Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಮ್ಮ ದೇಶದ ಟಾಪ್ 5 ಶ್ರೀಮಂತ ದೇಗುಲಗಳು
ಭಾರತದಲ್ಲಿ ಸಹಸ್ರಾರು ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಕೆಲವೊಂದು ದೇವಾಲಯಗಳು ತುಂಬಾ ಐಶ್ವರ್ಯವನ್ನು ಹೊಂದಿದ್ದು, ನಮ್ಮ ರಕ್ಷಣೆಗೆ ನಾವು ದೇವರನ್ನು ಮೊರೆಯಿಟ್ಟರೆ, ಈ ದೇವಸ್ಥಾನಗಳಲ್ಲಿರುವ ಐಶ್ವರ್ಯದ ರಕ್ಷಣೆ ಮಾತ್ರ ಸರಕಾರದ ಮೇಲಿದೆ! ಭಾರತವನ್ನು ಬಡ ರಾಷ್ಟ್ರ ಎಂದು ಗುರುತಿಸಲಾಗಿದೆ, ಆದರೆ ಇಲ್ಲಿರುವ ದೇವಸ್ಥಾನಗಳಲ್ಲಿನ ಸಂಪತ್ತುಗಳನ್ನು ನೋಡುವಾಗ ಭಾರತವನ್ನು ಬಡ ರಾಷ್ಟ್ರ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಬರುವುದು ಸಹಜ.

ಭಾರತದ ಪ್ರತಿಯೊಂದು ದೇಗುಲಕ್ಕೆ ಭಕ್ತಾದಿಗಳ ಮುಖಾಂತರ ಹಣದ ರಾಶಿಯೇ ಬಂದು ಬೀಳುತ್ತದೆ, ಅದರಲ್ಲೂ ಈ ದೇಶದ ಅತ್ಯಂತ ಶ್ರೀಮಂತ ದೇಗುಲಗಳೆಂಬ ಕೀರ್ತಿ ಈ ಕೆಳಗಿನ ದೇವಾಲಯಗಳಿಗೆ ಲಭಿಸಿದೆ.
1. ಶ್ರೀ ಪದ್ಮನಾಭ ಸ್ವಾಮಿ: ತಿರುವನಂತಪುರದಲ್ಲಿರುವ ಈ ದೇವಾಲಯದಲ್ಲಿರುವ ಸಂಪತ್ತಿನ ರಾಶಿ ಹೊರ ಜಗತ್ತಿಗೆ ಗೊತ್ತಾಗುವವರೆಗೆ ಇದು ಅಷ್ಟೇನು ಹೆಸರು ಗಳಿಸಿರಲಿಲ್ಲ. ಯಾವಾಗ ಈ ದೇವಾಲಯದಲ್ಲಿ ಐಶ್ವರ್ಯಗಳ ಅಪಾರ ರಾಶಿಯನ್ನೇ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ ಎಂದು ತಿಳಿಯಿತೊ, ತಿರುಪತಿ ತಿಮ್ಮಪ್ಪನ ಹಿಂದಿಕ್ಕಿ, ಈ ದೇವಾಲಯ ಅತ್ಯಂತ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಮೊದಲನೆ ಸ್ಥಾನವನ್ನು ಗಳಿಸಿತು. ಈ ದೇವಾಲಯವು ಸುಮಾರು 1,00,000 ಕೋಟಿಗಿಂತ ಅಧಿಕ ಬೆಲೆ ಬಾಳುವ ವಜ್ರ, ವೈಢೂರ್ಯಗಳನ್ನು ಹೊಂದಿದೆ.
2. ತಿರುಪತಿ ದೇವಾಲಯ: ತಿರುಪತಿ ತಿಮ್ಮಪ್ಪ ದೇವಾಲಯಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಭಕ್ತರು ಬೇಡಿದ ವರವನ್ನು ತಿರುಪತಿ ತಿಮ್ಮಪ್ಪ ನೀಡುತ್ತಾರೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ. ಪ್ರಪಂಚದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾದ ಅನಿಲ್ ಅಂಬಾನಿ, ಕರೋಡ್ ಪತಿ ಅಮಿತಾಬ್ ಬಚ್ಚನ್ ಹೀಗೆ ಅನೇಕ ಗಣ್ಯ ವ್ಯಕ್ತಿಗಳು ಈ ತಿರುಪತಿ ತಿಮ್ಮಪ್ಪನ ಭಕ್ತರುಗಳಲ್ಲಿ ಒಬ್ಬರಾಗಿದ್ದಾರೆ.
3. ಶಿರಡಿಸಾಯಿ ಬಾಬಾ: ಈ ದೇವಾಲಯವನ್ನು ಭಾರತದ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಫಕೀರ ಎಂದು ಜನಪ್ರಿಯ ಗಳಿಸಿದ್ದ ಶಿರಡಿ ಸಾಯಿಬಾಬಾರವರನ್ನು ಜನರು ತುಂಬ ಭಯ ಭಕ್ತಿಯಿಂದ ಪೂಜಿಸುತ್ತಾರೆ. ಈ ದೇವಾಲಯಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಬಂದು ಹೋಗುತ್ತಿರುತ್ತಾರೆ.
4. ಸಿದ್ಧಿ ವಿನಾಯಕ ದೇವಾಲಯ: ಮುಂಬಲಿಯಲ್ಲಿರುವ ಈ ದೇವಾಲಯಕ್ಕೆ ಖ್ಯಾತ ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ತಾರೆಯರು ಭೇಟಿ ನೀಡುತ್ತಾ ಇರುತ್ತಾರೆ. ಇಲ್ಲಿ ಎಷ್ಟು ಸಂಪತ್ತು ಇದೆ ಎಂದು ಅಧಿಕೃತವಾಗಿ ಘೋಷಿಸಿಲ್ಲವಾದರೂ ಈ ದೇವಾಲಯ ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ.
5. ಗೋಲ್ಡನ್ ಟೆಂಪಲ್: ಇದರ ಐಶ್ವರ್ಯ ಎಷ್ಟಿದೆ ಅನ್ನುವುದನ್ನು ಇದರ ಹೆಸರೇ ಸೂಚಿಸುತ್ತದೆ. ಪಂಜಾಬ್ ನಲ್ಲಿರುವ ಈ ದೇವಾಲಯವನ್ನು ಹರ್ಮಿಂದರ್ ಸಾಹಿಬ್ ಗುರುದ್ವಾರ ಎಂದು ಕರೆಯಲಾಗುತ್ತದೆ. ಈ ದೇವಾಲಯ ನೋಡುಗರನ್ನು ಬೆರಗುಗೊಳಿಸುವಷ್ಟು ಸೌಂದರ್ಯದಿಂದ ಕೂಡಿದೆ.



Click it and Unblock the Notifications