Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಝೆನ್ ಕಥೆ : ಮನಸಲ್ಲಿ ಹೊತ್ತುಕೊಂಡ ಭಾರದ ಕಲ್ಲು

ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೌದ್ಧ ಭಿಕ್ಷುಗಳು ಮಾತನಾಡುತ್ತಿದ್ದುದನ್ನು ಹೋಗೆನ್ ಕೇಳಿಸಿಕೊಂಡರು. ಅವರ ಮಾತುಗಳು ಹೋಗೆನ್ ರಲ್ಲಿ ಆಸಕ್ತಿ ಕೆರಳಿಸಿದವು. ಮೈ ಬೆಚ್ಚಗಿಸಿಕೊಳ್ಳುತ್ತ ಭಿಕ್ಕುಗಳು ವಿಷಯಾತ್ಮಕತೆ ಮತ್ತು ವಾಸ್ತವಿಕತೆಯ ಬಗ್ಗೆ ಮಾತನಾಡಲು ತೊಡಗಿದರು. ಝೆನ್ ಗುರು ಹೋಗೆನ್ ಕೂಡಾ ಅವರ ಜೊತೆ ಸೇರಿಕೊಂಡರು.
ಸಹಜವಾಗಿ ಅವರೆಲ್ಲರ ಗಮನ ಝೆನ್ ಗುರು ಮೇಲೆ ತಿರುಗಿತು. ಅವರು ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಅವರನ್ನು ಉದ್ದೇಶಿಸಿ, "ಅಲ್ಲಿ ಒಂದು ದೊಡ್ಡ ಕಲ್ಲು ಇದೆ. ಇದು ನಿಮ್ಮ ಮನಸಿನ ಒಳಗೆ ಇದೆಯೆಂದು ತಿಳಿಯುತ್ತೀರೋ ಅಥವಾ ಮನಸಿನ ಹೊರಗೆ ಇದೆ ಎಂದು ಭಾವಿಸುತ್ತೀರೋ?" ಎಂದು ಹೋಗೆನ್ ಕೇಳಿದರು.
ಒಬ್ಬ ಭಿಕ್ಕುವು ಹೇಳಿದ, "ಬುದ್ಧರ ವಿಚಾರಧಾರೆಯ ಪ್ರಕಾರ ಕಲ್ಲು ನನ್ನ ಮನಸಿನ ಒಳಗೆ ಇದೆ. ಯಾಕೆಂದರೆ ಪ್ರತಿಯೊಂದರ ದರ್ಶನ ಮತ್ತು ನೋಡುವಿಕೆ ಎರಡೂ ಕೂಡಾ ಮನಸನ್ನು ಅವಲಂಬಿಸಿ ಇರುತ್ತದೆ."
ಮಹಾನ್ ದಾರ್ಶನಿಕರಾಗಿದ್ದ ಗುರು ಹೋಗೆನ್ ಅವರು ನಂತರ ಮುಗುಳ್ನಗೆ ನಕ್ಕು, "ಅಷ್ಟು ದೊಡ್ಡ ಕಲ್ಲನ್ನು ನಿಮ್ಮ ಮನಸಲ್ಲಿ ಹೊತ್ತುಕೊಂಡಿರುವುದರಿಂದ ನಿಮ್ಮ ತಲೆ ತುಂಬ ಭಾರ ಆಗಿರಬೇಕು!"



Click it and Unblock the Notifications











