Latest Updates
-
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್
ನಾನು ಯಾರು? ಮೂಲಭೂತವಾದ ಆಧ್ಯಾತ್ಮಿಕ ಪ್ರಶ್ನೆ

ನಾವು ಸತ್ತ ನಂತರ ನಮ್ಮ ದೇಹದ ಎದುರಿಗೇ ನಿಂತು ಜನರು ನಮ್ಮನ್ನು ಕುರಿತು "ಇವರು ಇನ್ನಿಲ್ಲ" ಎಂದು ಹೇಳುತ್ತಾರೆ. ನಮ್ಮ ದೇಹ ಅಲ್ಲೇ ಇದ್ದರು ಜನ ನಮ್ಮನ್ನು ನೋಡಿ "ಇವರು ಇನ್ನಿಲ್ಲ" ಎಂದು ಏಕೆ ಹೇಳಿದರು? ದೈಹಿಕವಾಗಿ ಸಾಯುವ ಮೊದಲು ಇತರ ವ್ಯಕ್ತಿಗಳಂತೆಯೇ ಇರುತ್ತೇವೆ, ಆದರೂ ಸತ್ತ ಕೂಡಲೇ ಅವರ ಪಾಲಿಗೆ ಇಲ್ಲವಾಗಿ ಬಿಡುತ್ತೇವೆ? ಆದ್ದರಿಂದಲೇ ನಾವು ಯಾರು? ಅನ್ನುವುದು ಮೂಲಭೂತವಾದ ಆಧ್ಯಾತ್ಮಿಕವಾದ ಪ್ರಶ್ನೆಯಾಗಿದೆ.
ನಾನು ಯಾರು? ದೇಹವೋ ಅಥವಾ ಆತ್ಮವೋ
ನಮ್ಮ ದೇಹದಲ್ಲಿ ಆತ್ಮ ಅನ್ನುವುದು ಇರುವವರೆಗೆ ಯೋಚನಾ ಶಕ್ತಿ ಇರುತ್ತದೆ. ದೇಹದ ಅಂಗಾಂಗಗಳು ಕೆಲಸ ಮಾಡುತ್ತವೆ, ಭಾವನೆಗಳಿರುತ್ತೆ ನಾವು ಅಳುತ್ತೇವೆ, ನಗಾಡುತ್ತೇವೆ, ಕೋಪಗೊಳ್ಳುತ್ತೇವೆ. ನಮ್ಮ ಯೋಚನೆಗಳು ಮತ್ತು ಭಾವನೆ ಕ್ಷಣದಿಂದ-ಕ್ಷಣಕ್ಕೆ ಬದಲಾಗುತ್ತಿರುತ್ತವೆ. ಹಾಗಾದರೆ ನಾನು ಯಾರು? ಆತ್ಮವೋ, ದೇಹವೋ
ನಮ್ಮ ದೇಹದಲ್ಲಿ ಎಷ್ಟು ಜೀವಕಣಗಳಿವೆ, ಎಷ್ಟು ರಕ್ತ ಕಣಗಳಿವೆ ಎಂದು ಹೇಲು ಸಾಧ್ಯ. ಆತ್ಮ ಮಾತ್ರ ಕಣ್ಣಿಗೆ ಅಗೋಚರವಾದದು. ಇದು ಆಂತರಿಕವಾದ ರಹಸ್ಯವಾಗಿದೆ. ಯಾರಿಂದಲೂ ಇದನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಉಪನಿಷತ್ತುಗಳಲ್ಲಿ (ರಿಗ್ ವೇದಿಕ್ ಉಪನಿಷತ್ತು (1.3.11) ನಾನು ಯಾರು ಎಂಬ ಮೂಲಭೂತ ಪ್ರಶ್ನೆ ಕೇಳಲಾಗಿದೆ.



Click it and Unblock the Notifications











