Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
ಶನಿ ಧೈಯ್ಯಾ, ಶನಿ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡಿ ಶನಿಯ ಕೆಟ್ಟ ದೃಷ್ಟಿ ಕಡಿಮೆ ಮಾಡಲು ಶನಿ ಜಯಂತಿ ತುಂಬಾ ಸೂಕ್ತವಾದ ದಿನವಾಗಿದೆ. ಮೇ 30, 2022 ಸೋಮವಾರದಂದು ಶನಿ ಜಯಂತಿಯನ್ನು ಆಚರಿಸಲಾಗುವುದು. ಪ್ರತಿ ವರ್ಷ ಜೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.

ಶನಿಯ ಸಾಡೇಸಾತಿ ಮತ್ತು ಧೈಯಾವನ್ನು ತಪ್ಪಿಸಲು, ಶನಿಯನ್ನು ಸಂತೋಷವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಶನಿಯ ಕೋಪಕ್ಕೆ ಗುರಿಯಾದರೆ ವ್ಯಾಪಾರದಲ್ಲಿ ನಷ್ಟ, ಕುಟುಂಬ ಜೀವನದಲ್ಲಿ ಅಶಾಂತಿ, ಅವಮಾನಕ್ಕೆ ಒಳಗಾಗುವುದು, ಮಾಡಿದ ನಿಮ್ಮ ಕಾರ್ಯದಲ್ಲಿ ಯಶಸ್ಸು ಕಾಣದಿರುವುದು ಹೀಗೆ ಅನೇಕ ಸಮಸ್ಯೆಗಳ ಎದುರಾಗುವುದು. ಆದ್ದರಿಂದ ಶನಿ ದೇವನ ಆರಾಧನೆ ಮಾಡಿ ಶನಿ ದೇವನ ಕೃಪೆಗೆ ಪಾತ್ರರಾದರೆ ಜೀವನದಲ್ಲಿ ಇರುವ ಸಮಸ್ಯೆ ದೂರಾಗುವುದು.

ಶನಿ ಜಯಂತಿಯಂದು ಪೂಜೆಗೆ ಮುಹೂರ್ತ
ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ಮೇ 29 ರ ಭಾನುವಾರ ಮಧ್ಯಾಹ್ನ 2:54 ಕ್ಕೆ ಪ್ರಾರಂಭವಾಗಿ ಮೇ 30 ರಂದು 4:59 ಕ್ಕೆ ಕೊನೆಗೊಳ್ಳಲಿದೆ. ಮೇ 30ರ ಸೋಮವಾರದಂದು ಸೂರ್ಯೋದ ನಂತರ ಶನಿ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಸುಕರ್ಮ ಯೋಗವಿದೆ, ಮತ್ತು ಬೆಳಗ್ಗೆಯಿಂದ ಸರ್ವಾರ್ಥ ಸಿದ್ಧಿ ಯೋಗವಿದೆ, ಶನಿದೇವರ ಆರಾಧನೆಯ ದಿನದಂದು ಅಭಿಜಿತ್ ಮುಹೂರ್ತವಿದೆ.

ಈ ಮಂತ್ರಗಳನ್ನು ಪಠಿಸಿ
ಓಂ ಶನಿಶ್ಚರಾಯ ನಮಃ
ಓಂ ಪ್ರಾಂ ಪ್ರೇಂ ಸಾಧಕ: ಶನಿಶ್ಚರಾಯ ನಮಃ
ಶನಿ ಜಯಂತಿಯ ದಿನದಂದು ಈ ಮಂತ್ರಗಳನ್ನು ಪಠಿಸುವ ಮೂಲಕ ಶನಿದೇವನನ್ನು ಪೂಜಿಸಿ. ಇದರಿಂದ ನಿಮ್ಮ ಪಾಪಗಳೆಲ್ಲವೂ ತೊಳೆದುಹೋಗುತ್ತವೆ. ಮನೆಯಲ್ಲಿ ಶಾಂತಿ ಇರುತ್ತದೆ. ನಿಮ್ಮ ವ್ಯಾಪಾರ ಹೆಚ್ಚಾಗುತ್ತದೆ ಹಾಗೂ ಸಂಪತ್ತು ಹೆಚ್ಚಾಗುತ್ತದೆ.

