ಝೆನ್ ಕಥೆ: ಒಡೆದ ಕನ್ನಡಿ ಮತ್ತು ಉದುರಿದ ಹೂ

Kannada Zen story
ಕೆಗಾನ್ ಎಂಬ ಝೆನ್ ಗುರುಗಳು ಇದ್ದರು. ಅವರಿಗೆ ಅನೇಕ ಮಂದಿ ಶಿಷ್ಯರಿದ್ದರು. ಒಂದು ದಿನ ಶಿಷ್ಯರಿಗೆ ಜ್ಞಾನೋಪದೇಶ ಮಾಡುತ್ತಿದ್ದರು. ಅದರಲ್ಲಿ ಒಬ್ಬ ಶಿಷ್ಯನಿಗೆ ಜ್ಞಾನೋದಯದ ಬಗ್ಗೆ ತಿಳಿಯಲು ತುಂಬಾ ಆಸಕ್ತಿ ಮತ್ತು ಅದರ ಬಗ್ಗೆ ಸಂಶಯಗಳಿತ್ತು.

ಗುರುಗಳು ಜ್ಞಾನದ ಕುರಿತು ಹೇಳುವಾಗ ಆಸಕ್ತಿಯಿಂದ ಕೇಳುತ್ತಿದ್ದನು. ಹೀಗೆ ಕೇಳುತ್ತಿರುವಾಗ ಅವನಿಗೆ ಜ್ಞಾನೋದಯ ಪಡೆಯುವುದು ಹೇಗೆ? ಒಮ್ಮೆ ಜ್ಞಾನೋದಯ ಪಡೆದ ನಂತರ ಪುನಃ ಆ ವ್ಯಕ್ತಿ ಸಾಮಾನ್ಯ ವ್ಯಕ್ತಿಯಂತೆ ವರ್ತಿಸಲು ಸಾಧ್ಯವೇ? ಎಂಬ ಸಂಶಯ ಮೂಡಿತು.

ಇದನ್ನು ಗುರುಗಳ ಹತ್ತಿರ ಕೇಳಿ ಪರಿಹರಿಸಬೇಕೆಂದು ತೀರ್ಮಾನಿಸಿ ಗುರುಗಳ ಸಮೀಪ ಬಂದನು. ನಂತರ ಗುರುಗಳನ್ನು ಉದ್ದೇಶಿಸಿ "ಗುರುಗಳೇ, ಒಬ್ಬ ವ್ಯಕ್ತಿ ಜ್ಞಾನ ಪಡೆದ ನಂತರ ಸಾಮಾನ್ಯ ವ್ಯಕ್ತಿಯಂತೆ ಬಾಳಲು ಸಾಧ್ಯವೇ?" ಎಂದು ಕೇಳಿದನು.

ಶಿಷ್ಯನ ಪ್ರಶ್ನೆಗೆ ಮುಗುಳ್ನಕ್ಕ ಗುರುಗಳು " ಒಡೆದು ಚೂರಾದ ಕನ್ನಡಿ ಮತ್ತು ಮರದಿಂದ ಉದುರಿದ ಹೂ ಎಂದೂ ತಮ್ಮ ಮುಂಚಿನ ಸ್ಥಿತಿಗೆ ಬರಲಾರವು" ಎಂದರು. ಗುರುಗಳ ಮಾತನ್ನು ಕೇಳಿದ ಶಿಷ್ಯನಿಗೆ ಜ್ಞಾನೋದಯ ಅಂದರೆ ಏನು ಅನ್ನುವುದು ಸ್ಪಷ್ಟವಾಗಿ ಅರ್ಥವಾಯಿತು.

English summary

Kannada Zen story | Inspirational short stories | ಝೆನ್ ಕಥೆ : ಒಡೆದ ಕನ್ನಡಿ ಮತ್ತು ಉದುರಿದ ಹೂಗಳು

Monk asked : " How does an enlightened person return to the ordinary world?"Kegon replied : " A broken mirror never reflects and fallen flowers never go back to the old branches".
X
Desktop Bottom Promotion