Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರುಷರಾಗಿ ಹುಟ್ಟೋದೇ ಮಹಾ ತಪ್ಪು..! ಪತ್ನಿ ಕಿರುಕುಳಕ್ಕೆ ಬೇಸತ್ತ ಟೆಕ್ಕಿ ಮಾಡಿದ್ದೇನು?
ಬೆಂಗಳೂರಿನ ದೊಡ್ಡ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರು ಮಾತ್ರವಲ್ಲ ಈಗ ಇಡೀ ದೇಶದಲ್ಲಿ ಸುದ್ದಿಯಾಗುತ್ತಿದೆ. ಕೈತುಂಬ ಸಂಬಳ ಬರುತ್ತಿದ್ದರು ಆತ ಈ ರೀತಿಯ ನಿರ್ಧಾರಕ್ಕೆ ಕೈಹಾಕಿದ್ದು ಏಕೆ ಎಂಬ ಪ್ರಶ್ನೆ ಮೊದಲಿಗೆ ಮೂಡಿತ್ತು, ಆದ್ರೆ ಆತನ ಕೊನೆಯ ವಿಡಿಯೋ ಹಾಗೂ 25 ಪುಟಗಳ ಡೆತ್ ನೋಟ್ ಈಗ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದೆ.
ಉತ್ತರ ಪ್ರದೇಶ ಮೂಲದ 34 ವರ್ಷದ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತ್ನಿಯ ಕಿರುಕುಳ ತಾಳಲಾಗದೆ ಸಾವಿನ ಕದ ತಟ್ಟಿದ್ದಾರೆ. 24 ಪುಟಗಳ ಅವರ ಡೆತ್ ನೋಟ್ ಇಡೀ ಜೀವನದಲ್ಲಿ ಅವರು ಅನುಭವಿಸಿರುವ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಾಗೆ ಕಂಪನಿ ಕುರಿತಂತೆ ಅವರ ಆರೋಪ ಎಲ್ಲರ ಕಣ್ಣು ಕೆಂಪಾಗಿಸುವಂತೆ ಮಾಡಿದೆ.

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನೆಲೆಸಿದ್ದ ಅವರು ಮನೆಯಲ್ಲೇ ಕೊನೆಯ ಬಾರಿಗೆ ವಿಡಿಯೋ ಚಿತ್ರೀಕರಣ ನಡೆಸಿ, ಸಾವಿಹೊಂದು ಟೈಮ್ ಟೇಬಲ್ ಸಹ ಹಾಕಿಟ್ಟು ನೇಣು ಬಿಗಿದುಕೊಂಡಿದ್ದಾರೆ. "ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ. ಭಾರತದಲ್ಲಿ ಪುರುಷರಾಗಿ ಹುಟ್ಟುವುದು ಮಹಾ ತಪ್ಪು ಎಂದೆಲ್ಲಾ ಬರೆದುಕೊಂಡಿದ್ದಾರೆ.
ನೀವು ಈ ಪೋಸ್ಟ್ ಓದುವಾಗ ನಾನು ಸತ್ತಿರುತ್ತೇನೆ. ಪ್ರಸ್ತುತ ಭಾರತದಲ್ಲಿ ಪುರುಷರ ಕಾನೂನುಬದ್ಧ ನರಮೇಧ ನಡೆಯುತ್ತಿದೆ. ಪುರುಷರಾಗಿ ಹುಟ್ಟುವುದು ಅಪರಾಧವಾಗಿದೆ, ನನ್ನ ಮೇಲೆ ಪತ್ನಿ 9ಕ್ಕೂ ಹೆಚ್ಚು ಪ್ರಕರಣಗಳ ದಾಖಲಿಸಿದ್ದಾಳೆ. ಆರು ಪ್ರಕರಣಗಳು ಕೆಳ ನ್ಯಾಯಾಲಯದಲ್ಲಿ ಮತ್ತು ಮೂರು ಪ್ರಕರಣಗಳು ಹೈಕೋರ್ಟ್ನಲ್ಲಿವೆ ಎಂದು ಸುಭಾಷ್ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಅವರು ಆತ್ಮಹತ್ಯೆ ಪತ್ರವನ್ನು ಹಲವಾರು ಜನರಿಗೆ ಇಮೇಲ್ ಮೂಲಕ ಕಳುಹಿಸಿದ್ದರು ಮತ್ತು ಅದನ್ನು ಅವರು ಭಾಗವಾಗಿರುವ ಎನ್ಜಿಒಗೆ ಸಂಬಂಧಿಸಿದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದರು. ಪೊಲೀಸರ ಪ್ರಕಾರ, ಸುಭಾಷ್ ತನ್ನ ಮನೆಯಲ್ಲಿ "ನ್ಯಾಯ ಸಿಗಬೇಕು" ಎಂಬ ಫಲಕವನ್ನು ನೇತುಹಾಕಿದ್ದಾರೆ.
