Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಝೆನ್ ಕಥೆ : ಮನಸಲ್ಲಿ ಹೊತ್ತುಕೊಂಡ ಭಾರದ ಕಲ್ಲು

ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೌದ್ಧ ಭಿಕ್ಷುಗಳು ಮಾತನಾಡುತ್ತಿದ್ದುದನ್ನು ಹೋಗೆನ್ ಕೇಳಿಸಿಕೊಂಡರು. ಅವರ ಮಾತುಗಳು ಹೋಗೆನ್ ರಲ್ಲಿ ಆಸಕ್ತಿ ಕೆರಳಿಸಿದವು. ಮೈ ಬೆಚ್ಚಗಿಸಿಕೊಳ್ಳುತ್ತ ಭಿಕ್ಕುಗಳು ವಿಷಯಾತ್ಮಕತೆ ಮತ್ತು ವಾಸ್ತವಿಕತೆಯ ಬಗ್ಗೆ ಮಾತನಾಡಲು ತೊಡಗಿದರು. ಝೆನ್ ಗುರು ಹೋಗೆನ್ ಕೂಡಾ ಅವರ ಜೊತೆ ಸೇರಿಕೊಂಡರು.
ಸಹಜವಾಗಿ ಅವರೆಲ್ಲರ ಗಮನ ಝೆನ್ ಗುರು ಮೇಲೆ ತಿರುಗಿತು. ಅವರು ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಅವರನ್ನು ಉದ್ದೇಶಿಸಿ, "ಅಲ್ಲಿ ಒಂದು ದೊಡ್ಡ ಕಲ್ಲು ಇದೆ. ಇದು ನಿಮ್ಮ ಮನಸಿನ ಒಳಗೆ ಇದೆಯೆಂದು ತಿಳಿಯುತ್ತೀರೋ ಅಥವಾ ಮನಸಿನ ಹೊರಗೆ ಇದೆ ಎಂದು ಭಾವಿಸುತ್ತೀರೋ?" ಎಂದು ಹೋಗೆನ್ ಕೇಳಿದರು.
ಒಬ್ಬ ಭಿಕ್ಕುವು ಹೇಳಿದ, "ಬುದ್ಧರ ವಿಚಾರಧಾರೆಯ ಪ್ರಕಾರ ಕಲ್ಲು ನನ್ನ ಮನಸಿನ ಒಳಗೆ ಇದೆ. ಯಾಕೆಂದರೆ ಪ್ರತಿಯೊಂದರ ದರ್ಶನ ಮತ್ತು ನೋಡುವಿಕೆ ಎರಡೂ ಕೂಡಾ ಮನಸನ್ನು ಅವಲಂಬಿಸಿ ಇರುತ್ತದೆ."
ಮಹಾನ್ ದಾರ್ಶನಿಕರಾಗಿದ್ದ ಗುರು ಹೋಗೆನ್ ಅವರು ನಂತರ ಮುಗುಳ್ನಗೆ ನಕ್ಕು, "ಅಷ್ಟು ದೊಡ್ಡ ಕಲ್ಲನ್ನು ನಿಮ್ಮ ಮನಸಲ್ಲಿ ಹೊತ್ತುಕೊಂಡಿರುವುದರಿಂದ ನಿಮ್ಮ ತಲೆ ತುಂಬ ಭಾರ ಆಗಿರಬೇಕು!"



Click it and Unblock the Notifications