ಸನ್ಯಾಸಿಗಳು ಆಚರಿಸಿದ ಮೌನವೃತದ ಕಥೆ

Kannada Zen story
ನಾಲ್ಕು ಜನ ಯುವ ಸನ್ಯಾಸಿಗಳು ಒಂದು ಕಡೆ ಸೇರಿ ಪರಸ್ಪರ ಮಾತನಾಡಿಕೊಂಡು ಎರಡು ವಾರಗಳ ಕಾಲ ಮೌನವೃತ ಮಾಡುತ್ತಾ ಧ್ಯಾನ ಮಾಡಲು ತೀರ್ಮಾನಿಸಿದರು. ಆ ರೀತಿ ನಿರ್ಧರಿಸಿದ ರಾತ್ರಿ ಮೇಣದ ಬತ್ತಿ ಹಚ್ಚಿ ಧ್ಯಾನ ಮಾಡುತ್ತಿದ್ದಾಗ ಜೋರಾಗಿ ಗಾಳಿ ಬೀಸಿ ಅಲ್ಲಿದ್ದ ಮೇಣದ ದೀಪವನ್ನು ನಂದಿಸಿತು. ಆಗ ಅಲ್ಲಿ ಪೂರ್ತಿ ಕತ್ತಲು ಆವರಿಸಿದ ಕಾರಣ ಅವರಿಗೆ ಏನೂ ಕಾಣುತ್ತಿರಲಿಲ್ಲ.

ಆಗ ಅವರಲ್ಲಿ ಒಬ್ಬ ಸನ್ಯಾಸಿ "ಅಯ್ಯೋ ಮೇಣದ ಬೆಳಕು ಆರಿ ಹೋಯಿತು, ಏನೂ ಕಾಣುತ್ತಿಲ್ಲ, ದೀಪ ಹಚ್ಚಿ " ಎಂದು ಪಿಸುಗುಟ್ಟಿದನು.

ಆಗ ಎರಡನೆಯವನು " ಹೇ, ಏಕೆ ಪಿಸುಗುಟ್ಟುತ್ತಿರುವೆ, ಇವತ್ತಿನಿಂದ ನಾವು ಮೌನ ವೃತದಲ್ಲಿ ಇದ್ದೇವೆ, ಮರೆಯಬೇಡ" ಎಂದು ಹೇಳಿದನು.

ಎರಡನೆಯವನು ಮಾತು ಕೇಳಿದ ಮೂರನೆಯ ಸನ್ಯಾಸಿ "ನೀವಿಬ್ಬರು ಸೇರಿ ಮೌನವೃತವನ್ನು ಮುರಿದು ಹಾಕಿದಿರಿ" ಎಂದು ಹೇಳಿದನು.

ಇವರ ಮಾತುಗಳನ್ನು ಕೇಳುತ್ತಿದ್ದ ನಾಲ್ಕನೇ ವ್ಯಕ್ತಿ ಜೋರಾಗಿ ನಕ್ಕು "ಹೇ ನಾನೊಬ್ಬ ಮಾತ್ರ ಮಾತನಾಡಲಿಲ್ಲ" ಎಂದು ಹೇಳಿದನು!

English summary

Kannada Zen story | Inspirational short stories | ಝೆನ್ ಕಥೆ : ಸನ್ಯಾಸಿಗಳು ಆಚರಿಸಿದ ಮೌನವೃತದ ಕಥೆ

Four monks decided not utter a word for two weeks in order to indulge in silent meditation. One the very first day by night fall the flame of the candle flickered and went off throwing them into darkness.
X
Desktop Bottom Promotion