Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಝೆನ್ ಕಥೆ: ಭಿಕ್ಷುಕನ ಮೌನವೃತ ಆಚರಣೆ

ಅಲ್ಲಿ ಹತ್ತು ವರ್ಷಗಳನ್ನು ಕಳೆದ ಒರ್ವ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಹತ್ತು ವರ್ಷಗಳಾಯಿತು. ನೀನು ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು.
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಹಾಸಿಗೆ ....ಗಟ್ಟಿ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೆ ಹತ್ತು ವರ್ಷಗಳು ಕಳೆಯಿತು. ಆ ಬೌದ್ಧ ಭಿಕ್ಷು ಮತ್ತೆ ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೆ ಹತ್ತು ವರ್ಷಗಳಾಯಿತು. ನೀನು ಮತ್ತೆ ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಊಟ ....ದುರ್ವಾಸನೆ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೂ ಹತ್ತು ವರ್ಷಗಳು ಕಳೆಯಿತು. ಮತ್ತೆ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೂ ಹತ್ತು ವರ್ಷಗಳಾಯಿತು. ನೀನು ಇನ್ನಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಇಲ್ಲಿಂದ ....ಹೋಗಬೇಕು....."
ಗುರುಗಳು, "ಹೌದು, ನೀನು ಇಲ್ಲಿಂದೆ ಏಕೆ ಹೋಗಬೇಕು ಅಂತ ಅಂದುಕೊಳ್ಳುತ್ತಾ ಇದ್ದೀಯಾ ನನಗೆ ಗೊತ್ತು. ಏಕೆಂದ್ರೆ ನೀನು ಇಲ್ಲಿಗೆ ಬಂದಾಗಿನಿಂದ ನೀನು ಮಾಡ್ತಾ ಇರೋದು ಒಂದೇ ಕೆಲಸ..ದೂರು ಹೇಳುವುದು, ಗೊಣಗುವುದು ಮಾತ್ರ!" ಎಂದರು.



Click it and Unblock the Notifications











