Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಮೇ 22ಕ್ಕೆ ಕಾಲಾಷ್ಟಮಿ: ರಾಹು, ಶನಿ ದೋಷ ನಿವಾರಣೆಗೆ ಕಾಲ ಭೈರವನನ್ನು ಹೇಗೆ ಪೂಜಿಸಬೇಕು?
ಮೇ 22ಕ್ಕೆ ಕಾಲಾಷ್ಟಮಿ, ಕಾಲ ಭೈರವನ ಪೂಜೆಗಂದೇ ಮೀಸಲಾಗಿರುವ ದಿನ. ವರ್ಷದಲ್ಲಿ 12 ಕಾಲಾಷ್ಟಮಿ ಆಚರಿಸಲಾಗುವುದು. ಪ್ರತೀ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿ ಆಚರಿಸಲಾಗುವುದು.

ಕಾಲಭೈರವನ ಪೂಜೆಗೆ ಕಾಲಾಷ್ಟಮಿ ತುಂಬಾ ವಿಶೇಷವಾದ ದಿನ ಏಕೆ, ಮೇ 22ರಂದು ಕಾಲ ಭೈರವನ ಪೂಜೆಗೆ ಶುಭ ಮುಹೂರ್ತ ಯಾವಾಗ? ಈ ದಿನದ ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ?

ಮೇ ತಿಂಗಳಿನಲ್ಲಿ ಕಾಲಾಷ್ಟಮಿ ದಿನಾಂಕ ಹಾಗೂ ಶುಭ ಮುಹೂರ್ತ
ಮೇ 22, ಭಾನುವಾರ 2022
ಅಷ್ಟಮಿ ತಿಥಿ ಪ್ರಾರಂಭ ಮೇ 22 ಮಧ್ಯಾಹ್ನ 1 ಗಂಟೆಗೆ
ಅಷ್ಟಮಿ ತಿಥಿ ಮುಕ್ತಾಯ ಮೇ 23 ಬೆಳಗ್ಗೆ 11:34ಕ್ಕೆ

ಕಾಲಾಷ್ಟಮಿ ಮಹತ್ವ
ಕಾಲಾಷ್ಟಮಿಯಂದು ಶಿವನ ಕಾಲ ಭೈರವ ರೂಪ ಅಂದರೆ ರೌದ್ರಾವತಾರದ ರೂಪವನ್ನುಆರಾಧಿಸಲಾಗುವುದು. ಈ ದಿನ ಕಾಲ ಭೈರವನ ಭಕ್ತರು ಶಿವನ ಜೊತೆಗೆ ಪಾರ್ವತಿಗೂ ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಯ ಬಳಿಕ ಕಾಲ ಭೈರವ ಕತೆ ಹೇಳಲಾಗುವುದು.
ಈ ದಿನದಂದು ಬೆಳಗ್ಗೆ ವಿಶೇಷ ಪೂಜೆಯನ್ನು ಮಾಡಲಾಗುವುಉದ, ಈ ದಿನದಂದು ಪೂರ್ವಜರಿಗೂ ಪೂಜೆ ಸಲ್ಲಿಸಲಾಗುವುದು.
ಈ ದಿನ ರಾತ್ರಿ ಎಚ್ಚರವಾಗಿದ್ದು ಕಾಲ ಭೈರವನ ಕತೆ ಓದುವುದು, ಕೇಳುವುದು ಮಾಡಲಾಗುವುದು. ಮಧ್ಯರಾತ್ರಿಯಲ್ಲಿ ಕಾಲ ಭೈರವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು, ಸಾಂಪ್ರದಾಯಿಕವಾದ ಡ್ರಮ್ ಬಾರಿಸಲಾಗುವುದು ಗಂಟೆ ಬಾರಿಸಿ ಶಂಖ ಓದಿಸಲಾಗುವುದು.
ಈ ದಿನ ಉಪವಾಸವಿದ್ದು ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ನಾಯಿಗಳಿಗೆ ಆಹಾರ ನೀಡುವುದು. ಈ ದಿನ ಕಾಲ ಭೈರವ ನಾಯಿಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ ಆದ್ದರಿಂದ ಈ ದಿನ ನಾಯಿಗಳಿಗೆ ಆಹಾರ ನೀಡಿದರೆ ತೃಪ್ತನಾಗುತ್ತಾನೆ ಎಂದು ನಂಬಲಾಗುವುದು.

ಕಾಲ ಭೈರವನ ಪೂಜೆ ಮಾಡಿದರೆ ದೊರೆಯುವ ಪ್ರಯೋಜನಗಳೇನು?
* ಈ ದಿನ ಭೈರವನ ಪೂಜೆ ಮಾಡುವುದರಿಂದ ಶಿವ ನಮ್ಮ ಪಾಪಗಳಿಂದ ವಿಮೋಚನೆ ಮಾಡುತ್ತಾನೆ ಎಂದು ನಂಬಲಾಗಿದೆ.
* ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು.
* ಶಿವ ಒಳ್ಳೆಯ ಆರೋಗ್ಯ, ಸಂಪತ್ತು ನೀಡಿ ಆಶೀರ್ವದಿಸುತ್ತಾನೆ.
* ರಾಹು ಹಾಗೂ ಶನಿ ದೋಷವಿರುವವರು ಕಾಲ ಭೈರವನ ಪೂಜಿಸಿದರೆ ಗ್ರಹ ದೋಷದ ಕೆಟ್ಟ ಪರಿಣಾಮ ಕಡಿಮೆಯಾಗುವುದು.



Click it and Unblock the Notifications