Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಗುವಿನ 'ಕೇಶ ಮುಂಡನ', ಹಿಂದೂ ಸಂಸ್ಕೃತಿಯ ಬಿಂಬ...
ಹಿಂದೂ ಧರ್ಮದಲ್ಲಿ ಕೇಶ ಮುಂಡನಾ ಅಥವಾ ಚೂಡಕರಣ ಹೆಚ್ಚು ಅಗತ್ಯವಾಗಿರುವ ಮತ್ತು ಅತ್ಯಗತ್ಯವಾಗಿ ಪಾಲಿಸಬೇಕಾಗಿರುವ ಕ್ರಮ ಎಂದೆನಿಸಿದೆ. ಮುಂಡನ ಎಂಬ ಸಂಸ್ಕೃತ ಪದದಿಂದ ಚೂಡಕರಣ ಎಂಬ ಪದ ವಿಭಾಗಿಸಲ್ಪಟ್ಟಿದ್ದು ಮಗುವಿನ ಮೊದಲ ಕೇಶ ಮುಂಡನಾ ಎಂಬುದಾಗಿ ಪ್ರಚಲಿತದಲ್ಲಿದೆ.

ಹಿಂದೂ ಧರ್ಮದಲ್ಲಿ ಹೆಚ್ಚು ಅಗತ್ಯವಾಗಿ ಕ್ರಮಪ್ರಕಾರವಾಗಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದು ಮಗುವಿನ ಪೋಷಕರು ಈ ಪದ್ಧತಿಯನ್ನು ಮಗುವಿಗೆ ಎರಡು ಮೂರು ವರ್ಷಗಳಾದಾಗ ಪುಣ್ಯ ಕ್ಷೇತ್ರಗಳಲ್ಲಿ ನಡೆಸುತ್ತಾರೆ. ಕೇಶ ಮುಂಡನದ ಸಮಯದಲ್ಲಿ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸುತ್ತಾರೆ, ಶಿಖೆಯನ್ನು ಹಾಗೆಯೇ ಬಿಡುತ್ತಾರೆ. ಕೂದಲಿನ ಕಿರೀಟವಾಗಿ ಈ ಶಿಖೆ ಇರುತ್ತದೆ. ಹಿಂದೂ ಧರ್ಮ ಪ್ರಪಂಚದಲ್ಲೇ ಶ್ರೇಷ್ಠ ಧರ್ಮವೇಕೆ?
ಧರ್ಮಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಕೂದಲು ಮೂಲತಃ ಹಿಂದಿನ ಜನ್ಮದ ಮುಂದುವರಿಕೆ ಎಂದಾಗಿದೆ. ಇದು ಪ್ರಸ್ತುತ ಬದುಕಿಗೆ ಕೆಟ್ಟದ್ದಾಗಿರುವುದರಿಂದ ಈ ಮುಂಡನ ಕ್ರಿಯೆಯನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಚೂಡಕರಣ ಪ್ರಕ್ರಿಯೆಯು ಹಿಂದಿನ ಜನ್ಮದಲ್ಲಿ ಈಡೇರಿಸಿಕೊಳ್ಳಲಾಗದೇ ಇರುವ ಆಸೆಗಳನ್ನು ತ್ಯಜಿಸುವುದು ಎಂಬುದಾಗಿ ಅರ್ಥವನ್ನು ಪಡೆದುಕೊಂಡಿದೆ. ಹಿಂದಿನ ಜನ್ಮದ ಕರ್ಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಎಂಬುದೂ ಇದರಲ್ಲಿ ಅಡಕವಾಗಿದೆ.
ಮುಂಡನ ಕ್ರಿಯೆಯು ನಡೆದ ನಂತರ, ಒಂದು ವರ್ಷದ ಮಗುವು ಭವಿಷ್ಯದ ಜೀವನದಲ್ಲಿ ಮುಂದುವರಿಯುತ್ತದೆ. ಹಿಂದಿನ ಜೀವನದಿಂದ ಪ್ರಸ್ತುತ ಜೀವನಕ್ಕೆ ಅಡಿ ಇಡುತ್ತದೆ ಎಂಬ ಅರ್ಥವೂ ಇದೆ. ಹಿಂದಿನ ಜೀವನದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದು ಮುಂದಿನ ಜೀವನಕ್ಕೆ ಅಡಿ ಇಡುವುದು ಎಂದಾಗಿದೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು
ಕೇಶ ಮುಂಡನವನ್ನು ಎಲ್ಲಿ ಮಾಡಲಾಗುತ್ತದೆ?
ಹಿಂದೂ ಧರ್ಮದಲ್ಲಿ ಕೇಶ ಮುಂಡನವು ದೊಡ್ಡ ಸಂಪ್ರದಾಯ ಎಂದೆನಿಸಿದೆ. ಹೃಷಿಕೇಶ ಮತ್ತು ಹರಿದ್ವಾರಗಳಂತಹ ಪುಣ್ಯ ಕ್ಷೇತ್ರದಲ್ಲಿ ಇದನ್ನು ನಡೆಸಲಾಗುತ್ತದೆ.
ಇಂದಿನ ದಿನಗಳಲ್ಲಿ ಹೆಚ್ಚಿನ ಕುಟುಂಬದವರು ಪುರೋಹಿತರನ್ನು ಮನೆಗೆ ಆಹ್ವಾನಿಸಿ ಇದನ್ನು ಸ್ವಗೃಹದಲ್ಲಿಯೇ ನೆರವೇರಿಸುತ್ತಾರೆ. ಕೇಶಮುಂಡನಕ್ಕೆ ಲಿಂಗ ಬೇಧವಿರುವುದಿಲ್ಲ. ಮಗುವಿನ ಮೇಲೆ ಈ ಕ್ರಿಯೆಯನ್ನು ನಡೆಸುವಾಗ, ಪುರೋಹಿತರು ಮಂತ್ರವನ್ನು ಉಚ್ಛರಿಸುತ್ತಾರೆ ನಂತರ ತಲೆಯಲ್ಲಿ ಒಂದೆರಡು ಕೂದಲನ್ನು ಬಿಡುತ್ತಾರೆ.
ಕೇಶಮುಂಡನದ ಬಳಿಕ ನಡೆಯುವ ಶಾಸ್ತ್ರವೇನು?
ಚೂಡಕರಣದ ನಂತರ ಪವಿತ್ರ ನದಿ ಗಂಗೆಗೆ ಕೂದಲನ್ನು ಅರ್ಪಿಸಲಾಗುತ್ತದೆ. ಪವಿತ್ರ ನದಿಯ ಬಳಿಯೇ ಈ ಕ್ರಿಯೆಯನ್ನು ನಡೆಸುವುದರಿಂದ ಕೂಡಲೇ ಕೂದಲನ್ನು ಗಂಗೆಗೆ ಹರಿಯಬಿಡಲಾಗುತ್ತದೆ. ಇಲ್ಲವೇ ಆಚರಣೆಯನ್ನು ವಿಧಿ ವತ್ತಾಗಿ ಪೂರೈಸಿದ ನಂತರ ನದಿಗೆ ಕೂದಲನ್ನು ಅರ್ಪಿಸಲಾಗುತ್ತದೆ. ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...



Click it and Unblock the Notifications



