Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಝೆನ್ ಕಥೆ : ಮನಸಲ್ಲಿ ಹೊತ್ತುಕೊಂಡ ಭಾರದ ಕಲ್ಲು

ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೌದ್ಧ ಭಿಕ್ಷುಗಳು ಮಾತನಾಡುತ್ತಿದ್ದುದನ್ನು ಹೋಗೆನ್ ಕೇಳಿಸಿಕೊಂಡರು. ಅವರ ಮಾತುಗಳು ಹೋಗೆನ್ ರಲ್ಲಿ ಆಸಕ್ತಿ ಕೆರಳಿಸಿದವು. ಮೈ ಬೆಚ್ಚಗಿಸಿಕೊಳ್ಳುತ್ತ ಭಿಕ್ಕುಗಳು ವಿಷಯಾತ್ಮಕತೆ ಮತ್ತು ವಾಸ್ತವಿಕತೆಯ ಬಗ್ಗೆ ಮಾತನಾಡಲು ತೊಡಗಿದರು. ಝೆನ್ ಗುರು ಹೋಗೆನ್ ಕೂಡಾ ಅವರ ಜೊತೆ ಸೇರಿಕೊಂಡರು.
ಸಹಜವಾಗಿ ಅವರೆಲ್ಲರ ಗಮನ ಝೆನ್ ಗುರು ಮೇಲೆ ತಿರುಗಿತು. ಅವರು ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಅವರನ್ನು ಉದ್ದೇಶಿಸಿ, "ಅಲ್ಲಿ ಒಂದು ದೊಡ್ಡ ಕಲ್ಲು ಇದೆ. ಇದು ನಿಮ್ಮ ಮನಸಿನ ಒಳಗೆ ಇದೆಯೆಂದು ತಿಳಿಯುತ್ತೀರೋ ಅಥವಾ ಮನಸಿನ ಹೊರಗೆ ಇದೆ ಎಂದು ಭಾವಿಸುತ್ತೀರೋ?" ಎಂದು ಹೋಗೆನ್ ಕೇಳಿದರು.
ಒಬ್ಬ ಭಿಕ್ಕುವು ಹೇಳಿದ, "ಬುದ್ಧರ ವಿಚಾರಧಾರೆಯ ಪ್ರಕಾರ ಕಲ್ಲು ನನ್ನ ಮನಸಿನ ಒಳಗೆ ಇದೆ. ಯಾಕೆಂದರೆ ಪ್ರತಿಯೊಂದರ ದರ್ಶನ ಮತ್ತು ನೋಡುವಿಕೆ ಎರಡೂ ಕೂಡಾ ಮನಸನ್ನು ಅವಲಂಬಿಸಿ ಇರುತ್ತದೆ."
ಮಹಾನ್ ದಾರ್ಶನಿಕರಾಗಿದ್ದ ಗುರು ಹೋಗೆನ್ ಅವರು ನಂತರ ಮುಗುಳ್ನಗೆ ನಕ್ಕು, "ಅಷ್ಟು ದೊಡ್ಡ ಕಲ್ಲನ್ನು ನಿಮ್ಮ ಮನಸಲ್ಲಿ ಹೊತ್ತುಕೊಂಡಿರುವುದರಿಂದ ನಿಮ್ಮ ತಲೆ ತುಂಬ ಭಾರ ಆಗಿರಬೇಕು!"



Click it and Unblock the Notifications