Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐ ಫ್ಲೂ: ಮನೆಯಲ್ಲಿರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಿ!
ದೇಶದೆಲ್ಲೆಡೆ ಕಣ್ಣಿನ ಜ್ವರ ಅಥವಾ ಐ ಫ್ಲೂ ಭಯ ಇದೆ. ಕಣ್ಣಿನ ಜ್ವರದ ಹಾವಳಿ ಇನ್ನೂ ನಿಂತಿಲ್ಲ. ಕಳೆದ ಕೆಲವು ವಾರಗಳಿಂದ ದೇಶಾದ್ಯಂತ ಕಣ್ಣಿನ ಜ್ವರ ಕಾಣಿಸಿಕೊಂಡಿದೆ. ಈ ನಡುವೆ ಇದರ ಪ್ರಕರಣಗಳಲ್ಲಿ ಕೊಂಚ ಇಳಿಕೆಯಾಗಿದ್ದರೂ ಕೂಡ ಹಲವೆಡೆ ಮಳೆ, ಪ್ರವಾಹದ ನಂತರ ಮತ್ತೊಮ್ಮೆ ಈ ಕೆಂಪು ವೈರಾಣು ಅವಾಂತರ ಸೃಷ್ಟಿಸಲು ಆರಂಭಿಸಿದೆ. ಈ ಕಣ್ಣಿನ ಜ್ವರವನ್ನು ವೈದ್ಯಕೀಯ ಭಾಷೆಯಲ್ಲಿ ಕಾಂಜಂಕ್ಟಿವಿಟಿಸ್ ಅಥವಾ ಗುಲಾಬಿ ಕಣ್ಣು ಎಂತಲೂ ಕರೆಯುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಈ ಕಣ್ಣಿನ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಹೆಚ್ಚಿನ ಜನ ಈ ರೋಗವನ್ನು ನಿವಾರಿಸೋದಕ್ಕೆ ಇಂಗ್ಲೀಷ್ ಔಷಧಿಯ ಮೊರೆ ಹೋಗ್ತಾರೆ. ಇದರ ಹೊರತಾಗಿ ನಾವು ಆಯುರ್ವೇದದ ಮೂಲಕ ಕೂಡ ಪರಿಹಾರವನ್ನು ಕೈಗೊಳ್ಳಬಹುದು. ಅಷ್ಟಕ್ಕೂ ಮನೆಯಲ್ಲಿ ಸಿಗುವ ವಸ್ತುಗಳಿಂದ ಈ ಕಣ್ಣಿನ ಜ್ವರಕ್ಕೆ ಯಾವ ರೀತಿ ಪರಿಹಾರವನ್ನು ಕಂಡುಕೊಳ್ಳಬಹುದು ಅನ್ನೋದನ್ನು ತಿಳಿಯೋಣ.
ಕಣ್ಣಿನ ಜ್ವರದ ಲಕ್ಷಣಗಳು ಹೇಗಿರುತ್ತೆ?
ಕಣ್ಣಿನ ಜ್ವರವು ಬಂದರೆ ಅದು ನಮ್ಮ ಕಣ್ಣಿನ ಒಳಗಿರುವ ಬಿಳಿ ಪೊರೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕಣ್ಣಿನ ಬಿಳಿ ಭಾಗವೂ ಸಂಪೂರ್ಣವಾಗಿ ಗುಲಾಬಿ ಅಥವಾ ಕಡು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲದೇ ತುರಿಕೆ, ಸುಡುವಿಕೆ ಮತ್ತು ಕೆಲವೊಂದು ಸಾರಿ ಕಣ್ಣಿನಿಂದ ನೀರು ಬರೋದಕ್ಕೆ ಶುರುವಾಗುತ್ತದೆ.
ಕಣ್ಣಿನ ಜ್ವರಕ್ಕೆ ಚಿಕಿತ್ಸೆ ನೀಡೋದು ಹೇಗೆ?
ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಕಣ್ಣಿನ ಜ್ವರದ ಸಮಸ್ಯೆಗೆ ಸಂಪೂರ್ಣವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.
