Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮೇ 19ಕ್ಕೆ ಜ್ಯೇಷ್ಠ ಅಮವಾಸ್ಯೆ: ಶನಿ ಅಮವಾಸ್ಯೆ ದಿನ ಈ ಪರಿಹಾರ ಮಾಡಿದರೆ ಹಣದ ಸಮಸ್ಯೆಯೇ ಬರಲ್ಲ
ಮಾರ್ಚ್ 19ಕ್ಕೆ ಜ್ಯೇಷ್ಠ ಅಮವಾಸ್ಯೆ ಜ್ಯೇಷ್ಠ ಅಮವಾಸ್ಯೆಗೆ ತುಂಬಾನೇ ಮಹತ್ವವಿದೆ. ಜ್ಯೇಷ್ಠ ಅಮವಾಸ್ಯೆಯಂದೇ ಶನಿ ಜಯಂತಿ, ವಟ ಸಾವಿತ್ರಿ ವ್ರತ ಬಂದಿದೆ. ಆದ್ದರಿಂದ ಈ ದಿನ ಮತ್ತಷ್ಟು ವಿಶೇಷವಾಗಿದೆ. ಸನಾತನ ಧರ್ಮದ ಪ್ರಕಾರ ಈ ದಿನ ಭಗವದ್ಗೀತೆ ಪಠಣೆ ಮಾಡುವುದರಿಂದ ತುಂಬಾನೇ ಶುಭ ಫಲ ದೊರೆಯುವುದು.
ಈ ದಿನ ದಾನ-ಧರ್ಮದ ಕಾರ್ಯಗಳಿಗೂ ತುಂಬಾನೇ ಮಹತ್ವವಿದೆ. ಯಾರು ದಾನ-ಧರ್ಮ ಮಾಡುತ್ತಾರೋ ಅವರಿಗೆ ಹಣದ ಸಮಸ್ಯೆ ಇರಲ್ಲ, ಜೀವನದಲ್ಲಿರುವ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಈ ದಿನ ಕೆಲ ಪರಿಹಾರಗಳನ್ನು ಮಾಡುವುದರಿಂದ ಒಳಿತಾಗುವುದು ಎಂದು ಹೇಳಲಾಗುವುದು.

ಜ್ಯೇಷ್ಠ ಅಮವಾಸ್ಯೆಯಂದು ಅಗೋಚರ ಶಕ್ತಿಗಳು ಪ್ರಬಲವಾಗಿರುವುದು
ಇತರ ಅಮವಾಸ್ಯೆಗಳಿಗೆ ಹೋಲಿಸಿದರೆ ಜ್ಯೇಷ್ಠ ಅಮವಾಸ್ಯೆಯಂದು ಅಗೋಚರ ಹಾಗೂ ನಕಾರಾತ್ಮಕ ಶಕ್ತಿ ಪ್ರಬಲವಾಗಿರುವುದು ಎಂದು ಹೇಳಲಾಗುವುದು, ಆದ್ದರಿಂದ ಈ ದಿನ ಪಿತೃಗಳಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯಂದು ಹೇಳಲಾಗುವುದು. ಈ ದಿನ 'ಓಂ ಪಿತೃಭ್ಯ: ನಮಃ' ಎಂಬ ಮಂತ್ರವನ್ನು ಪಠಿಸಿ
ಜ್ಯೇಷ್ಠ ಅಮವಾಸ್ಯೆಯಂದು ಶುಭ-ಅಶುಭ ಪರಿಕಲ್ಪನೆ
ಈ ದಿನ ನಕಾರಾತ್ಮಕ ಶಕ್ತಿ ಪ್ರಬಲವಾಗಿರುವುದರಿಂದ ಈ ದಿನ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ, ಆದರೆ ಪೂಜಾ ಕಾರ್ಯಗಳಿಗೆ ಈ ದಿನ ಶ್ರೇಷ್ಠವಾಗಿದೆ. ಈ ದಿನ ಹಿರಿಯರಿಗೆ ಶ್ರಾದ್ಧಾ ಕಾರ್ಯ ಮಾಡಲಾಗುವುದು. ಕಾಳಸರ್ಪ ಪೂಜೆಗೆ ಈ ದಿನ ಒಳ್ಳೆಯದು.
