For Quick Alerts
ALLOW NOTIFICATIONS  
For Daily Alerts

ದೈಹಿಕ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಹನುಮಾನ್ ಮಂತ್ರ

|

ಭಗವಾನ್ ಶ್ರೀ ಗಣೇಶನ೦ತೆಯೇ, ಸಕಲವಿಘ್ನಗಳನ್ನೂ ನಿವಾರಿಸಿಬಿಡುವನೆ೦ಬ ಖ್ಯಾತಿಯೂ ಭಗವಾನ್ ಹನುಮ೦ತನಿಗೂ ಇದೆ. ವ್ಯಕ್ತಿಯೋರ್ವರು ಹನುಮಾನ್ ಮಂತ್ರವನ್ನು ಸ೦ಪೂರ್ಣ ಭಕ್ತಿಭಾವದಿ೦ದ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಭಗವಾನ್ ಹನುಮ೦ತನ ದೈವಿಕ ರಕ್ಷಣೆಯನ್ನು ಪಡೆದುಕೊಳ್ಳುವ೦ತಾಗುತ್ತದೆ ಹಾಗೂ ಭಗವಾನ್ ಹನುಮ೦ತನು ಅ೦ತಹ ತನ್ನ ಪರಮಭಕ್ತನು ಜೀವನದಲ್ಲಿ ಯಾವುದೇ ಕಷ್ಟಕಾರ್ಪಣ್ಯಗಳಿಗೆ ಸಿಲುಕದ೦ತೆ ನೋಡಿಕೊಳ್ಳುವುದರ ಮೂಲಕ ಆತನ ಯೋಗಕ್ಷೇಮದ ಹೊಣೆಯನ್ನು ಸ್ವತ: ತಾನೇ ಹೊರುತ್ತಾನೆ.

ಹನುಮಂತ ಕೇವಲ ಶಕ್ತಿ ಮತ್ತು ಶೌರ್ಯದ ದೇವರಷ್ಟೆ ಅಲ್ಲ, ಆತನು ಸಂಕಟ ಬಂದಾಗೆಲ್ಲ ನೆನೆಯುವಂತಹ ದೇವರುಗಳ ಪೈಕಿ ಅಗ್ರಗಣ್ಯನಾದವನು. ಸಮಸ್ಯೆಯ ಸ್ವರೂಪಕ್ಕೆ ಜನರು ಹೆದರಿದಾಗ ಮೊದಲು ನೆನೆಯುವುದು ಆಂಜನೇಯನ ಹೆಸರು, ಮಂತ್ರ ಅಥವಾ ಚಾಲೀಸವನ್ನು. ಆಂಜನೇಯನ ಮಂತ್ರವನ್ನು ಪಠಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಅವುಗಳು ಕುರಿತು ತಿಳಿದುಕೊಳ್ಳಲು ಮುಂದೆ ಓದಿ.... ಹನುಮಾನ್ ಚಾಲೀಸಾ ಮಂತ್ರದ ಮಹತ್ವ ತಿಳಿದಿದೆಯೇ?

ಶಕ್ತಿಯ ಮೂಲ

ಶಕ್ತಿಯ ಮೂಲ

ಆಂಜನೇಯನು ಶಕ್ತಿ ಮತ್ತು ಚೈತನ್ಯದ ಮೂಲ. ಆದ್ದರಿಂದ ಆತನ ಮಂತ್ರವನ್ನು ಪಠಿಸುವುದರಿಂದ ನಾವು ಎಂತಹದೇ ಸಮಸ್ಯೆಯಲ್ಲಿದ್ದರು, ವಿಶೇಷವಾಗಿ ಆರೋಗ್ಯದ ವಿಚಾರವಾಗಿ ಅಥವಾ ನ್ಯಾಯಕ್ಕಾಗಿ ಹೋರಾಡುವಾಗ ಆಂಜನೇಯನನ್ನು ಸ್ಮರಿಸುತ್ತೇವೆ.

