Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ ತೆಗೆಯದೆ ಪ್ರಯಾಣಿಸಿದ ಪ್ರಸಿದ್ಧ ಯೂಟ್ಯೂಬರ್: ನೆಟ್ಟಿಗರಿಂದ ಟೀಕೆಗಳ ಸುರಿಮಳೆ
ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣ ಮಾಡಿದವರಿಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಸಾಧ್ಯನೇ ಇಲ್ಲ ಎಂಬುವುದು ಗೊತ್ತಿರುವ ವಿಷಯ, ಆದರೆ ಒಬ್ಬ ಪ್ರಸಿದ್ಧ ಯುಟ್ಯೂಬರ್ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ವೀಡಿಯೋ ಮಾಡಿ ಹಾಕಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ನೆಟ್ಟಿಗರು ಯೂ ಟ್ಯೂಬರ್ ಮಾಡಿರುವುದು ತಪ್ಪು ಎಂದು ಟೀಕಿಸುತ್ತಿದ್ದಾರೆ.

ಆತನ ಹೆಸರು Fidias,ತುಂಬಾನೇ ಪ್ರಸಿದ್ಧ ಯೂಟ್ಯೂಬರ್, ಎಲೆನ್ ಮಸ್ಕ್ ಅವರನ್ನು ಭೇಟಿ ಮಾಡುವ ಮೂಲಕ ತುಂಬಾನೇ ಗಮನ ಸೆಳೆದ ವ್ಯಕ್ತಿ. ಭಾರತವನ್ನು 10 ಡಾಲರ್ ಮಾತ್ರ ಇಟ್ಟು ಸುತ್ತಿ ತೋರಿಸುತ್ತೇನೆ ಎಂದು ಭಾರತಕ್ಕೆ ಪ್ರಯಾಣ ಮಾಡಿದ್ದಾರೆ. ಆ ವೀಡಿಯೋದಲ್ಲಿಯೂ ಭಾರತದ ಮ್ಯಾಪ್ ಅನ್ನು ಸರಿಯಾಗಿ ಹಾಕದೆ ಭಾರತೀಯರ ಭಾವನೆ ಧಕ್ಕೆ ಮಾಡಿದ್ದಾರೆ, ಇನ್ನೂ ಆ ವೀಡಿಯೋ ಅವರ ಖಾತೆಯಲ್ಲಿಯೇ ಇದೆ. ಇದೀಗ ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ ಕೊಡದೆ ಪ್ರಯಾಣಿಸಿ ತುಂಬಾನೇ ಗಮನ ಸೆಳೆದಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣ ಮಾಡಿದವರಿಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಬೆಂಗಳೂರಿನ ಮೆಟ್ರೋದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ತುಂಬಾನೇ ಕಷ್ಟ, ಅಲ್ಲಿ ಮೆಟ್ರೋ ಕಾಯಿನ್ ಅಥವಾ ಮೆಟ್ರೋ ಕಾರ್ಡ್ ಇಟ್ಟರೆ ಫ್ಲಾಟ್ ಫಾರಂ ಹೋಗಲು ಹಾಗೂ ಎಕ್ಸಿಟ್ ಆಗಲು ಸಾಧ್ಯ. ಆದರೆ ಈ ವ್ಯಕ್ತಿ ಆ ಎಂಟ್ರಿ ಹಾಗೂ ಎಕ್ಸಿಟ್ ಗೇಟ್ ಅನ್ನು ಹಾರಿಕೊಂಡು ಹೋಗಿದ್ದೇನೆ. ಈತ ಈ ರೀತಿ ಮಾಡುವಾಗ ಮೆಟ್ರೋ ಸಿಬ್ಬಂದಿಗಳು ಏನು ಮಾಡುತ್ತಿದ್ದರು ಎಂಬುವುದೇ ಪ್ರಶ್ನೆ. ಈತ ಟಿಕೆಟ್ ತೆಗೆಯದೆ ಪ್ರಯಾಣ ಮಾಡಿದ್ದು ಮಾತ್ರವಲ್ಲ ಮೆಟ್ರೋ ಒಳಗಡೆ ಪ್ಯಾಸೆಂಜರ್ ಹಿಡಿದು ನಿಲ್ಲಲು ಇರುವ ರಾಡ್ಗಳಲ್ಲಿ ವರ್ಕೌಟ್ ಮಾಡಿದ್ದಾನೆ.... ಇಂಥ ಕುಚೇಷ್ಠೆಯನ್ನು ಮಾಡಿ, ನಂತರ ಎಕ್ಸಿಟ್ ಜಂಪ್ ಆಗಿ ಬಂದು ನಾನು ಟಿಕೆಟ್ ತೆಗೆಯದೆ ಬೆಂಗಳೂರು ಮೆಟ್ರೋದಲ್ಲಿ ಬಂದಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.
ಈ ವೀಡಿಯೋಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಆತನನ್ನು ಏಕೆ ಯಾವುದೇ ಸೆಕ್ಯೂರಿಟಿ ಗಾರ್ಡ್ಸ್ ತಡೆಯಲಿಲ್ಲ ಎಂಬುವುದೇ ಪ್ರಶ್ನೆ. ಕೆಲವರು ಆತನಿಗೆ GOOD JOB! STEALING from the HARD WORKING people of India! ಎಂದು ಕಮೆಂಟ್ ಮಾಡುತ್ತಿದ್ದಾರೆ. ಈತ 10 ಡಾಲರ್ನಲ್ಲಿ ಭಾರತ ಸುತ್ತುತ್ತೇನೆ ಎಂದು ಹೊರಟಿರುವುದು ಹಾಗಂತ ಈ ರೀತಿ ಕಳ್ಳನ ರೀತಿಯಲ್ಲಿ ಸುತ್ತುವುದು ಎಷ್ಟು ಸರಿ... ಈತ ಭಾರತದ ಬಗ್ಗೆ ಏನು ಹೇಳಲು ಹೊರಟಿದ್ದಾನೆ.
ಬೆಂಗಳೂರು ಮೆಟ್ರೋ ಕಾರ್ಯಕಾರಿ ನಿರ್ದೇಶಕ ಎಎಸ್ ಶಂಕರ್ ಪ್ರಯಾಣಿಕರ ಮೇಲೆ ಹೆಚ್ಚಿನ ಕಣ್ಗಾವಲು ಇಡಲಾಗುವುದು ಎಂದು ಹೇಳಿದ್ದಾರೆ.



Click it and Unblock the Notifications











