Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಸಂಬಂಧಿಗೆ ತನ್ನ ತಪ್ಪು ಅರಿವಾದದು ಹೇಗೆ?

ತುಂಬಾ ವರ್ಷಗಳು ಕಳೆಯಿತು ಇತ್ತ ರೊಯೋಕನ್ ಝೆನ್ ಧರ್ಮದ ಗುರುವಾದರೆ, ಅತ್ತ ಸಂಬಂಧಿ ಆಸ್ತಿಯನ್ನು ಅವನಿಗೆ ಇಷ್ಟ ಬಂದ ರೀತಿಯಲ್ಲಿ ದುಂದು ವೆಚ್ಚ ಮಾಡುತ್ತಿದ್ದನು. ಇದನ್ನು ನೋಡಿದ ಉಳಿದ ಸಂಬಂಧಿಕರಿಗೆ ಇವನು ರೊಯೋಕನ್ ಆಸ್ತಿಯನ್ನು ನಾಶ ಮಾಡುತ್ತಾನೆ ಎಂಬ ಭಯ ಉಂಟಾಗಿ ಇದರ ಕುರಿತು ರೊಯೋಕನ್ ನನ್ನು ಭೇಟಿ ಮಾಡಿ ಹೇಳಿದರು.
ಈ ಸುದ್ಧಿಯನ್ನು ಕೇಳಿದ ರೊಯೋಕನ್ ತಾನು ಆಸ್ತಿ ಕೊಟ್ಟಿದ್ದ ಸಂಬಂಧಿಯನ್ನು ನೋಡಲು ಬಂದರು. ಸಂಬಂಧಿಗೆ ರೊಯೋಕನ್ ನೋಡಿ ತುಂಬಾ ಖುಷಿಯಾಯಿತು, ಇವತ್ತು ರಾತ್ರಿ ತನ್ನ ಜೊತೆಯೇ ತಂಗುವಂತೆ ಕೇಳಿಕೊಂಡನು. ಅವನ ಮಾತಿಗೆ ಒಪ್ಪಿದ ಗುರುಗಳು ಒಂದು ರೂಮಿಗೆ ಹೋಗಿ ಧ್ಯಾನ ಮಾಡುತ್ತಾ ಕೂತುಬಿಟ್ಟರು. ಆಸ್ತಿ ಬಗ್ಗೆ ಏನೂ ಕೇಳಲಿಲ್ಲ, ರಾತ್ರಿ ಕಳೆದು ಬೆಳಗಾಯಿತು. ಗುರುಗಳು ಹೊರಡಲು ತೀರ್ಮಾನಿಸಿದರು ಚಪ್ಪಲಿ ಧರಿಸುವಾಗ ಗುರುಗಳು 'ವಯಸ್ಸಾಯಿತು ನನಗೆ ಈ ದಾರದ ಚಪ್ಪಲಿ ಹಾಕಲು ಸಹಾಯ ಮಾಡು' ಎಂದು ಸಂಬಂಧಿಯನ್ನು ಕೇಳಿದರು.
ಸಂಬಂಧಿ ಸಂತೋಷದಿಂದಲೇ ಬಂದು ಚಪ್ಪಲಿ ಹಾಕಿ ಕೊಟ್ಟನು, ಆಗ ಗುರುಗಳು "ಮಗನೇ, ದೇಹಕ್ಕೆ ವಯಸ್ಸಾಯಿತು, ದಿನದಿಂದ-ದಿನಕ್ಕೆ ಈ ದೇಹ ಸೊರಗುತ್ತಿದೆ, ನಿನ್ನ ಬಗ್ಗೆ ಜೋಪಾನ" ಎಂದು ಹೇಳಿ ಹೋದರು. ಗುರುಗಳ ಮಾತಿನ ಒಳ ಅರ್ಥ ಸಂಬಂಧಿಗೆ ಗೊತ್ತಾಯಿತು. ಅವತ್ತಿನಿಂದ ಆಸ್ತಿಯನ್ನು ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿದನು.



Click it and Unblock the Notifications











