Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮನುಷ್ಯನ ಮುಖ ಹೋಲುವ ಕರು! ಇದು ವಿಷ್ಣುವಿನ ಅವತಾರವಂತೆ!!
ನಮ್ಮ ಪೂರ್ವಜರು ಅನೇಕ ರೀತಿಯ ನೀತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಕೆಲವು ಅರ್ಥಬದ್ಧವಾಗಿದ್ದರೆ. ಇನ್ನೂ ಕೆಲವು ತರ್ಕಬದ್ಧವಾದುದಲ್ಲ. ಅದೇನೇ ಇರಲಿ, ಪ್ರಪಂಚ ಇಷ್ಟು ವರ್ಷ ಇದೇ ಕ್ರಮದಲ್ಲಿ ನಡೆದುಕೊಂಡು ಬಂದಿದೆ. ಇದು ಇಲ್ಲಿಗೆ ನಿಲ್ಲುವುದು ಅಲ್ಲ. ಹೀಗೆ ಮುಂದುವರಿಯುತ್ತಲೇ ಇರುತ್ತದೆ. ಹಾಗಂತ ನಮ್ಮ ಸುತ್ತಲೂ ದೇವರಿದ್ದಾನೆ ಎನ್ನುವ ವಿಚಾರವನ್ನು ಮರೆ ಮಾಚುವಂತಿಲ್ಲ. ಕೆಲವರು ಹೌದು ಎನ್ನಬಹುದು, ಇನ್ನು ಕೆಲವರು ಇಲ್ಲ ಎನ್ನಬಹುದು.
ನಮ್ಮ ಭಾವನೆಗೆ ಯಾವುದು ದೈವ ಶಕ್ತಿ ಎನಿಸುತ್ತದೆಯೋ ಅದನ್ನು ಪೂಜಿಸುವುದು ನಮ್ಮ ಸಂಪ್ರದಾಯ/ಪದ್ಧತಿ. ಇಂತಹ ದೈವ ಶಕ್ತಿಯ ಪ್ರತಿರೂಪವಾದ ಒಂದು ವಿಶೇಷ ಸಂಗತಿ ಇಲ್ಲಿದೆ. ಹೌದು, ಇಲ್ಲೊಂದು ಹಸು ಮನುಷ್ಯನ ಮುಖ ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಆದರೆ ಜನ್ಮ ಪಡೆದ ಸ್ವಲ್ಪ ಸಮಯದಲ್ಲೇ ಕರು ಅಸುನೀಗಿದೆ. ಇದನ್ನು ಜನರು ವಿಷ್ಣುವಿನ ಪ್ರತಿರೂಪ ಎಂದು ಪೂಜಿಸುತ್ತಿದ್ದಾರೆ. ಈ ಒಂದು ಅಪರೂಪದ ಘಟನೆ ನಡೆದಿದ್ದು ಎಲ್ಲಿ? ಎನ್ನುವ ಕುತೂಹಲದ ವಿಚಾರದ ವಿವರಣೆ ಇಲ್ಲಿದೆ...

ಭಾರತದಲ್ಲೇ ನಡೆದಿದ್ದು
ಭಾರತದ ಉತ್ತರ ಭಾಗದಲ್ಲಿ ಬರುವ "ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ'' ಜನಿಸಿದ ಕರು ಇದು.

ಕರುವಿನ ದೇಹದ ಆಕಾರ
ಈ ಕರುವಿನ ಮುಖದ ಕಣ್ಣು, ಮೂಗು ಮತ್ತು ಕಿವಿಗಳು ಮನುಷ್ಯನ ಮುಖಲಕ್ಷಣ ಹಾಗೂ ದೇಹದ ಕೆಳಭಾಗವು ಹಸುವಿನ ಲಕ್ಷಣಗಳನ್ನು ಹೊಂದಿದೆ.

ಜನರ ನಂಬಿಕೆ
ವಿಭಿನ್ನ ಬಗೆಯ ದೇಹದಾಕೃತಿ ಹೊಂದಿರುವ ಈ ಕರುವನ್ನು ಸಾಕ್ಷಾತ್ ದೇವರೆಂದು ಜನರು ನಂಬಿದ್ದಾರೆ. ಈ ಕರುವಿನ ದೇಹಕ್ಕೆ ಹೂವಿನ ಮಾಲೆಯನ್ನು ಹಾಕಿ, ಕೈಮುಗಿರುವುದರ ಮೂಲಕ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಾರೆ.

ದೇವಸ್ಥಾನದ ನಿರ್ಮಾಣ
ಸ್ಥಳೀಯರು ಇದನ್ನು ವಿಷ್ಣುವಿನ 24ನೇ ಅವತಾರವೆಂದು, ಒಂದು ದೇವಸ್ಥಾನದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಕರು ಅಸುನೀಗಿದ ನಂತರ ಗಾಜಿನ ಪೆಟ್ಟಿಗೆಯೊಂದರಲ್ಲಿ ಇಟ್ಟು, ದರ್ಶನಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ವೈದ್ಯರ ಪ್ರಕಾರ
ಇದೊಂದು ಅಂಗರಚನಾ ಅಸಂಗತತೆಯ ವಿಷಯ. ಒಂದು ಜೀನ್ ಸರಿಯಾಗಿ ಅಭಿವೃದ್ಧಿಯಾಗದಿದ್ದರೆ ಅಥವಾ ದೋಷದಿಂದ ಕೂಡಿದ್ದರೆ, ಅನೇಕ ರಚನಾತ್ಮಕ ವಿರೂಪ ಉಂಟಾಗುವುದು. ಈ ಹಿನ್ನೆಲೆಯಲ್ಲಿಯೇ ಈ ಬಗೆಯ ವೈಪರೀತ್ಯ ಕಾಣಿಸಿಕೊಳ್ಳುವುದು ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ.

ಭಾರತದಲ್ಲಿ ಮಾತ್ರ ಸಂಭವಿಸುವುದು
ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆಯಾದರೂ ಅನೇಕ ಮೂಡನಂಬಿಕೆಯ ವಿಚಾರಗಳು ಇಲ್ಲಿಯೇ ಇವೆ. ಇದು ಸಹ ನಿಮ್ಮ ನಂಬಿಕೆಗೆ ಬಿಟ್ಟಿದ್ದು...



Click it and Unblock the Notifications