Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆ.1 ಮೌನಿ ಅಮಾವಾಸ್ಯೆ: ಚಂದ್ರದೋಷ ನಿವಾರಣೆಗೆ ಹೀಗೆ ಮಾಡಿ
ಹಿಂದೂ ಧರ್ಮದಲ್ಲಿ ಅಮವಾಸ್ಯೆ ಮತ್ತು ಹುಣ್ಣಮೆ ತಿಥಿಗೆ ವಿಶೇಷ ಮಹತ್ವವಿದೆ. ಈ ಎರಡೂ ದಿನಾಂಕಗಳು ಚಂದ್ರನ ನಿರ್ದಿಷ್ಟ ಸ್ಥಾನಗಳನ್ನು ಆಧರಿಸಿದ್ದು, ಈ ದಿನಗಳಂದು ಚಂದ್ರನನ್ನು ಪೂಜಿಸುವುದು ಫಲಪ್ರದವಾಗಿದೆ.
ಆದರೆ, ಎಲ್ಲಾ ಅಮವಾಸ್ಯೆ ತಿಥಿಗಳಲ್ಲಿ ಮೌನಿ ಅಮಾವಾಸ್ಯೆಗೆ ವಿಶೇಷ ಸ್ಥಾನವಿದ್ದು, ಇದನ್ನು ಪುರಾಣಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದಿನವು ಮಾನಸಿಕ ಸಮಸ್ಯೆಗಳಿರುವ ಅಥವಾ ಜಾತಕದಲ್ಲಿ ಚಂದ್ರನ ದೋಷಗಳನ್ನು ಹೊಂದಿರುವ ಜನರಿಗೆ ಬಹಳ ಮಂಗಳಕರ ಸಮಯವಾಗಿದೆ. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಸ್ನಾನವನ್ನು ಮಾಡುವುದರಿಂದ ಪಾಪಗಳೆಲ್ಲವೂ ಕಳೆದು, ಮೋಕ್ಷ ದೊರಕುವುದು ಎಂಬ ನಂಬಿಕೆಯಿದೆ. ಇಂತಹ ಅಮಾವಾಸ್ಯೆ ಈ ವರ್ಷ ಫೆಬ್ರವರಿ 1ರಂದು ಅಂದರೆ, ಇಂದು ಬಂದಿದೆ.

ಮೌನಿ ಅಮವಾಸ್ಯೆ 2022 : ದಿನಾಂಕ ಮತ್ತು ತಿಥಿ
ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಿವಾರಿಸಲು ಭಕ್ತರು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಜೊತೆಗೆ ದಿನವಿಡೀ ಉಪವಾಸವನ್ನು ಆಚರಿಸುತ್ತಾರೆ. ಕೆಲವರು ದಿನವಿಡೀ ಒಂದು ಮಾತನ್ನೂ ಆಡದೇ 'ಮೌನ ವ್ರತ'ವನ್ನು ಸಹ ಆಚರಿಸುತ್ತಾರೆ.
ದಿನಾಂಕ: ಫೆಬ್ರವರಿ 1 (ಮಂಗಳವಾರ)
ಅಮವಾಸ್ಯೆ ತಿಥಿ ಪ್ರಾರಂಭ - ಜನವರಿ 31, 2022 ರಂದು ಮಧ್ಯಾಹ್ನ 02:18 ಕ್ಕೆ
ಅಮವಾಸ್ಯೆಯ ತಿಥಿ ಅಂತ್ಯ - ಫೆಬ್ರವರಿ 1, 2022 ರಂದು 11:15ಕ್ಕೆ

ಮೌನಿ ಅಮವಾಸ್ಯೆ ಮಹತ್ವ:
ಹಿಂದೂ ನಂಬಿಕೆಯಂತೆ ಎರಡು ದಿನಗಳ ಕಾಲ ಅಮವಾಸ್ಯೆಯನ್ನು ಆಚರಿಸುವಾಗ ಮೊದಲ ದಿನ ಶ್ರಾದ್ಧ ಅಮವಾಸ್ಯೆ ಮತ್ತು ಮೌನಿ ಅಮವಾಸ್ಯೆ ಎಂದು ಗುರುತಿಸಲಾಗುತ್ತದೆ. ಎರಡನೇ ದಿನ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ, ದಾನ ಮಾಡುತ್ತಾರೆ. ಈ ದಿನವನ್ನು ಅಮೃತ ಯೋಗದ ದಿನ ಮತ್ತು ಕುಂಭಪರ್ವದ ದಿನ ಎಂದು ಕರೆಯಲಾಗುತ್ತದೆ. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಸ್ನಾನವನ್ನು ಮಾಡುವುದರಿಂದ ಪಾಪಗಳೆಲ್ಲವೂ ಕಳೆದು, ಮೋಕ್ಷ ದೊರಕುವುದು ಎಂಬ ನಂಬಿಕೆಯಿದೆ.

ಮೌನಿ ಅಮವಾಸ್ಯೆ ಪೂಜಾ ವಿಧಿ:
ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು.
ಸ್ನಾನ ಇತ್ಯಾದಿಗಳಿಂದ ನಿವೃತ್ತರಾದ ನಂತರ ಚಂದ್ರ ಕವಚವನ್ನು ಪಠಿಸಬೇಕು.
ದಿನವಿಡೀ ಹಣ್ಣುಹಂಪಲು ಸೇವಿಸಿ ಉಪವಾಸ ಮಾಡಿ, ರಾತ್ರಿ ಚಂದ್ರನಿಗೆ ಹಾಲಿನೊಂದಿಗೆ ಅರ್ಘ್ಯವನ್ನು ನೀರು ಬೆರೆಸಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಚಾಲ್ತಿಯಲ್ಲಿರುವ ಚಂದ್ರದೋಷದಿಂದ ಮುಕ್ತಿ ಸಿಗುತ್ತದೆ.



Click it and Unblock the Notifications