Latest Updates
-
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ!
ಮೇ 22ಕ್ಕೆ ಕಾಲಾಷ್ಟಮಿ: ರಾಹು, ಶನಿ ದೋಷ ನಿವಾರಣೆಗೆ ಕಾಲ ಭೈರವನನ್ನು ಹೇಗೆ ಪೂಜಿಸಬೇಕು?
ಮೇ 22ಕ್ಕೆ ಕಾಲಾಷ್ಟಮಿ, ಕಾಲ ಭೈರವನ ಪೂಜೆಗಂದೇ ಮೀಸಲಾಗಿರುವ ದಿನ. ವರ್ಷದಲ್ಲಿ 12 ಕಾಲಾಷ್ಟಮಿ ಆಚರಿಸಲಾಗುವುದು. ಪ್ರತೀ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿ ಆಚರಿಸಲಾಗುವುದು.

ಕಾಲಭೈರವನ ಪೂಜೆಗೆ ಕಾಲಾಷ್ಟಮಿ ತುಂಬಾ ವಿಶೇಷವಾದ ದಿನ ಏಕೆ, ಮೇ 22ರಂದು ಕಾಲ ಭೈರವನ ಪೂಜೆಗೆ ಶುಭ ಮುಹೂರ್ತ ಯಾವಾಗ? ಈ ದಿನದ ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ?

ಮೇ ತಿಂಗಳಿನಲ್ಲಿ ಕಾಲಾಷ್ಟಮಿ ದಿನಾಂಕ ಹಾಗೂ ಶುಭ ಮುಹೂರ್ತ
ಮೇ 22, ಭಾನುವಾರ 2022
ಅಷ್ಟಮಿ ತಿಥಿ ಪ್ರಾರಂಭ ಮೇ 22 ಮಧ್ಯಾಹ್ನ 1 ಗಂಟೆಗೆ
ಅಷ್ಟಮಿ ತಿಥಿ ಮುಕ್ತಾಯ ಮೇ 23 ಬೆಳಗ್ಗೆ 11:34ಕ್ಕೆ

ಕಾಲಾಷ್ಟಮಿ ಮಹತ್ವ
ಕಾಲಾಷ್ಟಮಿಯಂದು ಶಿವನ ಕಾಲ ಭೈರವ ರೂಪ ಅಂದರೆ ರೌದ್ರಾವತಾರದ ರೂಪವನ್ನುಆರಾಧಿಸಲಾಗುವುದು. ಈ ದಿನ ಕಾಲ ಭೈರವನ ಭಕ್ತರು ಶಿವನ ಜೊತೆಗೆ ಪಾರ್ವತಿಗೂ ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಯ ಬಳಿಕ ಕಾಲ ಭೈರವ ಕತೆ ಹೇಳಲಾಗುವುದು.
ಈ ದಿನದಂದು ಬೆಳಗ್ಗೆ ವಿಶೇಷ ಪೂಜೆಯನ್ನು ಮಾಡಲಾಗುವುಉದ, ಈ ದಿನದಂದು ಪೂರ್ವಜರಿಗೂ ಪೂಜೆ ಸಲ್ಲಿಸಲಾಗುವುದು.
ಈ ದಿನ ರಾತ್ರಿ ಎಚ್ಚರವಾಗಿದ್ದು ಕಾಲ ಭೈರವನ ಕತೆ ಓದುವುದು, ಕೇಳುವುದು ಮಾಡಲಾಗುವುದು. ಮಧ್ಯರಾತ್ರಿಯಲ್ಲಿ ಕಾಲ ಭೈರವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು, ಸಾಂಪ್ರದಾಯಿಕವಾದ ಡ್ರಮ್ ಬಾರಿಸಲಾಗುವುದು ಗಂಟೆ ಬಾರಿಸಿ ಶಂಖ ಓದಿಸಲಾಗುವುದು.
ಈ ದಿನ ಉಪವಾಸವಿದ್ದು ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ನಾಯಿಗಳಿಗೆ ಆಹಾರ ನೀಡುವುದು. ಈ ದಿನ ಕಾಲ ಭೈರವ ನಾಯಿಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ ಆದ್ದರಿಂದ ಈ ದಿನ ನಾಯಿಗಳಿಗೆ ಆಹಾರ ನೀಡಿದರೆ ತೃಪ್ತನಾಗುತ್ತಾನೆ ಎಂದು ನಂಬಲಾಗುವುದು.

ಕಾಲ ಭೈರವನ ಪೂಜೆ ಮಾಡಿದರೆ ದೊರೆಯುವ ಪ್ರಯೋಜನಗಳೇನು?
* ಈ ದಿನ ಭೈರವನ ಪೂಜೆ ಮಾಡುವುದರಿಂದ ಶಿವ ನಮ್ಮ ಪಾಪಗಳಿಂದ ವಿಮೋಚನೆ ಮಾಡುತ್ತಾನೆ ಎಂದು ನಂಬಲಾಗಿದೆ.
* ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು.
* ಶಿವ ಒಳ್ಳೆಯ ಆರೋಗ್ಯ, ಸಂಪತ್ತು ನೀಡಿ ಆಶೀರ್ವದಿಸುತ್ತಾನೆ.
* ರಾಹು ಹಾಗೂ ಶನಿ ದೋಷವಿರುವವರು ಕಾಲ ಭೈರವನ ಪೂಜಿಸಿದರೆ ಗ್ರಹ ದೋಷದ ಕೆಟ್ಟ ಪರಿಣಾಮ ಕಡಿಮೆಯಾಗುವುದು.



Click it and Unblock the Notifications











