Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮೇ 17ಕ್ಕೆ ಉಂಟಾಗಲಿದೆ ಗಜಕೇಸರಿ ಯೋಗ: ಈ 3 ರಾಶಿಯವರಿಗೆ ಲಕ್ಷ್ಮಿ ಒಲಿದು ಬರಲಿದ್ದಾಳೆ, ಸಂಪತ್ತು ಹೆಚ್ಚಲಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಗುರು ಮತ್ತು ಚಂದ್ರ ಸಂಯೋಗವಾದಾಗ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗ ಗುರು ಮತ್ತು ಚಂದ್ರನ ಸಂಯೋಗದಿಂದ ಉಂಟಾಗುವುದರಿಂದ ತುಂಬಾನೇ ಅದೃಷ್ಟಕರವಾದ ಯೋಗವೆಂದು ಪರಿಗಣಿಸಲಾಗಿದೆ. ಗುರು ಹಾಗೂ ಚಂದ್ರ ಎರಡರ ಶುಭ ಫಲವನ್ನು ಈ ಸಮಯದಲ್ಲಿ ಪಡೆಯಬಹುದು. ಮುಟ್ಟಿದ್ದೆಲ್ಲಾ ಚಿನ್ನ ಎಂತಾರಲ್ಲ ಆ ರೀತಿಯ ಅದೃಷ್ಟದ ಕೊಡುವ ಯೋಗ ಇದಾಗಿದೆ.
ಈ ಗಜಕೇಸರಿ ಯೋಗವು ಶಕ್ತಿ ಮತ್ತು ಸಂಪತ್ತಿಗೆ ಸಂಬಂಧಿಸಿದೆ. ಯಾರ ಜಾತಕದಲ್ಲಿ ಗಜಕೇಸರಿ ಯೋಗವು ಸೃಷ್ಟಿಯಾಗಿದೆಯೋ ಅವರಿಗೆ ಲಕ್ಷ್ಮಿ ಕೃಪೆ ಇರುತ್ತದೆ. ಸಂಪತ್ತು ಹೆಚ್ಚಾಗಲಿದೆ, ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭ ಪಡೆಯಲಿದ್ದಾರೆ. ಈ ಯೋಗ ಇರುವವರು ಆರ್ಥಿಕವಾಗಿ ತುಂಬಾನೇ ಬೆಳವಣಿಗೆ ಕಾಣುತ್ತಾರೆ. ಆದರೆ ಈ ಗಜಕೇಸರಿ ಯೋಗ ಎಲ್ಲಾ ರಾಶಿಯವರ ಮೇಲೆ ಇರುವುದಿಲ್ಲ.

ಯಾರ ರಾಶಿಯಲ್ಲಿ ಚಂದ್ರ ದುರ್ಬಲ ಸ್ಥಾನದಲ್ಲಿರುತ್ತಾನೋ ಅವರಿಗೆ ಈ ಯೋಗ ಸಿಗುವುದಿಲ್ಲ, ಅಲ್ಲದೆ ರಾಹು ದೋಷವಿದ್ದರೂ ಈ ಯೋಗದ ಲಾಭ ದೊರೆಯುವುದಿಲ್ಲ. ಗುರು ಮತ್ತು ಚಂದ್ರ ರಾಶಿಯಲ್ಲಿ ಬಲವಾದ ಸ್ಥಾನದಲ್ಲಿದ್ದರೆ ಮಾತ್ರ ಈ ಗಜಕೇಸರಿ ಯೋಗದ ಪ್ರಯೋಜನ ಪಡೆಯಬಹುದು.