ಅರಶಿಣವನ್ನು ಈ ರೀತಿ ಬಳಸಿ!
ಅರಿಶಿನವು ಶಕ್ತಿಯುತವಾದ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಕಣ್ಣಿನ ಜ್ವರ ಮತ್ತು ಅದರ ರೋಗ ಲಕ್ಷಣಗಳಿಂದ ಪರಿಹಾರವನ್ನು ಪಡೆಯಲು ಕುದಿಯುವ ನೀರಿಗೆ ಅರಿಶಿನವನ್ನು ಸೇರಿಸಿ. ಅದನ್ನು ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಐ ವಾಶ್ ಆಗಿ ಬಳಸಿ. ಈ ಆಯುರ್ವೇದ ವಿಧಾನವು ಕಣ್ಣಿನಲ್ಲಿ ಊತವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ಕೊತ್ತಂಬರಿ ಸೊಪ್ಪು ಬಳಸಿ!
ಕೊತ್ತಂಬರಿ ಸೊಪ್ಪು ಆಹಾರವನ್ನು ರುಚಿಕರವಾಗಿಸುವುದು ಮಾತ್ರವಲ್ಲದೆ ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಜ್ವರದ ಲಕ್ಷಣಗಳನ್ನು ನಾಶಮಾಡಲು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಿ. ನೀರು ತಣ್ಣಗಾದ ನಂತರ ನಿಮ್ಮ ಕಣ್ಣುಗಳನ್ನು ಈ ನೀರಿನಲ್ಲಿ ತೊಳೆಯಿರಿ. ಇದು ಕಣ್ಣುಗಳ ಉರಿ ಮತ್ತು ಕೆಂಪು ಬಣ್ಣದಿಂದ ಪರಿಹಾರವನ್ನು ನೀಡುತ್ತದೆ.
ತುಳಸಿ ಎಲೆಗಳನ್ನು ಬಳಸಿರಿ!
ತುಳಸಿಯಲ್ಲಿರುವ ಔಷಧೀಯ ಗುಣಗಳಿಂದಾಗಿ ತುಳಸಿಯನ್ನು ಆಯುರ್ವೇದ ಮೂಲಿಕೆ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಣ್ಣಿನ ನೋವು ಮತ್ತು ಕಿರಿಕಿರಿಯನ್ನು ನಿವಾರಿಸುತ್ತದೆ. ತುಳಸಿ ಎಲೆಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಮರುದಿನ ನಿಮ್ಮ ಕಣ್ಣುಗಳನ್ನು ತೊಳೆಯಲು ಈ ನೀರನ್ನು ಬಳಸಿ.
ಹುಣಸೆ ಎಲೆಗಳು ಮತ್ತು ಅರಿಶಿನ!
ಒಂದು ಹಿಡಿ ಹುಣಸೆ ಎಲೆಗಳು ಮತ್ತು ಒಣ ಅರಿಶಿನವನ್ನು ನೀರಿನಲ್ಲಿ ಕುದಿಸಿ ಗಿಡಮೂಲಿಕೆಗಳ ದ್ರಾವಣವನ್ನು ತಯಾರಿಸಿ. ನೀರು ಕುದಿದ ನಂತರ ದ್ರಾವಣವನ್ನು ಒಂದು ಜರಡಿಯೊಂದಿಗೆ ಫಿಲ್ಟರ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಸೋಂಕಿತ ಕಣ್ಣನ್ನು ತೊಳೆಯಲು ಈ ಗಿಡಮೂಲಿಕೆ ನೀರನ್ನು ಬಳಸಿ.
ಸೂಚನೆ : ಇಂಟರ್ನೆಟ್ ಮಾಹಿತಿಯನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದ್ದು, ಬೋಲ್ಡ್ ಸ್ಕೈ ಕನ್ನಡ ಯಾವುದೇ ರೀತಿಯಲ್ಲಿ ಇದಕ್ಕೆ ಜವಾಬ್ದಾರರಾಗಿ ಇರೋದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.



Click it and Unblock the Notifications



