Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ನಿರ್ಜಲ ಏಕಾದಶಿ 2022: ಈ ದಿನ ಇವುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ
ನಿರ್ಜಲ ಏಕಾದಶಿ ಎಲ್ಲಾ ಏಕಾದಶಿಗಳಿಗಿಂತ ಬಹಳ ಶ್ರೇಷ್ಠ. ಹಿಂದೂ ಧರ್ಮದಲ್ಲಿರುವ 24 ಏಕಾದಶಿಗಳಲ್ಲಿ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ಏಕಾದಶಿ ಅತ್ಯಂತ ಫಲಪ್ರದ, ಏಕೆಂದರೆ ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ಇತರ ಏಕಾದಶಿಗಳಲ್ಲಿ ಆಹಾರ ಸೇವಿಸಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಮತ್ತು ಎಲ್ಲಾ ಏಕಾದಶಿಗಳ ಪುಣ್ಯದ ಲಾಭವೂ ದೊರೆಯುತ್ತದೆ. ಈ ಪವಿತ್ರ ಏಕಾದಶಿಯನ್ನು ಪೂಜ್ಯಭಾವದಿಂದ ಆಚರಿಸುವವನು ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಅವಿನಾಶಿ ಸ್ಥಿತಿಯನ್ನು ಪಡೆಯುತ್ತಾನೆ.
ಮತ್ತೊಂದು ವಿಶೇಷತೆ ಎಂದರೆ ನಿರ್ಜಲ ಏಕಾದಶಿ ದಾನ. ಏಕಾದಶಿ ದಿನ ದಾನ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಆದರೆ ಯಾವೆಲ್ಲಾ ವಸ್ತುಗಳನ್ನು ಈ ದಿನ ಮಾಡಬೇಕು ಮತ್ತು ಏಕೆ ಮುಂದೆ ನೋಡೋಣ:

1. ನಿರ್ಜಲ ಏಕಾದಶಿ 2021
ವರ್ಷದ 24 ಏಕಾದಶಿಗಳು ಸಹ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿವೆ. ಏಕಾದಶಿ ತಿಥಿಯಂದು, ಮುಖ್ಯವಾಗಿ ನಾರಾಯಣನನ್ನು ಅಂದರೆ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಎಲ್ಲಾ ಏಕಾದಶಿಗಳಲ್ಲಿ, ಕೆಲವು ವಿಶೇಷವಾದ ಮಹತ್ವವನ್ನು ಹೊಂದಿವೆ ಮತ್ತು ಅವುಗಳಲ್ಲಿ ಒಂದು ನಿರ್ಜಲ ಏಕಾದಶಿ.
ನಿರ್ಜಲ ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿಗೆ ವರ್ಷದ ಉಳಿದ 23 ಏಕಾದಶಿಗಳ ಉಪವಾಸದಷ್ಟೇ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಉಪವಾಸವನ್ನು ಆಚರಿಸುವವರಿಗೆ ಮೋಕ್ಷ ಮತ್ತು ದೀರ್ಘಾಯುಷ್ಯವನ್ನು ಪಡೆಯುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಬೇಸಿಗೆಯಲ್ಲಿ ಬರುವ ನಿರ್ಜಲ ಏಕಾದಶಿಯಂದು ದಾನ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ನಿರ್ಜಲ ಏಕಾದಶಿ ಜೂನ್ 10ರಂದು ಆಚರಿಸಲಾಗುತ್ತಿದೆ.

2. ನಿರ್ಜಲ ಏಕಾದಶಿ ದಾನದ ಮಹತ್ವ
ಮಹರ್ಷಿ ವೇದವ್ಯಾಸಜೀಯವರು ಈ ಏಕಾದಶಿಯ ಕುರಿತು ಪಾಂಡವರಿಗೆ ಹೇಳುತ್ತಾ ಏಕಾದಶಿಯ ದಿನ ಯಾವ ದಾನ, ಧರ್ಮ, ಹವನ, ಪೂಜೆಗಳನ್ನು ಮಾಡಿದರೂ ಅದರ ಫಲವು ಪುನರುತ್ಥಾನಗೊಳ್ಳುತ್ತದೆ ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ಈ ದಿನದಂದು ಮಾಡಿದ ಪುಣ್ಯಗಳ ಫಲವು ಅನೇಕ ಜನ್ಮಗಳಲ್ಲಿ ವ್ಯಕ್ತಿಗೆ ಪ್ರಯೋಜನಕಾರಿಯಾಗಿದೆ.

