Latest Updates
-
मानसून में वर्कआउट का नया रूटीन: बारिश और उमस के बीच फिटनेस कैसे बरकरार रखें? -
मानसून में शादी का प्लान है? इन 5 स्मार्ट टिप्स से अपनी वेडिंग को बनाएं यादगार और सुरक्षित -
ದೆಹಲಿ-ಎನ್ಸಿಆರ್ ಬಿರುಗಾಳಿ ಎಚ್ಚರಿಕೆ: ನಿಮ್ಮ ಬಾಲ್ಕನಿಯನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸಗಳನ್ನು ಮಾಡಿ! -
ಎನರ್ಜಿ ಡ್ರಿಂಕ್ಸ್ ಹೆಸರಲ್ಲಿ ವಿಷ ಕುಡಿತಿದ್ದೀರಾ? ಎಫ್ಎಸ್ಎಸ್ಎಐ ಎಚ್ಚರಿಕೆ ಮತ್ತು ಸುರಕ್ಷಿತ ಪಾನೀಯಗಳ ಮಾಹಿತಿ -
2026ರ ವಿಶ್ವ ಪರಿಸರ ದಿನ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಗ್ರೀನ್ ಚಾಲೆಂಜ್ಗಳು, ನೀವೂ ಭಾಗವಹಿಸಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಈ ಸರಳ ಟಿಪ್ಸ್ ಪಾಲಿಸಿ, ಆರೋಗ್ಯವಾಗಿರಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್ -
ಮಳೆಗಾಲ ಶುರು: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 5 ಸಿಂಪಲ್ ಟಿಪ್ಸ್ -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳೇ ಮದ್ದು! -
ಮುಂಗಾರು ಆಗಮನ: ಮಳೆಯಲ್ಲಿ ಸ್ಟೈಲಿಶ್ ಆಗಿರಲು ಮತ್ತು ಸುರಕ್ಷಿತವಾಗಿರಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ವಾಮಿ ಅಯ್ಯಪ್ಪನ ಈ ಮೂಲ ಮಂತ್ರ ಪಠಿಸಿದರೆ ಶನಿ ದೋಷ ನಿವಾರಣೆ, ಆರೋಗ್ಯ ಪ್ರಾಪ್ತಿ
ಅಯ್ಯಪ್ಪ ಸ್ವಾಮಿ ಭಕ್ತರು ಅಯ್ಯಪ್ಪನ ಬಳಿ ಭಕ್ತಿಯಿಂದ ಬೇಡಿದ್ದನ್ನೆನ್ನಾ ನೆರವೇರಿಸುತ್ತಾನೆ, ಅವರನ್ನು ಕಷ್ಟಗಳಿಂದ ಪಾರು ಮಾಡುತ್ತಾನೆ, ತನ್ನ ಶತ್ರುಗಳನ್ನೂ ಕ್ಷಮಿಸುವ ಗುಣ ಅಯ್ಯಪ್ಪನಲ್ಲಿದೆ, ಆದ್ದರಿಂದ ಎಂಥದ್ದೇ ಕಷ್ಟದ ಸಂದರ್ಭವಾಗಲಿ ಅಯ್ಯಪ್ಪನ ಭಕ್ತಿಯಿಂದ ಪ್ರಾರ್ಥಿಸಿದರೆ ಖಂಡಿತ ನಮಗೆ ಒಳ್ಳೆಯದಾಗುತ್ತದೆ ಎಂಬುವುದು ಅಯ್ಯಪ್ಪ ಭಕ್ತರ ಅಚಲ ನಂಬಿಕೆ.

ಕಾಯಿಲೆಯಿಂದ ಬಳಲುತ್ತಿದ್ದರೆ ಅಯ್ಯಪ್ಪನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಗುಣವಾಗುವುದು, ಕಷ್ಟಗಳಿದ್ದರೆ ಅದು ದೂರಾಗುವುದು, ಶನಿ ದೋಷವಿದ್ದರೆ ಅದರ ನಿವಾರಣೆಗೆ ಅಯ್ಯಪ್ಪನ ಭಕ್ತಿಯಿಂದ ಪ್ರಾರ್ಥಿಸಿದರೆ ಅವನು ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಅದರಲ್ಲೂ ಸಾಡೇಸಾತಿ ಅಂದರೆ 71/2 ವರ್ಷದ ಶನಿ ನಿಮ್ಮ ಆವರಿಸಿದ್ದರೆ ಸ್ವಾಮಿ ಅಯ್ಯಪ್ಪನ ಮೂಲ ಮಂತ್ರಗಳನ್ನು ಹೇಳುವುದರಿಂದ ಬದುಕಿನಲ್ಲಿ ಉಂಟಾಗುವ ಅನೇಕ ಕಷ್ಟಗಳಿಂದ ಪಾರಾಗಬಹುದು.
ಆರೋಗ್ಯ ಸಮಸ್ಯೆ, ಶತ್ರುಗಳ ಕಾಟ, ಕೆಟ್ಟ ದೃಷ್ಟಿ, ಆರ್ಥಿಕ ಸಮಸ್ಯೆ , ಸಂಬಂಧದಲ್ಲಿ ಸಮಸ್ಯೆ , ಶನಿ ದೋಷ ಹೀಗೆ ನಮ್ಮ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ಅತ್ತಯಪ್ಪ ಮೂಲ ಮಂತ್ರ ಪಠಿಸುವುದರಿಂದ ದೂರ ಮಾಡಬಹುದು. ಅಯ್ಯಪ್ಪ ಮೂಲ ಮಂತ್ರ ಯಾವುದು, ಯಾವ ಸಮಯಕ್ಕೆ ಪಠಿಸಬೇಕು ಎಂದು ನೋಡೋಣ ಬನ್ನಿ:

