Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಝೆನ್ ಕಥೆ: ಬುದ್ಧಿವಂತ ಭೂತ

ಆಕೆ ಸತ್ತ ಕೆಲವು ತಿಂಗಳುಗಳ ನಂತರ ಆಕೆಯ ಗಂಡ ಬೇರೆ ಹುಡುಗಿಯರಿಂದ ದೂರವಿರಲು ಆರಂಭಿಸಿದ.. ಆದ್ರೆ ಅದೊಂದು ದಿನ ಅವನು ಒಂದು ಹುಡುಗಿಯನ್ನು ಭೇಟಿ ಮಾಡಿದ. ಆ ಭೇಟಿಯು ಅವನಲ್ಲಿ ಪ್ರೀತಿ ಮೂಡುವಂತೆ ಮಾಡಿತು, ಅವನು ಪ್ರೀತಿಯಲ್ಲಿ ಬಿದ್ದು ಬಿಟ್ಟ. ಅದೊಂದು ದಿನ ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಆಗ ಅವನ ಮಾಜಿ ಪತ್ನಿ ಅವನಿಗೆ ಕಾಣಿಸಿಕೊಂಡಳು.. ನನಗೆ ಕೊಟ್ಟ ಭಾಷೆಯನ್ನು ನೀನು ಉಳಿಸಿಕೊಳ್ಳಲಿಲ್ಲ ಅಂತ ಅವನನ್ನು ದೂರಿದಳು.. ಪ್ರತಿ ದಿನ ರಾತ್ರಿ ಭೂತವಾಗಿ ಬಂದು ಅವನನ್ನು ಹಂಗಿಸಿ ಕಾಡೋಕೆ ಶುರುಮಾಡಿದಳು.. ಅವನು ತನ್ನ ಪ್ರಿಯತಮೆಯೊಂದಿಗೆ ಕಳೆದ ಸಮಯ ಆಡಿದ ಪ್ರತಿಯೊಂದು ಮಾತುಕತೆಗಳು, ಪ್ರತಿಯೊಂದು ಪದಗಳು ಮತ್ತು ಅವರ ನಡುವೆ ನಡೆದ ಪ್ರತಿಯೊಂದು ವಿಷಯಗಳು ನೆನಪಿಗೆ ಬರುವಂತೆ ಮಾಡಿತು ಈ ಪ್ರೇತ.
ಇದರಿಂದ ಅವನಿಗೆ ರಾತ್ರಿಯೆಲ್ಲ ನಿದ್ದೆ ಇಲ್ಲದಂತಾಯಿತು.. ಮನಸ್ಸಿಗೆ ಅಸಮಾಧಾನವಾಯಿತು.
ಇದರಿಂದ ಹತಾಶೆಗೊಂಡ ಅವನು ತನ್ನ ಹಳ್ಳಿಯ ಬಳಿಯೇ ವಾಸವಾಗಿದ್ದ ಝೆನ್ ಮಾಸ್ಟರ್ (ಝೆನ್ ಗುರುಗಳು) ಬಳಿಗೆ ಬಂದರು. ತಮಗಾದ ಎಲ್ಲಾ ಅನುಭವಗಳನ್ನು ಆ ಗುರುಗಳ ಬಳಿಯಲ್ಲಿ ನಿವೇದಿಸಿಕೊಂಡರು.. ಇದನ್ನು ಕೇಳಿದ ನಂತರ ಗುರುಗಳು " ಇದು ಸಾಮಾನ್ಯವಾದ ಭೂತವಲ್ಲ.. ಇದು ಬುದ್ಧಿವಂತ ಭೂತ ಅಂತ ಹೇಳಿಬಿಟ್ಟರು.." ಹೌದು ಗುರುಗಳೇ.. ನಾನು ಏನೇನು ಹೇಳಿದೆನೋ ಮತ್ತು ನಾನು ಏನು ಮಾಡಿದ್ದೆ ಮತ್ತು ಏನು ಮಾಡಬೇಕು ಅಂದುಕೊಂಡಿದ್ದೆ ಅಂತ ಅದೆಲ್ಲವನ್ನೂ ಮತ್ತೆ ಮತ್ತೆ ನೆನಪು ಮಾಡುವಂತೆ ಮಾಡಿತು ಆ ಭೂತ" ಅಂತ ಅವನು ಅಚ್ಚರಿಯಾಗಿ ಹೇಳಿದ. ಇದನ್ನು ಕೇಳಿದ ಗುರುಗಳು ನಗು ನಗುತ್ತಲೇ "ನೀನು ಆ ಭೂತಕ್ಕೆ ಅಚ್ಚು ಮೆಚ್ಚಿನವನಾಗಿದ್ದೀಯ.. ಅದ್ರೆ ನೀನು ಮುಂದಿನ ಸಾರಿ ಆ ಭೂತ ಕಂಡಾಗ ಏನು ಮಾಡಬೇಕು ಅಂತ ನಾನು ನಿನಗೆ ಹೇಳ್ತೀನಿ" ಅಂತ ಹೇಳಿದರು.
ಆ ರಾತ್ರಿ.. ಆ ಭೂತ ಮರಳಿ ಬಂತು... ಆ ಗುರುಗಳು ಹೇಳಿದಂತೆ ಅವನು ಪ್ರತಿಕ್ರಿಯಿಸೋದಕ್ಕೆ ಶುರು ಮಾಡಿದ.. "ನೀನು ತುಂಬಾ ಬುದ್ಧಿವಂತ.." ಹೀಗಾಗಿ ನಾನು ನಿನ್ನಿಂದ ಯಾವುದನ್ನೂ ಮುಚ್ಚಿಟ್ಟಿಲ್ಲ ಅಂತ ನಿನಗೂ ಗೊತ್ತು.. ಆದ್ರೆ ನಾನು ಈಗ ನಿನಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಉತ್ತರ ಕೊಡು.. ಆಗ ನಾನು ನನ್ನ ಮದುವೆಯನ್ನು ನಿಲ್ಲಿಸಿ.. ಜೀವನ ಪರ್ಯಂತ ಒಬ್ಬಂಟಿಯಾಗಿ ಬದುಕುತ್ತೇನೆ" ಅಂತ ಅವನು ಹೇಳಿದನು.. ಆಗ ಭೂತ "ಸರಿ ನಿನ್ನ ಪ್ರಶ್ನೆ ಏನು ಅಂತ ಕೇಳು?" ಅಂತ ಆ ಭೂತ ಹೇಳಿತು.. ಮೇಲೆ ಇರಿಸಿದ್ದ ಒಂದು ದೊಡ್ಡ ಚೀಲದಲ್ಲಿನ ಹುರುಳಿ ಕಾಳುಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು "ನನ್ನ ಕೈಯಲ್ಲಿ ಎಷ್ಟು ಹುರುಳಿ ಕಾಳುಗಳು ಇವೆ ಅಂತ ನಿಖರವಾಗಿ ಹೇಳು ಸಾಕು" ಅಂತ ಅವನು ಕೇಳಿದ..
ಆ ಕ್ಷಣದಲ್ಲಿ ತಕ್ಷಣ ಹೇಳಲಾಗದ ಭೂತವು ಕಣ್ಮರೆಯಾಗಿ ಹೋಯಿತು ಮತ್ತೆ ಎಂದೂ ಮರಳಿ ಬರಲೇ ಇಲ್ಲ!



Click it and Unblock the Notifications











