Latest Updates
-
मानसून में वर्कआउट का नया रूटीन: बारिश और उमस के बीच फिटनेस कैसे बरकरार रखें? -
मानसून में शादी का प्लान है? इन 5 स्मार्ट टिप्स से अपनी वेडिंग को बनाएं यादगार और सुरक्षित -
ದೆಹಲಿ-ಎನ್ಸಿಆರ್ ಬಿರುಗಾಳಿ ಎಚ್ಚರಿಕೆ: ನಿಮ್ಮ ಬಾಲ್ಕನಿಯನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸಗಳನ್ನು ಮಾಡಿ! -
ಎನರ್ಜಿ ಡ್ರಿಂಕ್ಸ್ ಹೆಸರಲ್ಲಿ ವಿಷ ಕುಡಿತಿದ್ದೀರಾ? ಎಫ್ಎಸ್ಎಸ್ಎಐ ಎಚ್ಚರಿಕೆ ಮತ್ತು ಸುರಕ್ಷಿತ ಪಾನೀಯಗಳ ಮಾಹಿತಿ -
2026ರ ವಿಶ್ವ ಪರಿಸರ ದಿನ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಗ್ರೀನ್ ಚಾಲೆಂಜ್ಗಳು, ನೀವೂ ಭಾಗವಹಿಸಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಈ ಸರಳ ಟಿಪ್ಸ್ ಪಾಲಿಸಿ, ಆರೋಗ್ಯವಾಗಿರಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್ -
ಮಳೆಗಾಲ ಶುರು: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 5 ಸಿಂಪಲ್ ಟಿಪ್ಸ್ -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳೇ ಮದ್ದು! -
ಮುಂಗಾರು ಆಗಮನ: ಮಳೆಯಲ್ಲಿ ಸ್ಟೈಲಿಶ್ ಆಗಿರಲು ಮತ್ತು ಸುರಕ್ಷಿತವಾಗಿರಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು ಬಯಸಿದ್ದು ನೆರವೇರಲು ದೇವರ ಪೂಜೆಯಲ್ಲಿ ಸಾಂಪ್ರದಾಯಿಕವಾದ ಈ 16 ಪೂಜಾವಿಧಿ ಪಾಲಿಸಿ
ನಾವು ಪೂಜೆಯನ್ನು ಮಾಡುವಾಗ ನಮ್ಮ ದೇಹ ಹಾಗೂ ಮನಸ್ಸನ್ನು ಶುದ್ಧ ಮಾಡಿ ದೇವರ ಪೂಜೆ ಮಾಡಬೇಕು. ಸ್ನಾನ ಮಾಡಿ, ಮಡಿ ವಸ್ತ್ರ ಧರಿಸಿದರೆ ದೇಹ ಶುದ್ಧವಾಗುತ್ತದೆ, ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹೊರಹಾಕಿ ದೇವರ ಪ್ರಾರ್ಥನೆ ಮಾಡಿ.

ನೀವು ದೇವರ ಪೂಜೆ ಮಾಡುವಾಗ 16 ವಿಧಿಗಳಿವೆ, ಅದರಂತೆ ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗುವುದು:
1. ದೇವರ ಕೋಣೆಯನ್ನು, ಮೂರ್ತಿಯನ್ನು ಸ್ವಚ್ಛಮಾಡಬೇಕು
ನೀವು ಸ್ನಾನ ಮಾಡಿ ಬಂದ ಮೇಲೆ ದೇವರ ಕೋಣೆಯನ್ನು ಸ್ವಚ್ಛ ಮಾಡಿ, ದೇವರ ಮೂರ್ತಿಯನ್ನು ಸ್ವಚ್ಛ ಮಾಡಿ.
2. ನಿಮ್ಮನ್ನು ಶುದ್ಧ ಮಾಡಿ
ನೀವು ಸ್ನಾನ ಮಾಡಿದ್ದರೂ ಕೂಡ ಸ್ವಲ್ಪ ಗಂಗಾಜಲವನ್ನು ಎಡಗೈಯಿಂದ ಸ್ಪೂನ್ನಲ್ಲಿ ತೆಗೆದು ಬಲಗೈಗೆ ಹಾಕಿ ಮಂತ್ರಗಳನ್ನು ಹೇಳುತ್ತಾ ಕುಡಿಯಿರಿ.
