Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಫೆ.5 ವಸಂತ ಪಂಚಮಿ: ವಿದ್ಯಾರ್ಥಿಗಳು ಹೀಗೆ ಮಾಡಿದರೆ ಯಶಸ್ಸು ಖಚಿತ!
ಫೆಬ್ರವರಿ 5ರಂದು ವಸಂತ ಪಂಚಮಿ. ಈ ಹಬ್ಬವನ್ನು ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ವಿಶೇಷವಾಗಿ ಈ ದಿನ ಸರಸ್ವತಿಯ ಆರಾಧನೆಗೆ ಮೀಸಲಾಗಿದೆ. ದೇವಿ ಸರಸ್ವತಿಯನ್ನು ಜ್ಞಾನ ಮತ್ತು ಸಂಗೀತದ ದೇವತೆ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ, ಈ ದಿನ ವಿದ್ಯಾರ್ಥಿಗಳು ಮತ್ತು ಸಂಗೀತ ಪ್ರಿಯರಿಗೆ ವಿಶೇಷವಾಗಿದೆ. ನೀವು ಸಹ ವಿದ್ಯಾರ್ಥಿಯಾಗಿದ್ದರೆ ಅಥವಾ ಯಾವುದೇ ವಿಶೇಷ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಉತ್ತಮ ಜ್ಞಾನಕ್ಕಾಗಿ ವಸಂತ ಪಂಚಮಿಯಂದು ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ:
ನೀವು ಯಾವುದೇ ಉನ್ನತ ಶಿಕ್ಷಣ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ವಸಂತ ಪಂಚಮಿಯ ದಿನದಂದು, ನಿಮ್ಮ ಪುಸ್ತಕಗಳನ್ನು ಪೂಜಿಸಿ ಮತ್ತು ಸರಸ್ವತಿ ದೇವಿಯ ಆರಾಧನೆಯ ಸಮಯದಲ್ಲಿ ಬ್ರಾಹ್ಮಣರಿಗೆ ವೇದಗಳನ್ನು ದಾನ ಮಾಡಿ.

ಅಧ್ಯಯನದಲ್ಲಿ ಮನಸ್ಸಿಲ್ಲದಿದ್ದರೆ:
ನಿಮ್ಮ ಮಕ್ಕಳಿಗೆ ಓದಲು ಮತ್ತು ಬರೆಯಲು ಇಷ್ಟವಿಲ್ಲದಿದ್ದರೆ, ವಸಂತ ಪಂಚಮಿಯ ದಿನದಂದು ಅವರ ಕೋಣೆಯಲ್ಲಿ ದೇವಿ ಸರಸ್ವತಿಯ ಚಿತ್ರವನ್ನು ಇರಿಸಿ ಮತ್ತು ಹಸಿರು ಹಣ್ಣುಗಳನ್ನು ಅರ್ಪಿಸಿ.

ಮಗುವನ್ನು ಬುದ್ಧಿವಂತರಾಗಿಸಲು:
ನಿಮ್ಮ ಮಗುವಿಗೆ ಎರಡೂವರೆಯಿಂದ ಮೂರು ವರ್ಷ ವಯಸ್ಸಾಗಿದ್ದರೆ, ವಸಂತ ಪಂಚಮಿಯ ದಿನದಂದು ಬೆಳ್ಳಿಯ ಪೆನ್ನು ಅಥವಾ ದಾಳಿಂಬೆ ಮರದ ತೊಗಟೆಯಿಂದ ಮಗುವಿನ ನಾಲಿಗೆಯ ಮೇಲೆ ಓಂ ಎಂದು ಬರೆಯಿರಿ. ಇದಲ್ಲದೇ ಮಕ್ಕಳಿಗೆ ಕೆಂಪು ಪೆನ್ನಿಂದ ನೋಟ್ಬುಕ್ನಲ್ಲಿ ಬರೆಯುವಂತೆ ಮಾಡಿ. ಈ ಕಾರಣದಿಂದಾಗಿ ಮಗು ಬುದ್ಧಿವಂತ ಮತ್ತು ಜ್ಞಾನವನ್ನು ಪಡೆಯುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸಲು:
ಮಗುವಿನ ಏಕಾಗ್ರತೆ ಹೆಚ್ಚಾಗಬೇಕಾದರೆ ವಸಂತ ಪಂಚಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸಿದ ನಂತರ ಆರು ಮುಖಿ ರುದ್ರಾಕ್ಷಿವನ್ನು ಧರಿಸುವಂತೆ ಮಾಡಿ. ಪೂಜೆಯ ನಂತರ, ಮಗುವಿನ ಅಧ್ಯಯನದ ಮೇಜಿನ ಮೇಲೆ ಸರಸ್ವತಿಯ ಚಿತ್ರವನ್ನು ಸ್ಥಾಪಿಸಿ ಮತ್ತು ಅಧ್ಯಯನ ಮಾಡುವ ಮೊದಲು ಮಗುವಿಗೆ ನಿಯಮಿತವಾಗಿ ತಾಯಿಯನ್ನು ಪೂಜಿಸುವಂತೆ ಹೇಳಿ. ಪ್ರತಿದಿನ ಹೀಗೆ ಮಾಡುವುದರಿಂದ ಸರಸ್ವತಿಯ ಆಶೀರ್ವಾದ ಸಿಗುತ್ತದೆ ಮತ್ತು ಏಕಾಗ್ರತೆಯೂ ಹೆಚ್ಚುತ್ತದೆ.



Click it and Unblock the Notifications
