Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
ನಾವು ಇದೇ ವರ್ಷ ನಾಲ್ಕು ಗ್ರಹಣಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಇದೇ ಮಾರ್ಚ್ 25ರಂದು ಚಂದ್ರಗ್ರಹಣ ಹಾಗೂ ಏಪ್ರಿಲ್ 8ರಂದು ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಈ ಎರಡೂ ಗ್ರಹಣಗಳು ಭಾರತದಲ್ಲಿ ಗೋಚರವಿಲ್ಲ ಎಂದು ಸಹ ತಿಳಿದುಬಂದಿದೆ. ಆದರೆ ನಾವು ಈಗ ಆಧುನಿಕ ಯುಗದಲ್ಲಿದ್ದೇವೆ. ನಮಗೆ ಸೂರ್ಯ, ಚಂದ್ರ, ನಕ್ಷತ್ರ, ಗ್ರಹಣ ಎಲ್ಲಾ ದಿನಾಂಕಗಳು ಮೊದಲೇ ತಿಳಿಯುತ್ತವೆ.
ಆದರೆ ಹಿಂದೆ ಪುರಾತನ ಕಾಲದಲ್ಲಿ ಕ್ಯಾಲೆಂಡರ್, ಗಡಿಯಾರ ಯಾವುದೂ ಇಲ್ಲದ ಸಮಯದಲ್ಲಿ ಗ್ರಹಣವನ್ನು ಹೇಗೆ ಗುರುತಿಸುತ್ತಿದ್ದರು. ಗ್ರಹಣ ಕಾಲವನ್ನು ಅವರು ಹೇಗೆ ಲೆಕ್ಕ ಹಾಕುತ್ತಿದ್ದರು ಎಂಬುದು ಬಹಳ ವಿಚಿತ್ರವಾಗಿದೆ. ನಾವಿಂದು ಹಳೆಯ ಕಾಲದಲ್ಲಿ ಅಂದರೆ ಕ್ರಿ.ಪೂದಲ್ಲಿ ಜನರು ಗ್ರಹಣವನ್ನು ಹೇಗೆಲ್ಲಾ ನೋಡಿದ್ದಾರೆ. ಅದನ್ನು ಏನೆಂದು ಅರ್ಥೈಸಿದ್ದರು ಎಂಬುದನ್ನು ನೋಡೋಣ.

ನಾವು ಒಬ್ಬ ರೈತ ಎಂದುಕೊಳ್ಳಿ. ನೀವು ನಿಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಸುತ್ತಲು ಕತ್ತಲು ಆವರಿಸಿ ಬಿಟ್ಟರೆ ಏನಾಗುತ್ತದೆ. ನಾವು ಯೋಚಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಈ ರೀತಿ ನಮಗೆ ತಿಳಿಯದೆ ಇಂದು ಏನು ನಡೆಯುತ್ತಿಲ್ಲ. ಇಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಮುಂದಿನ 100 ವರ್ಷದಲ್ಲಿ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ನಾವು ಇಂದೇ ಕುಳಿತಲ್ಲೇ ಹೇಳುವಷ್ಟು ಮುಂದುವರೆದಿದ್ದೇವೆ.
ಆದ್ರೆ ಹಿಂದೆ ಈ ರೀತಿ ಇರಲಿಲ್ಲ. ಅವರ ಸುತ್ತ ಕತ್ತಲು ಕವಿದಾಗ, ಗ್ರಹಣದಲ್ಲಿ ಸೂರ್ಯ ಮರೆಯಾಗುವಾಗ ಇಡೀ ವಿಶ್ವ ನಿಬ್ಬೆರಗಾಗುತ್ತಿತ್ತು. ಜನರೆಲ್ಲ ಹೆದರಿ ಮನೆ ಸೇರುತ್ತಿದ್ದರು. ಈ ಗ್ರಹಣದ ಸುತ್ತ ಹತ್ತಾರು ಕಥೆಗಳು ಹುಟ್ಟಿಕೊಂಡವು. ಇಂತಹ ಕೆಲವು ಅಚ್ಚರಿಯ ಘಟನೆಗಳನ್ನು ಇಲ್ಲಿ ಹೇಳಿದ್ದೇವೆ ನೋಡಿ.
