Latest Updates
-
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ!
ಮೇ 19ಕ್ಕೆ ಜ್ಯೇಷ್ಠ ಅಮವಾಸ್ಯೆ: ಶನಿ ಅಮವಾಸ್ಯೆ ದಿನ ಈ ಪರಿಹಾರ ಮಾಡಿದರೆ ಹಣದ ಸಮಸ್ಯೆಯೇ ಬರಲ್ಲ
ಮಾರ್ಚ್ 19ಕ್ಕೆ ಜ್ಯೇಷ್ಠ ಅಮವಾಸ್ಯೆ ಜ್ಯೇಷ್ಠ ಅಮವಾಸ್ಯೆಗೆ ತುಂಬಾನೇ ಮಹತ್ವವಿದೆ. ಜ್ಯೇಷ್ಠ ಅಮವಾಸ್ಯೆಯಂದೇ ಶನಿ ಜಯಂತಿ, ವಟ ಸಾವಿತ್ರಿ ವ್ರತ ಬಂದಿದೆ. ಆದ್ದರಿಂದ ಈ ದಿನ ಮತ್ತಷ್ಟು ವಿಶೇಷವಾಗಿದೆ. ಸನಾತನ ಧರ್ಮದ ಪ್ರಕಾರ ಈ ದಿನ ಭಗವದ್ಗೀತೆ ಪಠಣೆ ಮಾಡುವುದರಿಂದ ತುಂಬಾನೇ ಶುಭ ಫಲ ದೊರೆಯುವುದು.
ಈ ದಿನ ದಾನ-ಧರ್ಮದ ಕಾರ್ಯಗಳಿಗೂ ತುಂಬಾನೇ ಮಹತ್ವವಿದೆ. ಯಾರು ದಾನ-ಧರ್ಮ ಮಾಡುತ್ತಾರೋ ಅವರಿಗೆ ಹಣದ ಸಮಸ್ಯೆ ಇರಲ್ಲ, ಜೀವನದಲ್ಲಿರುವ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಈ ದಿನ ಕೆಲ ಪರಿಹಾರಗಳನ್ನು ಮಾಡುವುದರಿಂದ ಒಳಿತಾಗುವುದು ಎಂದು ಹೇಳಲಾಗುವುದು.

ಜ್ಯೇಷ್ಠ ಅಮವಾಸ್ಯೆಯಂದು ಅಗೋಚರ ಶಕ್ತಿಗಳು ಪ್ರಬಲವಾಗಿರುವುದು
ಇತರ ಅಮವಾಸ್ಯೆಗಳಿಗೆ ಹೋಲಿಸಿದರೆ ಜ್ಯೇಷ್ಠ ಅಮವಾಸ್ಯೆಯಂದು ಅಗೋಚರ ಹಾಗೂ ನಕಾರಾತ್ಮಕ ಶಕ್ತಿ ಪ್ರಬಲವಾಗಿರುವುದು ಎಂದು ಹೇಳಲಾಗುವುದು, ಆದ್ದರಿಂದ ಈ ದಿನ ಪಿತೃಗಳಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯಂದು ಹೇಳಲಾಗುವುದು. ಈ ದಿನ 'ಓಂ ಪಿತೃಭ್ಯ: ನಮಃ' ಎಂಬ ಮಂತ್ರವನ್ನು ಪಠಿಸಿ
ಜ್ಯೇಷ್ಠ ಅಮವಾಸ್ಯೆಯಂದು ಶುಭ-ಅಶುಭ ಪರಿಕಲ್ಪನೆ
ಈ ದಿನ ನಕಾರಾತ್ಮಕ ಶಕ್ತಿ ಪ್ರಬಲವಾಗಿರುವುದರಿಂದ ಈ ದಿನ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ, ಆದರೆ ಪೂಜಾ ಕಾರ್ಯಗಳಿಗೆ ಈ ದಿನ ಶ್ರೇಷ್ಠವಾಗಿದೆ. ಈ ದಿನ ಹಿರಿಯರಿಗೆ ಶ್ರಾದ್ಧಾ ಕಾರ್ಯ ಮಾಡಲಾಗುವುದು. ಕಾಳಸರ್ಪ ಪೂಜೆಗೆ ಈ ದಿನ ಒಳ್ಳೆಯದು.