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ

ಭಯಾನಕ ಹಾಗೂ ಅಪಾಯಕಾರಿಯಾದ ಭೂತಪ್ರೇತ ಪಿಶಾಚಿಗಳು ಹಾಗೂ ದುಷ್ಟಶಕ್ತಿಗಳ ಬಾಧೆಯನ್ನು ಹೊಡೆದೋಡಿಸುವ ದೇವನೆ೦ದು ಭಗವಾನ್ ಹನುಮನನ್ನು ಪರಿಗಣಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಭಯಾನಕ ದು:ಸ್ವಪ್ನಗಳ ಕಾರಣದಿ೦ದ ನೀವು ಒ೦ದು ವೇಳೆ ತೊ೦ದರೆಗೀಡಾಗಿದ್ದಲ್ಲಿ, ನೀವು ನೆಮ್ಮದಿಯಿ೦ದ ನಿದ್ರೆಮಾಡುವ೦ತಾಗಲು, ಹನುಮಾನ್ ಮಂತ್ರ ಪಠಿಸಿ.

ಒತ್ತಡದಿ೦ದ ಮುಕ್ತಿ ಹೊ೦ದಲು

ಒತ್ತಡದಿ೦ದ ಮುಕ್ತಿ ಹೊ೦ದಲು

ಬೆಳಗ್ಗೆ ಎದ್ದು, ಸ್ನಾನವನ್ನು ಪೂರೈಸಿದ ಬಳಿಕ ಪ್ರಥಮತ: ಹನುಮಾನ್ ಮಂತ್ರವನ್ನು ಪಠಿಸುವುದರಿ೦ದ ನಿಮ್ಮ ಆ ಇಡಿಯ ದಿನವು ಸುಸೂತ್ರವಾಗಿ ಸಾಗುವ೦ತಾಗುತ್ತದೆ. ಪ್ರಾತ:ಕಾಲದಲ್ಲಿ ಕೈಗೊಳ್ಳುವ ಹನುಮಾನ್ ಮಂತ್ರದ ಪಠಣದಿ೦ದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಹಾಗೂ ನೀವು ನಿಮ್ಮ ಜೀವನದ ಸ೦ಪೂರ್ಣ ನಿಯ೦ತ್ರಣವು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ಹನುಮಾನ್ ಮಂತ್ರದ ಪಠಣವು ವ್ಯಕ್ತಿಯೋರ್ವರನ್ನು ದೈವಿಕ ಅನುಗ್ರಹದಿ೦ದ ಸ೦ಪನ್ನಗೊಳಿಸುತ್ತದೆ.

ನಿಮಗೆ ಚೇತರಿಕೆ ಒದಗಿಸುತ್ತದೆ

ನಿಮಗೆ ಚೇತರಿಕೆ ಒದಗಿಸುತ್ತದೆ

ಹನುಮಾನ್ ಮಂತ್ರವನ್ನು ಪಠಿಸುವುದರಿಂದ ನಿಮಗೆ ಕಷ್ಟಗಳಿಂದ ಚೇತರಿಕೆ ದೊರೆಯುತ್ತದೆ. ಇದು ನಿಮ್ಮಲ್ಲಿ ಕಳೆದು ಹೋಗಿರುವ ಚೇತರಿಕೆಯನ್ನು ಒದಗಿಸುತ್ತದೆ. ನೀವು ಯಥಾಸ್ಥಿತಿಗೆ ಬರಲು ಈ ಮಂತ್ರ ನಿಮ್ಮ ಸಹಾಯಕ್ಕೆ ಬರುತ್ತದೆ.

ಆರೋಗ್ಯದ ಮಂತ್ರ

ಆರೋಗ್ಯದ ಮಂತ್ರ

ನಿಮ್ಮ ಆರೋಗ್ಯ ಸಮಸ್ಯೆಗೆ ಸಿಲುಕಿದ್ದರೆ ಈ ಮಂತ್ರವು ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ. ಮರಣ ಶಯ್ಯೆಯಲ್ಲಿರುವವರು ಮತ್ತು ಕೋಮಾದಲ್ಲಿರುವವರನ್ನು ಸಹ ಆಂಜನೇಯನ ಮಂತ್ರ ಪಠನೆಯಿಂದ ಬದುಕಿಸಬಹುದಂತೆ. ಸಂಜೀವಿನಿ ಪರ್ವತವನ್ನು ಹೊತ್ತು ತಂದ ಆಂಜನೇಯನ ಮಂತ್ರದಲ್ಲಿ ಅಷ್ಟು ಸಾಮರ್ಥ್ಯ ಇರುತ್ತದೆ.

