Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಮೇ 22ಕ್ಕೆ ಕಾಲಾಷ್ಟಮಿ: ರಾಹು, ಶನಿ ದೋಷ ನಿವಾರಣೆಗೆ ಕಾಲ ಭೈರವನನ್ನು ಹೇಗೆ ಪೂಜಿಸಬೇಕು?
ಮೇ 22ಕ್ಕೆ ಕಾಲಾಷ್ಟಮಿ, ಕಾಲ ಭೈರವನ ಪೂಜೆಗಂದೇ ಮೀಸಲಾಗಿರುವ ದಿನ. ವರ್ಷದಲ್ಲಿ 12 ಕಾಲಾಷ್ಟಮಿ ಆಚರಿಸಲಾಗುವುದು. ಪ್ರತೀ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿ ಆಚರಿಸಲಾಗುವುದು.

ಕಾಲಭೈರವನ ಪೂಜೆಗೆ ಕಾಲಾಷ್ಟಮಿ ತುಂಬಾ ವಿಶೇಷವಾದ ದಿನ ಏಕೆ, ಮೇ 22ರಂದು ಕಾಲ ಭೈರವನ ಪೂಜೆಗೆ ಶುಭ ಮುಹೂರ್ತ ಯಾವಾಗ? ಈ ದಿನದ ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ?

ಮೇ ತಿಂಗಳಿನಲ್ಲಿ ಕಾಲಾಷ್ಟಮಿ ದಿನಾಂಕ ಹಾಗೂ ಶುಭ ಮುಹೂರ್ತ
ಮೇ 22, ಭಾನುವಾರ 2022
ಅಷ್ಟಮಿ ತಿಥಿ ಪ್ರಾರಂಭ ಮೇ 22 ಮಧ್ಯಾಹ್ನ 1 ಗಂಟೆಗೆ
ಅಷ್ಟಮಿ ತಿಥಿ ಮುಕ್ತಾಯ ಮೇ 23 ಬೆಳಗ್ಗೆ 11:34ಕ್ಕೆ

ಕಾಲಾಷ್ಟಮಿ ಮಹತ್ವ
ಕಾಲಾಷ್ಟಮಿಯಂದು ಶಿವನ ಕಾಲ ಭೈರವ ರೂಪ ಅಂದರೆ ರೌದ್ರಾವತಾರದ ರೂಪವನ್ನುಆರಾಧಿಸಲಾಗುವುದು. ಈ ದಿನ ಕಾಲ ಭೈರವನ ಭಕ್ತರು ಶಿವನ ಜೊತೆಗೆ ಪಾರ್ವತಿಗೂ ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಯ ಬಳಿಕ ಕಾಲ ಭೈರವ ಕತೆ ಹೇಳಲಾಗುವುದು.
ಈ ದಿನದಂದು ಬೆಳಗ್ಗೆ ವಿಶೇಷ ಪೂಜೆಯನ್ನು ಮಾಡಲಾಗುವುಉದ, ಈ ದಿನದಂದು ಪೂರ್ವಜರಿಗೂ ಪೂಜೆ ಸಲ್ಲಿಸಲಾಗುವುದು.
ಈ ದಿನ ರಾತ್ರಿ ಎಚ್ಚರವಾಗಿದ್ದು ಕಾಲ ಭೈರವನ ಕತೆ ಓದುವುದು, ಕೇಳುವುದು ಮಾಡಲಾಗುವುದು. ಮಧ್ಯರಾತ್ರಿಯಲ್ಲಿ ಕಾಲ ಭೈರವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು, ಸಾಂಪ್ರದಾಯಿಕವಾದ ಡ್ರಮ್ ಬಾರಿಸಲಾಗುವುದು ಗಂಟೆ ಬಾರಿಸಿ ಶಂಖ ಓದಿಸಲಾಗುವುದು.
ಈ ದಿನ ಉಪವಾಸವಿದ್ದು ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ನಾಯಿಗಳಿಗೆ ಆಹಾರ ನೀಡುವುದು. ಈ ದಿನ ಕಾಲ ಭೈರವ ನಾಯಿಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ ಆದ್ದರಿಂದ ಈ ದಿನ ನಾಯಿಗಳಿಗೆ ಆಹಾರ ನೀಡಿದರೆ ತೃಪ್ತನಾಗುತ್ತಾನೆ ಎಂದು ನಂಬಲಾಗುವುದು.

ಕಾಲ ಭೈರವನ ಪೂಜೆ ಮಾಡಿದರೆ ದೊರೆಯುವ ಪ್ರಯೋಜನಗಳೇನು?
* ಈ ದಿನ ಭೈರವನ ಪೂಜೆ ಮಾಡುವುದರಿಂದ ಶಿವ ನಮ್ಮ ಪಾಪಗಳಿಂದ ವಿಮೋಚನೆ ಮಾಡುತ್ತಾನೆ ಎಂದು ನಂಬಲಾಗಿದೆ.
* ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು.
* ಶಿವ ಒಳ್ಳೆಯ ಆರೋಗ್ಯ, ಸಂಪತ್ತು ನೀಡಿ ಆಶೀರ್ವದಿಸುತ್ತಾನೆ.
* ರಾಹು ಹಾಗೂ ಶನಿ ದೋಷವಿರುವವರು ಕಾಲ ಭೈರವನ ಪೂಜಿಸಿದರೆ ಗ್ರಹ ದೋಷದ ಕೆಟ್ಟ ಪರಿಣಾಮ ಕಡಿಮೆಯಾಗುವುದು.



Click it and Unblock the Notifications
