Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಮನುಷ್ಯನ ಮುಖ ಹೋಲುವ ಕರು! ಇದು ವಿಷ್ಣುವಿನ ಅವತಾರವಂತೆ!!
ನಮ್ಮ ಪೂರ್ವಜರು ಅನೇಕ ರೀತಿಯ ನೀತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಕೆಲವು ಅರ್ಥಬದ್ಧವಾಗಿದ್ದರೆ. ಇನ್ನೂ ಕೆಲವು ತರ್ಕಬದ್ಧವಾದುದಲ್ಲ. ಅದೇನೇ ಇರಲಿ, ಪ್ರಪಂಚ ಇಷ್ಟು ವರ್ಷ ಇದೇ ಕ್ರಮದಲ್ಲಿ ನಡೆದುಕೊಂಡು ಬಂದಿದೆ. ಇದು ಇಲ್ಲಿಗೆ ನಿಲ್ಲುವುದು ಅಲ್ಲ. ಹೀಗೆ ಮುಂದುವರಿಯುತ್ತಲೇ ಇರುತ್ತದೆ. ಹಾಗಂತ ನಮ್ಮ ಸುತ್ತಲೂ ದೇವರಿದ್ದಾನೆ ಎನ್ನುವ ವಿಚಾರವನ್ನು ಮರೆ ಮಾಚುವಂತಿಲ್ಲ. ಕೆಲವರು ಹೌದು ಎನ್ನಬಹುದು, ಇನ್ನು ಕೆಲವರು ಇಲ್ಲ ಎನ್ನಬಹುದು.
ನಮ್ಮ ಭಾವನೆಗೆ ಯಾವುದು ದೈವ ಶಕ್ತಿ ಎನಿಸುತ್ತದೆಯೋ ಅದನ್ನು ಪೂಜಿಸುವುದು ನಮ್ಮ ಸಂಪ್ರದಾಯ/ಪದ್ಧತಿ. ಇಂತಹ ದೈವ ಶಕ್ತಿಯ ಪ್ರತಿರೂಪವಾದ ಒಂದು ವಿಶೇಷ ಸಂಗತಿ ಇಲ್ಲಿದೆ. ಹೌದು, ಇಲ್ಲೊಂದು ಹಸು ಮನುಷ್ಯನ ಮುಖ ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಆದರೆ ಜನ್ಮ ಪಡೆದ ಸ್ವಲ್ಪ ಸಮಯದಲ್ಲೇ ಕರು ಅಸುನೀಗಿದೆ. ಇದನ್ನು ಜನರು ವಿಷ್ಣುವಿನ ಪ್ರತಿರೂಪ ಎಂದು ಪೂಜಿಸುತ್ತಿದ್ದಾರೆ. ಈ ಒಂದು ಅಪರೂಪದ ಘಟನೆ ನಡೆದಿದ್ದು ಎಲ್ಲಿ? ಎನ್ನುವ ಕುತೂಹಲದ ವಿಚಾರದ ವಿವರಣೆ ಇಲ್ಲಿದೆ...

ಭಾರತದಲ್ಲೇ ನಡೆದಿದ್ದು
ಭಾರತದ ಉತ್ತರ ಭಾಗದಲ್ಲಿ ಬರುವ "ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ'' ಜನಿಸಿದ ಕರು ಇದು.

ಕರುವಿನ ದೇಹದ ಆಕಾರ
ಈ ಕರುವಿನ ಮುಖದ ಕಣ್ಣು, ಮೂಗು ಮತ್ತು ಕಿವಿಗಳು ಮನುಷ್ಯನ ಮುಖಲಕ್ಷಣ ಹಾಗೂ ದೇಹದ ಕೆಳಭಾಗವು ಹಸುವಿನ ಲಕ್ಷಣಗಳನ್ನು ಹೊಂದಿದೆ.

ಜನರ ನಂಬಿಕೆ
ವಿಭಿನ್ನ ಬಗೆಯ ದೇಹದಾಕೃತಿ ಹೊಂದಿರುವ ಈ ಕರುವನ್ನು ಸಾಕ್ಷಾತ್ ದೇವರೆಂದು ಜನರು ನಂಬಿದ್ದಾರೆ. ಈ ಕರುವಿನ ದೇಹಕ್ಕೆ ಹೂವಿನ ಮಾಲೆಯನ್ನು ಹಾಕಿ, ಕೈಮುಗಿರುವುದರ ಮೂಲಕ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಾರೆ.

ದೇವಸ್ಥಾನದ ನಿರ್ಮಾಣ
ಸ್ಥಳೀಯರು ಇದನ್ನು ವಿಷ್ಣುವಿನ 24ನೇ ಅವತಾರವೆಂದು, ಒಂದು ದೇವಸ್ಥಾನದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಕರು ಅಸುನೀಗಿದ ನಂತರ ಗಾಜಿನ ಪೆಟ್ಟಿಗೆಯೊಂದರಲ್ಲಿ ಇಟ್ಟು, ದರ್ಶನಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ವೈದ್ಯರ ಪ್ರಕಾರ
ಇದೊಂದು ಅಂಗರಚನಾ ಅಸಂಗತತೆಯ ವಿಷಯ. ಒಂದು ಜೀನ್ ಸರಿಯಾಗಿ ಅಭಿವೃದ್ಧಿಯಾಗದಿದ್ದರೆ ಅಥವಾ ದೋಷದಿಂದ ಕೂಡಿದ್ದರೆ, ಅನೇಕ ರಚನಾತ್ಮಕ ವಿರೂಪ ಉಂಟಾಗುವುದು. ಈ ಹಿನ್ನೆಲೆಯಲ್ಲಿಯೇ ಈ ಬಗೆಯ ವೈಪರೀತ್ಯ ಕಾಣಿಸಿಕೊಳ್ಳುವುದು ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ.

ಭಾರತದಲ್ಲಿ ಮಾತ್ರ ಸಂಭವಿಸುವುದು
ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆಯಾದರೂ ಅನೇಕ ಮೂಡನಂಬಿಕೆಯ ವಿಚಾರಗಳು ಇಲ್ಲಿಯೇ ಇವೆ. ಇದು ಸಹ ನಿಮ್ಮ ನಂಬಿಕೆಗೆ ಬಿಟ್ಟಿದ್ದು...



Click it and Unblock the Notifications
