Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಚಿನ್ನ ಖರೀದಿಗೆ ಶುಭದಿನವಾದ ಧನ್ತೆರೇಸ್ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ
ದೀಪಾವಳಿ ಸಂದರ್ಭದಲ್ಲಿ ಬರುವ ಧನತ್ರಯೋದಶಿಗೆ ತುಂಬಾನೇ ಮಹತ್ವವಿದೆ. ಚಿನ್ನದ ಆಭರಣ ಖರೀದಿಸಲು ತುಂಬಾನೇ ಸೂಕ್ತವಾದ ದಿನ ಇದಾಗಿದೆ. ಈ ದಿನ ಚಿನ್ನ ಖರೀದಿಸಿದರೆ ಅಕ್ಷಯ ಪಾತ್ರೆಯಂತೆ ನಮ್ಮಲ್ಲಿ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ. ಹಾಗಾಗಿ ಈ ದಿನದಂದು ಒಂದು ಗ್ರಾಂನಷ್ಟದರೂ ಚಿನ್ನ ಖರೀದಿಸುತ್ತಾರೆ.
5 ದಿನಗಳ ಕಾಲ ನಡೆಯುವ ದೀಪಾವಳಿ ಆಚರಣೆಯಲ್ಲಿ ದೀಪಾವಳಿಯ ಮೊದಲ ದಿನವೇ ಧನ್ತೆರೇಸ್. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಆ ವರ್ಷ ಸಂಪತ್ತಿನ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ.

ಧನ್ತೆರೇಸ್ ಆಚರಣೆ ಹಿಂದೆ ಒಂದು ಸುಂದರವಾದ ಪೌರಾಣಿಕ ಕತೆ ಕೂಡ ಇದೆ
ಒಂದು ರಾಜ್ಯದಲ್ಲಿ ಹಿಮಾ ಎಂಬ ರಾಜನಿದ್ದ, ಅವನಿಗೆ ಮಕ್ಕಳಾಗಿರುವುದಿಲ್ಲ, ಆತ ದೇವರನ್ನು ತುಂಬಾ ಪ್ರಾರ್ಥಿಸಿದ ಮೇಲೆ ಮಗ ಜನಿಸುತ್ತಾನೆ, ಆದರೆ ಆತನ ಆಯುಸ್ಸು 16 ವರ್ಷ ಮಾತ್ರ. ಮಗ 16 ವರ್ಷ ತುಂಬಿದಾಗ ರಾಜ ರಾಜಕುಮಾರನಿಗೆ ಮದುವೆ ಮಾಡುತ್ತಾನೆ. ಮದುವೆಯಾಗಿ ನಾಲ್ಕೇ ದಿನಕ್ಕೆ ಸಾಯುತ್ತಾನೆ ಎಂದು ಜ್ಯೋತಿಷಿ ತಿಳಿಸುತ್ತಾರೆ, ಆದರೆ ಆ ರಾಜಕುಮಾರ ಪತ್ನಿ ತನ್ನ ಗಂಡನನ್ನು ಉಳಿಸಿಕೊಳ್ಳುವ ದೃಢ ನಿರ್ಧಾರ ಮಾಡಿ ಹೊಸ್ತಿಲಿನಲ್ಲಿ ಚಿನ್ನದ ರಾಶಿಯನ್ನು ಹಾಕಿ ಅಲ್ಲಿ ಕಾವಲು ಕೂರುತ್ತಾಳೆ, ತನ್ನ ಗಂಡನಿಗೆ ನಿದ್ದೆ ಮಾಡದಂತೆ ಸೂಚಿಸಿ, ನಿದ್ದೆ ಮಾಡದಿರಲು ಕತೆ ಹೇಳುತ್ತಾನೆ. ರಾಜಕುಮಾರನ ಪ್ರಾಣ ತೆಗೆಯಲು ಹಾವಿನ ರೂಪದಲ್ಲಿ ಬಂದ ಯಮನಿಗೆ ಚಿನ್ನದ ಹೊಳಪು ಕಣ್ಣು ಕುಕ್ಕುತ್ತೆ, ಅಲ್ಲದೆ ರಾಜಕುಮಾರಿ ಹೇಳುತ್ತಿರುವ ಕತೆಗಳನ್ನು ಕೇಳುತ್ತಾ ತಾನು ಬಂದ ಕಾರ್ಯವನ್ನು ಮರೆತು ಹೋಗುತ್ತಾನೆ, ಬೆಳಕು ಹರಿಯುತ್ತದೆ ಯಮನಿಗೆ ನಿರ್ಧರಿಸಿದ ಸಮಯದಲ್ಲಿ ಪ್ರಾಣ ತೆಗೆಯಲು ಸಾಧ್ಯವಾಗದಿರುವ ಕಾರಣ ಹಿಂತಿರುಗಬೇಕಾಗುತ್ತಾದೆ. ಅಲ್ಲಿಂದ ಈ ಆಚರಣೆ ಜಾರಿಗೆ ಬಂತು ಎಂಬುವುದು ನಂಬಿಕೆ.
ಈ ಕಾರಣದಿಂದಲೇ ಧನ್ತೆರೇಸ್ ದಿನ ಮನೆಯ ಹೊಸ್ತಿಲಿನಲ್ಲಿ ದೀಪಹಚ್ಚಿ, ಚಿನ್ನವನ್ನು ಇಟ್ಟು ಪೂಜಿಸಲಾಗುವುದು.