ಭೂತ ಚೇಷ್ಟೆಗಳಿಂದ ಮುಕ್ತಿ

ಭೂತ ಚೇಷ್ಟೆಗಳಿಂದ ಮುಕ್ತಿ

ಈ ಮಂತ್ರವನ್ನು ಪಠನೆ ಮಾಡುವುದರಿಂದ ದುಷ್ಟ ಶಕ್ತಿಗಳಿಂದ ದೂರವಿರಬಹುದು. ಅದರಲ್ಲಿಯೂ ವಾಮಾಚಾರ ಮುಂತಾದ ದುಷ್ಟ ಕಾರ್ಯಗಳನ್ನು ನಮ್ಮ ಮೇಲೆ ಪ್ರಯೋಗಿಸಿದಾಗ ನಾವು ಆಂಜನೇಯನ ಮೊರೆ ಹೋಗುವುದರಿಂದ, ಪರಿಹಾರವನ್ನು ಪಡೆಯಬಹುದು.

ಕುಸ್ತಿಪಟುಗಳ ಮಂತ್ರ

ಕುಸ್ತಿಪಟುಗಳ ಮಂತ್ರ

ಕುಸ್ತಿ ಪಟುಗಳು ತಮ್ಮ ಗರಡಿ ಮನೆಗಳಲ್ಲಿ ಆಂಜನೇಯನ ಆರಾಧನೆ ಮಾಡುತ್ತಾರೆ. ಅವರು ಸೋತಾಗ ಮತ್ತು ಗೆದ್ದಾಗ ನೆನೆಯುವುದು ಆಂಜನೇಯನ ಮಂತ್ರವನ್ನೆ. ಈ ಮಂತ್ರದ ಪಠನೆಯಿಂದ ಅವರಲ್ಲಿ ಗೆಲುವಿಗೆ ಅಗತ್ಯವಾದ ಚೈತನ್ಯ ದೊರೆಯುತ್ತದೆ. ಹೀಗೆ ಕುಸ್ತಿ ಕಲಿಗಳ ಪಾಲಿಗೆ ನಮ್ಮ ಆಂಜನೇಯ ಭಜರಂಗಬಲಿ!

ಮಾನಸಿಕ ಸಾಮರ್ಥ್ಯ

ಮಾನಸಿಕ ಸಾಮರ್ಥ್ಯ

ಆಂಜನೇಯನು ಕೇವಲ ದೈಹಿಕ ಶಕ್ತಿಯನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಜೊತೆಗೆ ಆತ ಮಾನಸಿಕ ಸಾಮರ್ಥ್ಯವನ್ನು ಸಾಮರ್ಥ್ಯವನ್ನು ಸಹ ನೀಡುತ್ತಾನೆ. ಏಕಾಗ್ರತೆಯಿಂದ ಓದಲು ಮತ್ತು ಜೀವನದಲ್ಲಿ ಏಳಿಗೆಯನ್ನು ಹೊಂದಲು ಆಂಜನೇಯನ ಕೃಪೆ ಅತ್ಯಾವಶ್ಯಕ. ಮಾರುತಿಯನ್ನು ತುಂಬು ಹೃದಯದಿಂದ ಪ್ರಾರ್ಥಿಸಿದರೆ ಯಶಸ್ಸು ಖಂಡಿತ.

ನಕಾರಾತ್ಮಕತೆಯನ್ನು ತೆಗೆದು ಹಾಕುತ್ತದೆ

ನಕಾರಾತ್ಮಕತೆಯನ್ನು ತೆಗೆದು ಹಾಕುತ್ತದೆ

ಜನರು ಪ್ರತಿದಿನ ಮಾನಸಿಕ ಸಮಸ್ಯೆಗಳು, ಅಸುಖಿ ದಾಂಪತ್ಯ, ಸಾಲದ ಸಮಸ್ಯೆ ಇತ್ಯಾದಿಗಳಿಂದ ನರಳುತ್ತಿರುತ್ತಾರೆ. ಈ ಮಂತ್ರವು ಅವರ ಸುತ್ತ ಇರುವ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಮತ್ತು ಅದರಿಂದ ಹೊರಬರಲು ಅವರಿಗೆ ಅನುಕೂಲ ಮಾಡಿಕೊಡುತ್ತದೆ.

ಭಯ ಮತ್ತು ಫೋಬಿಯಾಗಳನ್ನು ದೂರ ಮಾಡುತ್ತದೆ

ಭಯ ಮತ್ತು ಫೋಬಿಯಾಗಳನ್ನು ದೂರ ಮಾಡುತ್ತದೆ

ಆಂಜನೇಯನ ಮಂತ್ರ ಪಠನೆಯಿಂದ ಭಯ ಮತ್ತು ಫೋಬಿಯಾಗಳನ್ನು ದೂರ ಮಾಡಿಕೊಳ್ಳಬಹುದು. ಭಯವನ್ನು ದೂರ ಮಾಡುವ ಭಜರಂಗಿಯ ಮಂತ್ರವು ಎಂತಹ ಭೀತಿಯನ್ನು ಸಹ ದೂರ ಮಾಡಿ ಬಿಡುತ್ತದೆ.