ಮೇ 17ಕ್ಕೆ ಮೇಷ ರಾಶಿಗೆ ಮಂಗಳನ ಸಂಚಾರ
ಮೇ 17, 2023ಕ್ಕೆ ಮಂಗಳ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮೇಷ ರಾಶಿಯಲ್ಲಿಯೇ ಗುರುವಿದೆ. ರಾಹು ಹಾಗೂ ಬುಧ ಕೂಡ ಇದೇ ರಾಶಿಯಲ್ಲಿಯೇ ಇದೆ. ಇದೀಗ ಗುರು ಮತ್ತು ಚಂದ್ರನ ಸಂಯೋಗ ಮೇಷ ರಾಶಿಯಲ್ಲಿ ಉಂಟಾದಾಗ ಗಜಕೇಸರಿ ಯೋಗ ಉಂಟಾಗಲಿದೆ. ಅಲ್ಲದೆ ಮತ್ತೊಂದು ವಿಶೇಷವೆಂದರೆ ಮೇಷದಲ್ಲಿ ಬುಧನು ಇರುವುದರಿಂದ ಚಂದ್ರ-ಬುಧ ಸಂಯೋಗದಿಂದ ಬುಧ ರಾಜ ಯೋಗ ಏರ್ಪಡುವುದು. ಚಂದ್ರ ಮೇಷದಲ್ಲಿ ಇರುವಷ್ಟು ಸಮಯ ಈ ಮೂರು ರಾಶಿಯವರಿಗೆ ಗಜಕೇಸರಿಯೋಗವಿದೆ:
ಈ 3 ರಾಶಿಯವವರಿಗೆ ಈ ಅವಧಿಯಲ್ಲಿ ಗಜಕೇಸರಿ ಯೋಗವಿದೆ:
ಮೇಷ ರಾಶಿ: ಮೇಷ ರಾಶಿಯವರಿಗೆ ಗಜಕೇಸರಿ ಯೋಗವಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಉಂಟಾಗಲಿದೆ. ಯಾವುದಾದರೂ ಕೆಲಸ ಅಪೂರ್ಣವಾಗಿದ್ದರೆ ನಿಮ್ಮ ಕೆಲಸ ಪೂರ್ಣವಾಗಲಿದೆ. ಉದ್ಯೋಗಿಗಳು ತಮ್ಮ ಕೆಲಸದಿಂದ ಗುರುತಿಸಿಕೊಳ್ಳುವಿರಿ, ಇದರಿಂದ ಆರ್ಥಿಕವಾಗಿ ನಿಮಗೆ ಲಾಭವಾಗಲಿದೆ. ಸಂಬಳದಲ್ಲಿ ಬಡ್ತಿ ಸಿಗಲಿದೆ. ಒಟ್ಟಿನಲ್ಲಿ ಈ ಅವಧಿಯಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗಜಕೇಸರಿ ಯೋಗವಿದೆ. ಈ ಅವಧಿಯಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಇದ್ದಕ್ಕಿದ್ದಂತೆ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಅಲ್ಲದೆ ನಿಮ್ಮ ಕೈ ಸೇರಬೇಕಾಗಿದ್ದ ಹಣ ಈ ಅವಧಿಯಲ್ಲಿ ಕೈ ಸೇರಲಿದೆ. ಆದರೆ ಈ ಅವಧಿಯಲ್ಲಿ ಯಾವುದೇ ವಾದ-ವಿವಾದದಲ್ಲಿ ಸಿಲುಕಿಕೊಳ್ಳದಂರತೆ ಎಚ್ಚರವಹಿಸಿ. ನಿಮ್ಮ ಮಾತೊನ ಮೇಲೆ ಹಿಡಿತವಿರಲಿ.
ತುಲಾ ರಾಶಿ
ತುಲಾ ರಾಶಿಯವರು ಕೂಡ ಗಜಕೇಸರಿ ಯೋಗದ ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ. ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಬಾಸ್ನಿಂದ ಮೆಚ್ಚುಗೆ ಕೂಡ ದೊರೆಯಲಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ ತುಂಬಾನೇ ಚೆನ್ನಾಗಿರಲಿದೆ. ವ್ಯಾಪಾರಸ್ಥರು ಅಧಿಕ ಲಾಭ ಗಳಿಸುವಿರಿ.
ಪರಿಹಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಜಕೇಸರಿ ಯೋಗದ ಲಾಭ ಪಡೆಯಲು ಚಂದ್ರ ಮತ್ತು ಗುರು ಬಲವಾಗಿರುವುದು ಅಗತ್ಯ. ಜ್ಯೋತಿಷ್ಯದಲ್ಲಿ, ಚಂದ್ರನನ್ನು ಬಲಪಡಿಸಲು ಶಿವನನ್ನು ಪೂಜಿಸಿ. ಅಲ್ಲದೆ ಹುಣ್ಣಿಮೆಯಂದು ಚಂದ್ರನಿಗೆ ಆರ್ಘ್ಯ ಅರ್ಪಿಸಿ. ಇದಲ್ಲದೇ ಗುರುವಾರದಂದು ಗುರು ಬೀಜ ಮಂತ್ರ ಪಠಿಸಿ.



Click it and Unblock the Notifications