Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಹಾಬಲಿಯನ್ನು ನೆನೆಪಿಸುವ ಓಣಂ ಹಬ್ಬ

ಈ ಹಬ್ಬದಲ್ಲಿ ಮಹಾಬಲಿ ಚಕ್ರವರ್ತಿಯನ್ನು ಆರಾಧಿಸಲಾಗುವುದು. ಪ್ರತಿ ಮನೆಯ ಮುಂದೆ ಹೂಗಳಿಂದ ರಂಗೋಲಿ ಹಾಕಿ ಈ ಹಬ್ಬವನ್ನು ಆಚರಿಸಲಾಗುವುದು. ಪ್ರತಿಯೊಂದು ಹಬ್ಬಕ್ಕೆ ಒಂದೊಂದು ಹಿನ್ನಲೆ ಇರುವಂತೆ ಓಣಂ ಹಬ್ಬಕ್ಕೂ ಇದೆ. ಈ ಓಣಂ ಹಬ್ಬದ ಹಿನ್ನಲೆಯ ಬಗ್ಗೆ ತಿಳಿಯೋಣ ಬನ್ನಿ.
ಬಲಿಚಕ್ರವರ್ತಿಯೆಂಬ ಮಹಾರಾಜನಿದ್ದ. ತನ್ನ ಉದಾರತೆ ಮತ್ತು ತ್ಯಾಗಮಯಿ ಗುಣದಿಂದ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದ. ಕಳ್ಳತನ, ವಂಚನೆ, ಸುಳ್ಳು ಇವುಗಳ ಸುಳಿವೂ ಇರಲಿಲ್ಲವೆಂಬ ಎಂಬ ವಿಷಯ ಮೂರು ಲೋಕಕ್ಕೆ ಹಬ್ಬಿತು . ಈ ಚಕ್ರವರ್ತಿಯು ಬ್ರಹ್ಮನಿಂದ ವರ ಪಡೆದು, ಇಡೀ ಭೂ ಲೋಕವನ್ನೇ ಗೆದ್ದಿದ್ದ. ಅವನನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಮಹಾಬಲಿಯ ಆಳ್ವಿಕೆಯನ್ನು ನೋಡಿ ದೇವತೆಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ.
ಇವನ ರಾಜ್ಯದಲ್ಲಿ ಸಂತೋಷ ಮತ್ತು ಸಮೃದ್ಧಿ ದೇವಲೋಕಕ್ಕಿಂತ ತುಂಬಿ ತುಳಕಾಡುತ್ತಿತ್ತು. ಇದು ದೇವೇಂದ್ರನಿಗೆ ಸಹಿಸದಾಯಿತು. ಮಹಾಬಲಿಯನ್ನು ಹೀಗೆ ಬಿಟ್ಟರೆ ಸರ್ವಶಕ್ತನಾಗಿ ದೇವಲೋಕವನ್ನೂ ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಾನೆ ಎಂದು ಭಯಪಟ್ಟ ದೇವತೆಗಳು ಮತ್ತು ಭೂಮಿಯ ದೇವತೆಯಾದ ಅಧಿತಿಯು ವಿಷ್ಣುವಿನ ಮೊರೆ ಹೋದರು.
ಮಹಾಬಲಿಯು ಭಿಕ್ಷೆ ಬೇಡಿ ಬಂದವರಿಗೆ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಆದ್ದರಿಂದ ವಾಮನಮೂರ್ತಿಯಾಗಿ ಬ್ರಾಹ್ಮಣ ಬಾಲಕನ ರೂಪದಲ್ಲಿ ಬಂದು ಬಲಿ ಚಕ್ರವರ್ತಿ ಹತ್ತಿರ ಭಿಕ್ಷೆಯನ್ನು ಕೇಳಿದ. ಆಗ ಚಕ್ರವರ್ತಿಯು ನಿನಗೆ ಏನು ಬೇಕೊ ಕೇಳು, ನಾನು ನೀಡಲು ಕೊಡುವೆ ಎಂದು ಹೇಳಿದನು. ಆಗ ಅಸುರ ಗುರು ಶುಕ್ರಚಾರ್ಯರು 'ಈ ಬಾಲಕನನ್ನು ಸಾಮಾನ್ಯ ಬಾಲಕವೆಂದು ಪರಿಗಣಿಸಬೇಡ. ವರ ಕೊಡುವಾಗ ಹುಷಾರು' ಅಂದರು. ಆದರೆ ಬಲಿ ಚಕ್ರವರ್ತಿ ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ವಾಮನ ಮೂರ್ತಿ ಬೇರೇನು ಬೇಡ ನನ್ನ 3 ಹೆಜ್ಜೆಯಷ್ಟು ಸ್ಥಳ ನನಗೆ ಕೊಡು ಸಾಕು ಎಂದನು.