ರಕ್ಷಣಾ ಕವಚ

ರಕ್ಷಣಾ ಕವಚ

ನಿಮಗೆ ಶತ್ರುಗಳ ಕಾಟ ಅಧಿಕವಾಗಿದ್ದಲ್ಲಿ, ಅದರಿಂದ ನೀವು ಹೊರಬರಲು ಮಾರ್ಗವನ್ನು ಹುಡುಕುತ್ತಿದ್ದರೆ, ಅದಕ್ಕೆ ಹನುಮಂತನ ಮಂತ್ರವು ಉತ್ತಮ ಪರಿಹಾರವಾಗಿರುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸಲು ಆರಂಭಿಸಿ, ಶತ್ರುಗಳ ಕಾಟದಿಂದ ಪಾರಾಗಿ.

ಏಕಾಗ್ರತೆಯನ್ನು ನೀಡುವ ಮಂತ್ರ

ಏಕಾಗ್ರತೆಯನ್ನು ನೀಡುವ ಮಂತ್ರ

ಕೆಲಸವಿರಲಿ, ಕಾರ್ಯವಿರಲಿ, ಓದು ಇರಲಿ, ಇನ್ಯಾವುದೇ ಕೆಲಸವಿರಲಿ, ಹನುಮಾನ್ ಮಂತ್ರವು ನಿಮಗೆ ಏಕಾಗ್ರತೆಯನ್ನು ಒದಗಿಸುವ ಮಂತ್ರವಾಗಿ ಗುರುತಿಸಲ್ಪಟ್ಟಿದೆ. ಆದ್ದರಿಂದ ಈ ಮಂತ್ರದಿಂದ ಆದಷ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ ಎಂಬುದು ನಮ್ಮ ಸಲಹೆ.

ದೇಹವನ್ನು ಶುದ್ಧಿಗೊಳಿಸುತ್ತದೆ

ದೇಹವನ್ನು ಶುದ್ಧಿಗೊಳಿಸುತ್ತದೆ

ಹನುಮಾನ್ ಮಂತ್ರವನ್ನು ಪಠಿಸುವುದರಿಂದ ನಿಮ್ಮ ದೇಹವು ದುಷ್ಟ ಶಕ್ತಿಗಳ ಮತ್ತು ಕೆಟ್ಟ ಯೋಚನೆಗಳ ಪ್ರಭಾವದಿಂದ ಮುಕ್ತಿಯನ್ನು ಪಡೆಯುತ್ತದೆ.

ಕಣ್ಣು ದೃಷ್ಟಿಯಿಂದ ನಿಮ್ಮನ್ನು ಕಾಪಾಡುತ್ತದೆ

ಕಣ್ಣು ದೃಷ್ಟಿಯಿಂದ ನಿಮ್ಮನ್ನು ಕಾಪಾಡುತ್ತದೆ

ಈ ಮಂತ್ರವು ನಿಮ್ಮನ್ನು ಕಣ್ಣು ದೃಷ್ಟಿಯಿಂದ ಕಾಪಾಡುತ್ತದೆ. ನೀವು ಈ ಮಂತ್ರವನ್ನು ಪಠಿಸುವುದರಿಂದ ಯಶಸ್ಸಿನ ಅಲೆಯಲ್ಲಿ ತೇಲುವುದರ ಜೊತೆಗೆ, ಜನರ ಕಣ್ಣು ದೃಷ್ಟಿಗೆ ಒಳಗಾಗುವುದಿಲ್ಲ. ಆ ಖಾತರಿಯು ನಿಮಗೆ ಈ ಮಂತ್ರ ಪಠನೆಯಿಂದ ದೊರೆಯುತ್ತದೆ.

English summary

Why we should chant the Hanuman Mantra

Hanuman is not only the legendary god of strength and valour, he is also the one most remembered in times of trouble. People start chanting his name, mantra or chalisa the moment they are scared or are looking for strength in times of trouble. Let’s check out the benefits of chanting the Hanuman Mantra…
Story first published: Friday, April 10, 2015, 16:06 [IST]
X
Desktop Bottom Promotion