Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dasara Wishes in Kannada: ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು: ಆಪ್ತರಿಗೆ, ಸ್ನೇಹಿತರಿಗೆ ಕಳುಹಿಸಲು ಇಲ್ಲಿವೆ ಶುಭ ಸಂದೇಶಗಳು!
Dasara Wishes in Kannada: ಅಕ್ಟೋಬರ್ 2ರಂದು ನಾಡಿನೆಲ್ಲೆಡೆ ಅದ್ದೂರಿಯ ವಿಜಯದಶಮಿ ಆಚರಿಸಲಾಗುತ್ತಿದೆ. ಮಹಿಷಾಸುರ ಎಂಬ ರಾಕ್ಷಸನ ಜೊತೆಗೆ ಯುದ್ಧ ಮಾಡಿ, ಜಯ ಗಳಿಸಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಹಂ ಮತ್ತು ದುಷ್ಟ ತನದ ಮೇಲೆ ಶಾಂತಿ ಮತ್ತು ವಿಜಯವನ್ನು ಪ್ರತಿನಿಧಿಸುವ ಹಬ್ಬ. ಹಾಗೆ ಅಧರ್ಮದ ವಿರುದ್ಧ ಧರ್ಮದ ವಿಜಯದ ಸಂಕೇತವಾಗಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ.
ನವರಾತ್ರಿಯ ದುರ್ಗಾ ಆರಾಧನೆಯ ನಡುವೆ ಆಯುಧ ಪೂಜೆ ವಿಜಯದಶಮಿಯ ಹಬ್ಬದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯು ನಿಮಗೂ ನಿಮ್ಮ ಮನೆಯ ಎಲ್ಲ ಸದಸ್ಯರಿಗೂ ಸನ್ಮಂಗಲವನ್ನು ಉಂಟುಮಾಡಲಿ. ಮನುಕುಲದ ಅಭಿವೃದ್ಧಿ ಹಾಗೂ ಪೋಷಣೆಯ ಕೆಲಸವನ್ನು ದುರ್ಗಾ ದೇವಿ ಮಾಡುತ್ತಾಳೆ. ಹಾಗೆ ದುರ್ಗೆಯ ಆಶೀರ್ವಾದದಿಂದ ಉತ್ತರೋತ್ತರ ಶ್ರೇಯೋಭಿವೃದ್ಧಿ ನಿಮ್ಮದಾಗಲಿ. ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.

ಮೈಸೂರನ್ನು ಮೊದಲಿಗೆ ಮಹಿಷೂರು ಎಂದು ಕರೆಯಲಾಗುತ್ತಿತ್ತು. ರಕ್ಕಸ ಮಹಿಷಾಸುರನನ್ನು ಚಾಮುಂಡಿ ಸಂಹಾರ ಮಾಡಿದ ದಿನವನ್ನಾಗಿ ಆಚರಿಸಲಾಗುತ್ತದೆ. ಆದ್ರೆ ಉತ್ತರ ಭಾರತದಲ್ಲಿ ಸ್ವಲ್ಪ ಭಿನ್ನವಾಗಿ ಅಯೋಧ್ಯೆಯಲ್ಲಿ ವಿಜಯ ದಿವಸ ಎಂದು ಆಚರಣೆ ಮಾಡಲಾಗುತ್ತದೆ. ಇದೇ ದಿನ ರಾಮನು ರಾವನ ಮೇಲೆ ಯುದ್ಧ ಮಾಡಿ ಗೆದ್ದು ಸೀತೆಯೊಂದಿಗೆ ಅರಮನೆಗೆ ಬಂದ ದಿನ ಎಂದು ನಂಬಲಾಗಿದೆ.
ಧರ್ಮ, ಸತ್ಯಕ್ಕೆ ಎಂದಿಗೂ ಗೆಲುವಿದೆ. ಅದರ ಸಂಕೇತವೇ ವಿಜಯದಶಮಿ. ಶ್ರೀರಾಮ ರಾವಣನನ್ನು ಸಂಹಾರ ಮಾಡಿದ ಹಾಗೆ, ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಸೋಲಿಸಿದಂತೆ, ನಿಮ್ಮೊಳಗಿನ ದುಷ್ಟಭಾವ ನಾಶವಾಗಿ ಎಲ್ಲರಿಗೂ ಒಳಿತಾಗಲಿ. ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
ದಸರಾ ನಿಮ್ಮಾ ಎಲ್ಲಾ ಚಿಂತೆಗಳನ್ನು ಸುಟ್ಟು ಮನೆಯಲ್ಲಿ ಸಂತೋಷ-ಸಡಗರ ತುಂಬುವಂತೆ ಮಾಡಲಿ- ದಸರಾ ಹಬ್ಬದ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ದೇವಿಯು ನಿಮ್ಮೆಲ್ಲ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ. ನಿಮಗೆಲ್ಲರಿಗೂ ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
ದುರ್ಗಾ ಮಾತೆ ನಿಮ್ಮ ಬದುಕಿನ ಹಾದಿಯಲ್ಲಿ ನಗುವನ್ನು ತುಂಬಿರಲಿ, ನಿಮ್ಮ ಆಸೆಗಳ ಈಡೇರಿಸಿಕೊಳ್ಳುವ ಶಕ್ತಿ ನಿಮಗೆ ನೀಡಲಿ ನಾಡ ಹಬ್ಬ ದಸರಾದ ಶುಭಾಶಯಗಳು.
ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ನಿಮ್ಮ ಕೆಲಸಗಳು ಯಶಸ್ಸಿನಿಂದ ಕೂಡಿರಲಿ ನಿಮಗೂ ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಶುಭಾಶಯಗಳು.
ಜೀವನದ ಸಂಕಷ್ಟಗಳು, ತಾಪತ್ರಯಗಳೆಲ್ಲವೂ ದೂರಾಗಲಿ. ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ನೆಲೆಸಲಿ. ದುರ್ಗಾ ದೇವಿ ಸದಾ ಒಳಿತನ್ನೇ ಕರುಣಿಸಲಿ. ನಿಮ್ಮೆಲ್ಲರಿಗೂ ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.



Click it and Unblock the Notifications

















