ನೀನು ಯಾರು ಎಂದು ಗೊತ್ತಾಯಿತೇ?

 Kannada Zen story
ಒಬ್ಬ ವ್ಯಕ್ತಿ ಜೀವನದಲ್ಲಿ ತುಂಬಾ ಜಿಗುಪ್ಸೆ ಹೊಂದಿದ್ದ. ಅವನಿಗೆ ತನ್ನ ಸ್ಥಿತಿಯ ಬಗ್ಗೆ ನೆನೆದರೆ ಕೋಪ ಬರ್ತಾ ಇತ್ತು. ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಯೋಚಿಸಿ ತಲೆ ಕೆಡಿಸಿಕೊಂಡಿದ್ದನು. ನನ್ನ ಸಮಸ್ಯೆಗೆ ಝೆನ್ ಗುರುಗಳನ್ನು ಕಂಡರೆ ಪರಿಹಾರ ಸಿಗಬಹುದೆಂದು ತೀರ್ಮಾನಿಸಿ ಝೆನ್ ಗುರುಗಳನ್ನು ಭೇಟಿಯಾದನು.

ಝನ್ ಗುರುಗಳಿಗೆ ಅವನ ಮುಖ ನೋಡಿದಾಗಲೇ ತುಂಬಾ ಸಮಸ್ಯೆ ಇರುವಂತೆ ತೋರಿತ್ತು. ಅವನು ಗುರುಗಳ ಹತ್ತಿರ "ಗುರುಗಳೇ ನನಗೆ ಜೀವನ ಸಾಕಾಗಿದೆ. ನನಗೆ ಏನಾಗಿದೆ, ನಾನು ಯಾರು?" ಎಂದು ಬಡಬಡಿಸುತ್ತಿದ್ದ. ಗುರುಗಳು ಏನೂ ಮಾತನಾಡಲಿಲ್ಲ. ಆ ವ್ಯಕ್ತಿಯು ಗುರುಗಳ ಹತ್ತಿರ "ನನ್ನ ಸಮಸ್ಯೆಗೆ ಪರಿಹಾರ ನೀಡಿ" ಎಂದು ಬಗೆಬಗೆಯಾಗಿ ಬೇಡಿಕೊಂಡನು. ಆದರೂ ಗುರುಗಳು ತುಟಿಪಿಟಕ್ ಎನ್ನಲಿಲ್ಲ.

ಆ ವ್ಯಕ್ತಿಗೆ ತುಂಬಾ ಕೋಪ ಬಂತು. ಗುರುಗಳ ಹತ್ತಿರ ಪರಿಹಾರ ದೊರಕುವುದಿಲ್ಲ ಎಮದು ಭಾಸವಾಯಿತು. ನನ್ನ ಸಮಸ್ಯೆಗೆ ನಾನೇಎದುರಿಸುತ್ತೇನೆ, ಇವರ ಸಹಾಯ ಬೇಕಾಗಿಲ್ಲ ಎಂಬ ಛಲದಿಂದ ಎದ್ದು ಹೊರನಡೆದನು. ಆಗ ಗುರುಗಳು ಅವನನ್ನು ಕರೆದು ಅವನ ಮುಖವನ್ನು ದಿಟ್ಟಿಸಿ ನೋಡುತ್ತಾ "ಈಗ ನಿನಗೆ ಎಲ್ಲವನ್ನು ಎದುರಿಸುತ್ತೇನೆ ಎಂಬ ಛಲ ಬಂತು ಅಲ್ಲವೇ? ನಿನಗೆ ನೀನು ಯಾರು, ನಿನ್ನ ಶಕ್ತಿ ಏನು ಎಂದು ತಿಳಿಯಿತು, ಆದ್ದರಿಂದ ಇನ್ನು ನಿನ್ನ ಸಮಸ್ಯೆ ಪರಿಹಾರವಾಗುವುದು" ಎಂದರು.

English summary

Kannada Zen story | Inspirational short stories | ಝೆನ್ ಕಥೆ : ನೀನು ಯಾರು ಎಂದು ಗೊತ್ತಾಯಿತೇ?

A man approached a Zen Master in a distraught state. 
 He implored the Master thus : " Master I feel totally lost and desperate. I do not know who I am? I plead you to show me my true self!"
 
Story first published: Tuesday, August 21, 2012, 15:47 [IST]
X
Desktop Bottom Promotion