Latest Updates
-
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ!
ಮಹಾಶಿವರಾತ್ರಿ: ಈ ದಿನ ಮರೆತು ಕೂಡ ಈ ಕೆಲಸಗಳನ್ನು ಮಾಡದಿರಿ
ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ವಿಶೇಷ ಮಹತ್ವವಿದ್ದು, ಈ ದಿನದಂದು, ಮಹಾದೇವನನ್ನು ಮೆಚ್ಚಿಸಲು ಭಕ್ತರು ಬಹಳಷ್ಟು ಆಚರಣೆಗಳೊಂದಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಶಿವನನ್ನು ಮೆಚ್ಚಿಸುವುದು ತುಂಬಾ ಸುಲಭ ಎನ್ನಲಾಗುತ್ತದೆ. ಮನಸ್ಸಿನಲ್ಲಿ ನಿಜವಾದ ನಂಬಿಕೆಯಿಂದ ಹೂವು, ಹಣ್ಣು ಅರ್ಪಿಸಿದರೆ ಸಾಕು, ಆತ ಸಂತೋಷಗೊಂಡು ಭಕ್ತರ ಪ್ರತಿಯೊಂದು ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ. ಆದರೆ ಅವನನ್ನು ಮೆಚ್ಚಿಸುವುದು ಎಷ್ಟು ಸುಲಭವೋ, ಪೂಜೆಯಲ್ಲಿ ನೀವು ಮಾಡುವ ಸಣ್ಣ ತಪ್ಪಿನಿಂದ ಶಿವ ಅಷ್ಟೇ ಬೇಗ ಕೋಪಗೊಳ್ಳಬಹುದು. ಹಾಗಾದರೆ ಶಿವರಾತ್ರಿಯಂದು ಆತನಿಗೆ ಕೋಪ ತರಿಸುವ ವಿಚಾರಗಳನ್ನು ಯಾವುವು ನೋಡೋಣ.
ಈ ಮಹಾಶಿವರಾತ್ರಿಯಂದು ಮರೆತೂ ಈ ಕೆಲಸ ಮಾಡಬೇಡಿ, ಇದರಿಂದ ಶಿವನ ಕೃಪೆಗೆ ಬದಲಾಗಿ ಕೋಪಕ್ಕೆ ಗುರಿಯಾಗಬೇಕಾಗಬಹುದು:

1. ತುಳಸಿಯನ್ನು ಬಳಸಬೇಡಿ:
ತುಳಸಿಯನ್ನು ಧರ್ಮಗ್ರಂಥಗಳಲ್ಲಿ ಪವಿತ್ರ ಮತ್ತು ದೇವತೆಯಂತೆ ಪರಿಗಣಿಸಲಾಗುತ್ತದೆ. ಜೊತೆಗೆ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ಕೂಡ ಮಂಗಳಕರ. ಆದರೆ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ಶಾಸ್ತ್ರಗಳ ಪ್ರಕಾರ, ತುಳಸಿ, ವಿಷ್ಣುವಿನ ಪ್ರಿಯವಾದ ವಸ್ತು. ಆದ್ದರಿಂದ ಅದನ್ನು ಶಿವಲಿಂಗದ ಮೇಲೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.

2. ಈ ಸಮಯದಲ್ಲಿ ಪೂಜೆ ಬೇಡ:
ವಿದ್ವಾಂಸರ ಪ್ರಕಾರ, ಪೂಜೆಗೆ ಸರಿಯಾದ ಸಮಯವನ್ನು ಮುಖ್ಯವಾಗಿ ಬೆಳಿಗ್ಗೆ ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಕೆಲಸದ ವಿಚಾರದಲ್ಲಿ ಸ್ವಲ್ಪ ತಡವಾಗಬಹುದು. ಆದರೆ ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳ ನಂತರ ಭೋಲೇನಾಥನನ್ನು ಪೂಜಿಸಬೇಕೆಂಬುದನ್ನು ನೆನಪಿನಲ್ಲಿಡಿ. ಮುಂಜಾನೆಯೇ ಪೂಜೆ ಮಾಡುವುದರಿಂದ ಶಿವನು ಪ್ರಸನ್ನನಾಗುತ್ತಾನೆ. ಆ ನಂತರದ ಸಮಯದಲ್ಲಿ ಅಂದರೆ ಮಧ್ಯಾಹ್ನದ ವೇಳೆ ಶಿವ ಪೂಜೆ ಒಳ್ಳೆಯದಲ್ಲ.

3. ಈ ಪಾತ್ರಗಳಿಂದ ಅಭಿಷೇಕ ಮಾಡಬೇಡಿ:
ಶಿವಪೂಜೆಯಲ್ಲಿ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಆದರೆ ಆದಿಯೋಗಿಯ ಭಕ್ತರು ಶಿವರಾತ್ರಿಯ ದಿನ ಅಥವಾ ಶಿವಪೂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳನ್ನು ಅಭಿಷೇಕಕ್ಕೆ ಬಳಸಬೇಡಿ. ನೀವು ಶಿವಲಿಂಗವನ್ನು ಬೆಳ್ಳಿ, ಚಿನ್ನ ಅಥವಾ ಕಂಚಿನ ಪಾತ್ರೆಯಿಂದ ಮಾತ್ರ ಅಭಿಷೇಕಿಸಬೇಕು ಎಂಬುದನ್ನು ನೆನಪಿಡಿ, ಇದರಿಂದ ಭೋಲೇನಾಥನ ವಿಶೇಷ ಆಶೀರ್ವಾದವು ನಿಮ್ಮ ಮೇಲೆ ಇರುವುದು.

4. ಈ ಹೂವು ಪೂಜೆಗೆ ನಿಷಿಧ್ಧ:
ಬಿಳಿ ಹೂವುಗಳು ಶಿವನಿಗೆ ತುಂಬಾ ಪ್ರಿಯವಾಗಿವೆ, ಆದರೆ ಬಿಳಿಯಾಗಿದ್ದರೂ ಸಹ, ಶಿವಾರಾಧನೆಯಲ್ಲಿ ಕೇದಿಗೆ ಹೂವನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಶಿವರಾತ್ರಿಯ ದಿನದಂದು, ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಬಯಸಿದರೆ, ಶಿವಲಿಂಗದ ಮೇಲೆ ಕೇದಿಗೆ ಹೂವನ್ನು ಅರ್ಪಿಸಬೇಡಿ. ಇಲ್ಲದಿದ್ದರೆ ಶಿವ ಕೋಪಗೊಳ್ಳಬಹುದು.



Click it and Unblock the Notifications