Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಆತನ ಸಾವು ದೇಗುಲದ ಪ್ರಶಾಂತತೆ ಕದಡಿತ್ತು

ಶಿಯೋಚಿ ವಿಶಿಷ್ಟ ರೀತಿಯಲ್ಲಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದ. ಪಾಠಗಳಿಲ್ಲ, ಪ್ರವಚನಗಳಿಲ್ಲ. ಮೌನದ ಮುಖಾಂತರವೇ ಅತ್ಯಂತ ಪ್ರಭಾವಶಾಲಿಯಾಗಿ ಬೋಧನೆ ಮಾಡಲಾಗುತ್ತಿತ್ತು. ಮೌನದ ಮುಖಾಂತರವೇ ಬೋಧನೆ ಮಾಡುತ್ತಿದ್ದರಿಂದ ಇಡೀ ದೇಗುಲ ರಾತ್ರಿ, ಹಗಲೂ ಶಾಂತವಾಗಿ ಇರುತ್ತಿತ್ತು. ಸುತ್ತಲಿನ ಜನರು ಕೂಡ ಗುರು ಶಿಯೋಚಿಯನ್ನು ಮತ್ತು ಈ ರೀತಿಯ ಬೋಧನೆ ಶ್ಲಾಘಿಸುತ್ತಿದ್ದರು.
ಶಿಷ್ಯಂದಿರಿಗೆ ಧ್ಯಾನದ ಹೊರತಾಗಿ ದೇಗುಲದಲ್ಲಿ ಇನ್ನೇನೂ ಮಾಡುವುದಕ್ಕೆ ಇರುತ್ತಿರಲಿಲ್ಲ. ಶಿಯೋಚಿಯು ಸೂತ್ರಗಳನ್ನು ಪಠಿಸುತ್ತಿರಲಿಲ್ಲ ಬದಲಾಗಿ ಧ್ಯಾನವನ್ನು ಮಾತ್ರ ಮಾಡುತ್ತಿದ್ದ. ಶಿಷ್ಯರು ಕೂಡ ಶಿಯೋಚಿಯ ಬೋಧನೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಕಲಿಯುತ್ತಿದ್ದರು.
ಇದು ಹಲವಾರು ತಿಂಗಳುಗಳ ಕಾಲ ನಡೆದುಕೊಂಡು ಬಂದಿತು. ದೇಗುಲದ ದಿವ್ಯ ಪ್ರಶಾಂತತೆ ಒಂದು ದಿನ ಕದಡಿ ಹೋಯಿತು. ಅತ್ಯಂತ ಶಾಂತವಾಗಿದ್ದ ದೇಗುಲದಲ್ಲಿ ಗಂಟೆ ಜಾಗಟೆಗಳು ಮೊಳಗಲು ಪ್ರಾರಂಭಿಸಿದವು. ಮೌನದ ಮುಖಾಂತರ ನಡೆಯುತ್ತಿದ್ದ ಬೋಧನೆಗಳು, ಪಾಠ, ಪ್ರವಚನಗಳು ಎಂಟು ದಿಕ್ಕಿಗೆ ಹರಡುವಂತೆ ಕೇಳಲು ಪ್ರಾರಂಭಿಸಿದವು.
ಆ ದೇವಸ್ಥಾನದ ಪಕ್ಕದಲ್ಲಿಯೇ ಒಬ್ಬ ಹಿರಿಯ ನಾಗರಿಕರ ಹೆಂಗಸು ವಾಸವಾಗಿದ್ದರು. ಅವರಿಗೆ ಈ ಬದಲಾವಣೆ ವಿಚಿತ್ರವಾಗಿ ಕಂಡಿತು. ಆದರೆ, ಅವರಿಗೆ ಸತ್ಯ ಕಂಡುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದೇನೆಂದರೆ, ಶಿಯೋಚಿಯು ಮರಣ ಹೊಂದಿದ್ದ.



Click it and Unblock the Notifications