Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಛತ್ ಪೂಜೆ: ಕಾರ್ತಿಕ ಮಾಸದ ಈ ನಾಲ್ಕು ದಿನಗಳಲ್ಲಿ ಇವುಗಳನ್ನು ಮಾಡಲೇಬೇಡಿ
ದೀಪಾವಳಿ ಹಬ್ಬದ ಸಡಗರದ ಬಳಿಕ ಉತ್ತರ ಭಾರತದ ಕಡೆ ಅದರಲ್ಲೂ ಬಿಹಾರ, ಜಾರ್ಝಂಡ್ ಹಾಗೂ ಉತ್ತರ ಪ್ರದೇಶದ ಕಡೆ ಛತ್ ಪೂಜೆ ಮಾಡಲಾಗುವುದು. ನಾಲ್ಕು ದಿನಗಳ ಆಚರಿಸುವ ಈ ಪೂಜೆಯಲ್ಲಿ ಸೂರ್ಯನನ್ನು ಪೂಜಿಸಲಾಗುವುದು. ಅದನ್ನು ಸೂರ್ಯ ಷಷ್ಠಿ ಎಂದು ಕರೆಯಲಾಗುವುದು.

ಈ ದಿನಗಳಲ್ಲಿ ಮಹಿಳೆಯರು ಉಪವಾಸವಿದ್ದು ಯಮುನಾ ಅಥವಾ ಇತ ಪುಣ್ಯ ನದಿಯಲ್ಲಿ ಮೊಣಕಾಲಿನವರೆಗೆ ನೀರಿನಲ್ಲಿ ನಿಂತು ಸೂರ್ಯನಿಗೆ ಆರ್ಘ್ಯ ಸಲ್ಲಿಸಿನ ನಮಸ್ಕರಿಸುತ್ತಾರೆ.
ಛತ್ ಪೂಜೆ ಕಾರ್ತಿಕ ಮಾಸದ ಚತುರ್ಥಿಯಂದು ಪ್ರಾರಂಭವಾಗಿ ಕಾರ್ತಿಕ ಶಕ್ಲ ಸಪ್ತಮಿಗೆ ಮುಕ್ತಾಯವಾಗುತ್ತದೆ. ಅಂದರೆ ಛತ್ ಪೂಜೆ ಅಕ್ಟೋಬರ್ 28ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 31ಕ್ಕೆ ಮುಗಿಯಲಿದೆ.

ಛತ್ ಪೂಜೆಯ ಇತಿಹಾಸ ಮತ್ತು ಮಹತ್ವ
ಛತ್ ಪೂಜೆಯನ್ನು ವೇದಗಳ ಕಾಲದಿಂದಲೂ ಆಚರಿಸಲಾಗುತ್ತಿದೆ. ಋಷಿ ಮುನಿಗಳು ಈ ಛತ್ ಪೂಜೆಯನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುವುದು. ಈ ದಿನಗಳಲ್ಲಿ ಉಪವಾಸವಿದ್ದು ಸೂರ್ಯನಿಗೆ ಪೂಜೆ ಮಾಡಿ, ಮುಂಜಾನೆ ಬಿಸಿಲಿಗೆ ದೇಹವನ್ನು ಒಡ್ಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು.
ಛತ್ ಪೂಜೆಯನ್ನು ಪಾಲಿಸುವವರು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಅವುಗಳೇನು ಎಂದು ನೋಡೋಣ ಬನ್ನಿ:

ಛತ್ ಪೂಜೆಯಲ್ಲಿ ಏನು ಮಾಡಬೇಕು?
* ಈ ನಾಲ್ಕು ದಿನಗಳಲ್ಲಿ ಸೂರ್ಯೋದಕ್ಕೆ ಮುನ್ನ ಎದ್ದು ಸ್ನಾ ನ ಮಾಡಬೇಕು.
* ನಂತರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ದೊಡ್ಡವರಿಂ ಆಶೀರ್ವಾದ ಪಡೆಯಲಾಗುವುದು.
* ನಂತರ ಭೋಗ್ (ಪ್ರಸಾದ) ಮಾಡಿ ಮನೆಮಂದಿಗೆಲ್ಲಾ ಹಂಚಲಾಗುವುದು.
* ಸೂರ್ಯನಿಗೆ ಪೂಜೆ ಮಾಡುವಾಗ ಹಾಲು ಮತ್ತು ನೀರು ಅರ್ಪಿಸಲಾಗುವುದು.
* ಉಪವಾಸ ಇರುವವರು ಶರಬತ್ ಹಾಗೂ ಭೋಗ್ ಸೇವಿಸಬಹುದು.

ಛತ್ ಪೂಜೆಯ ದಿನಗಳಲ್ಲಿ ಏನು ಮಾಡಬಾರದು?
* ದೇವರಿಗೆ ಅರ್ಪಿಸುವ ಮುನ್ನ ಪ್ರಸಾದವನ್ನು ಸೇವಿಸಬಾರದು.
* ಮಡಿಯಿಲ್ಲದೆ ಪೂಜೆಯ ಯಾವುದೇ ವಸ್ತುಗಳನ್ನು ಮುಟ್ಟಬಾರದು.
* ಈ ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದು. ಮದ್ಯಪಾನ ಮಾಡಬಾರದು.
* ಪ್ರಸಾದ ಮಾಡುವಾಗ ಉಪ್ಪು ಬಳಸಬಾರದು
* ಹರಿದ ಅಥವಾ ಹಳೆಯ ಬಿದಿರಿನ ಬುಟ್ಟಿಗಳನ್ನು ಬಳಸಬಾರದು
* ಕೆಟ್ಟ ಪದಗಳನ್ನು ಬಳಸಬಾರದು
* ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು.



Click it and Unblock the Notifications











