Just In
- 2 hrs ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 3 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 5 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 6 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Movies Seetha Raama: ಸಿಹಿ ಹುಟ್ಟಿನ ರಹಸ್ಯ ರಾಮನಿಗೆ ತಿಳಿಯುತ್ತಾ? ಭಾರ್ಗವಿಯ ಆಟ ಶುರು
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲೆಯಾಳಿಗರ ಅಚ್ಚುಮೆಚ್ಚಿನ ಹಬ್ಬ ಓಣಂ 2019: ವಿಶೇಷತೆ ಹಾಗೂ ಮಹತ್ವ
ಓಣಂ ಹಬ್ಬವು ಕೇರಳದ ರಾಷ್ಟ್ರೀಯ ಹಬ್ಬವಾಗಿದ್ದು ಇದನ್ನು ಇಲ್ಲಿನ ಜನತೆ ಹೆಚ್ಚು ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಸದಲ್ಲಿ ಬರುವ ಈ ಹಬ್ಬವು ಮಲಯಾಳಂ ಮಾಸದ ಚಿಂಗಮ್ ಮಾಸದಂದೇ ಬರುತ್ತದೆ. ಕ್ಯಾಲೆಂಡರ್ ಪ್ರಕಾರವಾಗಿ ಚಿಂಗಮ್ ಮಾಸವು ವರ್ಷದ ಆರಂಭ ಮಾಸದಲ್ಲೇ ಬರುತ್ತದೆ. ಹತ್ತು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು ಜನರು ರಾಷ್ಟ್ರೀಯ ಹಬ್ಬವನ್ನು ಪ್ರತ್ಯೇಕವಾಗಿ ತಮ್ಮದೇ ಶೈಲಿಯಲ್ಲಿ ಆಚರಿಸುತ್ತಾರೆ.
ಈ ಬಾರಿ ಸೆಪ್ಟೆಂಬರ್ 1 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ.
ಪೂರ್ಣ ಕೇರಳ ರಾಜ್ಯವೇ ಈ ಹಬ್ಬವನ್ನು ಆಚರಿಸುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಸಂಕ್ರಾಂತಿ ಪದದಿಂದ ಓಣಂ ಪದವನ್ನು ಬೇರ್ಪಡಿಸಲಾಗಿದೆ. ಸಂಕ್ರಾಂತಿ ಎಂದರೆ 27 ನಕ್ಷತ್ರಗಳ ಒಗ್ಗೂಡುವಿಕೆ ಎಂಬ ಅರ್ಥವೂ ಇದೆ. ತಿರು ಎಂಬುದು ಭಗವಾನ್ ವಿಷ್ಣುವಿಗೆ ಸಂಬಂಧಪಟ್ಟದ್ದಾಗಿದೆ. ತಿರುವೋಣಂ ಎಂಬುದು ವಿಷ್ಣುವಿನ ನಕ್ಷತ್ರವಾಗಿದೆ. ಈ ದಿನದಂದೇ ಮಹಾಬಲಿ ರಾಜನ ತಲೆಯ ಮೇಲೆ ವಾಮನ ಅವತಾರದಲ್ಲಿದ್ದ ಕೃಷ್ಣನು ಕಾಲಿಟ್ಟಿದ್ದನು ಎಂಬುದಾಗಿ ಐತಿಹ್ಯವಿದೆ.
