Latest Updates
-
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ?
ಮನುಷ್ಯನ ಮುಖ ಹೋಲುವ ಕರು! ಇದು ವಿಷ್ಣುವಿನ ಅವತಾರವಂತೆ!!
ನಮ್ಮ ಪೂರ್ವಜರು ಅನೇಕ ರೀತಿಯ ನೀತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಕೆಲವು ಅರ್ಥಬದ್ಧವಾಗಿದ್ದರೆ. ಇನ್ನೂ ಕೆಲವು ತರ್ಕಬದ್ಧವಾದುದಲ್ಲ. ಅದೇನೇ ಇರಲಿ, ಪ್ರಪಂಚ ಇಷ್ಟು ವರ್ಷ ಇದೇ ಕ್ರಮದಲ್ಲಿ ನಡೆದುಕೊಂಡು ಬಂದಿದೆ. ಇದು ಇಲ್ಲಿಗೆ ನಿಲ್ಲುವುದು ಅಲ್ಲ. ಹೀಗೆ ಮುಂದುವರಿಯುತ್ತಲೇ ಇರುತ್ತದೆ. ಹಾಗಂತ ನಮ್ಮ ಸುತ್ತಲೂ ದೇವರಿದ್ದಾನೆ ಎನ್ನುವ ವಿಚಾರವನ್ನು ಮರೆ ಮಾಚುವಂತಿಲ್ಲ. ಕೆಲವರು ಹೌದು ಎನ್ನಬಹುದು, ಇನ್ನು ಕೆಲವರು ಇಲ್ಲ ಎನ್ನಬಹುದು.
ನಮ್ಮ ಭಾವನೆಗೆ ಯಾವುದು ದೈವ ಶಕ್ತಿ ಎನಿಸುತ್ತದೆಯೋ ಅದನ್ನು ಪೂಜಿಸುವುದು ನಮ್ಮ ಸಂಪ್ರದಾಯ/ಪದ್ಧತಿ. ಇಂತಹ ದೈವ ಶಕ್ತಿಯ ಪ್ರತಿರೂಪವಾದ ಒಂದು ವಿಶೇಷ ಸಂಗತಿ ಇಲ್ಲಿದೆ. ಹೌದು, ಇಲ್ಲೊಂದು ಹಸು ಮನುಷ್ಯನ ಮುಖ ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಆದರೆ ಜನ್ಮ ಪಡೆದ ಸ್ವಲ್ಪ ಸಮಯದಲ್ಲೇ ಕರು ಅಸುನೀಗಿದೆ. ಇದನ್ನು ಜನರು ವಿಷ್ಣುವಿನ ಪ್ರತಿರೂಪ ಎಂದು ಪೂಜಿಸುತ್ತಿದ್ದಾರೆ. ಈ ಒಂದು ಅಪರೂಪದ ಘಟನೆ ನಡೆದಿದ್ದು ಎಲ್ಲಿ? ಎನ್ನುವ ಕುತೂಹಲದ ವಿಚಾರದ ವಿವರಣೆ ಇಲ್ಲಿದೆ...

ಭಾರತದಲ್ಲೇ ನಡೆದಿದ್ದು
ಭಾರತದ ಉತ್ತರ ಭಾಗದಲ್ಲಿ ಬರುವ "ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ'' ಜನಿಸಿದ ಕರು ಇದು.

ಕರುವಿನ ದೇಹದ ಆಕಾರ
ಈ ಕರುವಿನ ಮುಖದ ಕಣ್ಣು, ಮೂಗು ಮತ್ತು ಕಿವಿಗಳು ಮನುಷ್ಯನ ಮುಖಲಕ್ಷಣ ಹಾಗೂ ದೇಹದ ಕೆಳಭಾಗವು ಹಸುವಿನ ಲಕ್ಷಣಗಳನ್ನು ಹೊಂದಿದೆ.

ಜನರ ನಂಬಿಕೆ
ವಿಭಿನ್ನ ಬಗೆಯ ದೇಹದಾಕೃತಿ ಹೊಂದಿರುವ ಈ ಕರುವನ್ನು ಸಾಕ್ಷಾತ್ ದೇವರೆಂದು ಜನರು ನಂಬಿದ್ದಾರೆ. ಈ ಕರುವಿನ ದೇಹಕ್ಕೆ ಹೂವಿನ ಮಾಲೆಯನ್ನು ಹಾಕಿ, ಕೈಮುಗಿರುವುದರ ಮೂಲಕ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಾರೆ.

ದೇವಸ್ಥಾನದ ನಿರ್ಮಾಣ
ಸ್ಥಳೀಯರು ಇದನ್ನು ವಿಷ್ಣುವಿನ 24ನೇ ಅವತಾರವೆಂದು, ಒಂದು ದೇವಸ್ಥಾನದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಕರು ಅಸುನೀಗಿದ ನಂತರ ಗಾಜಿನ ಪೆಟ್ಟಿಗೆಯೊಂದರಲ್ಲಿ ಇಟ್ಟು, ದರ್ಶನಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ವೈದ್ಯರ ಪ್ರಕಾರ
ಇದೊಂದು ಅಂಗರಚನಾ ಅಸಂಗತತೆಯ ವಿಷಯ. ಒಂದು ಜೀನ್ ಸರಿಯಾಗಿ ಅಭಿವೃದ್ಧಿಯಾಗದಿದ್ದರೆ ಅಥವಾ ದೋಷದಿಂದ ಕೂಡಿದ್ದರೆ, ಅನೇಕ ರಚನಾತ್ಮಕ ವಿರೂಪ ಉಂಟಾಗುವುದು. ಈ ಹಿನ್ನೆಲೆಯಲ್ಲಿಯೇ ಈ ಬಗೆಯ ವೈಪರೀತ್ಯ ಕಾಣಿಸಿಕೊಳ್ಳುವುದು ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ.

ಭಾರತದಲ್ಲಿ ಮಾತ್ರ ಸಂಭವಿಸುವುದು
ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆಯಾದರೂ ಅನೇಕ ಮೂಡನಂಬಿಕೆಯ ವಿಚಾರಗಳು ಇಲ್ಲಿಯೇ ಇವೆ. ಇದು ಸಹ ನಿಮ್ಮ ನಂಬಿಕೆಗೆ ಬಿಟ್ಟಿದ್ದು...



Click it and Unblock the Notifications