Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ಈ ವರ್ಷಶ್ರಾವಣ ಮಾಸ ಎರಡು ತಿಂಗಳು ಬಂದಿರುವುದೇಕೆ? ಅಧಿಕ ಮಾಸ ಶುಭವಲ್ಲವೇ?
ಕನ್ನಡ ಪಂಚಾಂಗದ ಪ್ರಕಾರ ಶ್ರಾವಣ ಮಾಸ ಜುಲೈ 18ರಿಂದ ಶುರುವಾಗಿದೆ, ಸೆಪ್ಟೆಂರ್ 15ರವರೆಗೆ ಈ ವರ್ಷ ಶ್ರಾವಣ ಮಾಸ. ಸುಮಾರು 19 ವರ್ಷಗಳ ಬಳಿಕ ಅಧಿಕ ಶ್ರಾವಣ ಮಾಸ ಬಂದಿದೆ . ಅಧಿಕಮಾಸದಿಂದಾಗಿ ಚಾತುರ್ಮಾಸವು 4 ತಿಂಗಳ ಬದಲು ಈ ವರ್ಷ 5 ತಿಂಗಳು ಇರಲಿದೆ. ಹಿಂದೂ ಕ್ಯಾಲೆಂಡರ್ನಲ್ಲಿ ಸುಮಾರು ಮೂರು ವರ್ಷಗಳ ನಂತರ ಪ್ರತಿ ಬಾರಿ ಅಧಿಕಮಾಸ ಬರುತ್ತದೆ. ಈ ವರ್ಷ ಶ್ರಾವಣ ಮಾಸದಲ್ಲಿ ಅಧಿಕ ಮಾಸ ರಚನೆಯಾಗಿದೆ.
ಶ್ರಾವಣ ಮಾಸ ಶಿವ ಭಕ್ತರು ಕಾಯುವಂಥ ಮಾಸ
ಶಿವ ಭಕ್ತರು ಶ್ರಾವಣ ಮಾಸವನ್ನು ಖುಷಿಯಿಂದ ಬರಮಾಡಿಕೊಳ್ಳುತ್ತಾರೆ. ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರಂತೂ ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನವಾಗಿದೆ. ಈ ದಿನ ಉಪವಾಸವಿದ್ದು ಶಿವ ಭಕ್ತರು ಶಿವನ ಆರಾಧನೆಯಲ್ಲಿ ಮಗ್ನರಾಗಿರುತ್ತಾರೆ. ಈ ಬಾರಿ 8 ಶ್ರಾವಣ ಸೋಮವಾರ, 9 ಮಂಗಳಗೌರಿ ವ್ರತ ಬಂದಿದೆ.

ಈ ವರ್ಷ ಶ್ರಾವಣ ಮಾಸದಲ್ಲಿ ಅಧಿಕ ಮಾಸ ಏಕೆ ಉಂಟಾಗಿದೆ? ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಏಕೆ ಕರೆಯಲಾಗಿದೆ? ಈ ಸಮಯದಲ್ಲಿ ಶುಭ ಕಾರ್ಯ ಮಾಡಬಾರದು ಎಂದು ಏಕೆ ಹೇಳುತ್ತಾರೆ ಎಂದು ನೋಡೋಣ ಬನ್ನಿ:
ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಾಂತಿ ಇಲ್ಲ
ಈ ವರ್ಷ ಶ್ರಾವಣ ಮಾಸ ಜುಲೈ 18ರಿಂದ ಆಗಸ್ಟ್ 17ರವರೆಗೆ ಇರಲಿದೆ, ಆಗಸ್ಟ್ 17ಕ್ಕೆ ಸೂರ್ಯ ಕರ್ಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಸಂಚರಿಸುತ್ತದೆ. ಆವಾಗ ಅಧಿಕ ಮಾಸ ಪ್ರಾರಂಭ, ಸೆಪ್ಟೆಂಬರ್ 15ರವರೆಗೆ ಶ್ರಾವಣ ಅಧಿಕ ಮಾಸ. ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುವುದು.
ಪುರುಷೋತ್ತಮ ಮಾಸ ಎಂದು ಏಕೆ ಕರೆಯಲಾಗುವುದು?
ದಂತಕಥೆಯ ಪ್ರಕಾರ ಅಧಿಕ ಮಾಸವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಅಧಿಕ ಮಾಸದ ಒಡೆಯನಾಗಲು ಯಾವ ದೇವರೂ ಒಪ್ಪಿಕೊಳ್ಳುವುದಿಲ್ಲ, ಆವಾಗ ಅಧಿಕಮರು ಶ್ರೀವಿಷ್ಣುವನ್ನು ಪ್ರಾರ್ಥಿಸಿ ಈ ತಿಂಗಳ ಒಡೆಯನಾಗುವಂತೆ ಕೇಳಿಕೊಳ್ಳುತ್ತಾರೆ. ಅಧಿಕಮಾಗಳ ಪ್ರಾರ್ಥನೆಯನ್ನು ಕೇಳಿದ ವಿಷ್ಣು ಜೀ ಈ ತಿಂಗಳಿಗೆ ಪುರುಷೋತ್ತಮ ಎಂಬ ಅತ್ಯುತ್ತಮ ಹೆಸರನ್ನು ನೀಡಿದರು. ಅಂದಿನಿಂದ ಈ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಹೆಸರಾಯಿತು.
ಅಧಿಕ ಮಾಸದ ಮಹತ್ವ
ಈ ಮಾಸದಲ್ಲಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಹರ-ಹರಿ ಇಬ್ಬರ ಕೃಪೆಗೆ ಪಾತ್ರರಾಗುತ್ತೀರಿ. ಈ ತಿಂಗಳಿನಲ್ಲಿ ಭಗವದ್ಗೀತೆ ಓದುವುದು, ಮಂತ್ರಗಳನ್ನು ಪಠಿಸುವುದು, ಪೂಜೆ ಮಾಡುವುದು, ದಾನ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗುವುದು. ಈ ತಿಂಗಳಿನಲ್ಲಿ ಭಕ್ತಿಯಿಂದ ದೇವರ ಕಾರ್ಯ ಮಾಡಿದರೆ ಹರ-ಹರಿಯ ಕೃಪೆಗೆ ಪಾತ್ರರಾಗುವಿರಿ.
8 ಅಧಿಕ ಮಾಸದಲ್ಲಿ ಶುಭ ಕಾರ್ಯ ಮಾಡುವುದಿಲ್ಲ
ಅಧಿಕ ಮಾಸವನ್ನು ಶುಭ ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಮದುವೆ, ನಾಮಕರಣ ಈ ರೀತಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.



Click it and Unblock the Notifications