2022 ರಲ್ಲಿ ತಮ್ಮ ವಿರುದ್ಧ ಹಾಗೂ ತನ್ನ ಪೋಷಕರ ವಿರುದ್ಧ ಹಲವು ರೀತಿಯ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದ್ದಾರೆ. ವರದಕ್ಷಿಣೆ ಕಿರುಕುಳ, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಡದಂತಹ ಗಂಭೀರ ಸುಳ್ಳು ಆರೋಪ ನನ್ನ ಮೇಲಿದೆ. ಆಕೆ ದೊಡ್ಡ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಇನ್ನು ಸುಭಾಷ್ ಅವರ ಪತ್ನಿ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ಹೀಗಾಗಿ ಸುಭಾಷ್ ವಿಡಿಯೋಗಳು ಪೋಸ್ಟ್ಗಳು ಹೊರಬೀಳತ್ತಿದ್ದಂತೆ. ಏಕ್ಸಂಚರ್ ಕಂಪನಿ ವಿರುದ್ಧ ಸಹೋದ್ಯೋಗಿಗಳು ಹಾಗೂ ಜನರು ಕಂಪನಿಯಿಂದ ಸುಭಾಷ್ ಪತ್ನಿಯ ಹೊರಹಾಕುವಂತೆ ಒತ್ತಡ ಹೇರಲಾಗಿದೆ. ಆದ್ರೆ ಇದರಿಂದ ಕಂಪನಿ ತನ್ನ ಟ್ವೀಟ್ (ಎಕ್ಸ್) ಅನ್ನು ಬಂದ್ ಮಾಡಿದೆ.
ನಿಕಿತಾ ಸಿಂಘಾನಿಯಾ ಎಂಬಾಕೆಯ ವಜಾಗೊಳಿಸಬೇಕು ಎಂಬ ಕೂಗು ಕೇಳಿಬಂದಿದೆ. ಆಕೆ ಕಂಪನಿಯಲ್ಲಿ ಇದ್ದುಕೊಂಡೇ ಹಣಕ್ಕೆ ಪತಿಯ ಮೇಲೆ ಒತ್ತಡ ಹೇರುವುದು ಸುಳ್ಳು ಆರೋಪಗಳ ಹೊರಿಸಿ ದೂರು ನೀಡಿರುವುದರಿಂದ ಹೊರಬರಲಾಗದೆ ಟೆಕ್ಕಿ ಈ ರೀತಿ ಆತ್ಮಹತ್ಯೆಯಂತಹ ನಿರ್ಧಾರ ಮಾಡಿದ್ದಾರೆ.
ಸದ್ಯ ಈಗ ಬೆಂಗಳೂರು ಪೊಲೀಸರು ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ವಿರುದ್ಧ ಅವರ ಸಹೋದರ ಬಿಕಾಸ್ ಕುಮಾರ್ ದೂರಿನ ಮೇರೆಗೆ ಬಿಎನ್ಎಸ್ ಸೆಕ್ಷನ್ 108 ಮತ್ತು 3(5) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆದ್ರೆ ಮಹಿಳೆಯರು ಮಾತ್ರ ಕಿರುಕುಳಕ್ಕೆ ಒಳಾಗಿರುವುದಿಲ್ಲ ಬದಲಿಗೆ ಪುರುಷರು ಕೂಡ ಇಂತಹ ಕಿರುಕುಳಕ್ಕೆ ಒಳಗಾಗಿ ಪ್ರಣ ಕಳೆದುಕೊಳ್ಳುತ್ತಿರುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ.



Click it and Unblock the Notifications