Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಆತನ ಸಾವು ದೇಗುಲದ ಪ್ರಶಾಂತತೆ ಕದಡಿತ್ತು

ಶಿಯೋಚಿ ವಿಶಿಷ್ಟ ರೀತಿಯಲ್ಲಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದ. ಪಾಠಗಳಿಲ್ಲ, ಪ್ರವಚನಗಳಿಲ್ಲ. ಮೌನದ ಮುಖಾಂತರವೇ ಅತ್ಯಂತ ಪ್ರಭಾವಶಾಲಿಯಾಗಿ ಬೋಧನೆ ಮಾಡಲಾಗುತ್ತಿತ್ತು. ಮೌನದ ಮುಖಾಂತರವೇ ಬೋಧನೆ ಮಾಡುತ್ತಿದ್ದರಿಂದ ಇಡೀ ದೇಗುಲ ರಾತ್ರಿ, ಹಗಲೂ ಶಾಂತವಾಗಿ ಇರುತ್ತಿತ್ತು. ಸುತ್ತಲಿನ ಜನರು ಕೂಡ ಗುರು ಶಿಯೋಚಿಯನ್ನು ಮತ್ತು ಈ ರೀತಿಯ ಬೋಧನೆ ಶ್ಲಾಘಿಸುತ್ತಿದ್ದರು.
ಶಿಷ್ಯಂದಿರಿಗೆ ಧ್ಯಾನದ ಹೊರತಾಗಿ ದೇಗುಲದಲ್ಲಿ ಇನ್ನೇನೂ ಮಾಡುವುದಕ್ಕೆ ಇರುತ್ತಿರಲಿಲ್ಲ. ಶಿಯೋಚಿಯು ಸೂತ್ರಗಳನ್ನು ಪಠಿಸುತ್ತಿರಲಿಲ್ಲ ಬದಲಾಗಿ ಧ್ಯಾನವನ್ನು ಮಾತ್ರ ಮಾಡುತ್ತಿದ್ದ. ಶಿಷ್ಯರು ಕೂಡ ಶಿಯೋಚಿಯ ಬೋಧನೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಕಲಿಯುತ್ತಿದ್ದರು.
ಇದು ಹಲವಾರು ತಿಂಗಳುಗಳ ಕಾಲ ನಡೆದುಕೊಂಡು ಬಂದಿತು. ದೇಗುಲದ ದಿವ್ಯ ಪ್ರಶಾಂತತೆ ಒಂದು ದಿನ ಕದಡಿ ಹೋಯಿತು. ಅತ್ಯಂತ ಶಾಂತವಾಗಿದ್ದ ದೇಗುಲದಲ್ಲಿ ಗಂಟೆ ಜಾಗಟೆಗಳು ಮೊಳಗಲು ಪ್ರಾರಂಭಿಸಿದವು. ಮೌನದ ಮುಖಾಂತರ ನಡೆಯುತ್ತಿದ್ದ ಬೋಧನೆಗಳು, ಪಾಠ, ಪ್ರವಚನಗಳು ಎಂಟು ದಿಕ್ಕಿಗೆ ಹರಡುವಂತೆ ಕೇಳಲು ಪ್ರಾರಂಭಿಸಿದವು.
ಆ ದೇವಸ್ಥಾನದ ಪಕ್ಕದಲ್ಲಿಯೇ ಒಬ್ಬ ಹಿರಿಯ ನಾಗರಿಕರ ಹೆಂಗಸು ವಾಸವಾಗಿದ್ದರು. ಅವರಿಗೆ ಈ ಬದಲಾವಣೆ ವಿಚಿತ್ರವಾಗಿ ಕಂಡಿತು. ಆದರೆ, ಅವರಿಗೆ ಸತ್ಯ ಕಂಡುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದೇನೆಂದರೆ, ಶಿಯೋಚಿಯು ಮರಣ ಹೊಂದಿದ್ದ.



Click it and Unblock the Notifications