Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಝೆನ್ ಕಥೆ: ದುಡಿಯದೆ ತಿನ್ನುವುದು ಒಳ್ಳೆಯದಲ್ಲ

ಗುರುಗಳು ಈ ಇಳಿ ವಯಸ್ಸಿನಲ್ಲಿ ಆ ರೀತಿ ಕಷ್ಟಪಟ್ಟು ದುಡಿಯುವುದು ನೋಡಲು ಶಿಷ್ಯರಿಗೆ ತುಂಬಾ ಸಂಕಟವಾಗುತ್ತಿತ್ತು. ಈ ರೀತಿ ಕೆಲಸ ಮಾಡಬೇಡಿ, ಒಂದು ಕಡೆ ಕೂತು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಎಷ್ಟು ಹೇಳಿದರೂ ಇವರ ಮಾತು ಕೇಳುತ್ತಿರಲಿಲ್ಲ.
ಹೇಗಾದರೂ ಮಾಡಿ ಗುರುಗಳು ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ಯೋಚಿಸಿದ ಶಿಷ್ಯರು ಒಂದು ಉಪಾಯ ಹೂಡಿದರು. ಅದರಂತೆ ಗುರುಗಳು ಕೆಲಸ ಮಾಡುವಾಗ ಬಳಸುತ್ತಿದ್ದ ಗುದ್ದಲಿ, ಕತ್ತಿ ಮುಂತಾದ ಉಪಕರಣಗಳನ್ನು ಬಚ್ಚಿಟ್ಟರು. ಗುರುಗಳು ಯಾವತ್ತಿನಂತೆ ತೋಟದಲ್ಲಿ ಕೆಲಸ ಮಾಡಲು ಬಂದಾಗ ಯಾವುದೇ ಉಪಕರಣಗಳು ಕಣ್ಣಿಗೆ ಬೀಳಲಿಲ್ಲ, ಇದು ತನ್ನ ಶಿಷ್ಯರ ಕೆಲಸವೆಂದು ಗೊತ್ತಾಯಿತು.
ತನ್ನ ಕೆಲಸದ ಸಾಮಾನುಗಳನ್ನು ಮರಳಿ ಕೊಡುವವರೆಗೆ ತಿನ್ನುವುದಿಲ್ಲ ಎಂದು ಉಪವಾಸ ಕೂತರು. ಈ ರೀತಿ ಎರಡು ದಿನ ಏನೂ ತಿನ್ನಲಿಲ್ಲ. ಕೊನೆಗೆ ಗುರುವಿನ ಹಠದ ಮುಂದೆ ಶಿಷ್ಯರು ಸೋತರು. ಗುರುವಿಗೆ ತಾವು ಬಚ್ಚಿಟ್ಟಿದ್ದ ಸಾಮಾನುಗಳನ್ನು ಹಿಂತಿರುಗಿಸಿದರು. ಆಗ ಗುರುಗಳು ಕೆಲಸವನ್ನು ಮಾಡಿ ನಂತರ ಊಟ ಮಾಡಿದರು. ಗುರುಗಳನ್ನೇ ಆಶ್ಚರ್ಯದಿಂದ ನೋಡುತ್ತಿದ್ದ ಶಿಷ್ಯರ ಹತ್ತಿರ "ಮೈ ಬಗ್ಗಿಸಿ ದುಡಿಯದೆ ತಿನ್ನುವುದು ಒಳ್ಳೆಯ ಲಕ್ಷಣವಲ್ಲ" ಅಂದರು.



Click it and Unblock the Notifications