Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
ದೇವಾಲಯದಲ್ಲಿ ಘಂಟೆಗಳನ್ನು ಏಕೆ ನೇತು ಹಾಕಲಾಗುತ್ತದೆ?
ಹಿಂದೂ ಧರ್ಮದಲ್ಲಿ ಪ್ರತಿ ದೇವಾಲಯದ ಮತ್ತು ಗುಡಿಗಳ ಹೊರಭಾಗದಲ್ಲಿ ಘಂಟೆಗಳನ್ನು ನೇತು ಹಾಕಲಾಗಿರುತ್ತದೆ. ನಂಬಿಕೆಗಳ ಪ್ರಕಾರ ಎಲ್ಲಿ ದೇವಾಲಯಗಳಲ್ಲಿ ಘಂಟಾ ನಿನಾದವು ಸ್ಪಷ್ಟವಾಗಿ ಕೇಳಿ ಬರುತ್ತದೆಯೋ, ಅಂತಹ ದೇವಾಲಯಗಳನ್ನು ಜಾಗೃತ ದೇವ ಎಂದು ಕರೆಯಲಾಗುತ್ತದೆ. ಪ್ರತಿ ದೇವಾಲಯಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಆರತಿಯನ್ನು ಬೆಳಗಲಾಗುತ್ತದೆ. ಆ ಸಮಯದಲ್ಲಿ ಸಣ್ಣ ಮತ್ತು ದೊಡ್ಡಘಂಟೆಗಳನ್ನು ಬಾರಿಸುವುದು ಎಲ್ಲರಿಗೂ ತಿಳಿದ ವಿಚಾರವೇ.
ದೇವಾಲಯಗಳ ಮುಂದೆ ಏಕೆ ಘಂಟೆಗಳನ್ನು ನೇತು ಹಾಕಲಾಗುತ್ತದೆ ಎಂಬುದರ ಕುರಿತಾಗಿ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿರುತ್ತದೆ. ಇದಕ್ಕೆ ಕೇವಲ ಧಾರ್ಮಿಕ ಕಾರಣಗಳೇ ಅಷ್ಟೇ ಅಲ್ಲ, ವೈಜ್ಞಾನಿಕ ಕಾರಣಗಳು ಸಹ ಇವೆ.
ದೇವಾಲಯಗಳಲ್ಲಿ ಬಳಸಲಾಗುವ ಘಂಟೆಗಳು ತಮ್ಮದೇ ಆದ ಲಯ ಮತ್ತು ಗತಿಯನ್ನು ಹೊಂದಿರುತ್ತವೆ. ನಂಬಿಕೆಗಳ ಪ್ರಕಾರ ದೇವಾಲಯಗಳಲ್ಲಿ ಘಂಟೆಗಳನ್ನು ಬಾರಿಸುವಾಗ ಮೂರ್ತಿ ರೂಪದಲ್ಲಿ ಇರುವ ದೇವರುಗಳು ಎಚ್ಚರವಾಗಿ ಭಕ್ತರನ್ನು ಹರಸುತ್ತಾರಂತೆ ಮತ್ತು ಭಕ್ತರ ಕೋರಿಕೆಯು ಹೀಗೆ ಬೇಗ ನೆರವೇರುತ್ತದಂತೆ. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?

ಸ್ಕಂದ ಪುರಾಣದಂತೆ ದೇವಾಲಯಗಳಲ್ಲಿ ಘಂಟೆಗಳನ್ನು ಬಾರಿಸುವುದರಿಂದ ಮಾನವನ ನೂರು ಜನ್ಮಗಳ ಪಾಪ ಕರ್ಮಗಳು ನಿವಾರಣೆಯಾಗುತ್ತವೆಯಂತೆ. ಘಂಟೆಗಳು ಕಾಲನ ಪ್ರತಿರೂಪ. ಧರ್ಮ ಶಾಸ್ತ್ರದ ಪ್ರಕಾರ ಪ್ರಳಯ ಕಾಲದಲ್ಲಿ ಕೋಟಿ ಘಂಟೆಗಲ ನಿನಾದವು ಕೇಳಿ ಬರುತ್ತದೆಯಂತೆ.
ದೇವಾಲಯಗಳಲ್ಲಿ ಘಂಟೆಗಳನ್ನು ನೇತು ಹಾಕುವುದರ ಹಿಂದೆ ವೈಜ್ಞಾನಿಕ ಕಾರಣಗಳು ಸಹ ಇವೆ. ಘಂಟೆಯನ್ನು ಬಾರಿಸಿದಾಗ ಆ ವಾತಾವರಣದಲ್ಲಿ ಒಂದು ಕಂಪನವು ಸೃಷ್ಟಿಯಾಗುತ್ತದೆ. ಅದು ಗಾಳಿಯ ಜೊತೆಗೆ ತುಂಬಾ ದೂರದವರೆಗೆ ತಲುಪುತ್ತದೆ. ಈ ಕಂಪನವು ಸಾಗುವ ಹಾದಿಯಲ್ಲಿ ಬರುವ ಕೀಟಗಳು ಮತ್ತು ಅಪಾಯಕಾರಿ ಅಂಶಗಳು ನಿವಾರಣೆಯಾಗುತ್ತದೆ. ಇದರಿಂದ ಇಡೀ ವಾತಾವರಣವು ಸ್ವಚ್ಛ ಮತ್ತು ಆರೋಗ್ಯಕರವಾಗುತ್ತದೆ.



Click it and Unblock the Notifications