ಶಾಂತಿ, ಸಾಮರಸ್ಯ ಸಾರುವ ಓಣಂ ಹಬ್ಬದ ಮಹತ್ವ
ಕೇರಳ ರಾಜ್ಯವನ್ನು ಮಹಾಬಲಿಯು ಆಳುತ್ತಿದ್ದ ಸಮಯವದು. ದಯಾಮಯನು ಕರುಣಾಳುವೂ ಆಗಿದ್ದ ಮಹಾಬಲಿಯು ಅಸರು ರಾಜನಾಗಿದ್ದನೂ ಪ್ರಜೆಗಳಿಗೆ ಒಳ್ಳೆಯದನ್ನೇ ಮಾಡುತ್ತಿದ್ದನು. ಅದಾಗ್ಯೂ ವಿಷ್ಣುವು ಮುಂದೆ ಅಸುರನಿಂದ ಉಂಟಾಗಬಹುದಾದ ಅಪಾಯವನ್ನು ಅರಿತುಕೊಂಡು ವಾಮನ ಅವತಾರವನ್ನು ತಾಳಿ ಬಲಿಯ ಮುಂದೆ ಭಿಕ್ಷೆಯನ್ನು ಕೇಳುತ್ತಾರೆ. ಮೊದಲೇ ಕೇಳಿದ್ದನ್ನು ಕೊಡುವ ರಾಜನು ಬ್ರಾಹ್ಮಣ ವಟುವು ಬೇಡಿದ ವರವನ್ನು ಇಲ್ಲವೆನ್ನುವುದಿಲ್ಲ.
ಅಂತೆಯೇ ವಾಮನನು ಒಂದು ಕಾಲನ್ನು ಆಕಾಶಕ್ಕೂ ಇನ್ನೊಂದನ್ನು ಭೂಮಿಗೂ ಇಟ್ಟು ನಂತರ ಇನ್ನೊಂದು ಅಪೇಕ್ಷೆಯನ್ನು ನೆರವೇರಿಸುವುದಕ್ಕಾಗಿ ಬಲಿ ಚಕ್ರವರ್ತಿಯ ತಲೆಯ ಮೇಲೆ ಇಡುತ್ತಾರೆ. ವಿಷ್ಣುವು ಬಲಿಯ ಹೃದಯವಂತಿಕೆಗೆ ಮೆಚ್ಚುತ್ತಾರೆ. ಅಂತೆಯೇ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ನೋಡುವ ವರವನ್ನು ಅನುಗ್ರಹಿಸುತ್ತಾರೆ. ಇದನ್ನೇ ಓಣಂ ಹಬ್ಬವನ್ನಾಗಿ ಆಚರಿಸುತ್ತಾರೆ.
ಬಲಿಯು
ಈ
ಹಬ್ಬದಂದು
ಭೂಮಿಗೆ
ಭೇಟಿ
ಇತ್ತು
ಪ್ರಜೆಗಳ
ಯೋಗಕ್ಷೇಮವನ್ನು
ನೋಡಿಕೊಳ್ಳುತ್ತಾರೆ
ಎಂಬುದು
ಜನರ
ನಂಬಿಕೆಯಾಗಿದೆ.
ಓಣಂ
ಹಬ್ಬವನ್ನು
ಕೇರಳದ
ಜನತೆ
ವಿಜೃಂಭಣೆಯಿಂದ
ಆಚರಿಸುತ್ತಾರೆ.
ಇಂದಿನ
ಲೇಖನದಲ್ಲಿ
ಈ
ವಿಜೃಂಭಣೆ
ಯಾವ
ಬಗೆಯದ್ದು
ಎಂಬುದನ್ನು
ನಾವು
ನೋಡೋಣ...
ಪೂಕಳಂ
ಬೇರೆ ಬೇರೆ ಹೂಗಳಿಂದ ರಂಗೋಲಿಯನ್ನು ಬಿಡಿಸುವುದೇ ಪೂಕಳಂವಾಗಿದೆ. ಓಣಂನ ಪ್ರತಿಯೊಂದು ದಿನದಂದು ಹೊಸ ಹೊಸ ಹೂಗಳ ಪದರವನ್ನು ನಿರ್ಮಿಸಲಾಗುತ್ತದೆ. ಕೇರಳದ ವಿವಿಧ ಭಾಗಗಳಲ್ಲಿ ಪೂಕಳಂ ಅನ್ನು ಸ್ಪರ್ಧೆಯ ರೂಪದಲ್ಲಿ ಕೂಡ ಕೊಂಡಾಡುತ್ತಾರೆ.