ಅಯ್ಯಪ್ಪ ಸ್ವಾಮಿ ಮೂಲ ಮಂತ್ರ ಪಠಿಸಲು ಶುಭ ದಿನಗಳು
* ಬುಧವಾರ
* ಭಾನುವಾರ
* ಉತ್ತರ ಫಲ್ಗುಣಿ ನಕ್ಷತ್ರದ ದಿನಗಳಂದು ಅಯ್ಯಪ್ಪ ಮೂಲ ಮಂತ್ರ ಪಠಿಸಿ.
ಮಂತ್ರ ಪಠಿಸಲು ಯಾವಾಗ ಪ್ರಾರಂಭಿಸಿದರೆ ಒಳ್ಳೆಯದು?
* ಯಾವುದೇ ಬುಧವಾರ ಪ್ರಾರಂಭಿಸಬಹುದು
* ಉತ್ತರ ಫಲ್ಗುಣಿ ಅಥವಾ ಕಾರ್ತಿಕ ನಕ್ಷತ್ರದ ದಿನದಂದು ಪ್ರಾರಂಭಿಸಬಹುದು.
* ಏಕಾದಶಿ ಅಥವಾ ಷಷ್ಠಿ ತಿಥಿಯಂದು ಕೂಡ ಪ್ರರಂಭಿಸಬಹುದು.

ಮಂತ್ರವನ್ನು ಯಾವಾಗ, ಎಷ್ಟು ಬಾರಿ ಹೇಳಬೇಕು?
ಅಯ್ಯಪ್ಪ ಮೂಲ ಮಂತ್ರವನ್ನು ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಪಠಿಸಬೇಕು.
ಎಷ್ಟು ಬಾರಿ ಪಠಿಸಬೇಕು?
9, 18 ಅಥವಾ 108 ಬಾರಿ ಪಠಿಸಿ.

ಯಾರು ಪಠಿಸಬಹುದು?
ಅಯ್ಯಪ್ಪ ಮೂಲ ಮಂತ್ರವನ್ನು ಲಿಂಗಬೇಧವಿಲ್ಲದೆ ಯಾರು ಬೇಕಾದರೂ ಪಠಿಸಬಹುದು.
ಹೇಗೆ ಪೂಜಿಸಬೇಕು?
ಅಯ್ಯಪ್ಪ ಸ್ವಾಮಿಯ ಫೋಟೋ ಅಥವಾ ಅಯ್ಯಪ್ಪ ಸ್ವಾಮಿಯ ಯಂತ್ರವನ್ನು ಇಟ್ಟು ಮೂಲ ಮಂತ್ರಗಳನ್ನು ಪಠಿಸಬೇಕು.
ಯಾವು ಹೂಗಳನ್ನು ಅರ್ಪಿಸಬೇಕು?
ಅಯ್ಯಪ್ಪ ಸ್ವಾಮಿಗೆ ನೀವು ಯಾವುದೇ ಬಗೆಯ ಹೂಗಳನ್ನು ಅರ್ಪಿಸಬಹುದು.

ಯಾವ ದಿಕ್ಕಿಗೆ ಸ್ವಾಮಿ ಫೋಟೋ ಇಡಬೇಕು?
ಅಯ್ಯಪ್ಪ ಸ್ವಾಮಿ ಫೋಟೋವನ್ನು ಪೂರ್ವ ದಿಕ್ಕಿಗೆ ಇಟ್ಟು ಮಂತ್ರಗಳನ್ನು ಹೇಳಿ.
ಜಪ ಮಾಲೆ: ಮಂತ್ರಗಳನ್ನು ಹೇಳುವಾಗ ರುದ್ರಾಕ್ಷಿ ಅಥವಾ ತುಳಸಿ ಜಪ ಮಾಲೆ ಬಳಸಿ.

ಅಯ್ಯಪ್ಪ ಮೂಲ ಮಂತ್ರ
ಓಂ ಶ್ರೀ ಹರಿಹರ ಪುತ್ರಾಯ
ಪುತ್ರ ಲಾಭಾಯ
ಚತ್ರು ನಾಶಯ
ಮದ-ಗಜ ವಾಹನಾಯ
ಓಂ ಶ್ರೀ ಮಹಾ ಶಾಸ್ತ್ರೀ ನಮಃ



Click it and Unblock the Notifications