Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ನೀನು ಯಾರು ಎಂದು ಗೊತ್ತಾಯಿತೇ?
Short Story
oi-Reena
By Hema S

ಝನ್ ಗುರುಗಳಿಗೆ ಅವನ ಮುಖ ನೋಡಿದಾಗಲೇ ತುಂಬಾ ಸಮಸ್ಯೆ ಇರುವಂತೆ ತೋರಿತ್ತು. ಅವನು ಗುರುಗಳ ಹತ್ತಿರ "ಗುರುಗಳೇ ನನಗೆ ಜೀವನ ಸಾಕಾಗಿದೆ. ನನಗೆ ಏನಾಗಿದೆ, ನಾನು ಯಾರು?" ಎಂದು ಬಡಬಡಿಸುತ್ತಿದ್ದ. ಗುರುಗಳು ಏನೂ ಮಾತನಾಡಲಿಲ್ಲ. ಆ ವ್ಯಕ್ತಿಯು ಗುರುಗಳ ಹತ್ತಿರ "ನನ್ನ ಸಮಸ್ಯೆಗೆ ಪರಿಹಾರ ನೀಡಿ" ಎಂದು ಬಗೆಬಗೆಯಾಗಿ ಬೇಡಿಕೊಂಡನು. ಆದರೂ ಗುರುಗಳು ತುಟಿಪಿಟಕ್ ಎನ್ನಲಿಲ್ಲ.
ಆ ವ್ಯಕ್ತಿಗೆ ತುಂಬಾ ಕೋಪ ಬಂತು. ಗುರುಗಳ ಹತ್ತಿರ ಪರಿಹಾರ ದೊರಕುವುದಿಲ್ಲ ಎಮದು ಭಾಸವಾಯಿತು. ನನ್ನ ಸಮಸ್ಯೆಗೆ ನಾನೇಎದುರಿಸುತ್ತೇನೆ, ಇವರ ಸಹಾಯ ಬೇಕಾಗಿಲ್ಲ ಎಂಬ ಛಲದಿಂದ ಎದ್ದು ಹೊರನಡೆದನು. ಆಗ ಗುರುಗಳು ಅವನನ್ನು ಕರೆದು ಅವನ ಮುಖವನ್ನು ದಿಟ್ಟಿಸಿ ನೋಡುತ್ತಾ "ಈಗ ನಿನಗೆ ಎಲ್ಲವನ್ನು ಎದುರಿಸುತ್ತೇನೆ ಎಂಬ ಛಲ ಬಂತು ಅಲ್ಲವೇ? ನಿನಗೆ ನೀನು ಯಾರು, ನಿನ್ನ ಶಕ್ತಿ ಏನು ಎಂದು ತಿಳಿಯಿತು, ಆದ್ದರಿಂದ ಇನ್ನು ನಿನ್ನ ಸಮಸ್ಯೆ ಪರಿಹಾರವಾಗುವುದು" ಎಂದರು.
Comments
English summary
Kannada Zen story | Inspirational short stories | ಝೆನ್ ಕಥೆ : ನೀನು ಯಾರು ಎಂದು ಗೊತ್ತಾಯಿತೇ?
Story first published: Tuesday, August 21, 2012, 15:47 [IST]
Other articles published on Aug 21, 2012



Click it and Unblock the Notifications