Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ವಿಜಯ ದಿವಸ 2022: ಇಂಡೋ-ಪಾಕ್ ಯುದ್ಧದಲ್ಲಿ ಸೋತು ಶರಣಾಗಿದ್ದರು ಪಾಕ್ನ 93,000 ಸೈನಿಕರು!
ಡಿಸೆಂಬರ್ 16ರಂದು 52ನೇ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತಿದೆ. 1971ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಭಾರತ ವಂಚಕ ಪಾಕಿಸ್ತಾನವನ್ನು ಹುಟ್ಟಡಗಿಸಿ ಅಭೂತಪೂರ್ವ ಜಯ ಸಾಧಿಸದ ದಿನವನ್ನು ವಿಜಯ ದಿವಸ ಎಂದು ಆಚರಿಸಲಾಗುತ್ತಿದೆ . ಹೀಗಾಗಿ ಈ ಜಯದ ನೆಪಪಿಗಾಗಿ ಈ ದಿನವನ್ನು ಭಾರತೀಯರಾದ ನಾವು ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಈ ಗೆಲುವಿನ ಸಂಕೇತವಾಗಿ ಡಿ.16ನ್ನು ವಿಜಯ ದಿವಸ ಎಂದು ಪ್ರತೀ ವರ್ಷ ಆಚರಿಸಲಾಗುತ್ತದೆ.

ಈ ದಿನ ಇಂಡೋ-ಪಕ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಗುವುದು. 1971ರ ಇಂಡೋ-ಪಾಕ್ ಯುದ್ಧವು 13 ದಿನಗಳ ಕಾಲ ನಡೆಯಿತು, ಈ ಯುದ್ಧವು ಡಿಸೆಂಬರ್ 16ರಂದು ಕೊನೆಗೊಂಡಿತು. ಈ ಯುದ್ಧದಲ್ಲಿ ಪಾಕಿಸ್ತಾನ ಸೋತು ಸುಣ್ಣವಾಗಿತ್ತು.
ಈ ಯುದ್ಧದ ಬಳಿಕ ಬಾಂಗ್ಲಾದೇಶ ಉದಯವಾಯಿತು. ಈಗೀನ ಬಾಂಗ್ಲಾದೇಶ ಆಗ ಪೂರ್ವ ಪಾಕಿಸ್ತಾನವಾಗಿತ್ತು. ಈ ಪ್ರದೇಶದ ಮೇಲೆ ಪಾಕ್ ಸೈನಿಕರಿಂದ ನಿರಂತರವಾಗಿ ದಾಳಿಯಾಗುತ್ತಿತ್ತು. ಇಲ್ಲಿಯ ಜನರ ಮೇಲೆ ಪಾಕ್ ಸೈನಿಕರು ದೌರ್ಜನ್ಯ ಎಸಗುತ್ತಿದ್ದರು, ಅತ್ಯಾಚಾರ, ಕೊಲೆ, ಸುಲಿಗೆಯಿಂದಾಗಿ ಇಲ್ಲಿಯ ಜನರು ನೆಮ್ಮದಿಯನ್ನು ಕಳೆದುಕೊಂಡಿದ್ದರು. ಪಾಕಿಸ್ತಾನ ಸೈನಿಕರು ನೀಡುತ್ತಿರುವ ಹಿಂಸೆಯಿಂದ ರೋಸಿ ಹೋದ ಅಲ್ಲಿಯ ಸುಮಾರು 9 ಲಕ್ಷ ನಿರಾಶ್ರಿತರು ಭಾರತದೊಳಕ್ಕೆ ನುಸುಳಿ ಬಂದು ಭಾರತದ ಸರ್ಕಾರದ ಮುಂದೆ ನಮ್ಮನ್ನು ರಕ್ಷಿಸುವಂತೆ ಬೇಡಿಕೊಂಡಿತ್ತು.
ಪಾಕಿಸ್ತಾನದ ಕೃತ್ಯವನ್ನು ವಿರೋಧಿಸಿ ಭಾರತ ಬಾಂಗ್ಲಾದೇಶ ಬಾಂಗ್ಲಾ ದೇಶಕ್ಕೆ ನೆರವು ನೀಡಲು ಮುಂದಾಯಿತು. 1971ರ ಡಿಸೆಂಬರ್ 3ರಂದು ಪಾಕಿಸ್ತಾನ ಸೇನೆಯ ವಿರುದ್ಧ ಸಮರ ಸಾರಲಾಯಿತು. ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಪಾಕಿಸ್ತಾನ ಕೇವಲ 13 ದಿನಗಳಲ್ಲಿ ಭಾರತೀಯ ಯೋಧರ ಮುಂದೆ ಸೋತು ಮಂಡಿಯೂರಿತು. ಪಾಕಿಸ್ತಾನದ 93 ಸಾವಿರಕ್ಕೂ ಅಧಿಕ ಸೈನಿಕರು ಭಾರತೀಯ ಸೈನಿಕರ ಎದುರು ತಮ್ಮ ಸೊಲನ್ನು ಒಪ್ಪಿಕೊಂಡರು. ಜಗತ್ತಿನಲ್ಲಿ ಇದುವರೆಗೆ ನಡಡದ ಯುದ್ಧದಲ್ಲಿ ಇಷ್ಟೊಂದು ಸೈನಿಕರು ಶರಣಾಗತಿಯಾದದ್ದು ಇದೇ ಮೊದಲಾಗಿತ್ತು.
ಭಾರತ ದೊಡ್ಡ ಮನಸ್ಸು ಮಾಡಿ ಒಪ್ಪಂದದ ಮೂಲಕ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಿತು. ಈ ಯುದ್ಧ ನಡೆದ ಬಳಿಕ ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾ ದೇಶ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ. ನಮ್ಮ ಭಾರತೀಯ ಸೈನಿಕರ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಯುದ್ಧ ಇದಾಗಿದೆ. ಈ ಯುದ್ಧ ಮುಕ್ತಾಯವಾದ ದಿನವನ್ನು ವಿಜಯ್ ದಿವಸ್ ಎಂದು ಆಚರಿಸಿ ಹುತಾತ್ಮರನ್ನು ಸ್ಮರಿಸಲಾಗುವುದು.



Click it and Unblock the Notifications
