Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಫೆ.5 ವಸಂತ ಪಂಚಮಿ: ವಿದ್ಯಾರ್ಥಿಗಳು ಹೀಗೆ ಮಾಡಿದರೆ ಯಶಸ್ಸು ಖಚಿತ!
ಫೆಬ್ರವರಿ 5ರಂದು ವಸಂತ ಪಂಚಮಿ. ಈ ಹಬ್ಬವನ್ನು ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ವಿಶೇಷವಾಗಿ ಈ ದಿನ ಸರಸ್ವತಿಯ ಆರಾಧನೆಗೆ ಮೀಸಲಾಗಿದೆ. ದೇವಿ ಸರಸ್ವತಿಯನ್ನು ಜ್ಞಾನ ಮತ್ತು ಸಂಗೀತದ ದೇವತೆ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ, ಈ ದಿನ ವಿದ್ಯಾರ್ಥಿಗಳು ಮತ್ತು ಸಂಗೀತ ಪ್ರಿಯರಿಗೆ ವಿಶೇಷವಾಗಿದೆ. ನೀವು ಸಹ ವಿದ್ಯಾರ್ಥಿಯಾಗಿದ್ದರೆ ಅಥವಾ ಯಾವುದೇ ವಿಶೇಷ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಉತ್ತಮ ಜ್ಞಾನಕ್ಕಾಗಿ ವಸಂತ ಪಂಚಮಿಯಂದು ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ:
ನೀವು ಯಾವುದೇ ಉನ್ನತ ಶಿಕ್ಷಣ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ವಸಂತ ಪಂಚಮಿಯ ದಿನದಂದು, ನಿಮ್ಮ ಪುಸ್ತಕಗಳನ್ನು ಪೂಜಿಸಿ ಮತ್ತು ಸರಸ್ವತಿ ದೇವಿಯ ಆರಾಧನೆಯ ಸಮಯದಲ್ಲಿ ಬ್ರಾಹ್ಮಣರಿಗೆ ವೇದಗಳನ್ನು ದಾನ ಮಾಡಿ.

ಅಧ್ಯಯನದಲ್ಲಿ ಮನಸ್ಸಿಲ್ಲದಿದ್ದರೆ:
ನಿಮ್ಮ ಮಕ್ಕಳಿಗೆ ಓದಲು ಮತ್ತು ಬರೆಯಲು ಇಷ್ಟವಿಲ್ಲದಿದ್ದರೆ, ವಸಂತ ಪಂಚಮಿಯ ದಿನದಂದು ಅವರ ಕೋಣೆಯಲ್ಲಿ ದೇವಿ ಸರಸ್ವತಿಯ ಚಿತ್ರವನ್ನು ಇರಿಸಿ ಮತ್ತು ಹಸಿರು ಹಣ್ಣುಗಳನ್ನು ಅರ್ಪಿಸಿ.

ಮಗುವನ್ನು ಬುದ್ಧಿವಂತರಾಗಿಸಲು:
ನಿಮ್ಮ ಮಗುವಿಗೆ ಎರಡೂವರೆಯಿಂದ ಮೂರು ವರ್ಷ ವಯಸ್ಸಾಗಿದ್ದರೆ, ವಸಂತ ಪಂಚಮಿಯ ದಿನದಂದು ಬೆಳ್ಳಿಯ ಪೆನ್ನು ಅಥವಾ ದಾಳಿಂಬೆ ಮರದ ತೊಗಟೆಯಿಂದ ಮಗುವಿನ ನಾಲಿಗೆಯ ಮೇಲೆ ಓಂ ಎಂದು ಬರೆಯಿರಿ. ಇದಲ್ಲದೇ ಮಕ್ಕಳಿಗೆ ಕೆಂಪು ಪೆನ್ನಿಂದ ನೋಟ್ಬುಕ್ನಲ್ಲಿ ಬರೆಯುವಂತೆ ಮಾಡಿ. ಈ ಕಾರಣದಿಂದಾಗಿ ಮಗು ಬುದ್ಧಿವಂತ ಮತ್ತು ಜ್ಞಾನವನ್ನು ಪಡೆಯುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸಲು:
ಮಗುವಿನ ಏಕಾಗ್ರತೆ ಹೆಚ್ಚಾಗಬೇಕಾದರೆ ವಸಂತ ಪಂಚಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸಿದ ನಂತರ ಆರು ಮುಖಿ ರುದ್ರಾಕ್ಷಿವನ್ನು ಧರಿಸುವಂತೆ ಮಾಡಿ. ಪೂಜೆಯ ನಂತರ, ಮಗುವಿನ ಅಧ್ಯಯನದ ಮೇಜಿನ ಮೇಲೆ ಸರಸ್ವತಿಯ ಚಿತ್ರವನ್ನು ಸ್ಥಾಪಿಸಿ ಮತ್ತು ಅಧ್ಯಯನ ಮಾಡುವ ಮೊದಲು ಮಗುವಿಗೆ ನಿಯಮಿತವಾಗಿ ತಾಯಿಯನ್ನು ಪೂಜಿಸುವಂತೆ ಹೇಳಿ. ಪ್ರತಿದಿನ ಹೀಗೆ ಮಾಡುವುದರಿಂದ ಸರಸ್ವತಿಯ ಆಶೀರ್ವಾದ ಸಿಗುತ್ತದೆ ಮತ್ತು ಏಕಾಗ್ರತೆಯೂ ಹೆಚ್ಚುತ್ತದೆ.



Click it and Unblock the Notifications