3. ನಿರ್ಜಲ ಏಕಾದಶಿ 2021: ನಿರ್ಜಲ ಏಕಾದಶಿಯಂದು ಯಾವ ವಸ್ತುಗಳನ್ನು ದಾನ ಮಾಡಬೇಕು?
ಈ ದಿನದಂದು ಬ್ರಾಹ್ಮಣನಿಗೆ ಪಾದರಕ್ಷೆಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ದಿನದಂದು ಪಾದರಕ್ಷೆಗಳನ್ನು ದಾನ ಮಾಡುವ ವ್ಯಕ್ತಿಯು ಚಿನ್ನದ ವಿಮಾನದಲ್ಲಿ ಕುಳಿತು ಸ್ವರ್ಗಕ್ಕೆ ಹೋಗುತ್ತಾನೆ. ಅನ್ನದಾನ, ಕೊಡೆ ದಾನ, ಹಾಸಿಗೆ, ಮಣೆ, ಹಣ್ಣು ಮತ್ತು ವಸ್ತ್ರದಾನದ ಮಹತ್ವವನ್ನು ಈ ವ್ರತದಲ್ಲಿ ಹೇಳಲಾಗಿದೆ. ಈ ದಿನದಂದು ಬೇಳೆ ಮತ್ತು ಬೆಲ್ಲವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಪಾದರಕ್ಷೆ, ಛತ್ರಿ ಮತ್ತು ಬೀಸಣಿಗೆ ನೀಡುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಾವಿನಹಣ್ಣು ಮತ್ತು ಕಲ್ಲಂಗಡಿಗಳನ್ನು ದಾನ ಮಾಡುವುದು ಸಹ ಅತ್ಯಂತ ಶುಭ ಫಲ ನೀಡುತ್ತದೆ.

4. ತಂಪಾದ ವಸ್ತುಗಳನ್ನು ದಾನ ಮಾಡುವುದು ಶ್ರೇಷ್ಠ
ಈ ದಿನ ನೀರು ದಾನ ಮಾಡುವ ಭಕ್ತರಿಗೆ ವರ್ಷದ ಏಕಾದಶಿಯ ಫಲ ದೊರೆಯುತ್ತದೆ. ನಿರ್ಜಲ ಏಕಾದಶಿಯ ಉಪವಾಸವು ನೀರಿನ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಜ್ಯೇಷ್ಠ ಮಾಸದಲ್ಲಿ ಬರುವ ಈ ವ್ರತದಿಂದಾಗಿ ತಂಪು ನೀಡುವ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ತಿಂಗಳು ಬಿಸಿಯಾಗಿರುತ್ತದೆ ಮತ್ತು ಸೂರ್ಯನು ಪೂರ್ಣ ಬೇಸಿಗೆಯಲ್ಲಿದ್ದಾನೆ ಎಂದು ನಂಬಲಾಗಿದೆ. ಆದ್ದರಿಂದ, ನಿರ್ಜಲ ಏಕಾದಶಿಯಂದು ಶಾಖವನ್ನು ನಿವಾರಿಸುವ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

5. ನಿರ್ಜಲ ಏಕಾದಶಿಯಂದು ತುಳಸಿ ಪೂಜೆಯಿಂದ ಆಗುವ ಲಾಭಗಳು
ಏಕಾದಶಿ ತಿಥಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ಈ ದಿನ ತುಳಸಿಯನ್ನು ಪೂಜಿಸುವುದರಿಂದ ಶ್ರೀ ಹರಿಯು ತುಂಬಾ ಸಂತೋಷಪಡುತ್ತಾನೆ. ಸಂಜೆ ತುಳಸಿ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ ವಿಷ್ಣು ಸಹಸ್ರನಾಮವನ್ನು ಪಠಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಇರುವುದಿಲ್ಲ ಮತ್ತು ಸಾಲದಿಂದ ಮುಕ್ತಿ ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಳ ಮತ್ತು ಉದ್ಯೋಗದಲ್ಲಿ ಬಡ್ತಿ ದೊರೆಯುವುದು.



Click it and Unblock the Notifications











