Latest Updates
-
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್!
ಫೆ.1 ಮೌನಿ ಅಮಾವಾಸ್ಯೆ: ಚಂದ್ರದೋಷ ನಿವಾರಣೆಗೆ ಹೀಗೆ ಮಾಡಿ
ಹಿಂದೂ ಧರ್ಮದಲ್ಲಿ ಅಮವಾಸ್ಯೆ ಮತ್ತು ಹುಣ್ಣಮೆ ತಿಥಿಗೆ ವಿಶೇಷ ಮಹತ್ವವಿದೆ. ಈ ಎರಡೂ ದಿನಾಂಕಗಳು ಚಂದ್ರನ ನಿರ್ದಿಷ್ಟ ಸ್ಥಾನಗಳನ್ನು ಆಧರಿಸಿದ್ದು, ಈ ದಿನಗಳಂದು ಚಂದ್ರನನ್ನು ಪೂಜಿಸುವುದು ಫಲಪ್ರದವಾಗಿದೆ.
ಆದರೆ, ಎಲ್ಲಾ ಅಮವಾಸ್ಯೆ ತಿಥಿಗಳಲ್ಲಿ ಮೌನಿ ಅಮಾವಾಸ್ಯೆಗೆ ವಿಶೇಷ ಸ್ಥಾನವಿದ್ದು, ಇದನ್ನು ಪುರಾಣಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದಿನವು ಮಾನಸಿಕ ಸಮಸ್ಯೆಗಳಿರುವ ಅಥವಾ ಜಾತಕದಲ್ಲಿ ಚಂದ್ರನ ದೋಷಗಳನ್ನು ಹೊಂದಿರುವ ಜನರಿಗೆ ಬಹಳ ಮಂಗಳಕರ ಸಮಯವಾಗಿದೆ. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಸ್ನಾನವನ್ನು ಮಾಡುವುದರಿಂದ ಪಾಪಗಳೆಲ್ಲವೂ ಕಳೆದು, ಮೋಕ್ಷ ದೊರಕುವುದು ಎಂಬ ನಂಬಿಕೆಯಿದೆ. ಇಂತಹ ಅಮಾವಾಸ್ಯೆ ಈ ವರ್ಷ ಫೆಬ್ರವರಿ 1ರಂದು ಅಂದರೆ, ಇಂದು ಬಂದಿದೆ.

ಮೌನಿ ಅಮವಾಸ್ಯೆ 2022 : ದಿನಾಂಕ ಮತ್ತು ತಿಥಿ
ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಿವಾರಿಸಲು ಭಕ್ತರು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಜೊತೆಗೆ ದಿನವಿಡೀ ಉಪವಾಸವನ್ನು ಆಚರಿಸುತ್ತಾರೆ. ಕೆಲವರು ದಿನವಿಡೀ ಒಂದು ಮಾತನ್ನೂ ಆಡದೇ 'ಮೌನ ವ್ರತ'ವನ್ನು ಸಹ ಆಚರಿಸುತ್ತಾರೆ.
ದಿನಾಂಕ: ಫೆಬ್ರವರಿ 1 (ಮಂಗಳವಾರ)
ಅಮವಾಸ್ಯೆ ತಿಥಿ ಪ್ರಾರಂಭ - ಜನವರಿ 31, 2022 ರಂದು ಮಧ್ಯಾಹ್ನ 02:18 ಕ್ಕೆ
ಅಮವಾಸ್ಯೆಯ ತಿಥಿ ಅಂತ್ಯ - ಫೆಬ್ರವರಿ 1, 2022 ರಂದು 11:15ಕ್ಕೆ

ಮೌನಿ ಅಮವಾಸ್ಯೆ ಮಹತ್ವ:
ಹಿಂದೂ ನಂಬಿಕೆಯಂತೆ ಎರಡು ದಿನಗಳ ಕಾಲ ಅಮವಾಸ್ಯೆಯನ್ನು ಆಚರಿಸುವಾಗ ಮೊದಲ ದಿನ ಶ್ರಾದ್ಧ ಅಮವಾಸ್ಯೆ ಮತ್ತು ಮೌನಿ ಅಮವಾಸ್ಯೆ ಎಂದು ಗುರುತಿಸಲಾಗುತ್ತದೆ. ಎರಡನೇ ದಿನ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ, ದಾನ ಮಾಡುತ್ತಾರೆ. ಈ ದಿನವನ್ನು ಅಮೃತ ಯೋಗದ ದಿನ ಮತ್ತು ಕುಂಭಪರ್ವದ ದಿನ ಎಂದು ಕರೆಯಲಾಗುತ್ತದೆ. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಸ್ನಾನವನ್ನು ಮಾಡುವುದರಿಂದ ಪಾಪಗಳೆಲ್ಲವೂ ಕಳೆದು, ಮೋಕ್ಷ ದೊರಕುವುದು ಎಂಬ ನಂಬಿಕೆಯಿದೆ.

ಮೌನಿ ಅಮವಾಸ್ಯೆ ಪೂಜಾ ವಿಧಿ:
ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು.
ಸ್ನಾನ ಇತ್ಯಾದಿಗಳಿಂದ ನಿವೃತ್ತರಾದ ನಂತರ ಚಂದ್ರ ಕವಚವನ್ನು ಪಠಿಸಬೇಕು.
ದಿನವಿಡೀ ಹಣ್ಣುಹಂಪಲು ಸೇವಿಸಿ ಉಪವಾಸ ಮಾಡಿ, ರಾತ್ರಿ ಚಂದ್ರನಿಗೆ ಹಾಲಿನೊಂದಿಗೆ ಅರ್ಘ್ಯವನ್ನು ನೀರು ಬೆರೆಸಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಚಾಲ್ತಿಯಲ್ಲಿರುವ ಚಂದ್ರದೋಷದಿಂದ ಮುಕ್ತಿ ಸಿಗುತ್ತದೆ.



Click it and Unblock the Notifications