ಸಂಬಂಧಿಗೆ ತನ್ನ ತಪ್ಪು ಅರಿವಾದದು ಹೇಗೆ?

Kannada Zen story
ರೊಯೋಕನ್ ತುಂಬಾ ಶ್ರೀಮಂತ. ಆದರೆ ಅವನಿಗೆ ಆಸ್ತಿಯ ಬಗ್ಗೆ ಮೋಹವಿರಲಿಲ್ಲ, ಝೆನ್ ಧರ್ಮದ ಬಗ್ಗೆ ತಿಳಿಯಬೇಕೆಂಬ ಆಸೆ ಮಾತ್ರ ಅವನಲ್ಲಿತ್ತು. ತನ್ನೆಲ್ಲಾ ಆಸ್ತಿಯನ್ನು ಹತ್ತಿರದ ಸಂಬಂಧಿ ಹತ್ತಿರ ನೋಡಿಕೊಳ್ಳಲು ಹೇಳಿ ಝೆನ್ ಧರ್ಮ ಕಲಿಯಲು ಹೊರಟನು.

ತುಂಬಾ ವರ್ಷಗಳು ಕಳೆಯಿತು ಇತ್ತ ರೊಯೋಕನ್ ಝೆನ್ ಧರ್ಮದ ಗುರುವಾದರೆ, ಅತ್ತ ಸಂಬಂಧಿ ಆಸ್ತಿಯನ್ನು ಅವನಿಗೆ ಇಷ್ಟ ಬಂದ ರೀತಿಯಲ್ಲಿ ದುಂದು ವೆಚ್ಚ ಮಾಡುತ್ತಿದ್ದನು. ಇದನ್ನು ನೋಡಿದ ಉಳಿದ ಸಂಬಂಧಿಕರಿಗೆ ಇವನು ರೊಯೋಕನ್ ಆಸ್ತಿಯನ್ನು ನಾಶ ಮಾಡುತ್ತಾನೆ ಎಂಬ ಭಯ ಉಂಟಾಗಿ ಇದರ ಕುರಿತು ರೊಯೋಕನ್ ನನ್ನು ಭೇಟಿ ಮಾಡಿ ಹೇಳಿದರು.

ಈ ಸುದ್ಧಿಯನ್ನು ಕೇಳಿದ ರೊಯೋಕನ್ ತಾನು ಆಸ್ತಿ ಕೊಟ್ಟಿದ್ದ ಸಂಬಂಧಿಯನ್ನು ನೋಡಲು ಬಂದರು. ಸಂಬಂಧಿಗೆ ರೊಯೋಕನ್ ನೋಡಿ ತುಂಬಾ ಖುಷಿಯಾಯಿತು, ಇವತ್ತು ರಾತ್ರಿ ತನ್ನ ಜೊತೆಯೇ ತಂಗುವಂತೆ ಕೇಳಿಕೊಂಡನು. ಅವನ ಮಾತಿಗೆ ಒಪ್ಪಿದ ಗುರುಗಳು ಒಂದು ರೂಮಿಗೆ ಹೋಗಿ ಧ್ಯಾನ ಮಾಡುತ್ತಾ ಕೂತುಬಿಟ್ಟರು. ಆಸ್ತಿ ಬಗ್ಗೆ ಏನೂ ಕೇಳಲಿಲ್ಲ, ರಾತ್ರಿ ಕಳೆದು ಬೆಳಗಾಯಿತು. ಗುರುಗಳು ಹೊರಡಲು ತೀರ್ಮಾನಿಸಿದರು ಚಪ್ಪಲಿ ಧರಿಸುವಾಗ ಗುರುಗಳು 'ವಯಸ್ಸಾಯಿತು ನನಗೆ ಈ ದಾರದ ಚಪ್ಪಲಿ ಹಾಕಲು ಸಹಾಯ ಮಾಡು' ಎಂದು ಸಂಬಂಧಿಯನ್ನು ಕೇಳಿದರು.

ಸಂಬಂಧಿ ಸಂತೋಷದಿಂದಲೇ ಬಂದು ಚಪ್ಪಲಿ ಹಾಕಿ ಕೊಟ್ಟನು, ಆಗ ಗುರುಗಳು "ಮಗನೇ, ದೇಹಕ್ಕೆ ವಯಸ್ಸಾಯಿತು, ದಿನದಿಂದ-ದಿನಕ್ಕೆ ಈ ದೇಹ ಸೊರಗುತ್ತಿದೆ, ನಿನ್ನ ಬಗ್ಗೆ ಜೋಪಾನ" ಎಂದು ಹೇಳಿ ಹೋದರು. ಗುರುಗಳ ಮಾತಿನ ಒಳ ಅರ್ಥ ಸಂಬಂಧಿಗೆ ಗೊತ್ತಾಯಿತು. ಅವತ್ತಿನಿಂದ ಆಸ್ತಿಯನ್ನು ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿದನು.

English summary

Kannada Zen story | Inspirational short stories | ಝೆನ್ ಕಥೆ : ಸಂಬಂಧಿಗೆ ತನ್ನ ತಪ್ಪು ಅರಿವಾದದು ಹೇಗೆ?

Ryokan's nephew was discharged with the duty to manage the family estate as Ryokan had devoted his life to the study of Zen.
X
Desktop Bottom Promotion