Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದೇವಾಲಯಕ್ಕೆ 10 ಕೆ.ಜಿ ಬೆಳ್ಳಿ ಪೆಟ್ರೋಲ್ ಪಂಪ್ ನೀಡಿದ ಭಕ್ತ..! ಏಕೆ ಗೊತ್ತಾ?
ಭಾರತದಲ್ಲಿ ದೇವರಿಗೆ ಹರಕೆ ಕಟ್ಟಿಕೊಳ್ಳುವ ಸಂದ್ರದಾಯ ಹಿಂದಿನಿಂದಿಲೂ ನಡೆದುಕೊಂಡು ಬಂದಿದೆ. ಅದ್ರಲ್ಲೂ ವಿಶೇಷವಾಗಿ ಹಿರಿಯರು ದಶಕಗಳ ಹಿಂದೆ ಕಟ್ಟಿಕೊಂಡ ಹರಕೆಗಳನ್ನು ಈಗ ತೀರುಸುವುದು ನೋಡಬಹುದು. ನೀವು ಹಳ್ಳಿಯಿಂದ ಹಿಡಿದು ನಗರಗಳ ದೇವಾಲಯಕ್ಕೆ ಹೋದರು ಅಲ್ಲಿ ಹರಕೆ ತೀರಿಸಲೆಂದೇ ದೇವಾಲಯಗಳಿಗೆ ಭಕ್ತರು ಬರುವುದು ನೋಡಬಹುದು. ಈ ಸಂಪ್ರದಾಯ ಹಿರಿಯರಿಂದ ಮಕ್ಕಳ ಕಾಲಕ್ಕೂ ನಡೆದುಕೊಂಡು ಬಂದಿದೆ.
ಇನ್ನು ಹಲವು ಹರಕೆಗಳು ವಿಚಿತ್ರವಾಗಿ ಇರುವುದು ಕೂಡ ನೋಡಬಹುದು. ನೀವು ಊಹಿಸದ ರೀತಿಯಲ್ಲಿ ರಕೆ ಕಟ್ಟಿಕೊಂಡು ಅದನ್ನು ತೀರಿಸಲೆಂದು ದೇವಾಲಯಗಳಿಗೆ ಬರುವುದು ನೋಡಬಹುದು. ಈಗ ಇಲ್ಲೊಬ್ಬ ಭಕ್ತನ ವಿಚಿತ್ರ ಹರಕೆಯನ್ನು ತೀರಿಸಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆತ ದೇವಾಲಯಕ್ಕೆ ಪೆಟ್ರೋಲ್ ಪಂಪ್ ಮೆಷಿನ್ ನೀಡಿ ಹರಕೆ ತೀರಿಸಿದ್ದಾನೆ.

ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯ ಶ್ರೀ ನಲ್ವಾಲಿಯಾ ಸೇಠ್ ದೇವಾಲಯಕ್ಕೆ ಭಕ್ತನೊಬ್ಬ ಬೆಳ್ಳಿಯಿಂದ ಮಾಡಲಾದ ಪೆಟ್ರೋಲ್ ಪಂಪ್ ಮೆಷಿನ್ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ. ಅದ್ರಲ್ಲೂ ಈ ಪೆಟ್ರೋಲ್ ಪಂಪ್ ಮಷಿನ್ ಬರೋಬ್ಬರಿ 10 ಕೆ.ಜಿ ತೂಕವಿದೆ. ಈ ಹರಕೆ ತೀರಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರು ಅಚ್ಚರಿಗೊಳಗಾಗಿದ್ದಾರೆ.
ಚಿತ್ತೋರಗಢದ ಡಂಗ್ಲಾದ ಉದ್ಯಮಿ ಮಂಗಿಲಾಲ್ ಜರೋಲಿ, 10 ಕೆ.ಜಿ ಬೆಳ್ಳಿಯಿಂದ ತಯಾರಿಸಿದ ಪೆಟ್ರೋಲ್ ಪಂಪ್ ಅನ್ನು ದೇವಾಲಯಕ್ಕೆ ನೀಡುವ ಮೂಲಕ ದೀರ್ಘಕಾಲದ ಹರಕೆ ತಿರಿಸಿದರು. ಮಕ್ಕಳು ಈ ಹಿಂದೆ ಪೆಟ್ರೋಲ್ ಪಂಪ್ ನಿರ್ಮಾಣಕ್ಕಾಗಿ ಅರ್ಜಿಸಲ್ಲಿಸಿದ್ದರಂತೆ. ಆದ್ರೆ ಹಲವು ತಿಂಗಳು ಅದರ ಓಡಾಟದಲ್ಲಿ ಕಳೆಯಬೇಕಾಗಿತ್ತು. ಈ ವೇಳೆ ಉದ್ಯಮಿ ದೇವರಿಗೆ ಹರಕೆ ಕಟ್ಟಿಕೊಂಡರಂತೆ. ಮಕ್ಕಳ ಪೆಟ್ರೋಲ್ ಪಂಪ್ ಕನಸು ನನಸಾದರೆ 10. ಕೆ.ಜಿ ಬೆಳ್ಳಿ ಪೆಟ್ರೋಲ್ ಪಂಪ್ ಮಷಿನ್ ಅನ್ನು ದೇವಾಲಯಕ್ಕೆ ನೀಡುವುದಾಗಿ ಅವರು ಹರಕೆ ಕಟ್ಟಿಕೊಂಡರಂತೆ. ಈಗ ಅವರ ಮಕ್ಕಳ ಹೆಸರಿನ ಪೆಟ್ರೋಲ್ ಪಂಪ್ ಅರ್ಜಿ ಪುರಸ್ಕೃತಗೊಂಡಿದೆ. ಹೀಗಾಗಿ ಉದ್ಯಮಿ ತಮ್ಮ ಹರಕೆ ತೀರಿಸಿದ್ದಾರೆ ಎಂದು ತಿಳಿದುಬಂದಿದೆ.
