Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಛತ್ ಪೂಜೆ: ಕಾರ್ತಿಕ ಮಾಸದ ಈ ನಾಲ್ಕು ದಿನಗಳಲ್ಲಿ ಇವುಗಳನ್ನು ಮಾಡಲೇಬೇಡಿ
ದೀಪಾವಳಿ ಹಬ್ಬದ ಸಡಗರದ ಬಳಿಕ ಉತ್ತರ ಭಾರತದ ಕಡೆ ಅದರಲ್ಲೂ ಬಿಹಾರ, ಜಾರ್ಝಂಡ್ ಹಾಗೂ ಉತ್ತರ ಪ್ರದೇಶದ ಕಡೆ ಛತ್ ಪೂಜೆ ಮಾಡಲಾಗುವುದು. ನಾಲ್ಕು ದಿನಗಳ ಆಚರಿಸುವ ಈ ಪೂಜೆಯಲ್ಲಿ ಸೂರ್ಯನನ್ನು ಪೂಜಿಸಲಾಗುವುದು. ಅದನ್ನು ಸೂರ್ಯ ಷಷ್ಠಿ ಎಂದು ಕರೆಯಲಾಗುವುದು.

ಈ ದಿನಗಳಲ್ಲಿ ಮಹಿಳೆಯರು ಉಪವಾಸವಿದ್ದು ಯಮುನಾ ಅಥವಾ ಇತ ಪುಣ್ಯ ನದಿಯಲ್ಲಿ ಮೊಣಕಾಲಿನವರೆಗೆ ನೀರಿನಲ್ಲಿ ನಿಂತು ಸೂರ್ಯನಿಗೆ ಆರ್ಘ್ಯ ಸಲ್ಲಿಸಿನ ನಮಸ್ಕರಿಸುತ್ತಾರೆ.
ಛತ್ ಪೂಜೆ ಕಾರ್ತಿಕ ಮಾಸದ ಚತುರ್ಥಿಯಂದು ಪ್ರಾರಂಭವಾಗಿ ಕಾರ್ತಿಕ ಶಕ್ಲ ಸಪ್ತಮಿಗೆ ಮುಕ್ತಾಯವಾಗುತ್ತದೆ. ಅಂದರೆ ಛತ್ ಪೂಜೆ ಅಕ್ಟೋಬರ್ 28ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 31ಕ್ಕೆ ಮುಗಿಯಲಿದೆ.

ಛತ್ ಪೂಜೆಯ ಇತಿಹಾಸ ಮತ್ತು ಮಹತ್ವ
ಛತ್ ಪೂಜೆಯನ್ನು ವೇದಗಳ ಕಾಲದಿಂದಲೂ ಆಚರಿಸಲಾಗುತ್ತಿದೆ. ಋಷಿ ಮುನಿಗಳು ಈ ಛತ್ ಪೂಜೆಯನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುವುದು. ಈ ದಿನಗಳಲ್ಲಿ ಉಪವಾಸವಿದ್ದು ಸೂರ್ಯನಿಗೆ ಪೂಜೆ ಮಾಡಿ, ಮುಂಜಾನೆ ಬಿಸಿಲಿಗೆ ದೇಹವನ್ನು ಒಡ್ಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು.
ಛತ್ ಪೂಜೆಯನ್ನು ಪಾಲಿಸುವವರು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಅವುಗಳೇನು ಎಂದು ನೋಡೋಣ ಬನ್ನಿ:

ಛತ್ ಪೂಜೆಯಲ್ಲಿ ಏನು ಮಾಡಬೇಕು?
* ಈ ನಾಲ್ಕು ದಿನಗಳಲ್ಲಿ ಸೂರ್ಯೋದಕ್ಕೆ ಮುನ್ನ ಎದ್ದು ಸ್ನಾ ನ ಮಾಡಬೇಕು.
* ನಂತರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ದೊಡ್ಡವರಿಂ ಆಶೀರ್ವಾದ ಪಡೆಯಲಾಗುವುದು.
* ನಂತರ ಭೋಗ್ (ಪ್ರಸಾದ) ಮಾಡಿ ಮನೆಮಂದಿಗೆಲ್ಲಾ ಹಂಚಲಾಗುವುದು.
* ಸೂರ್ಯನಿಗೆ ಪೂಜೆ ಮಾಡುವಾಗ ಹಾಲು ಮತ್ತು ನೀರು ಅರ್ಪಿಸಲಾಗುವುದು.
* ಉಪವಾಸ ಇರುವವರು ಶರಬತ್ ಹಾಗೂ ಭೋಗ್ ಸೇವಿಸಬಹುದು.

ಛತ್ ಪೂಜೆಯ ದಿನಗಳಲ್ಲಿ ಏನು ಮಾಡಬಾರದು?
* ದೇವರಿಗೆ ಅರ್ಪಿಸುವ ಮುನ್ನ ಪ್ರಸಾದವನ್ನು ಸೇವಿಸಬಾರದು.
* ಮಡಿಯಿಲ್ಲದೆ ಪೂಜೆಯ ಯಾವುದೇ ವಸ್ತುಗಳನ್ನು ಮುಟ್ಟಬಾರದು.
* ಈ ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದು. ಮದ್ಯಪಾನ ಮಾಡಬಾರದು.
* ಪ್ರಸಾದ ಮಾಡುವಾಗ ಉಪ್ಪು ಬಳಸಬಾರದು
* ಹರಿದ ಅಥವಾ ಹಳೆಯ ಬಿದಿರಿನ ಬುಟ್ಟಿಗಳನ್ನು ಬಳಸಬಾರದು
* ಕೆಟ್ಟ ಪದಗಳನ್ನು ಬಳಸಬಾರದು
* ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು.



Click it and Unblock the Notifications