Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಫೆ.5 ವಸಂತ ಪಂಚಮಿ: ವಿದ್ಯಾರ್ಥಿಗಳು ಹೀಗೆ ಮಾಡಿದರೆ ಯಶಸ್ಸು ಖಚಿತ!
ಫೆಬ್ರವರಿ 5ರಂದು ವಸಂತ ಪಂಚಮಿ. ಈ ಹಬ್ಬವನ್ನು ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ವಿಶೇಷವಾಗಿ ಈ ದಿನ ಸರಸ್ವತಿಯ ಆರಾಧನೆಗೆ ಮೀಸಲಾಗಿದೆ. ದೇವಿ ಸರಸ್ವತಿಯನ್ನು ಜ್ಞಾನ ಮತ್ತು ಸಂಗೀತದ ದೇವತೆ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ, ಈ ದಿನ ವಿದ್ಯಾರ್ಥಿಗಳು ಮತ್ತು ಸಂಗೀತ ಪ್ರಿಯರಿಗೆ ವಿಶೇಷವಾಗಿದೆ. ನೀವು ಸಹ ವಿದ್ಯಾರ್ಥಿಯಾಗಿದ್ದರೆ ಅಥವಾ ಯಾವುದೇ ವಿಶೇಷ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಉತ್ತಮ ಜ್ಞಾನಕ್ಕಾಗಿ ವಸಂತ ಪಂಚಮಿಯಂದು ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ:
ನೀವು ಯಾವುದೇ ಉನ್ನತ ಶಿಕ್ಷಣ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ವಸಂತ ಪಂಚಮಿಯ ದಿನದಂದು, ನಿಮ್ಮ ಪುಸ್ತಕಗಳನ್ನು ಪೂಜಿಸಿ ಮತ್ತು ಸರಸ್ವತಿ ದೇವಿಯ ಆರಾಧನೆಯ ಸಮಯದಲ್ಲಿ ಬ್ರಾಹ್ಮಣರಿಗೆ ವೇದಗಳನ್ನು ದಾನ ಮಾಡಿ.

ಅಧ್ಯಯನದಲ್ಲಿ ಮನಸ್ಸಿಲ್ಲದಿದ್ದರೆ:
ನಿಮ್ಮ ಮಕ್ಕಳಿಗೆ ಓದಲು ಮತ್ತು ಬರೆಯಲು ಇಷ್ಟವಿಲ್ಲದಿದ್ದರೆ, ವಸಂತ ಪಂಚಮಿಯ ದಿನದಂದು ಅವರ ಕೋಣೆಯಲ್ಲಿ ದೇವಿ ಸರಸ್ವತಿಯ ಚಿತ್ರವನ್ನು ಇರಿಸಿ ಮತ್ತು ಹಸಿರು ಹಣ್ಣುಗಳನ್ನು ಅರ್ಪಿಸಿ.

ಮಗುವನ್ನು ಬುದ್ಧಿವಂತರಾಗಿಸಲು:
ನಿಮ್ಮ ಮಗುವಿಗೆ ಎರಡೂವರೆಯಿಂದ ಮೂರು ವರ್ಷ ವಯಸ್ಸಾಗಿದ್ದರೆ, ವಸಂತ ಪಂಚಮಿಯ ದಿನದಂದು ಬೆಳ್ಳಿಯ ಪೆನ್ನು ಅಥವಾ ದಾಳಿಂಬೆ ಮರದ ತೊಗಟೆಯಿಂದ ಮಗುವಿನ ನಾಲಿಗೆಯ ಮೇಲೆ ಓಂ ಎಂದು ಬರೆಯಿರಿ. ಇದಲ್ಲದೇ ಮಕ್ಕಳಿಗೆ ಕೆಂಪು ಪೆನ್ನಿಂದ ನೋಟ್ಬುಕ್ನಲ್ಲಿ ಬರೆಯುವಂತೆ ಮಾಡಿ. ಈ ಕಾರಣದಿಂದಾಗಿ ಮಗು ಬುದ್ಧಿವಂತ ಮತ್ತು ಜ್ಞಾನವನ್ನು ಪಡೆಯುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸಲು:
ಮಗುವಿನ ಏಕಾಗ್ರತೆ ಹೆಚ್ಚಾಗಬೇಕಾದರೆ ವಸಂತ ಪಂಚಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸಿದ ನಂತರ ಆರು ಮುಖಿ ರುದ್ರಾಕ್ಷಿವನ್ನು ಧರಿಸುವಂತೆ ಮಾಡಿ. ಪೂಜೆಯ ನಂತರ, ಮಗುವಿನ ಅಧ್ಯಯನದ ಮೇಜಿನ ಮೇಲೆ ಸರಸ್ವತಿಯ ಚಿತ್ರವನ್ನು ಸ್ಥಾಪಿಸಿ ಮತ್ತು ಅಧ್ಯಯನ ಮಾಡುವ ಮೊದಲು ಮಗುವಿಗೆ ನಿಯಮಿತವಾಗಿ ತಾಯಿಯನ್ನು ಪೂಜಿಸುವಂತೆ ಹೇಳಿ. ಪ್ರತಿದಿನ ಹೀಗೆ ಮಾಡುವುದರಿಂದ ಸರಸ್ವತಿಯ ಆಶೀರ್ವಾದ ಸಿಗುತ್ತದೆ ಮತ್ತು ಏಕಾಗ್ರತೆಯೂ ಹೆಚ್ಚುತ್ತದೆ.



Click it and Unblock the Notifications