Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಶಿವರಾತ್ರಿಗೆ ಉಪವಾಸ ಮಾಡುವವರು ಪಾಲಿಸಲೇಬೇಕಾದ ವ್ರತದ ನಿಯಮಗಳಿವು
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿಯನ್ನು ಫೆಬ್ರವರಿ 18ರಂದು ಆಚರಿಸಲಾಗುವುದು. ಶಿವ ರಾತ್ರಿಯಲ್ಲಿ ಜಾಗರಣೆ ಹಾಗೂ ಉಪವಾಸ ವ್ರತಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ಶಿವ ಭಕ್ತರು ಕೆಲವೊಂದು ನಿಯಮಗಳನ್ನು ಪಾಲಿಸಿ ಉಪವಾಸವಿದ್ದು ಶಿವರಾತ್ರಿ ಆಚರಿಸಿದರೆ ಅದರ ಫಲ ಅವರಿಗೆ ಸಿಗಲಿದೆ.
ಶಿವ ರಾತ್ರಿ ವ್ರತವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಅದರಿಂದ ಅಶ್ವಮೇಧ ಯಾಗ ಮಾಡುವುದಕ್ಕಿಂತ ಹೆಚ್ಚು ಪುಣ್ಯ ಬರುತ್ತದೆ.
ಶಿವರಾತ್ರಿಯಂದು ಭಕ್ತರು ಮುಂಜಾನೆ ಎದ್ದು ನದಿಯಲ್ಲಿ ಪುಣ್ಯ ಸ್ನಾನ ಮಾಡಬೇಕು, ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಸ್ವಲ್ಪ ಎಳ್ಳು ಹಾಕು ಕುದಿಸಿ, ಆ ನೀರಿನಲ್ಲಿ ಸ್ನಾನ ಮಾಡಿ. ನಂತರ ಮಡಿ ವಸ್ತ್ರ ಧರಿಸಿ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು.

ಶಿವ ಪೂಜೆ
ಶಿವನಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ, ಹೂ, ಹಣ್ಣುಗಳನ್ನು ಅರ್ಪಿಸಿ, ಶಿವನ ಮಂತ್ರಗಳನ್ನು ಪಠಿಸಿ, ಇದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು.

ಶಿವರಾತ್ರಿ ಉಪವಾಸ ವ್ರತ ಮಾಡುವವರು ಪಾಲಿಸಬೇಕಾದ ನಿಯಮಗಳು
ಉಪವಾಸ ಯಾವಾಗ ಪ್ರಾರಂಭ ಮಾಡಬೇಕು, ಯಾವಾಗ ಮುಕ್ತಾಯ?
ಉಪವಾಸ ಬೆಳಗ್ಗೆಯಿಂದ ಪ್ರಾರಂಭ ಮಾಡಬೇಕು. ಇಡೀ ದಿನ ಉಪವಾಸ ಇರಬೇಕು. ಈ ಉಪವಾಸವನ್ನು ಮಾರನೇಯ ದಿನ ಪಾರಣ ಸಮಯದಲ್ಲಿ ಮುರಿಯಬೇಕು.

ಉಪವಾಸದ ಜೊತೆ ಜಾಗರಣೆ ಮಾಡಬೇಕು
ನೀವು ಉಪವಾಸ ಮಾಡದರೆ ಅದರ ಸಂಪೂರ್ಣ ಫಲ ಪಡೆಯಲು ಆ ರಾತ್ರಿ ಜಾಗರಣೆ ಮಾಡಬೇಕು. ಮನೆಯಲ್ಲಿ ಅಥವಾ ದೇವಾಲಯದಲ್ಲಿ ಈ ದಿನ ಶಿವನ ಜಪ ಮಾಡುತ್ತಾ ಜಾಗರಣೆ ಮಾಡಬೇಕು.

ಉಪವಾಸ ಹೇಗಿರಬೇಕು?
ಕಟ್ಟುನಿಟ್ಟಿನ ಉಪವಾಸ ಮಾಡುವುದಾದರೆ ಯಾವ ಆಹಾರ ಮುಟ್ಟುವಂತಿಲ್ಲ, ನೀರು ಕೂಡ ಮುಟ್ಟುವಂತಿಲ್ಲ. ಇನ್ನು ಈ ರೀತಿಯ ಕಟ್ಟು ನಿಟ್ಟಿನ ವ್ರತ ಮಾಡಲು ಸಾಧ್ಯವಾಗದಿದ್ದರೆ ಹಾಲು, ನೀರು, ಹಣ್ಣು ಅಷ್ಟೇ ಸೇವಿಸಬೇಕು.

ಉಪವಾಸದ ಮುಖ್ಯ ಉದ್ದೇಶ
ಕೆಟ್ಟ ಆಲೋಚನೆ, ಕೆಟ್ಟ ಸಂಗ, ಕೆಟ್ಟ ಪದಗಳು ಎಲ್ಲವೂ ನಮ್ಮಿಂದ ದೂರವಾಗಲಿ ಎಂದು ಉಪವಾಸ ವ್ರತ ಮಾಡಲಾಗುವುದು. ಎಲ್ಲಾ ಕೆಡಕು ದೂರವಾಗುವಂತೆ ಮಾಡು ಎಂದು ಶಿವನಲ್ಲಿ ಪ್ರಾರ್ಥಿಸಲಾಗುವುದು.
'ವಿವಾಹಿತ ಮಹಿಳೆ ತನ್ನ ಗಂಡ, ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ವ್ರತ ಮಾಡಲಾಗುವುದು. ಇನ್ನು ಅವಾಹಿತ ಹೆಣ್ಣು ಮಕ್ಕಳು ಶಿವನಂಥ ಗಂಡ ಸಿಗಲಿ ಎಂದು ಬಯಸಿ ಉಪವಾಸವಿದ್ದು ಶಿವನ ಆರಾಧಿಸಲಾಗುವುದು.

ಉಪವಾಸ ವ್ರತ ಕೈಗೊಳ್ಳುವುದರಿಂದ ದೊರೆಯುವ ಪ್ರಯೋಜನಗಳು
* ಈ ರೀತಿಯ ವ್ರತ ಪಾಲಿಸುವುದರಿಂದ ದಿನ ನಿತ್ಯದ ಬದುಕಿನಿಂದ ಒಂದು ಬದಲಾವಣೆ ಉಂಟಾಗುತ್ತದೆ.
* ಉಪವಾಸ ಮಾಡುವುದರಿಂದ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಬಹುದು. ಅಲ್ಲದೆ ಉಪವಾಸ ಮಾಡುವ ಮೂಲಕ ತಾಮಸ ಗುಣ ನಿಯಂತ್ರಿಸಬಹುದು.
* ನಮ್ಮನ್ನು ನಾವು ನಿಯಂತ್ರಿಸುವ ಸಾಮರ್ಥ್ಯ ಬೆಳೆಯುವುದು.
* ಒಳ್ಳೆಯ ಆಲೋಚನೆ ಮೂಡುವುದು, ಮನಸ್ಸಿನಲ್ಲಿ ನೆಮ್ಮದಿ, ಶಾಂತಿ ಇರುತ್ತದೆ.



Click it and Unblock the Notifications











