Latest Updates
-
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ!
ಹೋಲಿಕಾ ದಹನ್ 2023 : ಈ ದಿನ ಈ ರೀತಿ ಪರಿಹಾರ ಮಾಡಿದರೆ ಸಂಪತ್ತು ವೃದ್ಧಿಯಾಗುವುದು
ಹೋಳಿಯ ಮುನ್ನ ದಿನ ಹೋಲಿಕಾ ದಹನ ಎಂದು ಆಚರಿಸಲಾಗುವುದು. ಈ ವರ್ಷ ಮಾರ್ಚ್ 8 ರಂದು ಬುಧವಾರ ಆಚರಿಸಲಾಗುವುದು. ಕೆಟ್ಟದರ ವಿರುದ್ಧ ಒಳ್ಳೆಯದ ವಿಜಯದ ಪ್ರತೀಕವಾಗಿ ಆಚರಿಸಲಾಗುವುದು.

ಈ ವರ್ಷ ಹೋಲಿಕಾ ದಹನವನ್ನು ಗುರುವಾರದಂದು ಆಚರಿಸಲಾಗುವುದು. ಇದು ತುಂಬಾ ಮಂಗಳಕರ ಯೋಗವಾಗಿದೆ. ಈ ವರ್ಷ ಹಿಂದೆಂದೂ ಸೃಷ್ಟಿಯಾಗದಂತಹ ಮಂಗಳಕರ ರಾಜಯೋಗ ರೂಪುಗೊಂಡಿದೆ ಎಂದು ಜ್ಯೋತಿಷ್ಯಿಗಳು ಹೇಳುತ್ತಿದ್ದಾರೆ. ಹೋಲಿಕಾ ದಹನದಂದು ಹನುಮಂತನ ಪೂಜೆ ಮಾಡಬೇಕು, ಜೊತೆಗೆ ಕೆಲವು ಪರಿಹಾರಗಳನ್ನು ಮಾಡುವುದರಿಂದ ದಾರಿದ್ರ್ಯ ಹೋಗಿ ಸಂಪತ್ತು ದೊರೆಯುವುದು.

ಹೋಲಿಕಾ ದನದಂದು ಹನುಮಂತನ ಪೂಜಿಯ ಮಹತ್ವ
* ಈ ದಿನ ಹನುಮಂತನನ್ನು ಸಮರ್ಪಣಾ ಭಾವದಿಂದ ಪೂಜಿಸಿದರೆ ಎಲ್ಲಾ ದುಃಖ ದೂರಾಗುವುದು, ಪಾಪಗಳಿಂದ ಮುಕ್ತಿ ದೊರೆಯುವುದು ಎಂದು ನಂಬಲಾಗಿದೆ. ಈ ದಿನ ಹನುಮಂತನನ್ನು ಪೂಜಿಸಿದರೆ ಅದು ತುಂಬಾ ಮಂಗಳಕರವಾಗಿದೆ.