ಓಣಂ ಸದ್ಯ
ಓಣಂನ ಕೊನೆಯ ದಿನದಂದು ಈ ಔತಣಕೂಡವನ್ನು ಏರ್ಪಡಿಸಲಾಗುತ್ತದೆ. ಆ ದಿನ ತಿರುವೋಣಂ ಆಗಿರುತ್ತದೆ. ಬಾಳೆಎಲೆಯಲ್ಲಿ ಖಾದ್ಯಭಕ್ಷ್ಯಗಳನ್ನು ಇರಿಸಿ ಈ ಕೂಟವನ್ನು ಏರ್ಪಡಿಸಲಾಗುತ್ತದೆ. ಪೂರ್ಣವಾಗಿ ತರಕಾರಿಗಳನ್ನು ಈ ಸದ್ಯದಲ್ಲಿ ಬಳಸಲಾಗುತ್ತದೆ.
ಸಿಹಿ ಸಿಹಿಯಾದ 'ಉಣ್ಣಿಯಪ್ಪಮ್' ಆಹಾ ಬೊಂಬಾಟ್ ರುಚಿ!
ಓಣಕಳಿಗಳ್
ಓಣಂ ಸಮಯದಲ್ಲಿ ಬೇರೆ ಬೇರೆ ಆಟಗಳನ್ನು ಏರ್ಪಡಿಸಲಾಗುತ್ತದೆ. ತಲಕ್ ಪಂತ್ ಕಲಿ ಎಂಬುದು ಹೆಚ್ಚು ಪ್ರಸಿದ್ಧ ಆಟವಾಗಿದೆ. ಮಹಿಳೆಯರು ಬೇರೆ ಬೇರೆ ನೃತ್ಯ ಪ್ರಕಾರಗಳನ್ನು ಇಲ್ಲಿ ಪ್ರದರ್ಶಿಸಿ ತೋರಿಸುತ್ತಾರೆ.
ವಳ್ಳಂ ಕಳಿ ಬೋಟ್ ರೇಸ್
ಓಣಂ ಹಬ್ಬದಂದು ಈ ಬೋಟ್ ರೇಸ್ ಅನ್ನು ವಿಶೇಷವಾಗಿ ಏರ್ಪಡಿಸಲಾಗುತ್ತದೆ. ನೂರಕ್ಕಿಂತ ಹೆಚ್ಚಿನ ಬೋಟ್ ಚಲಾಯಿಸುವವರು ಸ್ಪರ್ಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನೀರಿನಲ್ಲಿ ಬೋಟ್ ರೇಸಿಂಗ್ ಅನ್ನು ಮಾಡುತ್ತಾರೆ. ಈ ಬೋಟ್ ರೇಸ್ ನೋಡಲೆಂದೇ ವಿಶ್ವದ ನಾನಾ ಕಡೆಯಿಂದ ಜನರು ಕೇರಳಕ್ಕೆ ಬರುತ್ತಾರೆ.
ಆನೆ ಮೆರವಣಿಗೆ
ಆನೆ ಮೆರವಣಿಗೆಯು ಹೆಚ್ಚು ಆಸಕ್ತಿಕರವಾದ ಸಂಗತಿಯಾಗಿದೆ. ಆನೆಯನ್ನು ಅಲಂಕರಿಸಿ ಆಭರಣಗಳನ್ನು ತೊಡಿಸಿ ರಸ್ತೆಯಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಅಂತೆಯೇ ಆನೆಯು ಜನರು ಕೊಡುವ ಫಲಾಹಾರಗಳನ್ನು ಸೇವಿಸುತ್ತದೆ. ಕೇರಳದ ಸಾಂಸ್ಕೃತಿಕ ಹಬ್ಬವೂ ಆಗಿರುವ ಓಣಂ ಸಮಯದಲ್ಲಿ ನೀವು ಕೇರಳಕ್ಕೆ ಭೇಟಿ ನೀಡುವುದು ಉಚಿತವಾಗಿದೆ.