ಶನಿ ಸಾಡೆ ಸತಿ ಮತ್ತು ಧೈಯಾದಿಂದ ಮುಕ್ತಿ ಪಡೆಯಲು ಪರಿಹಾರಗಳು
* ಶನಿ ಜಯಂತಿಯಂದು ಬೆಳಿಗ್ಗೆ ಸ್ನಾನ ಇತ್ಯಾದಿ ಮಾಡಿದ ನಂತರ ಆಲದ ಮರಕ್ಕೆ ನೀರನ್ನು ಅರ್ಪಿಸಿ 7 ಬಾರಿ ಪ್ರದಕ್ಷಿಣೆ ಮಾಡಿ. ಸಂಜೆ ಬಂದು ಸಂಜೆ ಸಾಸಿವೆಯೆಣ್ಣೆಯ ದೀಪವನ್ನು ಬೆಳಗಿಸಿ.
* ಶನಿ ಸಾಡೇ ಸಾತಿಯನ್ನು ತೊಡೆದುಹಾಕಲು, ಕಪ್ಪು ಕುದುರೆಯ ಉಗುರಿನಿಂದ ಮಾಡಿದ ಉಂಗುರವನ್ನು ಶನಿ ಜಯಂತಿಯಂದು ಸೂರ್ಯಾಸ್ತದ ಸಮಯದಲ್ಲಿ ಬಲಗೈಯ ಮಧ್ಯದ ಬೆರಳಿಗೆ ಧರಿಸಿ. ಇದರಿಂದ ನೀವು ಲಾಭ ಪಡೆಯುತ್ತೀರಿ.
* ಶನಿ ಜಯಂತಿಯಂದು ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಏಕಕಾಲದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.

ಶನಿ ಸಾಡೆ ಸತಿ ಮತ್ತು ಧೈಯಾದಿಂದ ಮುಕ್ತಿ ಪಡೆಯಲು ಪರಿಹಾರಗಳು
* ಶನಿ ದೇವನನ್ನು ಪೂಜಿಸುವಾಗ ನೀಲಿ ಹೂವುಗಳನ್ನು ಅರ್ಪಿಸಿ. ಇದರೊಂದಿಗೆ, ರುದ್ರಾಕ್ಷದ ಜಪಮಾಲೆಯೊಂದಿಗೆ ಓಂ ಶನಿಶ್ಚರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಇದು ಸಾಡೆ ಸತಿ ಮತ್ತು ಧೈಯಾದಿಂದ ಪರಿಹಾರವನ್ನು ನೀಡುತ್ತದೆ.
* ಈ ದಿನ ಶನಿದೇವನ ಆರಾಧನೆ ಜೊತೆಗೆ ಹನುಮಂತನನ್ನು ಶನಿ ದೋಷಗಳಿಂದ ಮುಕ್ತಿ ಪಡೆಯಬಹುದು.
ಶನಿವಾರದಂದು ಹಿಟ್ಟು, ಸಕ್ಕರೆ, ಕಪ್ಪು ಎಳ್ಳು ಬೆರೆಸಿ ಇರುವೆಗಳಿಗೆ ಆಹಾರ ನೀಡಿ.
* ಶನಿ ಜಯಂತಿಯಂದು ಕಪ್ಪು ಬಟ್ಟೆ, ಕಪ್ಪು ಎಳ್ಳು, ಹೊದಿಕೆ, ಕಬ್ಬಿಣದ ಪಾತ್ರೆಗಳು ಇತ್ಯಾದಿಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.
* ಶನಿ ಜಯಂತಿಯಂದು ಅಸಹಾಯಕ ಜನರ ಸೇವೆ ಮಾಡುವ ಮೂಲಕ, ಅವರಿಗೆ ಸಹಾಯ ಮಾಡುವ ಮೂಲಕ, ನೀವು ಶನಿ ದೇವರನ್ನು ಮೆಚ್ಚಿಸಬಹುದು



Click it and Unblock the Notifications