ಹೋಲಿಕಾ ದಹನ ದಿನ ಈ ರೀತಿ ಮಾಡಿದರೆ ಸಂಪತ್ತು ವೃದ್ದಿಸುವುದು
ಹೋಲಿಕಾ ದಹನ ಭಸ್ಮವನ್ನು ನಿಮ್ಮ ಮನೆಗೆ ತಂದು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಇದನ್ನು ವಾಸ್ತು ಪ್ರಕಾರ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ವಾಸ್ತು ದೋಷವನ್ನು ತೊಡೆದುಹಾಕಬಹುದು.
ನಿಮ್ಮ ಜೀವನದ ಎಲ್ಲಾ ಆಸೆಗಳನ್ನು ಪೂರೈಸಲು ಮತ್ತು ಯಶಸ್ಸನ್ನು ಪಡೆಯಲು ಹೋಳಿಯಲ್ಲಿ ಸರಿಯಾದ ಆಚರಣೆಗಳೊಂದಿಗೆ ಶಿವನನ್ನು ಆರಾಧಿಸಿ.
ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳಿದ್ದರೆ, ನೀವು ಹೋಲಿಕಾ ದಿನದಂದು ಲಕ್ಷ್ಮಿ ದೇವಿಯನ್ನು ಸರಿಯಾದ ಆಚರಣೆಗಳೊಂದಿಗೆ ಪೂಜಿಸಬೇಕು ಮತ್ತು ಶಾಸ್ತ್ರನಾಮವನ್ನು ಪಠಿಸಬೇಕು.
ಹೋಲಿಕಾ ದಹನದ ರಾತ್ರಿ ಮನೆಯ ಮುಖ್ಯ ದ್ವಾರದ ನಾಲ್ಕೂ ದಿಕ್ಕಿನಲ್ಲಿ ಸಾಸಿವೆ ಎಣ್ಣೆಯಿಂದ ನಾಲ್ಕು ದಿಕ್ಕಿನಲ್ಲಿ ದೀಪವನ್ನು ಹಚ್ಚಿ
ಇದರಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.

ವ್ಯಾಪಾರದ ಬೆಳವಣಿಗೆ ಹಾಗೂ ಆರೋಗ್ಯ ಪ್ರಾಪ್ತಿಗಾಗಿ
ವ್ಯಾಪಾರದ ಬೆಳವಣಿಗೆ ಮತ್ತು ಉದ್ಯೋಗ ಪ್ರಗತಿಗಾಗಿ 21 ಗೋಮತಿ ಚಕ್ರಗಳನ್ನು ತೆಗೆದುಕೊಂಡು ಅದನ್ನು ಹೋಲಿಕಾ ದಹನದ ರಾತ್ರಿ ಶಿವಲಿಂಗದ ಮೇಲೆ ಅರ್ಪಿಸಿ. ಈ ಪರಿಹಾರವು ನಿಮ್ಮ ವ್ಯವಹಾರಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ನೀವು ಉದ್ಯೋಗದಲ್ಲಿ ಬಡ್ತಿಯನ್ನು ಸಹ ಪಡೆಯುತ್ತೀರಿ.
ನಿಮ್ಮ ಜೀವನದಲ್ಲಿ ಶತ್ರುಗಳ ಭಯ ಹೆಚ್ಚಾಗಿದ್ದರೆ, ಹೋಲಿಕಾ ದಹನದ ಸಮಯದಲ್ಲಿ ಏಳು ಗೋಮತಿ ಚಕ್ರಗಳನ್ನು ತೆಗೆದುಕೊಂಡು ದೇವರನ್ನು ಪ್ರಾರ್ಥಿಸಿ. ಪ್ರಾರ್ಥನೆಯ ನಂತರ, ಹೋಲಿಕಾದಲ್ಲಿ ಭಕ್ತಿ ಮತ್ತು ನಂಬಿಕೆಯಿಂದ ಗೋಮತಿ ಚಕ್ರಗಳನ್ನು ಅರ್ಪಿಸಿ.
ಹೋಲಿಕಾ ದಹನದ ಸಮಯದಲ್ಲಿ ಹೋಲಿಕಾ ಅಗ್ನಿಯ ಸುತ್ತಲೂ ಏಳು ಸುತ್ತುಗಳನ್ನು ಹಾಕುವುದರಿಂದ ಭಕ್ತರು ಅಕ್ಷಯ ಪುಣ್ಯವನ್ನು ಪಡೆಯಬಹುದು.
ಆರೋಗ್ಯ ಪ್ರಯೋಜನಗಳಿಗಾಗಿ, ನೀವು ಹೋಲಿಕಾ ದಹನದ ಅಗ್ನಿಯಲ್ಲಿ ಹಸಿ ಗೋಧಿಯನ್ನು ಬೇಯಿಸಿ, ತಿನ್ನಬೇಕು. ಹೀಗೆ ಮಾಡುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.



Click it and Unblock the Notifications