2022ರಲ್ಲಿ ಧನ್ತೆರೇಸ್
2022ರಲ್ಲಿ ಧನ್ತೆರೇಸ್ ಅನ್ನು ಅಕ್ಟೋಬರ್ 23, ಭಾನುವಾರದಂದು ಆಚರಿಸಲಾಗುವುದು. ಧನ್ತೆರೇಸ್ ಆಚರಣೆಯೊಂದಿಗೆ ದೀಪಾವಳಿಯ ಆಚರಣೆ ಶುರುವಾಗುವುದು.
ಧನ್ವಂತರಿಯ ಪೂಜೆ
ಧನ್ತೆರೇಸ್ ದಿನದಂದು ಆಯುರ್ವೇದ ಗುರುವಾದ ಧನ್ವಂತರಿಯನ್ನು ಪೂಜಿಸಲಾಗುವುದು. ಸಮುದ್ರಮಂಥನ ಸಮಯದಲ್ಲಿ ಧನ್ವಂತರಿ ಒಂದು ಕೈಯಲ್ಲಿ ಅಮೃತ, ಮತ್ತೊಂದು ಕೈಯಲ್ಲಿ ಆಯುರ್ವೇದ ಮದ್ದಿನ ಪುಸ್ತಕ ಹಿಡಿದಿದ್ದರು ಎಂದು ಹೇಳಲಾಗುವುದು.

ಧನ್ತೆರೇಸ್ 2022:ಪೂಜಾ ಸಮಯ, ಶುಭ ಮುಹೂರ್ತ
ಧನ್ತೆರೇಸ್ ಪೂಜೆಗೆ ಶುಭ ಮುಹೂರ್ತ ಬೆಳಗ್ಗೆ 7:01ರಿಂದ 8:17ರವರೆಗೆ (1 ಗಂಟೆ)
ತ್ರಯೋದಶಿ ತಿಥಿ ಪ್ರಾರಂಭ: ಶನಿವಾರ ಸಂಜೆ 6:02ಕ್ಕೆ
ತ್ರಯೋದಶಿ ತಿಥಿ ಮುಕ್ತಾಯ:ಭಾನುಬಾರ ಸಂಜೆ 06:03ಕ್ಕೆ
ಪ್ರದೋಷ ಕಾಲ:5:45ಕ್ಕೆ
ಪ್ರದೋಷ ಕಾಲ ಮುಕ್ತಾಯ: ರಾತ್ರಿ 08:17ಕ್ಕೆ
ವೃಷಭ ಕಾಲ ಪ್ರಾರಂಭ: ಸಂಜೆ 7:01ಕ್ಕೆ
ವೃಷಭ ಕಾಲ ಮುಕ್ತಾಯ: ರಾತ್ರಿ 8:56ಕ್ಕೆ
ಧನ್ತೆರೇಸ್ ಪೂಜಾವಿಧಿ
ಧನ ತ್ರಯೋದಸಿಯಂದು ಮೊದಲಿಗೆ ಗಣೇಶನಿಗೆ ಪೂಜೆ ಮಾಡಲಾಗುವುದು. ನಂತರ ಧನ್ವಂತರಿಗೆ ಪೂಜೆ ಮಾಡಲಾಗುವುದು, ನಂತರ ಪ್ರದೋಷ ಕಾಲದಲ್ಲಿ ಲಕ್ಷ್ಮಿಯನ್ನು ಪೂಜಿಸಲಾಗುವುದು.



Click it and Unblock the Notifications