Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
2030ರಲ್ಲಿ ವಿಶ್ವಕ್ಕೆ ಮಹಾ ವೈರಸ್ ಕಾಟ: ಜಪಾನ್ ಬಾಬಾ ವಂಗಾ ತತ್ಸುಕಿ ಭವಿಷ್ಯ!
ನೀವು ಬಾಬಾ ವಂಗಾ ಕುರಿತು ಕೇಳಿರಬಹುದು. ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಮಹಿಳೆ ಆಕೆ. ಮುಂದೆ ನಡೆಯಬಹುದಾದ ಹಲವು ರೀತಿಯ ದುರಂತಗಳನ್ನು ಮೊದಲೇ ಊಹಿಸಿರುವ ಮಹಿಳೆ. ಆಕೆ ಹೇಳಿರುವ ಬಹುತೇಕ ಭವಿಷ್ಯವಾಣಿಗಳು ಇಂದಿಗೂ ನಿಜವಾಗುತ್ತಿವೆ. ಹೀಗಾಗಿ ಆಕೆಯನ್ನು ವಿಶ್ವದಾದ್ಯಂತ ಇಂದಿಗೂ ನಂಬುವವರಿದ್ದಾರೆ. ಇನ್ನು ಆಕೆಯ ಹೇಳಿದ ಹಲವು ದುರಂತಕಾರಿ ಭವಿಷ್ಯಗಳ ಕಾರಣದಿಂದಾಗಿಯೇ ಆಕೆಯ ಭವಿಷ್ಯವಾಣಿ ಎಂದರೆ ಜನತೆ ಇಂದಿಗೂ ಭಯ ಬೀಳುವುದು ನೋಡಬಹುದು.
ಆದ್ರೆ ಈ ಬಾಬಾ ವಂಗಾ ಅವರಂತೆ ಭವಿಷ್ಯ ನುಡಿಯುವ ಹಲವಾರು ಮಂದಿ ಇರುವುದು ಕೂಡ ನಾವು ನೋಡಬಹುದು. ಇನ್ನು ಜಪಾನ್ನಲ್ಲೂ ಕೂಡ ಆಧುನಿಕ ಬಾಬಾ ವಂಗಾ ಎಂದು ಕರೆಯಲ್ಪಡುವ ವ್ಯಕ್ತಿ ಕೂಡ ಈಗ ಮುಂದೆ ಸಂಭವಿಸಬಹುದಾದ ದೊಡ್ಡ ಘಟನೆಯ ಕುರಿತಾಗಿ ನುಡಿದಿರುವ ಭವಿಷ್ಯವು ಈಗ ಎಲ್ಲರಲ್ಲೂ ಆಘಾತ ಉಂಟು ಮಾಡಿದೆ.

ಜಪಾನ್ನ ಪ್ರವಾದಿ ರಿಯೊ ತತ್ಸುಕಿ, 2030ರಲ್ಲಿ ನಡೆಯಬಹುದಾದ ಬಹುದೊಡ್ಡ ಘಟನೆಯೊಂದರ ಕುರಿತು ಭವಿಷ್ಯ ನುಡಿದಿರುವುದು ಇಡೀ ವಿಶ್ವಕ್ಕೆ ಆಘಾತ ತಂದಿದೆ, ಆಕೆಯ ಪ್ರಕಾರ 2030ರಲ್ಲಿ ಇಡೀ ವಿಶ್ವದಲ್ಲಿ ಮಾರಣಾಂತಿಕ ವೈರಸ್ ಹರಡಲಿದೆ, ಇದರಿಂದ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಲಿದೆ ಎಂದು ಆಕೆ ಭವಿಷ್ಯ ನುಡಿದಿದ್ದಾಳೆ.
ಆಕೆಯ ಪ್ರಕಾರ ಕೋವಿಡ್ನಂತೆ ಮಾರಣಾಂತಿಕ ಪರಿಣಾಮ ಉಂಟು ಮಾಡುವಂತಹ ಮಹಾಮಾರಿ ವೈರಸ್ ಕಾಡಲಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಆಕೆ ಹಿಂದಿನಿಂದಲೂ ನುಡಿದಿರುವ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಅದರಲ್ಲೂ ಮುಖ್ಯವಾಗಿ ಫ್ರೆಡ್ಡಿ ಮರ್ಕ್ಯುರಿ ಮತ್ತು ರಾಜಕುಮಾರಿ ಡಯಾನಾ ಅವರ ಸಾವು, 2011ರ ಕೋಬ್ ಭೂಕಂಪ ಮತ್ತು COVID-19 ಸಾಂಕ್ರಾಮಿಕ ರೋಗದಂತಹ ವಿಶ್ವಕ್ಕೆ ಕಾಡಿದ ಸಮಸ್ಯೆಯ ಕುರಿತು ಆಕೆ ಭವಿಷ್ಯ ನುಡಿದಿದ್ದಳು, ಅದು ನಿಜವಾಗಿರುವುದು ಕೂಡ ನಾವು ನೆನೆಯಬಹುದು.
