Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಸಂಬಂಧಿಗೆ ತನ್ನ ತಪ್ಪು ಅರಿವಾದದು ಹೇಗೆ?

ತುಂಬಾ ವರ್ಷಗಳು ಕಳೆಯಿತು ಇತ್ತ ರೊಯೋಕನ್ ಝೆನ್ ಧರ್ಮದ ಗುರುವಾದರೆ, ಅತ್ತ ಸಂಬಂಧಿ ಆಸ್ತಿಯನ್ನು ಅವನಿಗೆ ಇಷ್ಟ ಬಂದ ರೀತಿಯಲ್ಲಿ ದುಂದು ವೆಚ್ಚ ಮಾಡುತ್ತಿದ್ದನು. ಇದನ್ನು ನೋಡಿದ ಉಳಿದ ಸಂಬಂಧಿಕರಿಗೆ ಇವನು ರೊಯೋಕನ್ ಆಸ್ತಿಯನ್ನು ನಾಶ ಮಾಡುತ್ತಾನೆ ಎಂಬ ಭಯ ಉಂಟಾಗಿ ಇದರ ಕುರಿತು ರೊಯೋಕನ್ ನನ್ನು ಭೇಟಿ ಮಾಡಿ ಹೇಳಿದರು.
ಈ ಸುದ್ಧಿಯನ್ನು ಕೇಳಿದ ರೊಯೋಕನ್ ತಾನು ಆಸ್ತಿ ಕೊಟ್ಟಿದ್ದ ಸಂಬಂಧಿಯನ್ನು ನೋಡಲು ಬಂದರು. ಸಂಬಂಧಿಗೆ ರೊಯೋಕನ್ ನೋಡಿ ತುಂಬಾ ಖುಷಿಯಾಯಿತು, ಇವತ್ತು ರಾತ್ರಿ ತನ್ನ ಜೊತೆಯೇ ತಂಗುವಂತೆ ಕೇಳಿಕೊಂಡನು. ಅವನ ಮಾತಿಗೆ ಒಪ್ಪಿದ ಗುರುಗಳು ಒಂದು ರೂಮಿಗೆ ಹೋಗಿ ಧ್ಯಾನ ಮಾಡುತ್ತಾ ಕೂತುಬಿಟ್ಟರು. ಆಸ್ತಿ ಬಗ್ಗೆ ಏನೂ ಕೇಳಲಿಲ್ಲ, ರಾತ್ರಿ ಕಳೆದು ಬೆಳಗಾಯಿತು. ಗುರುಗಳು ಹೊರಡಲು ತೀರ್ಮಾನಿಸಿದರು ಚಪ್ಪಲಿ ಧರಿಸುವಾಗ ಗುರುಗಳು 'ವಯಸ್ಸಾಯಿತು ನನಗೆ ಈ ದಾರದ ಚಪ್ಪಲಿ ಹಾಕಲು ಸಹಾಯ ಮಾಡು' ಎಂದು ಸಂಬಂಧಿಯನ್ನು ಕೇಳಿದರು.
ಸಂಬಂಧಿ ಸಂತೋಷದಿಂದಲೇ ಬಂದು ಚಪ್ಪಲಿ ಹಾಕಿ ಕೊಟ್ಟನು, ಆಗ ಗುರುಗಳು "ಮಗನೇ, ದೇಹಕ್ಕೆ ವಯಸ್ಸಾಯಿತು, ದಿನದಿಂದ-ದಿನಕ್ಕೆ ಈ ದೇಹ ಸೊರಗುತ್ತಿದೆ, ನಿನ್ನ ಬಗ್ಗೆ ಜೋಪಾನ" ಎಂದು ಹೇಳಿ ಹೋದರು. ಗುರುಗಳ ಮಾತಿನ ಒಳ ಅರ್ಥ ಸಂಬಂಧಿಗೆ ಗೊತ್ತಾಯಿತು. ಅವತ್ತಿನಿಂದ ಆಸ್ತಿಯನ್ನು ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿದನು.



Click it and Unblock the Notifications