Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
300 ವರ್ಷಗಳ ಗಣೇಶ ಚತುರ್ಥಿಯಂದು ಬಂದಿದೆ 3 ಶುಭಯೋಗ: ಯಾರಿಗೆಲ್ಲಾ ತುಂಬಾ ಒಳ್ಳೆಯದು
ಭಾದ್ರಪದ ಮಾಸದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು, ಈ ವರ್ಷ ಸೆಪ್ಟೆಂಬರ್ 18-19ರಂದು ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವರ್ಷದ ವಿಶೇಷವೆಂದರೆ ಸುಮಾರು 300 ವರ್ಷಗಳ ಬಳಿಕ ಗಣೇಶ ಚತುರ್ಥಿಯಂದು 3 ಶುಭ ಯೋಗ ಏರ್ಪಡಲಿದೆ. ಈ ವರ್ಷ ಶುಕ್ಲ ಯೋಗ, ಬ್ರಹ್ಮ ಯೋಗ ಹಾಗೂ ರವಿ ಯೋಗ ಏರ್ಪಡಲಿದೆ.

ಮೇಷ ರಾಶಿ
ಈ ಮೂರ ಶುಭ ಯೋಗ ಏರ್ಪಡಿರುವುದರಿಂದ ಮಗುವಿಗಾಗಿ ಹಂಬಲಿಸುತ್ತಿದ್ದರೆ ಸಂತಾನ ಭಾಗ್ಯ ದೊರೆಯಲಿದೆ. ಆರ್ಥಿಕವಾಗಿಯೂ ತುಂಬಾನೇ ಅಭಿವೃದ್ಧಿ ಹೊಂದುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಾಗುವುದು. ಏನಾದರೂ ಹೊಸ ಉದ್ಯಮ ಪ್ರಾರಂಭಿಸಲು ಈ ದಿನ ನಿಮಗೆ ತುಂಬಾನೇ ಶ್ರೇಷ್ಠವಾಗಿದೆ. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿದೆ. ಈ ಚತುರ್ಥಿ ಬಳಿಕ ನೀವು ಆಸ್ತಿ ಅಥವಾ ಮನೆ ಖರೀದಿಸಬಹುದು.
ಮಿಥುನ ರಾಶಿ
ಈ ಮೂರು ಶುಭಯೋಗದಿಂದಾಗಿ ಮಿಥುನ ರಾಶಿಯವರಿಗೆ ಅದೃಷ್ಟದ ಯೋಗ ಕೂಡಿ ಬಂದಿದೆ. ಈ ಅವಧಿಯಲ್ಲಿ ನಿಮ್ಮ ಭಾಗ್ಯ ಹೆಚ್ಚಾಗಲಿದೆ. ಚತುರ್ಥಿ ಬಳಿಕ ನೀವು ಧನಯೋಗವನ್ನು ಪಡೆಯುತ್ತೀರಿ. ಅಲ್ಲದೆ ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆ ಪೂರ್ಣಗೊಳ್ಳಲಿದೆ. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ, ಜನರು ನಿಮಗೆ ಗೌರವ ಕೊಡಲಾರಂಭಿಸುತ್ತಾರೆ. ನೀವು ಮಾಡುವಂಥ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ.
ಮಕರ ರಾಶಿ
ಈ ಮೂರು ಶುಭ ಮುಹೂರ್ತದಿಂದಾಗಿ ನಿಮಗೆ ಅದೃಷ್ಟದ ಬೆಂಬಲ ಸಿಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಯೋಜನೆಯಂತೆಯೇ ನಡೆಯಲಿದೆ. ನೀವು ಧನ ಲಾಭ ಗಳಿಸುವಿರಿ, ನೌಕರಿಯಲ್ಲಿ ಇರುವವರು ಬಡ್ತಿಯನ್ನು ಪಡೆಯುತ್ತೀರಿ. ಈ ಚತುರ್ಥಿ ಬಳಿಕ ಹಠಾತ್ ಹಣ ಲಾಭ ಪಡೆಯುವಿರಿ.
ಶುಭ ಕಾರ್ಯಗಳಿಗೆ ಸೆಪ್ಟೆಂಬರ್ 18ರಂದು ಶುಭ ಮುಹೂರ್ತ
ಅಮೃತ ಸರ್ವೋತ್ತಮ ಮುಹೂರ್ತ: ಬೆಳಗ್ಗೆ 06:09ರಿಂದ 07:37ರವರೆಗೆ
ಶುಭ ಉತ್ತಮ ಮುಹೂರ್ತ: ಬೆಳಗ್ಗೆ 09:11ರಿಂದ 10:43
ಚರ ಸಾಮಾನ್ಯ ಮುಹೂರ್ತ: ಮಧ್ಯಾಹ್ನ 01:47ರಿಂದ 03:19ರವರೆಗೆ
ಲಾಭ ಯನ್ನತಿ ಮುಹೂರ್ತ: ಮಧ್ಯಾಹ್ನ 03:19 ಗಂಟೆಯಿಂದ ಸಂಜೆ 04:51ರವರೆಗೆ
ಅಮೃತ ಸರ್ವೋತ್ತಮ ಮುಹೂರ್ತ: 04:51ರಿಂದ ಸಂಜೆ 06:23ರವರೆಗೆ
ಈ ವರ್ಷ ಗಣೇಶ ಸ್ಥಾಪನೆಯನ್ನು ಯಾವಾಗ ಮಾಡಲಾಗುವುದು
ಈ ವರ್ಷ ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಗಣೇಶನನ್ನು ಕೂರಿಸುವುದಾದರೆ ಸೆಪ್ಟೆಂಬರ್ 19 ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶುಭ ಮುಹೂರ್ತವಿದೆ.
ಗಣೇಶನ ಈ ಮಂತ್ರಗಳನ್ನು ಪಠಿಸಿ
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್ತ್ರಾಯ ನಮಃ
ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಮೇಲೆ ಈ ಮಂತ್ರಗಳನ್ನು 108 ಬಾರಿ ಪಠಿಸಿ.



Click it and Unblock the Notifications
