For Quick Alerts
ALLOW NOTIFICATIONS  
For Daily Alerts

ಧನುರ್ಮಾಸ 2022: ದಿನ, ಮುಹೂರ್ತ, ಪೂಜಾ ವಿಧಿ ಹಾಗೂ ಮಹತ್ವ

|

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸ್ಥಳಾಂತರಗೊಳ್ಳುವ ಅವಧಿಯೇ ಧನುರ್ಮಾಸ. ಧನುರ್ ಮಾಸವನ್ನು ಶೂನ್ಯ ಮಾಸ ಅಥವಾ ಕರ್ಮ ಮಾಸ ಎಂದು ಸಹ ಕರೆಯಲಾಗುತ್ತದೆ.

123

ಈ ವರ್ಷ 2022ರಲ್ಲಿ ಧನುರ್ಮಾಸವು 2023 ಡಿಸೆಂಬರ್ 16 ರಿಂದ ಪ್ರಾರಂಭವಾಗಿ ಮಕರ ಸಂಕ್ರಾಂತಿಯಂಂದು ಅಂದರೆ 2023 ಜನವರಿ 14 ರಂದು ಕೊನೆಗೊಳ್ಳುತ್ತದೆ. ಧನುರ್ ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.

1. ಧನುರ್ಮಾಸದಲ್ಲಿ ವಿಷ್ಣು ಪೂಜೆ

1. ಧನುರ್ಮಾಸದಲ್ಲಿ ವಿಷ್ಣು ಪೂಜೆ

ಧನುರ್ಮಾಸದಲ್ಲಿ ಬೆಳಗಿನ ಸಮಯದಲ್ಲಿ ವಿಷ್ಣುವಿನ ಆರಾಧನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಗುತ್ತದೆ. ಅಲ್ಲದೆ ಲಕ್ಷ್ಮಿ ದೇವಿಯನ್ನು ಸಹ ಈ ಮಾಸದಲ್ಲಿ ಪೂಜಿಸಲಾಗುತ್ತದೆ. ಇತರ ಪ್ರಮುಖ ಮಂತ್ರಗಳು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿವೆ. ಈ ಮಾಸದಲ್ಲಿ ಭಗವಾನ್ ವಿಷ್ಣುವಿಗೆ ಮಾಡುವ ಅತ್ಯಂತ ಜನಪ್ರಿಯ ನೈವೇದ್ಯವೆಂದರೆ ಮೂಂಗ್ ದಾಲ್.

ಧನುರ್ಮಾಸದಲ್ಲಿ ಕೇವಲ ಒಂದು ದಿನ ಭಗವಾನ್ ವಿಷ್ಣುವನ್ನು ಪೂಜಿಸಿದರೂ ಸಾವಿರಾರು ವರ್ಷಗಳ ಕಾಲ ಪೂಜಿಸಿದಂತೆ ಎಂಬ ನಂಬಿಕೆ ಇದೆ.

2. ಧನುರ್ಮಾಸ ವ್ರತವನ್ನು ಹೇಗೆ ಮಾಡಬೇಕು

2. ಧನುರ್ಮಾಸ ವ್ರತವನ್ನು ಹೇಗೆ ಮಾಡಬೇಕು

ಸಂತೋಷ, ದೀರ್ಘ ಮತ್ತು ಸಮೃದ್ಧ ಜೀವನ ಮತ್ತು ಸಾವಿನ ನಂತರ ಮೋಕ್ಷವನ್ನು ಬಯಸುವ ಭಕ್ತರು ಧನುರ್ಮಾಸ ವ್ರತವನ್ನು ಮಾಡುತ್ತಾರೆ. ಕಷ್ಟದಲ್ಲಿರುವರು ಮತ್ತು ತೊಂದರೆಗಳಿಂದ ಮುಕ್ತರಾಗಲು ಈ ವ್ರತವನ್ನು ಭಕ್ತರು ಧನುರ್ಮಾಸದಲ್ಲಿ ಆಚರಿಸುತ್ತಾರೆ.

