Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಝೆನ್ ಕಥೆ: ಭಿಕ್ಷುಕನ ಮೌನವೃತ ಆಚರಣೆ

ಅಲ್ಲಿ ಹತ್ತು ವರ್ಷಗಳನ್ನು ಕಳೆದ ಒರ್ವ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಹತ್ತು ವರ್ಷಗಳಾಯಿತು. ನೀನು ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು.
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಹಾಸಿಗೆ ....ಗಟ್ಟಿ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೆ ಹತ್ತು ವರ್ಷಗಳು ಕಳೆಯಿತು. ಆ ಬೌದ್ಧ ಭಿಕ್ಷು ಮತ್ತೆ ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೆ ಹತ್ತು ವರ್ಷಗಳಾಯಿತು. ನೀನು ಮತ್ತೆ ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಊಟ ....ದುರ್ವಾಸನೆ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೂ ಹತ್ತು ವರ್ಷಗಳು ಕಳೆಯಿತು. ಮತ್ತೆ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೂ ಹತ್ತು ವರ್ಷಗಳಾಯಿತು. ನೀನು ಇನ್ನಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಇಲ್ಲಿಂದ ....ಹೋಗಬೇಕು....."
ಗುರುಗಳು, "ಹೌದು, ನೀನು ಇಲ್ಲಿಂದೆ ಏಕೆ ಹೋಗಬೇಕು ಅಂತ ಅಂದುಕೊಳ್ಳುತ್ತಾ ಇದ್ದೀಯಾ ನನಗೆ ಗೊತ್ತು. ಏಕೆಂದ್ರೆ ನೀನು ಇಲ್ಲಿಗೆ ಬಂದಾಗಿನಿಂದ ನೀನು ಮಾಡ್ತಾ ಇರೋದು ಒಂದೇ ಕೆಲಸ..ದೂರು ಹೇಳುವುದು, ಗೊಣಗುವುದು ಮಾತ್ರ!" ಎಂದರು.



Click it and Unblock the Notifications