Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ಮಹಾಶಿವರಾತ್ರಿ 2023: ಶಿವನಿಗೆ ಅಪ್ಪಿತಪ್ಪಿಯೂ ಇವುಗಳನ್ನು ಅರ್ಪಿಸಬೇಡಿ, ಅವನ ಕೆಂಗಣ್ಣಿಗೆ ಗುರಿಯಾಗಬಹುದು!
ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವವಿದ್ದು, ಈ ವರ್ಷ ಮಹಾಶಿವರಾತ್ರಿಯನ್ನು ಫೆಬ್ರವರಿ 18 ರಂದು ಶನಿವಾರ ಆಚರಿಸಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಶಿವ ಹಾಗೂ ಪಾರ್ವತಿಯ ವಿವಾಹವಾದ ದಿನವೇ ಮಹಾಶಿವರಾತ್ರಿ. ಈ ದಿನ ಉಪವಾಸವನ್ನು ಆಚರಿಸಿ, ಶಿವ- ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಜೊತೆಗೆ ಈ ದಿನದಂದು ರುದ್ರಾಭಿಷೇಕ ಮಾಡುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಮಹಾಶಿವರಾತ್ರಿಯ ದಿನ, ಶಿವನನ್ನು ಮೆಚ್ಚಿಸಲು ಹಾಲು, ಶ್ರೀಗಂಧ, ಭಸ್ಮ ಮುಂತಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಆದರೆ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಶಿವನಿಗೆ ಪ್ರಿಯವಲ್ಲದ ವಸ್ತುಗಳನ್ನು ಅರ್ಪಿಸಿ ಬಿಡುತ್ತೇವೆ. ಇದರಿಂದ ಶಿವನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹಾಗಾದರೆ, ಶಿವಲಿಂಗಕ್ಕೆ ಯಾವ ವಸ್ತುಗಳನ್ನು ಅರ್ಪಿಸಬಾರದು ಎಂದು ಶಿವಪುರಾಣದಲ್ಲಿ ಹೇಳಲಾಗಿದೆ ಎಂಬುದನ್ನು ನೋಡೋಣ.
ಶಿವಪುರಾಣದ ಪ್ರಕಾರ, ಶಿವಲಿಂಗಕ್ಕೆ ಯಾವ ವಸ್ತುಗಳನ್ನು ಅರ್ಪಿಸಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅರಿಶಿನ:
ಅರಿಶಿನವನ್ನು ಶಿವನಿಗೆ ಅರ್ಪಿಸುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ, ಶಿವಲಿಂಗವು ಪುರುಷ ಅಂಶದ ಸಂಕೇತವಾಗಿದೆ. ಆದರೆಮ ಅರಿಶಿನವು ಮಹಿಳೆಯರಿಗೆ ಸಂಬಂಧಿಸಿದೆ. ಈ ಕಾರಣಕ್ಕಾಗಿ, ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.

ಕುಂಕುಮ:
ಶಿವನನ್ನು ಹೊರತುಪಡಿಸಿ ಎಲ್ಲಾ ದೇವರು ಮತ್ತು ದೇವತೆಗಳಿಗೆ ಕುಂಕುಮ ಪ್ರಿಯವಾಗಿದೆ. ಹಿಂದೂ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ, ಶಿವನಿಗೆ ಕುಂಕುಮವನ್ನು ಅರ್ಪಿಸಲಾಗುವುದಿಲ್ಲ. ಏಕೆಂದರೆ, ಇಲ್ಲಿ ಶಿವನು ವಿನಾಶಕ. ಆದ್ದರಿಂದ, ಶಿವನಿಗೆ ಕುಂಕುಮವನ್ನು ಅರ್ಪಿಸುವ ಬದಲು, ಶ್ರೀಗಂಧದೊಂದಿಗೆ ತಿಲಕವನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಶಂಖದಿಂದ ನೀರು:
ಶಾಸ್ತ್ರಗಳ ಪ್ರಕಾರ, ಶಿವನು ಶಂಖಚೂಡ ಎಂಬ ರಾಕ್ಷಸನನ್ನು ಕೊಂದನು. ಆದ್ದರಿಂದ ಶಿವನಿಗೆ ಶಂಖದಿಂದ ನೀರನ್ನು ಅರ್ಪಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಶಂಖವನ್ನು ವಿಷ್ಣುವಿನ ಭಕ್ತನಾಗಿದ್ದ ಅಸುರನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ವಿಷ್ಣುವನ್ನು ಶಂಖದಿಂದ ಪೂಜಿಸಲಾಗುತ್ತದೆ.

