Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಪಿತೃ ಪಕ್ಷದಲ್ಲಿ ಪ್ರಯಾಣ ಮಾಡಬಹುದೇ?
ಪಿತೃಪಕ್ಷವೆಂಬ 16 ದಿನ ಸ್ವರ್ಗಸ್ಥರಾದ ಹಿರಿಯರಿಗೆ ಮೋಕ್ಷ ನೀಡುವ ದಿನವಾಗಿದೆ. ಈ ಸಮಯದಲ್ಲಿ ತರ್ಪಣ ನೀಡುವುದರಿಂದ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.

ಹಿಂದೂ ಸಂಪ್ರದಾಯದ ಪ್ರಕಾರ ಈ ದಿನಗಳಲ್ಲಿ ಪಿತೃಗಳಿಗೆ ತರ್ಪಣ ನೀಡಲಾಗುವುದು, ಇದರಿಂದ ಅವರಿಗೆ ಮೋಕ್ಷ ಸಿಗುವುದು, ಹೀಗಾಗಿ ನಮ್ಮನ್ನು ಹರಿಸುತ್ತಾರೆ ಎಂದು ಹೇಳಲಾಗುವುದು. ಪಿತೃ ದೋಷವಿದ್ದರೆ ಬದುಕಿನಲ್ಲಿ ಅನೇಕ ತೊಂದರೆಗಳು ಎದುರಾಗುವುದು. ಈ ಪಿತೃ ದೋಷ ನಿವಾರಣೆಗೆ ಪಿತೃ ಪಕ್ಷ ಸೂಕ್ತವಾದ ಸಮಯವಾಗಿದೆ.

ಯಾವುದೇ ಶುಭ ಕಾರ್ಯಕ್ಕೆ ಸೂಕ್ತವಲ್ಲ
ಪಿತೃ ಪಕ್ಷದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎಂದು ಹೇಳಲಾಗುವುದು. ಏನಾದರೂ ಹೊಸ ಕಾರ್ಯಗಳನ್ನು ಮಾಡಲು ಇದು ಸೂಕ್ತವಲ್ಲ. ಈ ಸಮಯದಲ್ಲಿ ಮಾಂಸಾಹಾರ ಸೇವಿಸಬಾರದು, ಈರುಳ್ಳಿ- ಬೆಳ್ಳುಳ್ಳಿ ಕೂಡ ತಿನ್ನಬಾರದು ಎಂದು ಹೇಳುತ್ತಾರೆ.

ವಿದೇಶ ಪ್ರಯಾಣ ಮಾಡಬಹುದೇ?
ಮೊದಲೇ ನಿಗದಿಪಡಿಸಿದ ದಿನಾಂಕವಾದರೆ ಹೋಗಬಹುದು. ವಿದೇಶಕ್ಕೆ ಪ್ರಯಾಣ ಮಾಡುವುದಾದರೆ ಒಳ್ಳೆಯ ಸಮಯ ನೋಡಿ ಪ್ರಯಾಣಿಸಿ.

ಯಾತ್ರಾ ಸ್ಥಳಗಳಿಗೆ ಹೋಗಲು ಶುಭ ಸಮಯ
ಪಿತೃ ಪಕ್ಷವೆಂಬುವುದು ಪಿತೃಗಳನ್ನು ಸ್ಮರಿಸುವ ದಿನಗಳಾಗಿವೆ. ಈ 16 ದಿನಗಳಲ್ಲಿ ಪಿತೃಗಳಿಗೆ ಮೋಕ್ಷ ಸಿಗಲು ಪ್ರಾರ್ಥನೆ ಮಾಡಿ ತರ್ಪಣ ನೀಡಲಾಗುವುದು ಹಾಗೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಪಿತೃಪಕ್ಷ ಶುಭ ಸಮಯವಾಗಿದೆ.

ಕೊನೆಯದಾಗಿ:
ಪಿತೃಪಕ್ಷದ ಸಮಯದಲ್ಲಿ ರಿಷಿಕೇಶ-ಹರಿದ್ವಾರ, ವಾರಣಸಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಮಾಡುತ್ತಾರೆ. ಈ ರೀತಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಮಾಡುವುದರಿಂದ ಹಿರಿಯರಿಗೆ ಮೋಕ್ಷ ಸಿಗುವುದು , ನಮಗೆ ಪುಣ್ಯ ಸಿಗುವುದು ಎಂದು ನಂಬಲಾಗಿದೆ. ಆದ್ದರಿಂದ ಪಿತೃಪಕ್ಷದಲ್ಲಿಇಂಥ ಸ್ಥಳಗಳಿಗೆ ತುಂಬಾ ಯಾತ್ರಾರ್ಥಿಗಳು ಬರುತ್ತಾರೆ.
ಪಿತೃದೋಷ ಗುರಿಯಾದರೆ ಕಷ್ಟ
ಪಿತೃದೋಷಕ್ಕೆ ಗುರಿಯಾದರೆ ಜೀವನದಲ್ಲಿ ತುಂಬಾ ಕಷ್ಟ ಸಹಿಸಬೇಕಾಗುತ್ತದೆ. ಈ ಪಿತೃದೋಷ ನಿವಾರಣೆಗೆ ಪಿತೃಪಕ್ಷ ಸೂಕ್ತ ಸಮಯವಾಗಿದೆ. ಈ ಸಮಯದಲ್ಲಿ ದಾನ ಮಾಡುವುದು, ಪಿತೃಗಳನ್ನು ತೃಪ್ತಿ ಪಡಿಸಲು ಅವರಿಗೆ ತರ್ಪಣ ನೀಡಬೇಕು, ಆಗ ಪಿತೃದೋಷ ನಿವಾರಣೆಯಾಗುವುದು.



Click it and Unblock the Notifications
