Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಝೆನ್ ಕಥೆ : ಮನಸಲ್ಲಿ ಹೊತ್ತುಕೊಂಡ ಭಾರದ ಕಲ್ಲು

ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೌದ್ಧ ಭಿಕ್ಷುಗಳು ಮಾತನಾಡುತ್ತಿದ್ದುದನ್ನು ಹೋಗೆನ್ ಕೇಳಿಸಿಕೊಂಡರು. ಅವರ ಮಾತುಗಳು ಹೋಗೆನ್ ರಲ್ಲಿ ಆಸಕ್ತಿ ಕೆರಳಿಸಿದವು. ಮೈ ಬೆಚ್ಚಗಿಸಿಕೊಳ್ಳುತ್ತ ಭಿಕ್ಕುಗಳು ವಿಷಯಾತ್ಮಕತೆ ಮತ್ತು ವಾಸ್ತವಿಕತೆಯ ಬಗ್ಗೆ ಮಾತನಾಡಲು ತೊಡಗಿದರು. ಝೆನ್ ಗುರು ಹೋಗೆನ್ ಕೂಡಾ ಅವರ ಜೊತೆ ಸೇರಿಕೊಂಡರು.
ಸಹಜವಾಗಿ ಅವರೆಲ್ಲರ ಗಮನ ಝೆನ್ ಗುರು ಮೇಲೆ ತಿರುಗಿತು. ಅವರು ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಅವರನ್ನು ಉದ್ದೇಶಿಸಿ, "ಅಲ್ಲಿ ಒಂದು ದೊಡ್ಡ ಕಲ್ಲು ಇದೆ. ಇದು ನಿಮ್ಮ ಮನಸಿನ ಒಳಗೆ ಇದೆಯೆಂದು ತಿಳಿಯುತ್ತೀರೋ ಅಥವಾ ಮನಸಿನ ಹೊರಗೆ ಇದೆ ಎಂದು ಭಾವಿಸುತ್ತೀರೋ?" ಎಂದು ಹೋಗೆನ್ ಕೇಳಿದರು.
ಒಬ್ಬ ಭಿಕ್ಕುವು ಹೇಳಿದ, "ಬುದ್ಧರ ವಿಚಾರಧಾರೆಯ ಪ್ರಕಾರ ಕಲ್ಲು ನನ್ನ ಮನಸಿನ ಒಳಗೆ ಇದೆ. ಯಾಕೆಂದರೆ ಪ್ರತಿಯೊಂದರ ದರ್ಶನ ಮತ್ತು ನೋಡುವಿಕೆ ಎರಡೂ ಕೂಡಾ ಮನಸನ್ನು ಅವಲಂಬಿಸಿ ಇರುತ್ತದೆ."
ಮಹಾನ್ ದಾರ್ಶನಿಕರಾಗಿದ್ದ ಗುರು ಹೋಗೆನ್ ಅವರು ನಂತರ ಮುಗುಳ್ನಗೆ ನಕ್ಕು, "ಅಷ್ಟು ದೊಡ್ಡ ಕಲ್ಲನ್ನು ನಿಮ್ಮ ಮನಸಲ್ಲಿ ಹೊತ್ತುಕೊಂಡಿರುವುದರಿಂದ ನಿಮ್ಮ ತಲೆ ತುಂಬ ಭಾರ ಆಗಿರಬೇಕು!"



Click it and Unblock the Notifications