Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ಝೆನ್ ಕಥೆ: ದುಡಿಯದೆ ತಿನ್ನುವುದು ಒಳ್ಳೆಯದಲ್ಲ

ಗುರುಗಳು ಈ ಇಳಿ ವಯಸ್ಸಿನಲ್ಲಿ ಆ ರೀತಿ ಕಷ್ಟಪಟ್ಟು ದುಡಿಯುವುದು ನೋಡಲು ಶಿಷ್ಯರಿಗೆ ತುಂಬಾ ಸಂಕಟವಾಗುತ್ತಿತ್ತು. ಈ ರೀತಿ ಕೆಲಸ ಮಾಡಬೇಡಿ, ಒಂದು ಕಡೆ ಕೂತು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಎಷ್ಟು ಹೇಳಿದರೂ ಇವರ ಮಾತು ಕೇಳುತ್ತಿರಲಿಲ್ಲ.
ಹೇಗಾದರೂ ಮಾಡಿ ಗುರುಗಳು ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ಯೋಚಿಸಿದ ಶಿಷ್ಯರು ಒಂದು ಉಪಾಯ ಹೂಡಿದರು. ಅದರಂತೆ ಗುರುಗಳು ಕೆಲಸ ಮಾಡುವಾಗ ಬಳಸುತ್ತಿದ್ದ ಗುದ್ದಲಿ, ಕತ್ತಿ ಮುಂತಾದ ಉಪಕರಣಗಳನ್ನು ಬಚ್ಚಿಟ್ಟರು. ಗುರುಗಳು ಯಾವತ್ತಿನಂತೆ ತೋಟದಲ್ಲಿ ಕೆಲಸ ಮಾಡಲು ಬಂದಾಗ ಯಾವುದೇ ಉಪಕರಣಗಳು ಕಣ್ಣಿಗೆ ಬೀಳಲಿಲ್ಲ, ಇದು ತನ್ನ ಶಿಷ್ಯರ ಕೆಲಸವೆಂದು ಗೊತ್ತಾಯಿತು.
ತನ್ನ ಕೆಲಸದ ಸಾಮಾನುಗಳನ್ನು ಮರಳಿ ಕೊಡುವವರೆಗೆ ತಿನ್ನುವುದಿಲ್ಲ ಎಂದು ಉಪವಾಸ ಕೂತರು. ಈ ರೀತಿ ಎರಡು ದಿನ ಏನೂ ತಿನ್ನಲಿಲ್ಲ. ಕೊನೆಗೆ ಗುರುವಿನ ಹಠದ ಮುಂದೆ ಶಿಷ್ಯರು ಸೋತರು. ಗುರುವಿಗೆ ತಾವು ಬಚ್ಚಿಟ್ಟಿದ್ದ ಸಾಮಾನುಗಳನ್ನು ಹಿಂತಿರುಗಿಸಿದರು. ಆಗ ಗುರುಗಳು ಕೆಲಸವನ್ನು ಮಾಡಿ ನಂತರ ಊಟ ಮಾಡಿದರು. ಗುರುಗಳನ್ನೇ ಆಶ್ಚರ್ಯದಿಂದ ನೋಡುತ್ತಿದ್ದ ಶಿಷ್ಯರ ಹತ್ತಿರ "ಮೈ ಬಗ್ಗಿಸಿ ದುಡಿಯದೆ ತಿನ್ನುವುದು ಒಳ್ಳೆಯ ಲಕ್ಷಣವಲ್ಲ" ಅಂದರು.



Click it and Unblock the Notifications