ಜ್ಯೇಷ್ಠ ಅಮವಾಸ್ಯೆಯ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು?
* ಜ್ಯೇಷ್ಠ ಅಮವಾಸ್ಯೆಯ ದಿನ ಮನೆಯ ಈಶಾನ್ಯ ದಿಕ್ಕಿನಲ್ಲಿ ತುಪ್ಪದ ದೀಪಕ್ಕೆ ಸ್ವಲ್ಪ ಕುಂಕುಮ ಮಿಶ್ರಿತ ಅಕ್ಕಿ ಹಾಕಿ ಹಚ್ಚಿಟ್ಟರೆ ಹಣದ ಸಮಸ್ಯೆ ದೂರಾಗುವುದು ಎಂಬ ನಂಬಿಕೆ ಇದೆ.
* ಈ ದಿನ ನಿಮ್ಮಿಂದಾದ ಸಹಾಯ ಮಾಡಿ. ಬಡವರಿಗೆ ಆಹಾರ ದಾನ ಮಾಡಿ, ನಿರ್ಗತಿಕರಿಗೆ ಆಹಾರ, ವಸ್ತ್ರ ದಾನ ಮಾಡುವುದರಿಂದ ನಮಗೆ ಸಂಪತ್ತಿಗೆ ಯಾವತ್ತಿಗೂ ತೊಂದರೆ ಉಂಟಾಗುವುದಿಲ್ಲ, ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರಲಿದೆ.
* ಮೀನುಗಳಿಗೆ ಹಿಟ್ಟಿನ ಉಂಡೆ ಮಾಡಿ ಆಹಾರವನ್ನಾಗಿ ನೀಡುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು.
ಜ್ಯೇಷ್ಠ ಅಮವಾಸ್ಯೆಯಂದು ಏನು ಮಾಡಬೇಕು?
* ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನದ ನೀರಿಗೆ ಸ್ವಲ್ಪ ಕಪ್ಪು ಎಳ್ಳು ಹಾಕಿ, ಸ್ನಾನ ಮಾಡಿ
* ಅರಳಿಮರಕ್ಕೆ ಸಾಸಿವೆಯೆಣ್ಣೆ ದೀಪಹಚ್ಚಿ, ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲಿರಲಿದೆ
* ಬಡವರಿಗೆ ದಾನ ಮಾಡಿ.
ಜ್ಯೇಷ್ಠ ಅಮವಾಸ್ಯೆಯಂದು ಹೀಗೆ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು
* ಸೂರ್ಯೋದಯದ ನಂತರ ಮಲಗಬಾರದು
* ಈ ದಿನ ಎಣ್ಣೆಸ್ನಾನ ಮಾಡುವಂತಿಲ್ಲ
* ಗಡ್ಡ, ಕೂದಲು ತೆಗೆಯಬಾರದು, ಉಗುರು ಕತ್ತರಿಸಬಾರದು
* ಈ ದಿನ ಮಾಂಸ, ಮದ್ಯ ಸೇವಿಸಬಾರದು
* ಗಂಡ-ಹೆಂಡತಿ ದೈಹಿಕವಾಗಿ ಸೇರಬಾರದು
* ಮಧ್ಯಾಹ್ನ ಹಾಗೂ ಸೂರ್ಯಾಸ್ತದ ಸಮಯದಲ್ಲಿ ನಿದ್ರಿಸಬಾರದು.
ಶನಿದೋಷ ನಿವಾರಣೆಗೆ
* ಈ ದಿನ ಶನಿ ದೇವಾಲಯಕ್ಕೆ ಭೇಟಿ ನೀಡಿ
* ಶನಿ ದೇವರಿಗೆ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ದೀಪ ಹಚ್ಚಿ
* ಶನಿ ಮಂತ್ರಗಳನ್ನು ಪಠಿಸಿ
* ನಿರ್ಗತಿಕರಿಗೆ ದಾನ ಮಾಡಿ



Click it and Unblock the Notifications