3. ದೀಪ ಜ್ಯೋತಿ ಬೆಳಗಿ
ಮಣ್ಣಿನ ದೀಪ ಅಥವಾ ಹಿತ್ತಾಳೆಯ, ಅಥವಾ ಬೆಳ್ಳಿಯ ದೀಪಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಎರಡು ಬತ್ತಿ ಹಾಕಿ ದೀಪ ಬೆಳಗಿ.
4.ಮೊದಲು ವಿಘ್ನೇಶನನ್ನು ಪೂಜಿಸಿ
ನೀವು ಮೊದಲು ವಿಘ್ನೇಶನನ್ನು ಪೂಜಿಸಿ, ವಿಘ್ನೇಶನ ಮಂತ್ರಗಳನ್ನು ಹೇಳಿ ಪೂಜಿಸಿ. ನಿಮ್ಮ ಎಲ್ಲಾ ದಿನದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿ.
5. ಪ್ರಾಣಯಾಮ ಮಾಡಿ
ಉಸಿರನ್ನು ನಿಧಾನವಾಗಿ ತೆಗೆದು ಹೊರಗಡೆ ಬಿಡಿ, ಈ ರೀತಿ ಮಾಡಿದಾಗ ನಿಮ್ಮ ಮನಸ್ಸು ಮತ್ತಷ್ಟು ಪ್ರಶಾಂತವಾಗುವುದು. ಬಲಗೈ ಜ್ಞಾನ ಮುದ್ರೆಯಲ್ಲಿರಲಿ, ಎಡಗೈಯ ಒಂದು ಬೆಳನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಎಡಭಾಗದ ಮೂಗಿನಿಂದ ನಿಧಾನಕ್ಕೆ ಉಸಿರು ತೆಗೆಯಿರಿ. ಈಗ ಬಲಭಾಗದ ಮೂಗಿನಿ ಹೊಳ್ಳೆಯಿಂದ ಕೈ ತೆಗೆದು ಎಡಭಾಗದ ಹೊಳ್ಳೆಯನ್ನು ಮುಚ್ಚಿ ಬಲಭಾಗದ ಮೂಗಿನ ಮೂಲಕ ಉಸಿರು ಬಿಡಿ, ನಂತರ ಬಲಭಾಗದ ಮೂಗಿನಿಂದ ಉಸಿರು ತೆಗೆದು ಎಡಭಾಗದ ಮೂಗಿನ ಮೂಲ ಬಿಡಿ, ಈ ಬಾರಿ ಒಂದೆರಡು ಬಾರಿ ಅಥವಾ 9 ಬಾರಿ ಮಾಡಿದ ಮೇಲೆ ಎಡಭಾಗದ ಮೂಗಿನಿಂದ ಉಸಿರು ತೆಗೆದು ಎಡಭಾಗದಿಂದಲೇ ಬಿಡಬೇಕು.
ಈ ರೀತಿ ಮಾಡಿದಾಗ ಧ್ಯಾನದ ಕಡೆ ನಿಮ್ಮ ಗಮನ ಹೆಚ್ಚಾಗುವುದು.
6. ಸಂಕಲ್ಪ ಮಾಡಿ
ನೀವು ನಿಮಗೆ ಏನಾಗಬೇಕು ಆ ಸಂಕಲ್ಪ ಮಾಡಿ. ಒಂದು ವಿಷಯ ನೆನಪಿಡಿ ಸಂಕಲ್ಪ ಮಾಡುವಾಗ ಒಳಿತನ್ನೇ ಬಯಸಬೇಕು.
7. ಆಸನ ಪೂಜೆ ಮಾಡಿ
ದೇವರ ಮೂರ್ತಿಗಳನ್ನು ನೀವು ಭೂಮಿ ಮೇಲೆ ಇಟ್ಟಿರುತ್ತೀರಿ, ಆದ್ದರಿಂದ ಭೂ ದೇವತೆಯನ್ನು ಆರಾಧಿಸಿ.