* ಧನುರ್ಮಾಸ ವ್ರತವನ್ನು ಮಾಡಲು ಬಯಸುವ ಭಕ್ತರು ಭಗವಾನ್ ವಿಷ್ಣುವಿನ ವಿಗ್ರಹವನ್ನು ಸಿದ್ಧಪಡಿಸಬೇಕು. ವಿಷ್ಣುವಿನ ವಿಗ್ರಹವನ್ನು ಚಿನ್ನ, ಬೆಳ್ಳಿ ಅಥವಾ ತಾಮ್ರದ್ದು ಆಗಿರಬಹುದು.

* ವಿಷ್ಣುವನ್ನು ಪೂಜಿಸುವ ಮಂಟಪವನ್ನು ಸಿದ್ಧಪಡಿಸಬೇಕು. ಭಗವಾನ್ ವಿಷ್ಣುವನ್ನು ಮಧುಸೂಧನ ಎಂಬ ಹೆಸರಿನಿಂದ ಪೂಜಿಸಬೇಕು.

* ಸೂರ್ಯೋದಯಕ್ಕೆ ಮುನ್ನ ಎದ್ದು ಶುದ್ಧವಾಗಿ ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಬೇಕು.

* ದೈನಂದಿನ ಸಂಧ್ಯಾ ವಂದನೆಯನ್ನು ಮಾಡಿ, ನಂತರ ದೈನಂದಿನ ಪೂಜೆ ಮೊದಲು ಮಾಡಬೇಕು.

* ನಂತರ ಅವರು ಧನುರ್ಮಾಸ ವ್ರತದ ಪೂಜೆಯನ್ನು ಪ್ರಾರಂಭಿಸಬಹುದು.

* ಭಗವಾನ್ ಮಧುಸೂಧನನಿಗೆ ಸ್ನಾನ ಅಭಿಷೇಕ ಮಾಡಲು ಮತ್ತು ನೈವೇದ್ಯಕ್ಕೆ ಪಂಚಾಮೃತ, ಹಸುವಿನ ಹಾಲು, ತೆಂಗಿನಕಾಯಿ, ತೆಂಗಿನ ನೀರು, ಪೊಂಗಲ್, ಧಧೋಜನಂ ಅಥವಾ ಮೊಸರು ಅನ್ನ ಬೇಕಾಗುತ್ತವೆ

* ಪೂಜೆಯ ಅಂಗವಾಗಿ ಭಗವಾನ್ ಮಧುಸೂಧನನಿಗೆ ಮಂತ್ರೋಚ್ಛಾರಣೆಯೊಂದಿಗೆ ಅಭಿಷೇಕ ಮಾಡಲಾಗುವುದು. ಭಗವಾನ್ ಮಧುಸೂಧನನನ್ನು ಪಂಚ ಅಮೃತದಿಂದ ಸ್ನಾನ ಮಾಡಿಸಬೇಕು ಅಂದರೆ ಹಾಲು, ಮೊಸರು, ತುಪ್ಪ, ಸಕ್ಕರೆ ಮತ್ತು ಜೇನುತುಪ್ಪದ ಮಿಶ್ರಣ.

* ಇವುಗಳನ್ನೆಲ್ಲ ಶಂಖದಲ್ಲಿ ತುಂಬಿ ನಂತರ ಭಗವಂತನ ಮೇಲೆ ಅಭಿಷೇಕ ಮಾಡಬೇಕು.

* ನಂತರ ಮಧುಸೂಧನನನ್ನು ತುಳಸಿ ಗಿಡದ ಎಲೆಗಳಿಂದ ಪೂಜಿಸಬೇಕು. ಎಲೆಗಳು ಪ್ರತ್ಯೇಕವಾಗಿರಬಾರದು ಆದರೆ ಪ್ರತಿ ಶಾಖೆಯು ಮೂರು ಎಲೆಗಳನ್ನು ಹೊಂದಿರಬೇಕು. ಮೂರು ಎಲೆಗಳನ್ನು ಹೊಂದಿದ್ದರೆ ಅದನ್ನು ದಳ ಎಂದು ಕರೆಯಲಾಗುತ್ತದೆ. ಮಧುಸೂಧನನನ್ನು ತುಳಸಿ ದಳಗಳಿಂದ ಪೂಜಿಸಬೇಕು.

