ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?

Kannada Zen story
ಒಂದು ಊರಿನಲ್ಲಿ ಒಂದು ಗುರುಗಳಿದ್ದರು. ಅವರು ಭವಿಷ್ಯವನ್ನು ಹೇಳುವುದರಲ್ಲಿ ತುಂಬಾ ಪ್ರಸಿದ್ಧರಾಗಿದ್ದರು. ಅವರು ಹೇಳಿದ ಭವಿಷ್ಯ ಎಲ್ಲವೂ ಸತ್ಯವಾಗುತ್ತಿತ್ತು. ಜನರು ಆ ಗುರುಗಳನ್ನು ತುಂಬಾ ಹೊಗಳುತ್ತಿದ್ದರು, ನೂರಾರು ಜನ ತಮ್ಮ ಭವಿಷ್ಯದ ಬಗ್ಗೆ ತಿಳಿಯಲು ಅವರನ್ನು ಪ್ರತಿನಿತ್ಯ ಭೀಟಿಯಾಗುತ್ತಿದ್ದರು.

ಅದೇ ಊರಿನಲ್ಲಿ ಒಬ್ಬ ಯುವಕ ಇದ್ದ. ಗುರುಗಳು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ಜನರ ಮಾತನ್ನು ಅವನು ನಂಬಲು ತಯಾರಿರಲಿಲ್ಲ. ಗುರುಗಳ ಮಾತು ಎಷ್ಟರ ಮಟ್ಟಿಗೆ ಸರಿ ಎಂದು ಪರೀಕ್ಷಿಸಿ ತಿಳಿದುಕೊಳ್ಳಬೇಕು ಎಂದು ತೀರ್ಮಾನಿಸಿದನು. ಅದಕ್ಕಾಗಿ ಒಂದು ಪಕ್ಷಿಯನ್ನು ಹಿಡಿದು ಗುರುಗಳ ಬಳಿಗೆ ಬಂದನು.

ಪಕ್ಷಿಯನ್ನು ಗಟ್ಟಿಯಾಗಿ ಹಿಡಿದು, ಕೈಯನ್ನು ಗುರುಗಳಿಗೆ ಕಾಣಿಸದಂತೆ ಹಿಂಬದಿಗೆ ಹಿಡಿದನು. ನಂತರ "ಗುರುಗಳೇ ನನ್ನ ಕೈಯಲ್ಲಿರುವ ಪಕ್ಷಿ ಸತ್ತಿದೆಯೇ ಅಥವಾ ಬದುಕಿದೆಯೇ" ಎಂದು ಎಂದು ಕೇಳಿ ವ್ಯಂಗ್ಯವಾದ ನಗು ಬೀರಿದನು.

ಗುರುಗಳು ಪಕ್ಷಿ ಬದುಕಿದೆ ಅಂದರೆ ಇದನ್ನು ಕೊಂದು ಬಿಡುತ್ತೇನೆ, ಸತ್ತಿದೆ ಅಂದರೆ ಗಾಳಿಯಲ್ಲಿ ಹಾರಲು ಬಿಡುತ್ತೇನೆ ಆಗ ಗುರುಗಳ ಮಾತು ಸುಳ್ಳಾಗುತ್ತದೆ ಎಂದು ಯೋಚಿಸುತ್ತಿದ್ದನು. ಆಗ ಗುರುಗಳು "ಮಗನೇ, ಆ ಪಕ್ಷಿ ಸಾಯುವುದು, ಬದುಕುವುದು ನಿನ್ನ ಕೈಯಲ್ಲಿಯೇ ಇದೆ" ಎಂದು ಹೇಳಿದರು.

English summary

Kannada Zen story | Inspirational short stories | ಝೆನ್ ಕಥೆ : ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?

A young man once approached his master with a bird that he caught behind his back. In order to play a prank on the old master he asked thus : Master is the bird dead or alive?
Story first published: Thursday, August 16, 2012, 14:09 [IST]
X
Desktop Bottom Promotion