Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಛತ್ ಪೂಜೆ: ಕಾರ್ತಿಕ ಮಾಸದ ಈ ನಾಲ್ಕು ದಿನಗಳಲ್ಲಿ ಇವುಗಳನ್ನು ಮಾಡಲೇಬೇಡಿ
ದೀಪಾವಳಿ ಹಬ್ಬದ ಸಡಗರದ ಬಳಿಕ ಉತ್ತರ ಭಾರತದ ಕಡೆ ಅದರಲ್ಲೂ ಬಿಹಾರ, ಜಾರ್ಝಂಡ್ ಹಾಗೂ ಉತ್ತರ ಪ್ರದೇಶದ ಕಡೆ ಛತ್ ಪೂಜೆ ಮಾಡಲಾಗುವುದು. ನಾಲ್ಕು ದಿನಗಳ ಆಚರಿಸುವ ಈ ಪೂಜೆಯಲ್ಲಿ ಸೂರ್ಯನನ್ನು ಪೂಜಿಸಲಾಗುವುದು. ಅದನ್ನು ಸೂರ್ಯ ಷಷ್ಠಿ ಎಂದು ಕರೆಯಲಾಗುವುದು.

ಈ ದಿನಗಳಲ್ಲಿ ಮಹಿಳೆಯರು ಉಪವಾಸವಿದ್ದು ಯಮುನಾ ಅಥವಾ ಇತ ಪುಣ್ಯ ನದಿಯಲ್ಲಿ ಮೊಣಕಾಲಿನವರೆಗೆ ನೀರಿನಲ್ಲಿ ನಿಂತು ಸೂರ್ಯನಿಗೆ ಆರ್ಘ್ಯ ಸಲ್ಲಿಸಿನ ನಮಸ್ಕರಿಸುತ್ತಾರೆ.
ಛತ್ ಪೂಜೆ ಕಾರ್ತಿಕ ಮಾಸದ ಚತುರ್ಥಿಯಂದು ಪ್ರಾರಂಭವಾಗಿ ಕಾರ್ತಿಕ ಶಕ್ಲ ಸಪ್ತಮಿಗೆ ಮುಕ್ತಾಯವಾಗುತ್ತದೆ. ಅಂದರೆ ಛತ್ ಪೂಜೆ ಅಕ್ಟೋಬರ್ 28ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 31ಕ್ಕೆ ಮುಗಿಯಲಿದೆ.

ಛತ್ ಪೂಜೆಯ ಇತಿಹಾಸ ಮತ್ತು ಮಹತ್ವ
ಛತ್ ಪೂಜೆಯನ್ನು ವೇದಗಳ ಕಾಲದಿಂದಲೂ ಆಚರಿಸಲಾಗುತ್ತಿದೆ. ಋಷಿ ಮುನಿಗಳು ಈ ಛತ್ ಪೂಜೆಯನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುವುದು. ಈ ದಿನಗಳಲ್ಲಿ ಉಪವಾಸವಿದ್ದು ಸೂರ್ಯನಿಗೆ ಪೂಜೆ ಮಾಡಿ, ಮುಂಜಾನೆ ಬಿಸಿಲಿಗೆ ದೇಹವನ್ನು ಒಡ್ಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು.
ಛತ್ ಪೂಜೆಯನ್ನು ಪಾಲಿಸುವವರು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಅವುಗಳೇನು ಎಂದು ನೋಡೋಣ ಬನ್ನಿ:

ಛತ್ ಪೂಜೆಯಲ್ಲಿ ಏನು ಮಾಡಬೇಕು?
* ಈ ನಾಲ್ಕು ದಿನಗಳಲ್ಲಿ ಸೂರ್ಯೋದಕ್ಕೆ ಮುನ್ನ ಎದ್ದು ಸ್ನಾ ನ ಮಾಡಬೇಕು.
* ನಂತರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ದೊಡ್ಡವರಿಂ ಆಶೀರ್ವಾದ ಪಡೆಯಲಾಗುವುದು.
* ನಂತರ ಭೋಗ್ (ಪ್ರಸಾದ) ಮಾಡಿ ಮನೆಮಂದಿಗೆಲ್ಲಾ ಹಂಚಲಾಗುವುದು.
* ಸೂರ್ಯನಿಗೆ ಪೂಜೆ ಮಾಡುವಾಗ ಹಾಲು ಮತ್ತು ನೀರು ಅರ್ಪಿಸಲಾಗುವುದು.
* ಉಪವಾಸ ಇರುವವರು ಶರಬತ್ ಹಾಗೂ ಭೋಗ್ ಸೇವಿಸಬಹುದು.

ಛತ್ ಪೂಜೆಯ ದಿನಗಳಲ್ಲಿ ಏನು ಮಾಡಬಾರದು?
* ದೇವರಿಗೆ ಅರ್ಪಿಸುವ ಮುನ್ನ ಪ್ರಸಾದವನ್ನು ಸೇವಿಸಬಾರದು.
* ಮಡಿಯಿಲ್ಲದೆ ಪೂಜೆಯ ಯಾವುದೇ ವಸ್ತುಗಳನ್ನು ಮುಟ್ಟಬಾರದು.
* ಈ ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದು. ಮದ್ಯಪಾನ ಮಾಡಬಾರದು.
* ಪ್ರಸಾದ ಮಾಡುವಾಗ ಉಪ್ಪು ಬಳಸಬಾರದು
* ಹರಿದ ಅಥವಾ ಹಳೆಯ ಬಿದಿರಿನ ಬುಟ್ಟಿಗಳನ್ನು ಬಳಸಬಾರದು
* ಕೆಟ್ಟ ಪದಗಳನ್ನು ಬಳಸಬಾರದು
* ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು.



Click it and Unblock the Notifications