ಜ್ಯೇಷ್ಠ ಅಮವಾಸ್ಯೆಯ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು?
* ಜ್ಯೇಷ್ಠ ಅಮವಾಸ್ಯೆಯ ದಿನ ಮನೆಯ ಈಶಾನ್ಯ ದಿಕ್ಕಿನಲ್ಲಿ ತುಪ್ಪದ ದೀಪಕ್ಕೆ ಸ್ವಲ್ಪ ಕುಂಕುಮ ಮಿಶ್ರಿತ ಅಕ್ಕಿ ಹಾಕಿ ಹಚ್ಚಿಟ್ಟರೆ ಹಣದ ಸಮಸ್ಯೆ ದೂರಾಗುವುದು ಎಂಬ ನಂಬಿಕೆ ಇದೆ.
* ಈ ದಿನ ನಿಮ್ಮಿಂದಾದ ಸಹಾಯ ಮಾಡಿ. ಬಡವರಿಗೆ ಆಹಾರ ದಾನ ಮಾಡಿ, ನಿರ್ಗತಿಕರಿಗೆ ಆಹಾರ, ವಸ್ತ್ರ ದಾನ ಮಾಡುವುದರಿಂದ ನಮಗೆ ಸಂಪತ್ತಿಗೆ ಯಾವತ್ತಿಗೂ ತೊಂದರೆ ಉಂಟಾಗುವುದಿಲ್ಲ, ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರಲಿದೆ.
* ಮೀನುಗಳಿಗೆ ಹಿಟ್ಟಿನ ಉಂಡೆ ಮಾಡಿ ಆಹಾರವನ್ನಾಗಿ ನೀಡುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು.
ಜ್ಯೇಷ್ಠ ಅಮವಾಸ್ಯೆಯಂದು ಏನು ಮಾಡಬೇಕು?
* ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನದ ನೀರಿಗೆ ಸ್ವಲ್ಪ ಕಪ್ಪು ಎಳ್ಳು ಹಾಕಿ, ಸ್ನಾನ ಮಾಡಿ
* ಅರಳಿಮರಕ್ಕೆ ಸಾಸಿವೆಯೆಣ್ಣೆ ದೀಪಹಚ್ಚಿ, ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲಿರಲಿದೆ
* ಬಡವರಿಗೆ ದಾನ ಮಾಡಿ.
ಜ್ಯೇಷ್ಠ ಅಮವಾಸ್ಯೆಯಂದು ಹೀಗೆ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು
* ಸೂರ್ಯೋದಯದ ನಂತರ ಮಲಗಬಾರದು
* ಈ ದಿನ ಎಣ್ಣೆಸ್ನಾನ ಮಾಡುವಂತಿಲ್ಲ
* ಗಡ್ಡ, ಕೂದಲು ತೆಗೆಯಬಾರದು, ಉಗುರು ಕತ್ತರಿಸಬಾರದು
* ಈ ದಿನ ಮಾಂಸ, ಮದ್ಯ ಸೇವಿಸಬಾರದು
* ಗಂಡ-ಹೆಂಡತಿ ದೈಹಿಕವಾಗಿ ಸೇರಬಾರದು
* ಮಧ್ಯಾಹ್ನ ಹಾಗೂ ಸೂರ್ಯಾಸ್ತದ ಸಮಯದಲ್ಲಿ ನಿದ್ರಿಸಬಾರದು.
ಶನಿದೋಷ ನಿವಾರಣೆಗೆ
* ಈ ದಿನ ಶನಿ ದೇವಾಲಯಕ್ಕೆ ಭೇಟಿ ನೀಡಿ
* ಶನಿ ದೇವರಿಗೆ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ದೀಪ ಹಚ್ಚಿ
* ಶನಿ ಮಂತ್ರಗಳನ್ನು ಪಠಿಸಿ
* ನಿರ್ಗತಿಕರಿಗೆ ದಾನ ಮಾಡಿ



Click it and Unblock the Notifications