8. ಘಂಟೆ ಪೂಜೆ
ಘಂಟೆ ಪೂಜೆ ಮಾಡುವುದರಿಂದ ಋಣಾತ್ಮಾಕ ಶಕ್ತಿಗಳು ಹೊರ ಹೋಗುವುದು, ಧನಾತ್ಮಕ ಶಕ್ತಿ ಹೆಚ್ಚುವುದು.
9. ಕಳಸ ಪೂಜೆ ಮಾಡಿ
ನೀವು ಪೂಜೆಯಲ್ಲಿ ಕಳಸವನ್ನು ಇಟ್ಟು ಪೂಜಿಸಬೇಕು. ಕಳಸದಲ್ಲಿ ಪಂಚ ಧಾನ್ಯಗಳಿರಬೇಕು.
10. ಆತ್ಮ ಪೂಜೆ
ನಮ್ಮ ದೇಹವೇ ಒಂದು ದೇಗುಲ, ಮೊದಲು ನಮ್ಮ ದೇಹದಲ್ಲಿರುವ ಆತ್ಮವನ್ನು ಪೂಜಿಸಬೇಕು, ಆತ್ಮ ಪೂಜೆ ಮಾಡುವುದರಿಂದ ದೇವರ ಬಗ್ಗೆ ನಂಬಿಕೆ ಹೆಚ್ಚಾಗುವುದು, ದೇವರಿಗೆ ಮತ್ತಷ್ಟು ಸಮೀಪವಾಗುವುದು.
11. ಗುರು ಧ್ಯಾನ
ಗುರು ವಿಷ್ಣು ಗುರು ದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಅಂತ ಮಂತ್ರ ಹೇಳಿ ನಿಮ್ಮ ಗುರುವನ್ನು ವಂದಿಸಿ.
12.ಶೋಡೋಪಚಾರ ಪೂಜೆ
ಇದರಲ್ಲಿ 16 ಬಗೆಗಳಿವೆ
1. ಧ್ಯಾನ ಹಾಗೂ ಆಹ್ವಾನ
ನೀವು ದೇವರನ್ನು ಧ್ಯಾನ ಮಾಡಿ ನಂತರ ಆಹ್ವಾನೆ ಮಾಡಿ.
2. ಆಸನಂ
ದೇವರಿಗೆ ನೆಲಸಲು ಸ್ಥಳವನ್ನು ನೀಡಿ
3. ಆರ್ಘ್ಯ
ಮನೆಗೆ ಆಗಮಿಸಿದ ದೇವರಿಗೆ ಆರ್ಘ್ಯ ಅರ್ಪಿಸಿ
4. ನೈವೇದ್ಯ
ದೇವರಿಗೆ ಪಂಚಾಮೃತದ ನೈವೇದ್ಯ ಅರ್ಪಿಸಿ
5. ಅಭಿಷೇಕ
ದೇವರಿಗೆ ಜೇನು, ಸಕ್ಕರೆ, ಹಾಲು, ಮೊಸರು, ತುಪ್ಪದಿಂದ ಅಭಿಷೇಕ ಮಾಡಿ.
6. ವಸ್ತ್ರಂ
ನಂತರ ದೇವರಿಗೆ ವಸ್ತ್ರವನ್ನು ಹಾಕಿ ಅಲಂಕರಿಸಿ.
7. ದೇವರಿಗೆ ಪವಿತ್ರ ದಾರ ಅರ್ಪಿಸಿ
8. ದೇವರಿಗೆ ಆಭರಣಗಳನ್ನು ಅರ್ಪಿಸಿ
9. ಗಂಧವನ್ನು ಹಚ್ಚಿ
10. ಪುಷ್ಪಗಳನ್ನು ಅರ್ಪಿಸಿ
11. ಧೂಪ ಹಚ್ಚಿ
12. ದೀಪ ಹಚ್ಚಿ
13. ನೈವೇದ್ಯ
14. ತಾಂಬೂಲ
15. ಕರ್ಪೂರ ಪೂಜೆ
16. ಪ್ರದಕ್ಷಿಣೆ



Click it and Unblock the Notifications