ಚೀನಾದಲ್ಲಿ ಸೂರ್ಯನನ್ನೇ ನುಂಗಿತ್ತು ಡ್ರ್ಯಾಗನ್
ಚೀನಾ ಈಗ ತುಂಬಾ ಮುಂದುವರೆದ ರಾಷ್ಟ್ರ ಎನಿಸಿಕೊಂಡಿದೆ. ಆದರೆ ಹಿಂದೆ ಗ್ರಹಣ ನಡೆಯವಾಗ ಅಲ್ಲಿನ ಜನ ಡ್ರ್ಯಾಗನ್ ಪ್ರಾಣಿ ಸೂರ್ಯನನ್ನು ನುಂಗುತ್ತಿದೆ ಎಂದು ಭಾವಿಸುತ್ತಿದ್ದರಂತೆ. ಹೀಗಾಗಿ ಗ್ರಹಣದ ಸಮಯ ಅವರು ಹೊರಗೆ ಬರುತ್ತಿರಲಿಲ್ಲವಂತೆ. ಜೊತೆಗೆ ಯಾವಾಗ ಗ್ರಹಣ ಎಂಬ ಸಮಯ ತಿಳಿಯದ ಕಾರಣ ಗ್ರಹಣ ಆರಂಭವಾದ ಕೆಲ ಹೊತ್ತಿನಲ್ಲಿ ಅವರು ಎಲ್ಲಿಯೇ ಇದ್ದರೂ ಮನೆಗೆ ಓಡಿ ಬರುತ್ತಿದ್ದರಂತೆ. ಚೀನಾದ ಹಳೆಯ ಶಾಸನಗಳ ಮೇಲೆ ಡ್ರ್ಯಾಗನ್ ಪ್ರಾಣಿಯು ಸೂರ್ಯನನ್ನು ನುಂಗುತ್ತಿರುವ ಕೆತ್ತನೆಗಳು ಸಿಗುತ್ತವೆ. ಇದು ಗ್ರಹಣ ಕಾಲದಲ್ಲಿ ಜನರು ಭಾವಿಸಿದಂತೆ ಅವರೇ ಮಾಡಿದ್ದ ಕೆತ್ತನೆಗಳಾಗಿವೆ.
ಮುನಿಸಿಕೊಂಡ ಸೂರ್ಯ
ಹಿಂದೆ ಗ್ರಹಣ ಸಂಭವಿಸುವಾಗ ಸೂರ್ಯ ದೇವ ಮುನಿಸಿಕೊಂಡಿದ್ದಾನೆ ಎಂದು ಜನರು ನಂಬುತ್ತಿದ್ದರಂತೆ. ಆತ ಕೋದಲ್ಲಿ ಕೆಂಪಗಾಗಿದ್ದಾನೆ. ಹೀಗಾಗಿ ತಾನು ಬೆಳಕು ನೀಡುವುದನ್ನು ನಿಲ್ಲಿಸುತ್ತಾನೆ ಎಂದು ಆತನಿಗೆ ಬಲಿ ನೀಡುತ್ತಿದ್ದರಂತೆ. ಗ್ರಹಣ ಕೆಲಸ ಹೊತ್ತಿನ ಬಳಿಕ ಮುಕ್ತಾಯಗೊಂಡಾಗ ಸೂರ್ಯ ದೇವ ಸಂಪನ್ನನಾಗಿದ್ದಾನೆ ಎಂದು ಜನರು ಭಾವಿಸುತ್ತಿದ್ದರಂತೆ. ಜೊತೆಗೆ ಗ್ರಹಣದ ಬೇಳೆ ಡೋಲುಗಳ ಬಡಿದು ಸೂರ್ಯ ದೇವನ ಪೂಜೆ ನಡೆಯುತ್ತಿತ್ತಂತೆ.
ಟ್ರಾನ್ಸಿಲ್ವೇನಿಯಾದಲ್ಲಿ ಜನರ ಕೆಟ್ಟ ಕೆಲಸಗಳನ್ನು ನೋಡಿದ ಸೂರ್ಯನು ವಿಷಕಾರಿಯಾದ ಮಳೆ ಸುರಿಸುತ್ತಾನೆ. ಇದರಿಂದ ಗ್ರಹಣ ಸಂಭವಿಸುತ್ತದೆ ಎಂದು ನಂಬಿದ್ದರಂತೆ. ಸೂರ್ಯನು ಕೋಪಗೊಂಡ ಪರಿಣಾಮ ಇಡೀ ಊರನ್ನು ಕತ್ತಲೆ ಮಾಡುತ್ತಾನೆ ಎಂದು ಅಲ್ಲಿನ ಬುಡಕಟ್ಟು ಮಂದಿ ನಂಬಿದ್ದರಂತೆ.
ಗ್ರೀಕ್ನಲ್ಲಿ ಮನುಷ್ಯರ ಬಲಿ
ಗ್ರಹಣದಲ್ಲಿ ಸೂರ್ಯ ಮುನಿಸಿಕೊಂಡು ರಾಜನ ಮೇಲೆ ಪ್ರತಿಕಾರ ತೀರಿಸಿಕೊಳ್ಳುತ್ತಾನೆ ಎಂದು ಗ್ರೀಕ್ನಲ್ಲಿ ನಂಬಲಾಗಿತ್ತಂತೆ. ಹೀಗಾಗಿ ರಾಜನನ್ನು ಉಳಿಸಲು ಅಲ್ಲಿ ರಾಜನ ಪ್ರತಿಯಾಗಿ ವ್ಯಕ್ತಿಯೊಬ್ಬನನ್ನು ಸೂರ್ಯನಿಗೆ ಬಲಿ ನೀಡುತ್ತಿದ್ದರಂತೆ. ಬಲಿ ನೀಡಿದ ಬಳಿಕ ಸೂರ್ಯ ಮತ್ತೆ ಬೆಳಕು ನೀಡುತ್ತಿದ್ದ ಎಂದು ಅವರು ಬಲವಾಗಿ ನಂಬಿದ್ದರಂತೆ.



Click it and Unblock the Notifications
