Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರಾವಣ ಸೋಮವಾರ ಈ ಮಂತ್ರಗಳನ್ನು ಪಠಿಸಿ
ಶ್ರಾವಣದಲ್ಲಿ ಸೃಷ್ಟಿಯ ಜವಾಬ್ದಾರಿಯನ್ನು ಈ ಅವಧಿಯಲ್ಲಿ ಶಿವನು ತೆಗೆದುಕೊಂಡಿರುತ್ತಾನೆ. ಈ ಸಮಯದಲ್ಲಿ ಶಿವನ ಆರಾಧನೆ ಮಾಡುವುದರಿಂದ ಹೆಚ್ಚಿನ ಕೃಪೆ ದೊರೆಯಲಾಗುವುದು. ಆದ್ದರಿಂದ ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
ಪಾರ್ವತಿ ದೇವಿ ಶಿವನನ್ನು ವರಿಸಲು ಶ್ರಾವಣ ಮಾಸದಲ್ಲಿ ಕಠಿಣ ಉಪವಾಸ ಮಾಡಿದಳು. ಶಿವ ಪಾರ್ವತಿಯ ತಪಸ್ಸನ್ನು ಮೆಚ್ಚಿ ಪಾರ್ವತಿಯನ್ನು ಮದುವೆಯಾದ ಎಂಬ ಪೌರಾಣಿಕ ಕತೆಯಿದೆ. ಈ ಅವಧಿಯಲ್ಲಿ ಉಪವಾಸ ಹಾಗೂ ವ್ರತ ನಿಯಮಗಳನ್ನು ಪಾಲಿಸಿ ಶಿವನನ್ನು ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುವುದು ಎಂಬ ನಂಬಿಕೆ ಇದೆ. ಈ ವರ್ಷ ಶಿವ ಭಕ್ತರಿಗೆ ತುಂಬಾನೇ ವಿಶೇಷವಾಗಿದೆ, ಸುಮಾರು 19 ವರ್ಷಗಳ ಬಳಿಕ ಈ ವರ್ಷದ ಶ್ರಾವಣ ಮಾಸ ವಿಶೇಷವಾಗಿದೆ. ಈ ವರ್ಷ ಶ್ರಾವಣ ಮಾಸ ಏಕೆ ವಿಶೇಷವಾಗಿದೆ ಎಂದು ನೋಡೋಣ ಬನ್ನಿ:

2023ರಲ್ಲಿ ಶ್ರಾವಣ ಮಾಸ ಎರಡು ತಿಂಗಳು ಇದೆ
ಈ ವರ್ಷ ಶ್ರಾವಣ ಮಾಸ ಜುಲೈ 18ಕ್ಕೆ ಶುರುವಾಗಿದೆ, ಸೆಪ್ಟೆಂಬರ್ 15ಕ್ಕೆ ಮುಕ್ತಾಯ. ಈ ವರ್ಷ ಅಧಿಕ ಮಾಸ ಇರುವುದರಿಂದ ಶ್ರಾವಣ ಮಾಸ ದೀರ್ಘವಾಗಿದ್ದು 8 ಶ್ರಾವಣ ಸೋಮವಾರ ಸಿಗಲಿದೆ.
ಶ್ರಾವಣ ಸೋಮವಾರದ ದಿನಾಂಕಗಳು
ಜುಲೈ 24
ಜುಲೈ 31
ಆಗಸ್ಟ್ 7
ಆಗಸ್ಟ್ 14
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4
ಸೆಪ್ಟೆಂಬರ್ 11
ಶ್ರಾವಣ ಮಾಸದಲ್ಲಿ ಶಿವ ಭಕ್ತರು ಪಾಲಿಸುವ ವ್ರತ ನಿಯಯಮಗಳು
- ಮಾಂಸಾಹಾರ ಸೇವನೆ ಮಾಡವುದಿಲ್ಲ
- ಪ್ರತಿ ಶ್ರಾವಣ ಸೋಮವಾರದಂದು ಉಪವಾಸವಿದ್ದು ಶಿವನಿಗೆ ಅಭಿಷೇಕ ಮಾಡಿಸುತ್ತಾರೆ.
- ಜೇನುತುಪ್ಪ, ಹಾಲು, ತುಪ್ಪ, ಸಕ್ಕರೆ, ಮೊಸರಿನಿಂದ ಅಭಿಷೇಕ ಮಾಡಲಾಗುವುದು
- ಭಕ್ತರು ಬಿಲ್ವಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸುತ್ತಾರೆ
- ಶಿವನ ಮಂತ್ರಗಳ ಪಠಣೆ ಮಾಡುತ್ತಾರೆ.
ಶಿವ ಮಂತ್ರಗಳು
1.ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
2. ಮಹಾ ಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
3. ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಾಯ
4. ಶಿವ ಗಾಯತ್ರಿ
ಮಂತ್ರ ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು
ಶ್ರಾವಣ ಮಾಸದಲ್ಲಿ ನಾಗ ಪಂಚಮಿ, ವರಲಕ್ಷ್ಮಿ ವ್ರತ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ ಮುಂತಾದ ಪ್ರಮುಖ ಹಬ್ಬಗಳನ್ನು ಆಚರಿಸಲಾಗುವುದು



Click it and Unblock the Notifications
