Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆತನ ಸಾವು ದೇಗುಲದ ಪ್ರಶಾಂತತೆ ಕದಡಿತ್ತು

ಶಿಯೋಚಿ ವಿಶಿಷ್ಟ ರೀತಿಯಲ್ಲಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದ. ಪಾಠಗಳಿಲ್ಲ, ಪ್ರವಚನಗಳಿಲ್ಲ. ಮೌನದ ಮುಖಾಂತರವೇ ಅತ್ಯಂತ ಪ್ರಭಾವಶಾಲಿಯಾಗಿ ಬೋಧನೆ ಮಾಡಲಾಗುತ್ತಿತ್ತು. ಮೌನದ ಮುಖಾಂತರವೇ ಬೋಧನೆ ಮಾಡುತ್ತಿದ್ದರಿಂದ ಇಡೀ ದೇಗುಲ ರಾತ್ರಿ, ಹಗಲೂ ಶಾಂತವಾಗಿ ಇರುತ್ತಿತ್ತು. ಸುತ್ತಲಿನ ಜನರು ಕೂಡ ಗುರು ಶಿಯೋಚಿಯನ್ನು ಮತ್ತು ಈ ರೀತಿಯ ಬೋಧನೆ ಶ್ಲಾಘಿಸುತ್ತಿದ್ದರು.
ಶಿಷ್ಯಂದಿರಿಗೆ ಧ್ಯಾನದ ಹೊರತಾಗಿ ದೇಗುಲದಲ್ಲಿ ಇನ್ನೇನೂ ಮಾಡುವುದಕ್ಕೆ ಇರುತ್ತಿರಲಿಲ್ಲ. ಶಿಯೋಚಿಯು ಸೂತ್ರಗಳನ್ನು ಪಠಿಸುತ್ತಿರಲಿಲ್ಲ ಬದಲಾಗಿ ಧ್ಯಾನವನ್ನು ಮಾತ್ರ ಮಾಡುತ್ತಿದ್ದ. ಶಿಷ್ಯರು ಕೂಡ ಶಿಯೋಚಿಯ ಬೋಧನೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಕಲಿಯುತ್ತಿದ್ದರು.
ಇದು ಹಲವಾರು ತಿಂಗಳುಗಳ ಕಾಲ ನಡೆದುಕೊಂಡು ಬಂದಿತು. ದೇಗುಲದ ದಿವ್ಯ ಪ್ರಶಾಂತತೆ ಒಂದು ದಿನ ಕದಡಿ ಹೋಯಿತು. ಅತ್ಯಂತ ಶಾಂತವಾಗಿದ್ದ ದೇಗುಲದಲ್ಲಿ ಗಂಟೆ ಜಾಗಟೆಗಳು ಮೊಳಗಲು ಪ್ರಾರಂಭಿಸಿದವು. ಮೌನದ ಮುಖಾಂತರ ನಡೆಯುತ್ತಿದ್ದ ಬೋಧನೆಗಳು, ಪಾಠ, ಪ್ರವಚನಗಳು ಎಂಟು ದಿಕ್ಕಿಗೆ ಹರಡುವಂತೆ ಕೇಳಲು ಪ್ರಾರಂಭಿಸಿದವು.
ಆ ದೇವಸ್ಥಾನದ ಪಕ್ಕದಲ್ಲಿಯೇ ಒಬ್ಬ ಹಿರಿಯ ನಾಗರಿಕರ ಹೆಂಗಸು ವಾಸವಾಗಿದ್ದರು. ಅವರಿಗೆ ಈ ಬದಲಾವಣೆ ವಿಚಿತ್ರವಾಗಿ ಕಂಡಿತು. ಆದರೆ, ಅವರಿಗೆ ಸತ್ಯ ಕಂಡುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದೇನೆಂದರೆ, ಶಿಯೋಚಿಯು ಮರಣ ಹೊಂದಿದ್ದ.



Click it and Unblock the Notifications