* ನಂತರ ಭಗವಂತನನ್ನು ವಿವಿಧ ಹೂವುಗಳಿಂದ ಪೂಜಿಸಬೇಕು ಈ ವೇಳೆ ಭಗವಾನ್ ವಿಷ್ಣುವಿನ ಅಷ್ಟೋತ್ತರ ಶತ ನಾಮಾವಳಿ ಅಥವಾ ಸಹಸ್ರನಾಮವನ್ನು ಪಠಿಸಬೇಕು.

* ಧನುರ್ಮಾಸ ವ್ರತಕ್ಕಾಗಿ ನೈವೇದ್ಯವಾಗಿ ಪೊಂಗಲ್ ಅನ್ನು ಅರ್ಪಿಸಬೇಕು.

3. ಧನುರ್ಮಾಸದ ಮಹತ್ವ

3. ಧನುರ್ಮಾಸದ ಮಹತ್ವ

ಒಂದು ತಿಂಗಳ ಈ ಅವಧಿಯು ವಿಷ್ಣು ಭಕ್ತರಿಗೆ ಅತ್ಯಂತ ಮಂಗಳಕರ ಸಮಯ. ಧನುರ್ಮಾಸವು ಭಕ್ತಿ ಚಟುವಟಿಕೆಗಳಿಗೆ ಸೀಮಿತವಾದ ಮಾಸ ಎನ್ನಲಾಗುತ್ತದೆ. ಈ ಮಾಸದಲ್ಲಿ ಮದುವೆ, ಆಸ್ತಿ ಖರೀದಿ ಅಥವಾ ಯಾವುದೇ ಶುಭ ಕಾರ್ಯವನ್ನು ನಿಷೇಧಿಸಲಾಗಿದೆ, ದೇವರ ಪೂಜೆಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಈ ಅವಧಿಯಲ್ಲಿ ದೇವಾಲಯಗಳು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

* ಧನುರ್ಮಾಸ ವ್ರತವನ್ನು ಆಚರಿಸುವ ಮನುಷ್ಯನು ಈ ಜಗತ್ತಿನಲ್ಲಿ ತನ್ನ ಜೀವನದುದ್ದಕ್ಕೂ ಎಲ್ಲಾ ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂತೋಷದಿಂದ ಬದುಕುತ್ತಾನೆ ಮತ್ತು ಮರಣಾನಂತರ ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

* ಧನುರ್ ಸಂಕ್ರಮಣ ಎಂದು ಕರೆಯಲ್ಪಡುವ ಧನು ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಧನುರ್ಮಾಸದ ಆರಂಭವನ್ನು ಗುರುತಿಸಲಾಗುತ್ತದೆ, ಆದ್ದರಿಂದ ಆ ಕಾಲಕ್ಕೆ ಧನುರ್ಮಾಸ ಎಂದು ಹೆಸರು.

* ಧನುರ್ಮಾಸದ ಅವಧಿಯಲ್ಲಿ ಬರುವ ಏಕಾದಶಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಧನುರ್ಮಾಸದಲ್ಲಿ ಚಂದ್ರನ ಬೆಳವಣಿಗೆಯ ಹಂತದಲ್ಲಿ ಬರುವ ವೈಕುಂಠ ಏಕಾದಶಿಯು ಮೋಕ್ಷ ದ್ವಾರಂ ಅಥವಾ ಸ್ವರ್ಗದ ಬಾಗಿಲು ತೆರೆಯುವ ಸಮಯ ಎಂಬ ನಂಬಿಕೆ. ಈ ಸಮಯದಲ್ಲಿ ವೆಂಕಟೇಶ್ವರನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

English summary

Dhanurmasam 2022 Start Date, End Date, Rituals, Puja Vidhi, Story and Significance in Kannada

Here we are discussing about Dhanurmasam 2022 Start Date, End Date, Rituals, Puja Vidhi, Story and Significance in Kannada. Read more.
X
Desktop Bottom Promotion