Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ದೇವಾಲಯದಲ್ಲಿ ಘಂಟೆಗಳನ್ನು ಏಕೆ ನೇತು ಹಾಕಲಾಗುತ್ತದೆ?
ಹಿಂದೂ ಧರ್ಮದಲ್ಲಿ ಪ್ರತಿ ದೇವಾಲಯದ ಮತ್ತು ಗುಡಿಗಳ ಹೊರಭಾಗದಲ್ಲಿ ಘಂಟೆಗಳನ್ನು ನೇತು ಹಾಕಲಾಗಿರುತ್ತದೆ. ನಂಬಿಕೆಗಳ ಪ್ರಕಾರ ಎಲ್ಲಿ ದೇವಾಲಯಗಳಲ್ಲಿ ಘಂಟಾ ನಿನಾದವು ಸ್ಪಷ್ಟವಾಗಿ ಕೇಳಿ ಬರುತ್ತದೆಯೋ, ಅಂತಹ ದೇವಾಲಯಗಳನ್ನು ಜಾಗೃತ ದೇವ ಎಂದು ಕರೆಯಲಾಗುತ್ತದೆ. ಪ್ರತಿ ದೇವಾಲಯಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಆರತಿಯನ್ನು ಬೆಳಗಲಾಗುತ್ತದೆ. ಆ ಸಮಯದಲ್ಲಿ ಸಣ್ಣ ಮತ್ತು ದೊಡ್ಡಘಂಟೆಗಳನ್ನು ಬಾರಿಸುವುದು ಎಲ್ಲರಿಗೂ ತಿಳಿದ ವಿಚಾರವೇ.
ದೇವಾಲಯಗಳ ಮುಂದೆ ಏಕೆ ಘಂಟೆಗಳನ್ನು ನೇತು ಹಾಕಲಾಗುತ್ತದೆ ಎಂಬುದರ ಕುರಿತಾಗಿ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿರುತ್ತದೆ. ಇದಕ್ಕೆ ಕೇವಲ ಧಾರ್ಮಿಕ ಕಾರಣಗಳೇ ಅಷ್ಟೇ ಅಲ್ಲ, ವೈಜ್ಞಾನಿಕ ಕಾರಣಗಳು ಸಹ ಇವೆ.
ದೇವಾಲಯಗಳಲ್ಲಿ ಬಳಸಲಾಗುವ ಘಂಟೆಗಳು ತಮ್ಮದೇ ಆದ ಲಯ ಮತ್ತು ಗತಿಯನ್ನು ಹೊಂದಿರುತ್ತವೆ. ನಂಬಿಕೆಗಳ ಪ್ರಕಾರ ದೇವಾಲಯಗಳಲ್ಲಿ ಘಂಟೆಗಳನ್ನು ಬಾರಿಸುವಾಗ ಮೂರ್ತಿ ರೂಪದಲ್ಲಿ ಇರುವ ದೇವರುಗಳು ಎಚ್ಚರವಾಗಿ ಭಕ್ತರನ್ನು ಹರಸುತ್ತಾರಂತೆ ಮತ್ತು ಭಕ್ತರ ಕೋರಿಕೆಯು ಹೀಗೆ ಬೇಗ ನೆರವೇರುತ್ತದಂತೆ. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?

ಸ್ಕಂದ ಪುರಾಣದಂತೆ ದೇವಾಲಯಗಳಲ್ಲಿ ಘಂಟೆಗಳನ್ನು ಬಾರಿಸುವುದರಿಂದ ಮಾನವನ ನೂರು ಜನ್ಮಗಳ ಪಾಪ ಕರ್ಮಗಳು ನಿವಾರಣೆಯಾಗುತ್ತವೆಯಂತೆ. ಘಂಟೆಗಳು ಕಾಲನ ಪ್ರತಿರೂಪ. ಧರ್ಮ ಶಾಸ್ತ್ರದ ಪ್ರಕಾರ ಪ್ರಳಯ ಕಾಲದಲ್ಲಿ ಕೋಟಿ ಘಂಟೆಗಲ ನಿನಾದವು ಕೇಳಿ ಬರುತ್ತದೆಯಂತೆ.
ದೇವಾಲಯಗಳಲ್ಲಿ ಘಂಟೆಗಳನ್ನು ನೇತು ಹಾಕುವುದರ ಹಿಂದೆ ವೈಜ್ಞಾನಿಕ ಕಾರಣಗಳು ಸಹ ಇವೆ. ಘಂಟೆಯನ್ನು ಬಾರಿಸಿದಾಗ ಆ ವಾತಾವರಣದಲ್ಲಿ ಒಂದು ಕಂಪನವು ಸೃಷ್ಟಿಯಾಗುತ್ತದೆ. ಅದು ಗಾಳಿಯ ಜೊತೆಗೆ ತುಂಬಾ ದೂರದವರೆಗೆ ತಲುಪುತ್ತದೆ. ಈ ಕಂಪನವು ಸಾಗುವ ಹಾದಿಯಲ್ಲಿ ಬರುವ ಕೀಟಗಳು ಮತ್ತು ಅಪಾಯಕಾರಿ ಅಂಶಗಳು ನಿವಾರಣೆಯಾಗುತ್ತದೆ. ಇದರಿಂದ ಇಡೀ ವಾತಾವರಣವು ಸ್ವಚ್ಛ ಮತ್ತು ಆರೋಗ್ಯಕರವಾಗುತ್ತದೆ.



Click it and Unblock the Notifications