ತುಳಸಿ:
ತುಳಸಿಯನ್ನು ಸಹ ಶಿವನಿಗೆ ಅರ್ಪಿಸುವುದಿಲ್ಲ. ಶಿವ ಪುರಾಣದ ಪ್ರಕಾರ, ಜಲಂಧರ ಎಂಬ ರಾಕ್ಷಸನು ಶಿವನಿಂದ ಕೊಲ್ಲಲ್ಪಟ್ಟನು. ತನ್ನ ಪತ್ನಿಯ ಪರಿಶುದ್ಧತೆಯಿಂದ ಜಲಂಧರ ಯಾರಿಂದಲೂ ಸೋಲಲಾರದ ವರವನ್ನು ಪಡೆದಿದ್ದರು. ಆದರೆ ಜಲಂಧರನು ಸಾಯಲು, ವಿಷ್ಣುವು ಜಲಂಧರನ ಹೆಂಡತಿ ತುಳಸಿಯ ಶುದ್ಧತೆಯನ್ನು ಭಂಗಗೊಳಿಸಬೇಕಾಯಿತು. ತನ್ನ ಗಂಡನ ಸಾವಿನಿಂದ ಕೋಪಗೊಂಡ ತುಳಸಿ ಶಿವನನ್ನು ಬಹಿಷ್ಕರಿಸಿದಳು. ಆದುದರಿಂದ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ.

ಕೇದಿಗೆ ಹೂ:
ಶಾಸ್ತ್ರಗಳ ಪ್ರಕಾರ, ಶಿವನಿಗೆ ಕೇದಿಗೆ ಹೂವನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಇದರ ಹಿಂದೆ ಒಂದು ಕಥೆಯಿದೆ, ಅದರ ಪ್ರಕಾರ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ನಡುವೆ ಇಬ್ಬರಲ್ಲಿ ಯಾರು ಉತ್ತಮ ಎಂದು ವಿವಾದವಾಯಿತಂತೆ. ಬ್ರಹ್ಮ ಬ್ರಹ್ಮಾಂಡದ ಸೃಷ್ಟಿಕರ್ತನಾಗಿ ಶ್ರೇಷ್ಠನೆಂದು ಹೇಳಿಕೊಳ್ಳುತ್ತಿದ್ದನು ಮತ್ತು ಭಗವಾನ್ ವಿಷ್ಣುವು ಇಡೀ ಸೃಷ್ಟಿಯನ್ನು ನಿರ್ವಹಿಸುವವನಾಗಿ ತನ್ನನ್ನು ತಾನು ಶ್ರೇಷ್ಠನೆಂದು ಕರೆದುಕೊಂಡನು. ಆಗ ಅಲ್ಲಿ ವಿರಾಟ ಲಿಂಗ ಕಾಣಿಸಿತು. ಈ ಲಿಂಗದ ಅಂತ್ಯವನ್ನು ಮೊದಲು ಕಂಡುಕೊಳ್ಳುವವನನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುವುದು ಎಂದು ಎರಡೂ ದೇವರುಗಳ ಒಪ್ಪಿಗೆಯಿಂದ ನಿರ್ಧರಿಸಿದರು. ಆದ್ದರಿಂದ ಇಬ್ಬರೂ ಶಿವಲಿಂಗದ ತುದಿಗಳನ್ನು ಹುಡುಕಲು ವಿರುದ್ಧ ದಿಕ್ಕಿನಲ್ಲಿ ಹೋದರು. ಲಿಂಗದ ಕೊನೆ ಸಿಗದೇ, ವಿಷ್ಣು ಹಿಂತಿರುಗಿದನು. ಬ್ರಹ್ಮ ಕೂಡ ಯಶಸ್ವಿಯಾಗಲಿಲ್ಲ ಆದರೆ, ಅವನು ಬಂದು ವಿಷ್ಣುವಿಗೆ ತಾನು ಅಂತ್ಯವನ್ನು ತಲುಪಿದ್ದೇನೆ ಎಂದು ಹೇಳಿದನು. ಇದಕ್ಕೆ ಕೇದಿಗೆ ಹೂ ಸಾಕ್ಷಿ ಹೇಳಿತು. ಬ್ರಹ್ಮ ಸುಳ್ಳು ಹೇಳಿದ್ದರಿಂದ, ಸ್ವತಃ ಶಿವನು ಅಲ್ಲಿ ಕಾಣಿಸಿಕೊಂಡು, ಬ್ರಹ್ಮನ ಒಂದು ತಲೆಯನ್ನು ಕತ್ತರಿಸಿ ಕೇದಿಗೆ ಹೂವನ್ನು ಶಿವನ ಪೂಜೆಯಲ್ಲಿ ಎಂದಿಗೂ ಬಳಸುವುದಿಲ್ಲ ಎಂದು ಶಪಿಸಿದನು. ಅಂದಿನಿಂದ ಶಿವನ ಆರಾಧನೆಯಿಂದ ಕೇದಿಗೆ ಹೂ ಹೊರಗಿದೆ ಎಂದು ಪುರಾಣಗಳು ಹೇಳುತ್ತವೆ.



Click it and Unblock the Notifications