Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಹಾಶಿವರಾತ್ರಿ: ಈ ದಿನ ಮರೆತು ಕೂಡ ಈ ಕೆಲಸಗಳನ್ನು ಮಾಡದಿರಿ
ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ವಿಶೇಷ ಮಹತ್ವವಿದ್ದು, ಈ ದಿನದಂದು, ಮಹಾದೇವನನ್ನು ಮೆಚ್ಚಿಸಲು ಭಕ್ತರು ಬಹಳಷ್ಟು ಆಚರಣೆಗಳೊಂದಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಶಿವನನ್ನು ಮೆಚ್ಚಿಸುವುದು ತುಂಬಾ ಸುಲಭ ಎನ್ನಲಾಗುತ್ತದೆ. ಮನಸ್ಸಿನಲ್ಲಿ ನಿಜವಾದ ನಂಬಿಕೆಯಿಂದ ಹೂವು, ಹಣ್ಣು ಅರ್ಪಿಸಿದರೆ ಸಾಕು, ಆತ ಸಂತೋಷಗೊಂಡು ಭಕ್ತರ ಪ್ರತಿಯೊಂದು ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ. ಆದರೆ ಅವನನ್ನು ಮೆಚ್ಚಿಸುವುದು ಎಷ್ಟು ಸುಲಭವೋ, ಪೂಜೆಯಲ್ಲಿ ನೀವು ಮಾಡುವ ಸಣ್ಣ ತಪ್ಪಿನಿಂದ ಶಿವ ಅಷ್ಟೇ ಬೇಗ ಕೋಪಗೊಳ್ಳಬಹುದು. ಹಾಗಾದರೆ ಶಿವರಾತ್ರಿಯಂದು ಆತನಿಗೆ ಕೋಪ ತರಿಸುವ ವಿಚಾರಗಳನ್ನು ಯಾವುವು ನೋಡೋಣ.
ಈ ಮಹಾಶಿವರಾತ್ರಿಯಂದು ಮರೆತೂ ಈ ಕೆಲಸ ಮಾಡಬೇಡಿ, ಇದರಿಂದ ಶಿವನ ಕೃಪೆಗೆ ಬದಲಾಗಿ ಕೋಪಕ್ಕೆ ಗುರಿಯಾಗಬೇಕಾಗಬಹುದು:

1. ತುಳಸಿಯನ್ನು ಬಳಸಬೇಡಿ:
ತುಳಸಿಯನ್ನು ಧರ್ಮಗ್ರಂಥಗಳಲ್ಲಿ ಪವಿತ್ರ ಮತ್ತು ದೇವತೆಯಂತೆ ಪರಿಗಣಿಸಲಾಗುತ್ತದೆ. ಜೊತೆಗೆ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ಕೂಡ ಮಂಗಳಕರ. ಆದರೆ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ಶಾಸ್ತ್ರಗಳ ಪ್ರಕಾರ, ತುಳಸಿ, ವಿಷ್ಣುವಿನ ಪ್ರಿಯವಾದ ವಸ್ತು. ಆದ್ದರಿಂದ ಅದನ್ನು ಶಿವಲಿಂಗದ ಮೇಲೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.

2. ಈ ಸಮಯದಲ್ಲಿ ಪೂಜೆ ಬೇಡ:
ವಿದ್ವಾಂಸರ ಪ್ರಕಾರ, ಪೂಜೆಗೆ ಸರಿಯಾದ ಸಮಯವನ್ನು ಮುಖ್ಯವಾಗಿ ಬೆಳಿಗ್ಗೆ ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಕೆಲಸದ ವಿಚಾರದಲ್ಲಿ ಸ್ವಲ್ಪ ತಡವಾಗಬಹುದು. ಆದರೆ ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳ ನಂತರ ಭೋಲೇನಾಥನನ್ನು ಪೂಜಿಸಬೇಕೆಂಬುದನ್ನು ನೆನಪಿನಲ್ಲಿಡಿ. ಮುಂಜಾನೆಯೇ ಪೂಜೆ ಮಾಡುವುದರಿಂದ ಶಿವನು ಪ್ರಸನ್ನನಾಗುತ್ತಾನೆ. ಆ ನಂತರದ ಸಮಯದಲ್ಲಿ ಅಂದರೆ ಮಧ್ಯಾಹ್ನದ ವೇಳೆ ಶಿವ ಪೂಜೆ ಒಳ್ಳೆಯದಲ್ಲ.

3. ಈ ಪಾತ್ರಗಳಿಂದ ಅಭಿಷೇಕ ಮಾಡಬೇಡಿ:
ಶಿವಪೂಜೆಯಲ್ಲಿ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಆದರೆ ಆದಿಯೋಗಿಯ ಭಕ್ತರು ಶಿವರಾತ್ರಿಯ ದಿನ ಅಥವಾ ಶಿವಪೂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳನ್ನು ಅಭಿಷೇಕಕ್ಕೆ ಬಳಸಬೇಡಿ. ನೀವು ಶಿವಲಿಂಗವನ್ನು ಬೆಳ್ಳಿ, ಚಿನ್ನ ಅಥವಾ ಕಂಚಿನ ಪಾತ್ರೆಯಿಂದ ಮಾತ್ರ ಅಭಿಷೇಕಿಸಬೇಕು ಎಂಬುದನ್ನು ನೆನಪಿಡಿ, ಇದರಿಂದ ಭೋಲೇನಾಥನ ವಿಶೇಷ ಆಶೀರ್ವಾದವು ನಿಮ್ಮ ಮೇಲೆ ಇರುವುದು.

4. ಈ ಹೂವು ಪೂಜೆಗೆ ನಿಷಿಧ್ಧ:
ಬಿಳಿ ಹೂವುಗಳು ಶಿವನಿಗೆ ತುಂಬಾ ಪ್ರಿಯವಾಗಿವೆ, ಆದರೆ ಬಿಳಿಯಾಗಿದ್ದರೂ ಸಹ, ಶಿವಾರಾಧನೆಯಲ್ಲಿ ಕೇದಿಗೆ ಹೂವನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಶಿವರಾತ್ರಿಯ ದಿನದಂದು, ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಬಯಸಿದರೆ, ಶಿವಲಿಂಗದ ಮೇಲೆ ಕೇದಿಗೆ ಹೂವನ್ನು ಅರ್ಪಿಸಬೇಡಿ. ಇಲ್ಲದಿದ್ದರೆ ಶಿವ ಕೋಪಗೊಳ್ಳಬಹುದು.



Click it and Unblock the Notifications