ಆಕೆ ಬರೆದಿರುವ ದಿ ಫ್ಯೂಚರ್ ಆಸ್ ಐ ಸೀ ಇಟ್ ಎಂಬ ಪುಸ್ತಕದಲ್ಲಿ ದುರಂತಗಳ ಕುರಿತಾದ ಭವಿಷ್ಯವಾಣಿಗಳ ಹೇಳಲಾಗಿದೆ. 2020ರಲ್ಲಿ ವೈರಸ್ನಿಂದ ಸಾವು ನೋವು ಹೆಚ್ಚಾಗಲಿದೆ ಎಂಬುದನ್ನು ವಿವರಿಸಲಾಗಿತ್ತು. ಹಾಗೆ 2030ರಲ್ಲಿ ಈ ರೀತಿಯ ವೈರಸ್ನಿಂದ ಸಾವು ನೋವು ಮತ್ತೆ ಉತ್ತುಂಗಕ್ಕೆ ಏರಲಿದೆ ಎಂದು ಆಕೆಯ ಪುಸ್ತಕದಲ್ಲಿ ಉಲ್ಲೇಖವಿದೆ.
ಜುಲೈನಲ್ಲಿ ಕಾದಿದೆ ಮತ್ತೊಂದು ಅಪಾಯ
ಭೂಕಂಪನಗಳ ನಾಡು ಎಂದೇ ಕರೆಯಲ್ಪಡುವ ಜಪಾನ್ನಲ್ಲಿ ಮತ್ತೆ ಭೂಕಂಪ ಸಂಭವಿಸಲಿದೆ ಎಂದು ಆಕೆ ಹೇಳಿದ್ದಾರೆ. ಅದರಲ್ಲೂ ಜುಲೈ 2025ರಲ್ಲಿ ಜಪಾನ್ನಲ್ಲಿ ಭೀಕರ ಭೂಕಂಪನ ನಡೆಯಲಿದೆ ಎಂದು ಆಕೆ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ಹಾಗೆ ಆಕೆ 2011ರಲ್ಲಿ ಸಂಭವಿಸಿದ ಭೀಕರ ಭೂಕಂಪನ ಕುರಿತಾಗಿಯೂ ಕೂಡ ಆಕೆ ಮೊದಲೇ ಊಹಿಸಿದ್ದಳು, ಹಾಗೆ ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿಯಾಗುವ ಸಂಬಂಧ ರಿಯೊ ತತ್ಸುಕಿ ಮೊದಲೇ ಹೇಳಿದ್ದಳು.
ಜಾಗತಿಕವಾಗಿ ಅತೀ ಹೆಚ್ಚು ಭೂಕಂಪನಗಳು ಜಪಾನ್ನಲ್ಲಿ ಸಂಭವಿಸುತ್ತವೆ. 2011ರ ಭೂಕಂಪನ ಹಾಗೂ ಸುನಾಮಿಯು ಇಡೀ ಜಪಾನ್ ಅನ್ನೇ ನಡುಗಿಸಿತ್ತು. ಹಾಗೆ ಇದಾದ ಬಳಿಕ ನಿತ್ಯ ಅಲ್ಲಿ ಹತ್ತಾರು ಭಾರಿ ಭೂಕಂಪನದ ಅನುಭವವಾಗುತ್ತದೆ. ಹಾಗೆ ವರ್ಷವೊಂದಕ್ಕೆ 1500ಕ್ಕೂ ಹೆಚ್ಚು ಕಂಪನಗಳು ಸಂಭವಿಸುತ್ತವೆ. ಆದ್ರೆ ಎಲ್ಲವೂ ಹಾನಿಕಾರಕವಾಗಿರುವುದಿಲ್ಲ.
ಸದ್ಯ ಈ ತುತ್ಸುಕಿ ಬರೆದಿರುವ ಈ ಪುಸ್ತಕ ಬಹಳಷ್ಟು ಕಳವಳಕ್ಕೆ ಕಾರಣವಾಗಿದೆ. ಜಪಾನ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಪುಸ್ತಕಕ್ಕೆ ಬೇಡಿಕೆ ಹೆಚ್ಚಾಗಿದೆ. ವಿಶ್ವದ ಹಲವು ಭಾಗದಲ್ಲಿ ಯಾವೆಲ್ಲಾ ದುರಂತಗಳು ನಡೆಯಲಿದೆ ಎಂಬುದನ್ನು ಆಕೆ ವಿವರಿಸಿರುವುದು ಈ ಪುಸ್ತಕದಲ್ಲಿ ಉಲ್ಲೇಖವಿದೆ.



Click it and Unblock the Notifications

