅಥವಾ ಬಡವರಿಗೆ ಹಣವನ್ನು ದಾನ ಮಾಡುವುದರಿಂದ ನಿಂತುಹೋದ ಕಾರ್ಯಗಳು ಪೂರ್ಣಗೊಂಡು ಜೀವನದಲ್ಲಿ ಪ್ರಗತಿ ಲಭಿಸುತ್ತದೆ.
ಧನು ರಾಶಿ
ನಿಮಗೆ ಹಳದಿ ವಸ್ತ್ರಗಳು, ಬಾಳೆಹಣ್ಣು, ಕಡಲೆ ಬೇಳೆ, ಕೇಸರಿ ಅಥವಾ ಅರಿಶಿನವನ್ನು ದಾನ ಮಾಡುವುದು ಶುಭ. ಇದರಿಂದ ಮಕ್ಕಳ ಪ್ರಗತಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ.
ಮಕರ ರಾಶಿ
ಮಕರ ರಾಶಿಯವರು ಎಳ್ಳು, ಸಾಸಿವೆ ಎಣ್ಣೆ, ಉದ್ದಿನ ಬೇಳೆ ಮತ್ತು ಕಂಬಳಿಗಳನ್ನು ದಾನ ಮಾಡಬೇಕು. ಇದರಿಂದ ಶನಿ ದೋಷ ನಿವಾರಣೆಯಾಗಿ ವೃತ್ತಿಯ ಅಡೆತಡೆಗಳು ದೂರವಾಗುತ್ತವೆ.
ಕುಂಭ ರಾಶಿ
ಕುಂಭ ರಾಶಿಯವರು ಕಪ್ಪು ಕಂಬಳಿ, ಉದ್ದಿನ ಬೇಳೆ, ಎಳ್ಳು ಅಥವಾ ಪಾದರಕ್ಷೆಗಳನ್ನು ದಾನ ಮಾಡಬೇಕು. ಇದು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.
ಮೀನ ರಾಶಿ
ಬಡವರಿಗೆ ಆಹಾರ ನೀಡುವುದು ಅಥವಾ ಅನ್ನದಾನ ಮಾಡುವುದು ಮೀನ ರಾಶಿಯವರಿಗೆ ಅತ್ಯಂತ ಪುಣ್ಯಕಾರಿ. ಇದರಿಂದ ಲಕ್ಷ್ಮಿ ದೇವಿಯ ಕೃಪೆ ದೊರೆತು, ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.



Click it and Unblock the Notifications











