Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಝೆನ್ ಕಥೆ: ಬುದ್ಧಿವಂತ ಭೂತ

ಆಕೆ ಸತ್ತ ಕೆಲವು ತಿಂಗಳುಗಳ ನಂತರ ಆಕೆಯ ಗಂಡ ಬೇರೆ ಹುಡುಗಿಯರಿಂದ ದೂರವಿರಲು ಆರಂಭಿಸಿದ.. ಆದ್ರೆ ಅದೊಂದು ದಿನ ಅವನು ಒಂದು ಹುಡುಗಿಯನ್ನು ಭೇಟಿ ಮಾಡಿದ. ಆ ಭೇಟಿಯು ಅವನಲ್ಲಿ ಪ್ರೀತಿ ಮೂಡುವಂತೆ ಮಾಡಿತು, ಅವನು ಪ್ರೀತಿಯಲ್ಲಿ ಬಿದ್ದು ಬಿಟ್ಟ. ಅದೊಂದು ದಿನ ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಆಗ ಅವನ ಮಾಜಿ ಪತ್ನಿ ಅವನಿಗೆ ಕಾಣಿಸಿಕೊಂಡಳು.. ನನಗೆ ಕೊಟ್ಟ ಭಾಷೆಯನ್ನು ನೀನು ಉಳಿಸಿಕೊಳ್ಳಲಿಲ್ಲ ಅಂತ ಅವನನ್ನು ದೂರಿದಳು.. ಪ್ರತಿ ದಿನ ರಾತ್ರಿ ಭೂತವಾಗಿ ಬಂದು ಅವನನ್ನು ಹಂಗಿಸಿ ಕಾಡೋಕೆ ಶುರುಮಾಡಿದಳು.. ಅವನು ತನ್ನ ಪ್ರಿಯತಮೆಯೊಂದಿಗೆ ಕಳೆದ ಸಮಯ ಆಡಿದ ಪ್ರತಿಯೊಂದು ಮಾತುಕತೆಗಳು, ಪ್ರತಿಯೊಂದು ಪದಗಳು ಮತ್ತು ಅವರ ನಡುವೆ ನಡೆದ ಪ್ರತಿಯೊಂದು ವಿಷಯಗಳು ನೆನಪಿಗೆ ಬರುವಂತೆ ಮಾಡಿತು ಈ ಪ್ರೇತ.
ಇದರಿಂದ ಅವನಿಗೆ ರಾತ್ರಿಯೆಲ್ಲ ನಿದ್ದೆ ಇಲ್ಲದಂತಾಯಿತು.. ಮನಸ್ಸಿಗೆ ಅಸಮಾಧಾನವಾಯಿತು.
ಇದರಿಂದ ಹತಾಶೆಗೊಂಡ ಅವನು ತನ್ನ ಹಳ್ಳಿಯ ಬಳಿಯೇ ವಾಸವಾಗಿದ್ದ ಝೆನ್ ಮಾಸ್ಟರ್ (ಝೆನ್ ಗುರುಗಳು) ಬಳಿಗೆ ಬಂದರು. ತಮಗಾದ ಎಲ್ಲಾ ಅನುಭವಗಳನ್ನು ಆ ಗುರುಗಳ ಬಳಿಯಲ್ಲಿ ನಿವೇದಿಸಿಕೊಂಡರು.. ಇದನ್ನು ಕೇಳಿದ ನಂತರ ಗುರುಗಳು " ಇದು ಸಾಮಾನ್ಯವಾದ ಭೂತವಲ್ಲ.. ಇದು ಬುದ್ಧಿವಂತ ಭೂತ ಅಂತ ಹೇಳಿಬಿಟ್ಟರು.." ಹೌದು ಗುರುಗಳೇ.. ನಾನು ಏನೇನು ಹೇಳಿದೆನೋ ಮತ್ತು ನಾನು ಏನು ಮಾಡಿದ್ದೆ ಮತ್ತು ಏನು ಮಾಡಬೇಕು ಅಂದುಕೊಂಡಿದ್ದೆ ಅಂತ ಅದೆಲ್ಲವನ್ನೂ ಮತ್ತೆ ಮತ್ತೆ ನೆನಪು ಮಾಡುವಂತೆ ಮಾಡಿತು ಆ ಭೂತ" ಅಂತ ಅವನು ಅಚ್ಚರಿಯಾಗಿ ಹೇಳಿದ. ಇದನ್ನು ಕೇಳಿದ ಗುರುಗಳು ನಗು ನಗುತ್ತಲೇ "ನೀನು ಆ ಭೂತಕ್ಕೆ ಅಚ್ಚು ಮೆಚ್ಚಿನವನಾಗಿದ್ದೀಯ.. ಅದ್ರೆ ನೀನು ಮುಂದಿನ ಸಾರಿ ಆ ಭೂತ ಕಂಡಾಗ ಏನು ಮಾಡಬೇಕು ಅಂತ ನಾನು ನಿನಗೆ ಹೇಳ್ತೀನಿ" ಅಂತ ಹೇಳಿದರು.
ಆ ರಾತ್ರಿ.. ಆ ಭೂತ ಮರಳಿ ಬಂತು... ಆ ಗುರುಗಳು ಹೇಳಿದಂತೆ ಅವನು ಪ್ರತಿಕ್ರಿಯಿಸೋದಕ್ಕೆ ಶುರು ಮಾಡಿದ.. "ನೀನು ತುಂಬಾ ಬುದ್ಧಿವಂತ.." ಹೀಗಾಗಿ ನಾನು ನಿನ್ನಿಂದ ಯಾವುದನ್ನೂ ಮುಚ್ಚಿಟ್ಟಿಲ್ಲ ಅಂತ ನಿನಗೂ ಗೊತ್ತು.. ಆದ್ರೆ ನಾನು ಈಗ ನಿನಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಉತ್ತರ ಕೊಡು.. ಆಗ ನಾನು ನನ್ನ ಮದುವೆಯನ್ನು ನಿಲ್ಲಿಸಿ.. ಜೀವನ ಪರ್ಯಂತ ಒಬ್ಬಂಟಿಯಾಗಿ ಬದುಕುತ್ತೇನೆ" ಅಂತ ಅವನು ಹೇಳಿದನು.. ಆಗ ಭೂತ "ಸರಿ ನಿನ್ನ ಪ್ರಶ್ನೆ ಏನು ಅಂತ ಕೇಳು?" ಅಂತ ಆ ಭೂತ ಹೇಳಿತು.. ಮೇಲೆ ಇರಿಸಿದ್ದ ಒಂದು ದೊಡ್ಡ ಚೀಲದಲ್ಲಿನ ಹುರುಳಿ ಕಾಳುಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು "ನನ್ನ ಕೈಯಲ್ಲಿ ಎಷ್ಟು ಹುರುಳಿ ಕಾಳುಗಳು ಇವೆ ಅಂತ ನಿಖರವಾಗಿ ಹೇಳು ಸಾಕು" ಅಂತ ಅವನು ಕೇಳಿದ..
ಆ ಕ್ಷಣದಲ್ಲಿ ತಕ್ಷಣ ಹೇಳಲಾಗದ ಭೂತವು ಕಣ್ಮರೆಯಾಗಿ ಹೋಯಿತು ಮತ್ತೆ ಎಂದೂ ಮರಳಿ ಬರಲೇ ಇಲ್ಲ!



Click it and Unblock the Notifications