Latest Updates
-
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ!
ಮಗುವಿನ 'ಕೇಶ ಮುಂಡನ', ಹಿಂದೂ ಸಂಸ್ಕೃತಿಯ ಬಿಂಬ...
ಹಿಂದೂ ಧರ್ಮದಲ್ಲಿ ಕೇಶ ಮುಂಡನಾ ಅಥವಾ ಚೂಡಕರಣ ಹೆಚ್ಚು ಅಗತ್ಯವಾಗಿರುವ ಮತ್ತು ಅತ್ಯಗತ್ಯವಾಗಿ ಪಾಲಿಸಬೇಕಾಗಿರುವ ಕ್ರಮ ಎಂದೆನಿಸಿದೆ. ಮುಂಡನ ಎಂಬ ಸಂಸ್ಕೃತ ಪದದಿಂದ ಚೂಡಕರಣ ಎಂಬ ಪದ ವಿಭಾಗಿಸಲ್ಪಟ್ಟಿದ್ದು ಮಗುವಿನ ಮೊದಲ ಕೇಶ ಮುಂಡನಾ ಎಂಬುದಾಗಿ ಪ್ರಚಲಿತದಲ್ಲಿದೆ.

ಹಿಂದೂ ಧರ್ಮದಲ್ಲಿ ಹೆಚ್ಚು ಅಗತ್ಯವಾಗಿ ಕ್ರಮಪ್ರಕಾರವಾಗಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದು ಮಗುವಿನ ಪೋಷಕರು ಈ ಪದ್ಧತಿಯನ್ನು ಮಗುವಿಗೆ ಎರಡು ಮೂರು ವರ್ಷಗಳಾದಾಗ ಪುಣ್ಯ ಕ್ಷೇತ್ರಗಳಲ್ಲಿ ನಡೆಸುತ್ತಾರೆ. ಕೇಶ ಮುಂಡನದ ಸಮಯದಲ್ಲಿ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸುತ್ತಾರೆ, ಶಿಖೆಯನ್ನು ಹಾಗೆಯೇ ಬಿಡುತ್ತಾರೆ. ಕೂದಲಿನ ಕಿರೀಟವಾಗಿ ಈ ಶಿಖೆ ಇರುತ್ತದೆ. ಹಿಂದೂ ಧರ್ಮ ಪ್ರಪಂಚದಲ್ಲೇ ಶ್ರೇಷ್ಠ ಧರ್ಮವೇಕೆ?
ಧರ್ಮಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಕೂದಲು ಮೂಲತಃ ಹಿಂದಿನ ಜನ್ಮದ ಮುಂದುವರಿಕೆ ಎಂದಾಗಿದೆ. ಇದು ಪ್ರಸ್ತುತ ಬದುಕಿಗೆ ಕೆಟ್ಟದ್ದಾಗಿರುವುದರಿಂದ ಈ ಮುಂಡನ ಕ್ರಿಯೆಯನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಚೂಡಕರಣ ಪ್ರಕ್ರಿಯೆಯು ಹಿಂದಿನ ಜನ್ಮದಲ್ಲಿ ಈಡೇರಿಸಿಕೊಳ್ಳಲಾಗದೇ ಇರುವ ಆಸೆಗಳನ್ನು ತ್ಯಜಿಸುವುದು ಎಂಬುದಾಗಿ ಅರ್ಥವನ್ನು ಪಡೆದುಕೊಂಡಿದೆ. ಹಿಂದಿನ ಜನ್ಮದ ಕರ್ಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಎಂಬುದೂ ಇದರಲ್ಲಿ ಅಡಕವಾಗಿದೆ.
ಮುಂಡನ ಕ್ರಿಯೆಯು ನಡೆದ ನಂತರ, ಒಂದು ವರ್ಷದ ಮಗುವು ಭವಿಷ್ಯದ ಜೀವನದಲ್ಲಿ ಮುಂದುವರಿಯುತ್ತದೆ. ಹಿಂದಿನ ಜೀವನದಿಂದ ಪ್ರಸ್ತುತ ಜೀವನಕ್ಕೆ ಅಡಿ ಇಡುತ್ತದೆ ಎಂಬ ಅರ್ಥವೂ ಇದೆ. ಹಿಂದಿನ ಜೀವನದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದು ಮುಂದಿನ ಜೀವನಕ್ಕೆ ಅಡಿ ಇಡುವುದು ಎಂದಾಗಿದೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು
ಕೇಶ ಮುಂಡನವನ್ನು ಎಲ್ಲಿ ಮಾಡಲಾಗುತ್ತದೆ?
ಹಿಂದೂ ಧರ್ಮದಲ್ಲಿ ಕೇಶ ಮುಂಡನವು ದೊಡ್ಡ ಸಂಪ್ರದಾಯ ಎಂದೆನಿಸಿದೆ. ಹೃಷಿಕೇಶ ಮತ್ತು ಹರಿದ್ವಾರಗಳಂತಹ ಪುಣ್ಯ ಕ್ಷೇತ್ರದಲ್ಲಿ ಇದನ್ನು ನಡೆಸಲಾಗುತ್ತದೆ.
ಇಂದಿನ ದಿನಗಳಲ್ಲಿ ಹೆಚ್ಚಿನ ಕುಟುಂಬದವರು ಪುರೋಹಿತರನ್ನು ಮನೆಗೆ ಆಹ್ವಾನಿಸಿ ಇದನ್ನು ಸ್ವಗೃಹದಲ್ಲಿಯೇ ನೆರವೇರಿಸುತ್ತಾರೆ. ಕೇಶಮುಂಡನಕ್ಕೆ ಲಿಂಗ ಬೇಧವಿರುವುದಿಲ್ಲ. ಮಗುವಿನ ಮೇಲೆ ಈ ಕ್ರಿಯೆಯನ್ನು ನಡೆಸುವಾಗ, ಪುರೋಹಿತರು ಮಂತ್ರವನ್ನು ಉಚ್ಛರಿಸುತ್ತಾರೆ ನಂತರ ತಲೆಯಲ್ಲಿ ಒಂದೆರಡು ಕೂದಲನ್ನು ಬಿಡುತ್ತಾರೆ.
ಕೇಶಮುಂಡನದ ಬಳಿಕ ನಡೆಯುವ ಶಾಸ್ತ್ರವೇನು?
ಚೂಡಕರಣದ ನಂತರ ಪವಿತ್ರ ನದಿ ಗಂಗೆಗೆ ಕೂದಲನ್ನು ಅರ್ಪಿಸಲಾಗುತ್ತದೆ. ಪವಿತ್ರ ನದಿಯ ಬಳಿಯೇ ಈ ಕ್ರಿಯೆಯನ್ನು ನಡೆಸುವುದರಿಂದ ಕೂಡಲೇ ಕೂದಲನ್ನು ಗಂಗೆಗೆ ಹರಿಯಬಿಡಲಾಗುತ್ತದೆ. ಇಲ್ಲವೇ ಆಚರಣೆಯನ್ನು ವಿಧಿ ವತ್ತಾಗಿ ಪೂರೈಸಿದ ನಂತರ ನದಿಗೆ ಕೂದಲನ್ನು ಅರ್ಪಿಸಲಾಗುತ್ತದೆ. ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...



Click it and Unblock the Notifications














