Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಝೆನ್ ಕಥೆ: ಬುದ್ಧಿವಂತ ಭೂತ

ಆಕೆ ಸತ್ತ ಕೆಲವು ತಿಂಗಳುಗಳ ನಂತರ ಆಕೆಯ ಗಂಡ ಬೇರೆ ಹುಡುಗಿಯರಿಂದ ದೂರವಿರಲು ಆರಂಭಿಸಿದ.. ಆದ್ರೆ ಅದೊಂದು ದಿನ ಅವನು ಒಂದು ಹುಡುಗಿಯನ್ನು ಭೇಟಿ ಮಾಡಿದ. ಆ ಭೇಟಿಯು ಅವನಲ್ಲಿ ಪ್ರೀತಿ ಮೂಡುವಂತೆ ಮಾಡಿತು, ಅವನು ಪ್ರೀತಿಯಲ್ಲಿ ಬಿದ್ದು ಬಿಟ್ಟ. ಅದೊಂದು ದಿನ ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಆಗ ಅವನ ಮಾಜಿ ಪತ್ನಿ ಅವನಿಗೆ ಕಾಣಿಸಿಕೊಂಡಳು.. ನನಗೆ ಕೊಟ್ಟ ಭಾಷೆಯನ್ನು ನೀನು ಉಳಿಸಿಕೊಳ್ಳಲಿಲ್ಲ ಅಂತ ಅವನನ್ನು ದೂರಿದಳು.. ಪ್ರತಿ ದಿನ ರಾತ್ರಿ ಭೂತವಾಗಿ ಬಂದು ಅವನನ್ನು ಹಂಗಿಸಿ ಕಾಡೋಕೆ ಶುರುಮಾಡಿದಳು.. ಅವನು ತನ್ನ ಪ್ರಿಯತಮೆಯೊಂದಿಗೆ ಕಳೆದ ಸಮಯ ಆಡಿದ ಪ್ರತಿಯೊಂದು ಮಾತುಕತೆಗಳು, ಪ್ರತಿಯೊಂದು ಪದಗಳು ಮತ್ತು ಅವರ ನಡುವೆ ನಡೆದ ಪ್ರತಿಯೊಂದು ವಿಷಯಗಳು ನೆನಪಿಗೆ ಬರುವಂತೆ ಮಾಡಿತು ಈ ಪ್ರೇತ.
ಇದರಿಂದ ಅವನಿಗೆ ರಾತ್ರಿಯೆಲ್ಲ ನಿದ್ದೆ ಇಲ್ಲದಂತಾಯಿತು.. ಮನಸ್ಸಿಗೆ ಅಸಮಾಧಾನವಾಯಿತು.
ಇದರಿಂದ ಹತಾಶೆಗೊಂಡ ಅವನು ತನ್ನ ಹಳ್ಳಿಯ ಬಳಿಯೇ ವಾಸವಾಗಿದ್ದ ಝೆನ್ ಮಾಸ್ಟರ್ (ಝೆನ್ ಗುರುಗಳು) ಬಳಿಗೆ ಬಂದರು. ತಮಗಾದ ಎಲ್ಲಾ ಅನುಭವಗಳನ್ನು ಆ ಗುರುಗಳ ಬಳಿಯಲ್ಲಿ ನಿವೇದಿಸಿಕೊಂಡರು.. ಇದನ್ನು ಕೇಳಿದ ನಂತರ ಗುರುಗಳು " ಇದು ಸಾಮಾನ್ಯವಾದ ಭೂತವಲ್ಲ.. ಇದು ಬುದ್ಧಿವಂತ ಭೂತ ಅಂತ ಹೇಳಿಬಿಟ್ಟರು.." ಹೌದು ಗುರುಗಳೇ.. ನಾನು ಏನೇನು ಹೇಳಿದೆನೋ ಮತ್ತು ನಾನು ಏನು ಮಾಡಿದ್ದೆ ಮತ್ತು ಏನು ಮಾಡಬೇಕು ಅಂದುಕೊಂಡಿದ್ದೆ ಅಂತ ಅದೆಲ್ಲವನ್ನೂ ಮತ್ತೆ ಮತ್ತೆ ನೆನಪು ಮಾಡುವಂತೆ ಮಾಡಿತು ಆ ಭೂತ" ಅಂತ ಅವನು ಅಚ್ಚರಿಯಾಗಿ ಹೇಳಿದ. ಇದನ್ನು ಕೇಳಿದ ಗುರುಗಳು ನಗು ನಗುತ್ತಲೇ "ನೀನು ಆ ಭೂತಕ್ಕೆ ಅಚ್ಚು ಮೆಚ್ಚಿನವನಾಗಿದ್ದೀಯ.. ಅದ್ರೆ ನೀನು ಮುಂದಿನ ಸಾರಿ ಆ ಭೂತ ಕಂಡಾಗ ಏನು ಮಾಡಬೇಕು ಅಂತ ನಾನು ನಿನಗೆ ಹೇಳ್ತೀನಿ" ಅಂತ ಹೇಳಿದರು.
ಆ ರಾತ್ರಿ.. ಆ ಭೂತ ಮರಳಿ ಬಂತು... ಆ ಗುರುಗಳು ಹೇಳಿದಂತೆ ಅವನು ಪ್ರತಿಕ್ರಿಯಿಸೋದಕ್ಕೆ ಶುರು ಮಾಡಿದ.. "ನೀನು ತುಂಬಾ ಬುದ್ಧಿವಂತ.." ಹೀಗಾಗಿ ನಾನು ನಿನ್ನಿಂದ ಯಾವುದನ್ನೂ ಮುಚ್ಚಿಟ್ಟಿಲ್ಲ ಅಂತ ನಿನಗೂ ಗೊತ್ತು.. ಆದ್ರೆ ನಾನು ಈಗ ನಿನಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಉತ್ತರ ಕೊಡು.. ಆಗ ನಾನು ನನ್ನ ಮದುವೆಯನ್ನು ನಿಲ್ಲಿಸಿ.. ಜೀವನ ಪರ್ಯಂತ ಒಬ್ಬಂಟಿಯಾಗಿ ಬದುಕುತ್ತೇನೆ" ಅಂತ ಅವನು ಹೇಳಿದನು.. ಆಗ ಭೂತ "ಸರಿ ನಿನ್ನ ಪ್ರಶ್ನೆ ಏನು ಅಂತ ಕೇಳು?" ಅಂತ ಆ ಭೂತ ಹೇಳಿತು.. ಮೇಲೆ ಇರಿಸಿದ್ದ ಒಂದು ದೊಡ್ಡ ಚೀಲದಲ್ಲಿನ ಹುರುಳಿ ಕಾಳುಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು "ನನ್ನ ಕೈಯಲ್ಲಿ ಎಷ್ಟು ಹುರುಳಿ ಕಾಳುಗಳು ಇವೆ ಅಂತ ನಿಖರವಾಗಿ ಹೇಳು ಸಾಕು" ಅಂತ ಅವನು ಕೇಳಿದ..
ಆ ಕ್ಷಣದಲ್ಲಿ ತಕ್ಷಣ ಹೇಳಲಾಗದ ಭೂತವು ಕಣ್ಮರೆಯಾಗಿ ಹೋಯಿತು ಮತ್ತೆ ಎಂದೂ ಮರಳಿ ಬರಲೇ ಇಲ್ಲ!



Click it and Unblock the Notifications