ಪೆಟ್ರೋಲ್ ಪಂಪ್ ಜೊತೆಗೆ 56 ಕಾಣಿಕೆಗಳ ಟ್ಯಾಬ್ಲೋವನ್ನು ದೇವಾಲಯದಲ್ಲಿ ಇರಿಸಲಾಗಿದೆ. ಇನ್ನು ಇಡೀ ಕುಟುಂಬ ಈ ಬೆಳ್ಳಿ ಪೆಟ್ರೋಲ್ ಪಂಪ್ ಅನ್ನು ತೆರೆದ ವಾಹನದಲ್ಲಿ ಹೂವಿನ ಅಲಂಕಾರದೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಗಿತ್ತು. ಇದನ್ನು ಕಂಡು ಜನರು ಅಚ್ಚರಿಯ ಜೊತೆಗೆ ಕುತೂಹಲ ನೋಡಲು ದೇವಾಲಯಕ್ಕೆ ಹರಿದುಬಂದಿದ್ದರು. ಉದ್ಯಮಿ ಮಂಗಿಲಾಲ್ ತಲೆಯ ಮೇಲೆ ಈ ಪಂಪ್ ಅನ್ನು ಹೊತ್ತು ದೇವಾಲಯಕ್ಕೆ ಅರ್ಪಿಸಿದರು.
ಸನ್ವಾಲಿಯಾ ಸೇಠ್ ದೇವಾಲಯದ ವಿಶೇಷವೇನು?
ಚಿತ್ತೋರ್ಗಢದ ಮಂಡ್ಫಿಯಾದಲ್ಲಿರುವ ಶ್ರೀ ಸನ್ವಾಲಿಯಾ ಸೇಠ್ ದೇವಾಲಯವು ಶ್ರೀಕೃಷ್ಣನ ಪೂಜ್ಯ ದೇವಾಲಯವಾಗಿದೆ. ಭಕ್ತರು ಸನ್ವಾಲಿಯಾ ಸೇಠ್ ಅವರನ್ನು ತಮ್ಮ ವ್ಯವಹಾರಗಳಲ್ಲಿ ಪಾಲುದಾರರೆಂದು ಪರಿಗಣಿಸುತ್ತಾರೆ, ತಮ್ಮ ಲಾಭದ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತಹ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ದೇವಾಲಯಕ್ಕೆ ಚಿನ್ನ, ಬೆಳ್ಳಿ, ಹಣ, ವಿದೇಶಿ ಕರೆನ್ಸಿ, ಸೇರಿ ಹಲವು ರೀತಿಯ ಕಾಣಿಕೆ ಬರುವುದು ನೋಡಬಹುದು. ವಾರ್ಷಿಕವಾಗಿ 29 ಕೋಟಿಯಷ್ಟು ಕಾಣಿಗೆ ಸಂಗ್ರಹವಾಗಲಿದೆ.
ಈ ಹಿಂದೆ ಕೂಡ ದೇವಾಲಯಕ್ಕೆ ಬೆಳ್ಳಿ ಹೆಲಿಕಾಪ್ಟರ್, ಸೇರಿ ಹಲವು ಮೂರ್ತಿಗಳು ಕಾಣಿಗೆಯಾಗಿ ಬಂದಿದ್ದವು. ಸದ್ಯ ಈಗ ಬಂದಿರುವ ಈ ಕಾಣಿಗೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ದೇವಾಲಯದ ಆಡಳಿತವು ಮಂಗಿಲಾಲ್ ಅವರ ಕಾಣಿಕೆಯನ್ನು ಸ್ವೀಕರಿಸಿದೆ, ಅವರ ನಂಬಿಕೆಯನ್ನು ಶ್ಲಾಘಿಸಿದೆ ಮತ್ತು ಅದನ್ನು ದೇವಾಲಯದ ದೀರ್ಘಕಾಲದ ಸಂಪ್ರದಾಯಗಳ ಭಾಗವೆಂದು ಗುರುತಿಸಿದೆ.



Click it and Unblock the Notifications











