Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಪಿತೃ ಪಕ್ಷದಲ್ಲಿ ಪ್ರಯಾಣ ಮಾಡಬಹುದೇ?
ಪಿತೃಪಕ್ಷವೆಂಬ 16 ದಿನ ಸ್ವರ್ಗಸ್ಥರಾದ ಹಿರಿಯರಿಗೆ ಮೋಕ್ಷ ನೀಡುವ ದಿನವಾಗಿದೆ. ಈ ಸಮಯದಲ್ಲಿ ತರ್ಪಣ ನೀಡುವುದರಿಂದ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.

ಹಿಂದೂ ಸಂಪ್ರದಾಯದ ಪ್ರಕಾರ ಈ ದಿನಗಳಲ್ಲಿ ಪಿತೃಗಳಿಗೆ ತರ್ಪಣ ನೀಡಲಾಗುವುದು, ಇದರಿಂದ ಅವರಿಗೆ ಮೋಕ್ಷ ಸಿಗುವುದು, ಹೀಗಾಗಿ ನಮ್ಮನ್ನು ಹರಿಸುತ್ತಾರೆ ಎಂದು ಹೇಳಲಾಗುವುದು. ಪಿತೃ ದೋಷವಿದ್ದರೆ ಬದುಕಿನಲ್ಲಿ ಅನೇಕ ತೊಂದರೆಗಳು ಎದುರಾಗುವುದು. ಈ ಪಿತೃ ದೋಷ ನಿವಾರಣೆಗೆ ಪಿತೃ ಪಕ್ಷ ಸೂಕ್ತವಾದ ಸಮಯವಾಗಿದೆ.

ಯಾವುದೇ ಶುಭ ಕಾರ್ಯಕ್ಕೆ ಸೂಕ್ತವಲ್ಲ
ಪಿತೃ ಪಕ್ಷದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎಂದು ಹೇಳಲಾಗುವುದು. ಏನಾದರೂ ಹೊಸ ಕಾರ್ಯಗಳನ್ನು ಮಾಡಲು ಇದು ಸೂಕ್ತವಲ್ಲ. ಈ ಸಮಯದಲ್ಲಿ ಮಾಂಸಾಹಾರ ಸೇವಿಸಬಾರದು, ಈರುಳ್ಳಿ- ಬೆಳ್ಳುಳ್ಳಿ ಕೂಡ ತಿನ್ನಬಾರದು ಎಂದು ಹೇಳುತ್ತಾರೆ.

ವಿದೇಶ ಪ್ರಯಾಣ ಮಾಡಬಹುದೇ?
ಮೊದಲೇ ನಿಗದಿಪಡಿಸಿದ ದಿನಾಂಕವಾದರೆ ಹೋಗಬಹುದು. ವಿದೇಶಕ್ಕೆ ಪ್ರಯಾಣ ಮಾಡುವುದಾದರೆ ಒಳ್ಳೆಯ ಸಮಯ ನೋಡಿ ಪ್ರಯಾಣಿಸಿ.

ಯಾತ್ರಾ ಸ್ಥಳಗಳಿಗೆ ಹೋಗಲು ಶುಭ ಸಮಯ
ಪಿತೃ ಪಕ್ಷವೆಂಬುವುದು ಪಿತೃಗಳನ್ನು ಸ್ಮರಿಸುವ ದಿನಗಳಾಗಿವೆ. ಈ 16 ದಿನಗಳಲ್ಲಿ ಪಿತೃಗಳಿಗೆ ಮೋಕ್ಷ ಸಿಗಲು ಪ್ರಾರ್ಥನೆ ಮಾಡಿ ತರ್ಪಣ ನೀಡಲಾಗುವುದು ಹಾಗೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಪಿತೃಪಕ್ಷ ಶುಭ ಸಮಯವಾಗಿದೆ.

ಕೊನೆಯದಾಗಿ:
ಪಿತೃಪಕ್ಷದ ಸಮಯದಲ್ಲಿ ರಿಷಿಕೇಶ-ಹರಿದ್ವಾರ, ವಾರಣಸಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಮಾಡುತ್ತಾರೆ. ಈ ರೀತಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಮಾಡುವುದರಿಂದ ಹಿರಿಯರಿಗೆ ಮೋಕ್ಷ ಸಿಗುವುದು , ನಮಗೆ ಪುಣ್ಯ ಸಿಗುವುದು ಎಂದು ನಂಬಲಾಗಿದೆ. ಆದ್ದರಿಂದ ಪಿತೃಪಕ್ಷದಲ್ಲಿಇಂಥ ಸ್ಥಳಗಳಿಗೆ ತುಂಬಾ ಯಾತ್ರಾರ್ಥಿಗಳು ಬರುತ್ತಾರೆ.
ಪಿತೃದೋಷ ಗುರಿಯಾದರೆ ಕಷ್ಟ
ಪಿತೃದೋಷಕ್ಕೆ ಗುರಿಯಾದರೆ ಜೀವನದಲ್ಲಿ ತುಂಬಾ ಕಷ್ಟ ಸಹಿಸಬೇಕಾಗುತ್ತದೆ. ಈ ಪಿತೃದೋಷ ನಿವಾರಣೆಗೆ ಪಿತೃಪಕ್ಷ ಸೂಕ್ತ ಸಮಯವಾಗಿದೆ. ಈ ಸಮಯದಲ್ಲಿ ದಾನ ಮಾಡುವುದು, ಪಿತೃಗಳನ್ನು ತೃಪ್ತಿ ಪಡಿಸಲು ಅವರಿಗೆ ತರ್ಪಣ ನೀಡಬೇಕು, ಆಗ ಪಿತೃದೋಷ ನಿವಾರಣೆಯಾಗುವುದು.



Click it and Unblock the Notifications