Latest Updates
-
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು?
ಆತನ ಸಾವು ದೇಗುಲದ ಪ್ರಶಾಂತತೆ ಕದಡಿತ್ತು

ಶಿಯೋಚಿ ವಿಶಿಷ್ಟ ರೀತಿಯಲ್ಲಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದ. ಪಾಠಗಳಿಲ್ಲ, ಪ್ರವಚನಗಳಿಲ್ಲ. ಮೌನದ ಮುಖಾಂತರವೇ ಅತ್ಯಂತ ಪ್ರಭಾವಶಾಲಿಯಾಗಿ ಬೋಧನೆ ಮಾಡಲಾಗುತ್ತಿತ್ತು. ಮೌನದ ಮುಖಾಂತರವೇ ಬೋಧನೆ ಮಾಡುತ್ತಿದ್ದರಿಂದ ಇಡೀ ದೇಗುಲ ರಾತ್ರಿ, ಹಗಲೂ ಶಾಂತವಾಗಿ ಇರುತ್ತಿತ್ತು. ಸುತ್ತಲಿನ ಜನರು ಕೂಡ ಗುರು ಶಿಯೋಚಿಯನ್ನು ಮತ್ತು ಈ ರೀತಿಯ ಬೋಧನೆ ಶ್ಲಾಘಿಸುತ್ತಿದ್ದರು.
ಶಿಷ್ಯಂದಿರಿಗೆ ಧ್ಯಾನದ ಹೊರತಾಗಿ ದೇಗುಲದಲ್ಲಿ ಇನ್ನೇನೂ ಮಾಡುವುದಕ್ಕೆ ಇರುತ್ತಿರಲಿಲ್ಲ. ಶಿಯೋಚಿಯು ಸೂತ್ರಗಳನ್ನು ಪಠಿಸುತ್ತಿರಲಿಲ್ಲ ಬದಲಾಗಿ ಧ್ಯಾನವನ್ನು ಮಾತ್ರ ಮಾಡುತ್ತಿದ್ದ. ಶಿಷ್ಯರು ಕೂಡ ಶಿಯೋಚಿಯ ಬೋಧನೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಕಲಿಯುತ್ತಿದ್ದರು.
ಇದು ಹಲವಾರು ತಿಂಗಳುಗಳ ಕಾಲ ನಡೆದುಕೊಂಡು ಬಂದಿತು. ದೇಗುಲದ ದಿವ್ಯ ಪ್ರಶಾಂತತೆ ಒಂದು ದಿನ ಕದಡಿ ಹೋಯಿತು. ಅತ್ಯಂತ ಶಾಂತವಾಗಿದ್ದ ದೇಗುಲದಲ್ಲಿ ಗಂಟೆ ಜಾಗಟೆಗಳು ಮೊಳಗಲು ಪ್ರಾರಂಭಿಸಿದವು. ಮೌನದ ಮುಖಾಂತರ ನಡೆಯುತ್ತಿದ್ದ ಬೋಧನೆಗಳು, ಪಾಠ, ಪ್ರವಚನಗಳು ಎಂಟು ದಿಕ್ಕಿಗೆ ಹರಡುವಂತೆ ಕೇಳಲು ಪ್ರಾರಂಭಿಸಿದವು.
ಆ ದೇವಸ್ಥಾನದ ಪಕ್ಕದಲ್ಲಿಯೇ ಒಬ್ಬ ಹಿರಿಯ ನಾಗರಿಕರ ಹೆಂಗಸು ವಾಸವಾಗಿದ್ದರು. ಅವರಿಗೆ ಈ ಬದಲಾವಣೆ ವಿಚಿತ್ರವಾಗಿ ಕಂಡಿತು. ಆದರೆ, ಅವರಿಗೆ ಸತ್ಯ ಕಂಡುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದೇನೆಂದರೆ, ಶಿಯೋಚಿಯು ಮರಣ ಹೊಂದಿದ್ದ.



Click it and Unblock the Notifications