Latest Updates
-
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ
ಈ ವರ್ಷಶ್ರಾವಣ ಮಾಸ ಎರಡು ತಿಂಗಳು ಬಂದಿರುವುದೇಕೆ? ಅಧಿಕ ಮಾಸ ಶುಭವಲ್ಲವೇ?
ಕನ್ನಡ ಪಂಚಾಂಗದ ಪ್ರಕಾರ ಶ್ರಾವಣ ಮಾಸ ಜುಲೈ 18ರಿಂದ ಶುರುವಾಗಿದೆ, ಸೆಪ್ಟೆಂರ್ 15ರವರೆಗೆ ಈ ವರ್ಷ ಶ್ರಾವಣ ಮಾಸ. ಸುಮಾರು 19 ವರ್ಷಗಳ ಬಳಿಕ ಅಧಿಕ ಶ್ರಾವಣ ಮಾಸ ಬಂದಿದೆ . ಅಧಿಕಮಾಸದಿಂದಾಗಿ ಚಾತುರ್ಮಾಸವು 4 ತಿಂಗಳ ಬದಲು ಈ ವರ್ಷ 5 ತಿಂಗಳು ಇರಲಿದೆ. ಹಿಂದೂ ಕ್ಯಾಲೆಂಡರ್ನಲ್ಲಿ ಸುಮಾರು ಮೂರು ವರ್ಷಗಳ ನಂತರ ಪ್ರತಿ ಬಾರಿ ಅಧಿಕಮಾಸ ಬರುತ್ತದೆ. ಈ ವರ್ಷ ಶ್ರಾವಣ ಮಾಸದಲ್ಲಿ ಅಧಿಕ ಮಾಸ ರಚನೆಯಾಗಿದೆ.
ಶ್ರಾವಣ ಮಾಸ ಶಿವ ಭಕ್ತರು ಕಾಯುವಂಥ ಮಾಸ
ಶಿವ ಭಕ್ತರು ಶ್ರಾವಣ ಮಾಸವನ್ನು ಖುಷಿಯಿಂದ ಬರಮಾಡಿಕೊಳ್ಳುತ್ತಾರೆ. ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರಂತೂ ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನವಾಗಿದೆ. ಈ ದಿನ ಉಪವಾಸವಿದ್ದು ಶಿವ ಭಕ್ತರು ಶಿವನ ಆರಾಧನೆಯಲ್ಲಿ ಮಗ್ನರಾಗಿರುತ್ತಾರೆ. ಈ ಬಾರಿ 8 ಶ್ರಾವಣ ಸೋಮವಾರ, 9 ಮಂಗಳಗೌರಿ ವ್ರತ ಬಂದಿದೆ.

ಈ ವರ್ಷ ಶ್ರಾವಣ ಮಾಸದಲ್ಲಿ ಅಧಿಕ ಮಾಸ ಏಕೆ ಉಂಟಾಗಿದೆ? ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಏಕೆ ಕರೆಯಲಾಗಿದೆ? ಈ ಸಮಯದಲ್ಲಿ ಶುಭ ಕಾರ್ಯ ಮಾಡಬಾರದು ಎಂದು ಏಕೆ ಹೇಳುತ್ತಾರೆ ಎಂದು ನೋಡೋಣ ಬನ್ನಿ:
ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಾಂತಿ ಇಲ್ಲ
ಈ ವರ್ಷ ಶ್ರಾವಣ ಮಾಸ ಜುಲೈ 18ರಿಂದ ಆಗಸ್ಟ್ 17ರವರೆಗೆ ಇರಲಿದೆ, ಆಗಸ್ಟ್ 17ಕ್ಕೆ ಸೂರ್ಯ ಕರ್ಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಸಂಚರಿಸುತ್ತದೆ. ಆವಾಗ ಅಧಿಕ ಮಾಸ ಪ್ರಾರಂಭ, ಸೆಪ್ಟೆಂಬರ್ 15ರವರೆಗೆ ಶ್ರಾವಣ ಅಧಿಕ ಮಾಸ. ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುವುದು.
ಪುರುಷೋತ್ತಮ ಮಾಸ ಎಂದು ಏಕೆ ಕರೆಯಲಾಗುವುದು?
ದಂತಕಥೆಯ ಪ್ರಕಾರ ಅಧಿಕ ಮಾಸವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಅಧಿಕ ಮಾಸದ ಒಡೆಯನಾಗಲು ಯಾವ ದೇವರೂ ಒಪ್ಪಿಕೊಳ್ಳುವುದಿಲ್ಲ, ಆವಾಗ ಅಧಿಕಮರು ಶ್ರೀವಿಷ್ಣುವನ್ನು ಪ್ರಾರ್ಥಿಸಿ ಈ ತಿಂಗಳ ಒಡೆಯನಾಗುವಂತೆ ಕೇಳಿಕೊಳ್ಳುತ್ತಾರೆ. ಅಧಿಕಮಾಗಳ ಪ್ರಾರ್ಥನೆಯನ್ನು ಕೇಳಿದ ವಿಷ್ಣು ಜೀ ಈ ತಿಂಗಳಿಗೆ ಪುರುಷೋತ್ತಮ ಎಂಬ ಅತ್ಯುತ್ತಮ ಹೆಸರನ್ನು ನೀಡಿದರು. ಅಂದಿನಿಂದ ಈ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಹೆಸರಾಯಿತು.
ಅಧಿಕ ಮಾಸದ ಮಹತ್ವ
ಈ ಮಾಸದಲ್ಲಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಹರ-ಹರಿ ಇಬ್ಬರ ಕೃಪೆಗೆ ಪಾತ್ರರಾಗುತ್ತೀರಿ. ಈ ತಿಂಗಳಿನಲ್ಲಿ ಭಗವದ್ಗೀತೆ ಓದುವುದು, ಮಂತ್ರಗಳನ್ನು ಪಠಿಸುವುದು, ಪೂಜೆ ಮಾಡುವುದು, ದಾನ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗುವುದು. ಈ ತಿಂಗಳಿನಲ್ಲಿ ಭಕ್ತಿಯಿಂದ ದೇವರ ಕಾರ್ಯ ಮಾಡಿದರೆ ಹರ-ಹರಿಯ ಕೃಪೆಗೆ ಪಾತ್ರರಾಗುವಿರಿ.
8 ಅಧಿಕ ಮಾಸದಲ್ಲಿ ಶುಭ ಕಾರ್ಯ ಮಾಡುವುದಿಲ್ಲ
ಅಧಿಕ ಮಾಸವನ್ನು ಶುಭ ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಮದುವೆ, ನಾಮಕರಣ ಈ ರೀತಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.



Click it and Unblock the Notifications