ವಾಮನ ಮೂರ್ತಿಯೂ3 ಹೆಜ್ಜೆಯಷ್ಟು ಭೂಮಿ ಸಾಕೆಂದು ಹೇಳಿದ್ದನ್ನು ಕೇಳಿ ಮಹಾಬಲಿಗೆ ನಗು ಉಕ್ಕಿ ಬರುತ್ತೆ. ಉಕ್ಕಿ ಬರುತ್ತಿರುವ ನಗು ಸಹಿಸಿಕೊಂಡು ನಂತರ ಸರಿ ನಿನಗೆ 3 ಹೆಜ್ಜೆ ಭೂಮಿ ಕೊಡುತ್ತಿದ್ದೇನೆ ಎಂದು ಹೇಳಿದ. ಆಗ ವಾಮನ ಮೂರ್ತಿಯು ಆಕಾಶದೆತ್ತರಕ್ಕೆ ಬೆಳೆದು ತನ್ನ ಪಾದವನ್ನೇ ಅಳೆತೆ ಕೋಲನ್ನಾಗಿ ಮಾಡಿಕೊಂಡು ಮೊದಲನೆ ಹೆಜ್ಜೆಯನ್ನು ಆಕಾಶದಲ್ಲಿನ ಇಟ್ಟನು. ಎರಡನೇ ಹೆಜ್ಜೆಯನ್ನು ಭೂಮಿಮತ್ತು ಪಾತಾಳದ ಮೇಲೆ ಇಟ್ಟು ಇಡೀ ಪ್ರಪಂಚವನ್ನು ತನ್ನದಾಗಿಸಿಕೊಂಡನು.
ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ವಿಷ್ಣು ಮಹಾಬಲಿ ಬಳಿ ಕೇಳಿದಾಗ ತನ್ನ ತಲೆಯ ಮೇಲೆ ಇಡು ಎಂದು ಹೇಳುತ್ತಾನೆ. ಮಹಾವಿಷ್ಣು ಮಹಾಬಲಿಯ ತಲೆಯ ಮೇಲೆ ಕಾಲಿಟ್ಟ ತಕ್ಷಣ ಮಹಾಬಲಿಯು ಪಾತಾಳವನ್ನು ಸೇರಿದನು. ಆಗ ಮಹಾಬಲಿಯು ತನ್ನ ಊರಾದ ಕೇರಳಕ್ಕೆ ವರ್ಷಕ್ಕೆ ಒಮ್ಮೆಯಾದರೂ ಬರುವ ಅವಕಾಶ ಕೊಡು ಎಂದಾಗ ಮಹಾವಿಷ್ಣು ಆ ವರವನ್ನು ನೀಡಿ, ಓಣಂ ಹಬ್ಬದಂದು ಜನರು ನಿನ್ನನ್ನು ಹೂಗಳಿಂದ ಅಲಂಕರಿಸಿ ಬರಮಾಡಿಕೊಳ್ಳುತ್ತಾರೆ ಎಂಬ ವರವನ್ನು ವಿಷ್ಣುವು ಕರುಣಿಸುತ್ತಾನೆ.
ಮಹಾಬಲಿ ವರ್ಷಕ್ಕೊಮ್ಮೆ ಬರುತ್ತಾನೆ ಎಂಬ ಅಚಲ ನಂಬಿಕೆ ಮಲಯಾಳಿಗಳಲ್ಲಿದೆ. ಆ ನಂಬಿಕೆಯಿಂದ ಓಣಂ ಹಬ್ಬದಂದು ಹೂಗಳಿಂದ ರಂಗೋಲಿ ಹಾಕಿ, ವಿಶೇಷ ಅಡುಗೆ ಮಾಡಿ ಮಹಾಬಲಿಯನ್ನು ಬರಮಾಡಿಕೊಳ್ಳಲಾಗುವುದು (ತಮ್ಮ ನಂಬಿಕೆಯಲ್ಲಿ).
ಓಣಂ ರೆಸಿಪಿ ತಿಳಿಯಲು ಮುಂದೆ ಓದಿ.



Click it and Unblock the Notifications
