Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಝೆನ್ ಕಥೆ: ಭಿಕ್ಷುಕನ ಮೌನವೃತ ಆಚರಣೆ

ಅಲ್ಲಿ ಹತ್ತು ವರ್ಷಗಳನ್ನು ಕಳೆದ ಒರ್ವ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಹತ್ತು ವರ್ಷಗಳಾಯಿತು. ನೀನು ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು.
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಹಾಸಿಗೆ ....ಗಟ್ಟಿ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೆ ಹತ್ತು ವರ್ಷಗಳು ಕಳೆಯಿತು. ಆ ಬೌದ್ಧ ಭಿಕ್ಷು ಮತ್ತೆ ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೆ ಹತ್ತು ವರ್ಷಗಳಾಯಿತು. ನೀನು ಮತ್ತೆ ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಊಟ ....ದುರ್ವಾಸನೆ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೂ ಹತ್ತು ವರ್ಷಗಳು ಕಳೆಯಿತು. ಮತ್ತೆ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೂ ಹತ್ತು ವರ್ಷಗಳಾಯಿತು. ನೀನು ಇನ್ನಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಇಲ್ಲಿಂದ ....ಹೋಗಬೇಕು....."
ಗುರುಗಳು, "ಹೌದು, ನೀನು ಇಲ್ಲಿಂದೆ ಏಕೆ ಹೋಗಬೇಕು ಅಂತ ಅಂದುಕೊಳ್ಳುತ್ತಾ ಇದ್ದೀಯಾ ನನಗೆ ಗೊತ್ತು. ಏಕೆಂದ್ರೆ ನೀನು ಇಲ್ಲಿಗೆ ಬಂದಾಗಿನಿಂದ ನೀನು ಮಾಡ್ತಾ ಇರೋದು ಒಂದೇ ಕೆಲಸ..ದೂರು ಹೇಳುವುದು, ಗೊಣಗುವುದು ಮಾತ್ರ!" ಎಂದರು.



Click it and Unblock the Notifications