Latest Updates
-
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ!
ಛತ್ ಪೂಜೆ: ಕಾರ್ತಿಕ ಮಾಸದ ಈ ನಾಲ್ಕು ದಿನಗಳಲ್ಲಿ ಇವುಗಳನ್ನು ಮಾಡಲೇಬೇಡಿ
ದೀಪಾವಳಿ ಹಬ್ಬದ ಸಡಗರದ ಬಳಿಕ ಉತ್ತರ ಭಾರತದ ಕಡೆ ಅದರಲ್ಲೂ ಬಿಹಾರ, ಜಾರ್ಝಂಡ್ ಹಾಗೂ ಉತ್ತರ ಪ್ರದೇಶದ ಕಡೆ ಛತ್ ಪೂಜೆ ಮಾಡಲಾಗುವುದು. ನಾಲ್ಕು ದಿನಗಳ ಆಚರಿಸುವ ಈ ಪೂಜೆಯಲ್ಲಿ ಸೂರ್ಯನನ್ನು ಪೂಜಿಸಲಾಗುವುದು. ಅದನ್ನು ಸೂರ್ಯ ಷಷ್ಠಿ ಎಂದು ಕರೆಯಲಾಗುವುದು.

ಈ ದಿನಗಳಲ್ಲಿ ಮಹಿಳೆಯರು ಉಪವಾಸವಿದ್ದು ಯಮುನಾ ಅಥವಾ ಇತ ಪುಣ್ಯ ನದಿಯಲ್ಲಿ ಮೊಣಕಾಲಿನವರೆಗೆ ನೀರಿನಲ್ಲಿ ನಿಂತು ಸೂರ್ಯನಿಗೆ ಆರ್ಘ್ಯ ಸಲ್ಲಿಸಿನ ನಮಸ್ಕರಿಸುತ್ತಾರೆ.
ಛತ್ ಪೂಜೆ ಕಾರ್ತಿಕ ಮಾಸದ ಚತುರ್ಥಿಯಂದು ಪ್ರಾರಂಭವಾಗಿ ಕಾರ್ತಿಕ ಶಕ್ಲ ಸಪ್ತಮಿಗೆ ಮುಕ್ತಾಯವಾಗುತ್ತದೆ. ಅಂದರೆ ಛತ್ ಪೂಜೆ ಅಕ್ಟೋಬರ್ 28ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 31ಕ್ಕೆ ಮುಗಿಯಲಿದೆ.

ಛತ್ ಪೂಜೆಯ ಇತಿಹಾಸ ಮತ್ತು ಮಹತ್ವ
ಛತ್ ಪೂಜೆಯನ್ನು ವೇದಗಳ ಕಾಲದಿಂದಲೂ ಆಚರಿಸಲಾಗುತ್ತಿದೆ. ಋಷಿ ಮುನಿಗಳು ಈ ಛತ್ ಪೂಜೆಯನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುವುದು. ಈ ದಿನಗಳಲ್ಲಿ ಉಪವಾಸವಿದ್ದು ಸೂರ್ಯನಿಗೆ ಪೂಜೆ ಮಾಡಿ, ಮುಂಜಾನೆ ಬಿಸಿಲಿಗೆ ದೇಹವನ್ನು ಒಡ್ಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು.
ಛತ್ ಪೂಜೆಯನ್ನು ಪಾಲಿಸುವವರು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಅವುಗಳೇನು ಎಂದು ನೋಡೋಣ ಬನ್ನಿ:

ಛತ್ ಪೂಜೆಯಲ್ಲಿ ಏನು ಮಾಡಬೇಕು?
* ಈ ನಾಲ್ಕು ದಿನಗಳಲ್ಲಿ ಸೂರ್ಯೋದಕ್ಕೆ ಮುನ್ನ ಎದ್ದು ಸ್ನಾ ನ ಮಾಡಬೇಕು.
* ನಂತರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ದೊಡ್ಡವರಿಂ ಆಶೀರ್ವಾದ ಪಡೆಯಲಾಗುವುದು.
* ನಂತರ ಭೋಗ್ (ಪ್ರಸಾದ) ಮಾಡಿ ಮನೆಮಂದಿಗೆಲ್ಲಾ ಹಂಚಲಾಗುವುದು.
* ಸೂರ್ಯನಿಗೆ ಪೂಜೆ ಮಾಡುವಾಗ ಹಾಲು ಮತ್ತು ನೀರು ಅರ್ಪಿಸಲಾಗುವುದು.
* ಉಪವಾಸ ಇರುವವರು ಶರಬತ್ ಹಾಗೂ ಭೋಗ್ ಸೇವಿಸಬಹುದು.

ಛತ್ ಪೂಜೆಯ ದಿನಗಳಲ್ಲಿ ಏನು ಮಾಡಬಾರದು?
* ದೇವರಿಗೆ ಅರ್ಪಿಸುವ ಮುನ್ನ ಪ್ರಸಾದವನ್ನು ಸೇವಿಸಬಾರದು.
* ಮಡಿಯಿಲ್ಲದೆ ಪೂಜೆಯ ಯಾವುದೇ ವಸ್ತುಗಳನ್ನು ಮುಟ್ಟಬಾರದು.
* ಈ ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದು. ಮದ್ಯಪಾನ ಮಾಡಬಾರದು.
* ಪ್ರಸಾದ ಮಾಡುವಾಗ ಉಪ್ಪು ಬಳಸಬಾರದು
* ಹರಿದ ಅಥವಾ ಹಳೆಯ ಬಿದಿರಿನ ಬುಟ್ಟಿಗಳನ್ನು ಬಳಸಬಾರದು
* ಕೆಟ್ಟ ಪದಗಳನ್ನು ಬಳಸಬಾರದು
* ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು.



Click it and Unblock the Notifications