Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ ತೆಗೆಯದೆ ಪ್ರಯಾಣಿಸಿದ ಪ್ರಸಿದ್ಧ ಯೂಟ್ಯೂಬರ್: ನೆಟ್ಟಿಗರಿಂದ ಟೀಕೆಗಳ ಸುರಿಮಳೆ
ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣ ಮಾಡಿದವರಿಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಸಾಧ್ಯನೇ ಇಲ್ಲ ಎಂಬುವುದು ಗೊತ್ತಿರುವ ವಿಷಯ, ಆದರೆ ಒಬ್ಬ ಪ್ರಸಿದ್ಧ ಯುಟ್ಯೂಬರ್ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ವೀಡಿಯೋ ಮಾಡಿ ಹಾಕಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ನೆಟ್ಟಿಗರು ಯೂ ಟ್ಯೂಬರ್ ಮಾಡಿರುವುದು ತಪ್ಪು ಎಂದು ಟೀಕಿಸುತ್ತಿದ್ದಾರೆ.

ಆತನ ಹೆಸರು Fidias,ತುಂಬಾನೇ ಪ್ರಸಿದ್ಧ ಯೂಟ್ಯೂಬರ್, ಎಲೆನ್ ಮಸ್ಕ್ ಅವರನ್ನು ಭೇಟಿ ಮಾಡುವ ಮೂಲಕ ತುಂಬಾನೇ ಗಮನ ಸೆಳೆದ ವ್ಯಕ್ತಿ. ಭಾರತವನ್ನು 10 ಡಾಲರ್ ಮಾತ್ರ ಇಟ್ಟು ಸುತ್ತಿ ತೋರಿಸುತ್ತೇನೆ ಎಂದು ಭಾರತಕ್ಕೆ ಪ್ರಯಾಣ ಮಾಡಿದ್ದಾರೆ. ಆ ವೀಡಿಯೋದಲ್ಲಿಯೂ ಭಾರತದ ಮ್ಯಾಪ್ ಅನ್ನು ಸರಿಯಾಗಿ ಹಾಕದೆ ಭಾರತೀಯರ ಭಾವನೆ ಧಕ್ಕೆ ಮಾಡಿದ್ದಾರೆ, ಇನ್ನೂ ಆ ವೀಡಿಯೋ ಅವರ ಖಾತೆಯಲ್ಲಿಯೇ ಇದೆ. ಇದೀಗ ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ ಕೊಡದೆ ಪ್ರಯಾಣಿಸಿ ತುಂಬಾನೇ ಗಮನ ಸೆಳೆದಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣ ಮಾಡಿದವರಿಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಬೆಂಗಳೂರಿನ ಮೆಟ್ರೋದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ತುಂಬಾನೇ ಕಷ್ಟ, ಅಲ್ಲಿ ಮೆಟ್ರೋ ಕಾಯಿನ್ ಅಥವಾ ಮೆಟ್ರೋ ಕಾರ್ಡ್ ಇಟ್ಟರೆ ಫ್ಲಾಟ್ ಫಾರಂ ಹೋಗಲು ಹಾಗೂ ಎಕ್ಸಿಟ್ ಆಗಲು ಸಾಧ್ಯ. ಆದರೆ ಈ ವ್ಯಕ್ತಿ ಆ ಎಂಟ್ರಿ ಹಾಗೂ ಎಕ್ಸಿಟ್ ಗೇಟ್ ಅನ್ನು ಹಾರಿಕೊಂಡು ಹೋಗಿದ್ದೇನೆ. ಈತ ಈ ರೀತಿ ಮಾಡುವಾಗ ಮೆಟ್ರೋ ಸಿಬ್ಬಂದಿಗಳು ಏನು ಮಾಡುತ್ತಿದ್ದರು ಎಂಬುವುದೇ ಪ್ರಶ್ನೆ. ಈತ ಟಿಕೆಟ್ ತೆಗೆಯದೆ ಪ್ರಯಾಣ ಮಾಡಿದ್ದು ಮಾತ್ರವಲ್ಲ ಮೆಟ್ರೋ ಒಳಗಡೆ ಪ್ಯಾಸೆಂಜರ್ ಹಿಡಿದು ನಿಲ್ಲಲು ಇರುವ ರಾಡ್ಗಳಲ್ಲಿ ವರ್ಕೌಟ್ ಮಾಡಿದ್ದಾನೆ.... ಇಂಥ ಕುಚೇಷ್ಠೆಯನ್ನು ಮಾಡಿ, ನಂತರ ಎಕ್ಸಿಟ್ ಜಂಪ್ ಆಗಿ ಬಂದು ನಾನು ಟಿಕೆಟ್ ತೆಗೆಯದೆ ಬೆಂಗಳೂರು ಮೆಟ್ರೋದಲ್ಲಿ ಬಂದಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.
ಈ ವೀಡಿಯೋಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಆತನನ್ನು ಏಕೆ ಯಾವುದೇ ಸೆಕ್ಯೂರಿಟಿ ಗಾರ್ಡ್ಸ್ ತಡೆಯಲಿಲ್ಲ ಎಂಬುವುದೇ ಪ್ರಶ್ನೆ. ಕೆಲವರು ಆತನಿಗೆ GOOD JOB! STEALING from the HARD WORKING people of India! ಎಂದು ಕಮೆಂಟ್ ಮಾಡುತ್ತಿದ್ದಾರೆ. ಈತ 10 ಡಾಲರ್ನಲ್ಲಿ ಭಾರತ ಸುತ್ತುತ್ತೇನೆ ಎಂದು ಹೊರಟಿರುವುದು ಹಾಗಂತ ಈ ರೀತಿ ಕಳ್ಳನ ರೀತಿಯಲ್ಲಿ ಸುತ್ತುವುದು ಎಷ್ಟು ಸರಿ... ಈತ ಭಾರತದ ಬಗ್ಗೆ ಏನು ಹೇಳಲು ಹೊರಟಿದ್ದಾನೆ.
ಬೆಂಗಳೂರು ಮೆಟ್ರೋ ಕಾರ್ಯಕಾರಿ ನಿರ್ದೇಶಕ ಎಎಸ್ ಶಂಕರ್ ಪ್ರಯಾಣಿಕರ ಮೇಲೆ ಹೆಚ್ಚಿನ ಕಣ್ಗಾವಲು ಇಡಲಾಗುವುದು ಎಂದು ಹೇಳಿದ್ದಾರೆ.



Click it and Unblock the Notifications