Latest Updates
-
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
ಸರಸ್ವತಿ ಆರಾಧನೆಗೆ ವಸಂತ ಪಂಚಮಿಗಿಂತ ಶುಭದಿನ ಮತ್ತೊಂದಿಲ್ಲ, ಇದರ ಮಹತ್ವವೇನು?
ತಾಯಿ ಸರಸ್ವತಿಯ ಆರಾಧನೆಗೆ ಮೀಸಲಾದ ದಿನವೇ ವಸಂತ ಪಂಚಮಿ. ಇದನ್ನು ಪ್ರತಿವರ್ಷ ಮಾಘ ಶುಕ್ಲ ಪಂಚಮಿಯಲ್ಲಿ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ಫೆಬ್ರವರಿ 5ರ ಶನಿವಾರದಂದು ವಸಂತ ಪಂಚಮಿ ಹಬ್ಬ ಬಂದಿದೆ. ವಸಂತ ಪಂಚಮಿ ದಿನವನ್ನು ಜ್ಞಾನ, ಸಂಗೀತ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನದ ದೇವತೆಯಾದ ಸರಸ್ವತಿಗೆ ಸಮರ್ಪಿಸಲಾಗಿರುವುದರಿಂದ ಇದನ್ನು 'ಸರಸ್ವತಿ ಪೂಜೆ' ಎಂದೂ ಕರೆಯುತ್ತಾರೆ. ಈ ಹಬ್ಬವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಮತ್ತು ಸರಸ್ವತಿಯನ್ನು ಹೇಗೆ ಪೂಜಿಸಬೇಕು? ಎಂಬುದನ್ನು ತಿಳಿದುಕೊಳ್ಳಲು ಈ ಲೇಖನ ಕೊನೆತನಕ ಓದಿ.

ವಸಂತ ಪಂಚಮಿ ದಿನಾಂಕ ಹಾಗೂ ಮುಹೂರ್ತ:
ಶನಿವಾರ, ಫೆಬ್ರವರಿ 5, 2022
ವಸಂತ ಪಂಚಮಿ ಮುಹೂರ್ತ - ಬೆಳಿಗ್ಗೆ 06:45ರಿಂದ ಮಧ್ಯಾಹ್ನ 12:34ವರೆಗೆ
ಅವಧಿ - 05 ಗಂಟೆಗಳು 49 ನಿಮಿಷಗಳು
ಪಂಚಮಿ ತಿಥಿ ಆರಂಭ - ಫೆಬ್ರವರಿ 05, 2022 ರಂದು ಬೆಳಗ್ಗೆ 03:47
ಪಂಚಮಿ ತಿಥಿ ಅಂತ್ಯ- ಫೆಬ್ರವರಿ 06, 2022 ರಂದು ಬೆಳಗ್ಗೆ 03:46

ವಸಂತ ಪಂಚಮಿ ಪೂಜಾ ವಿಧಿ:
ಸರಸ್ವತಿಯ ಆರಾಧನಾ ಪ್ರಕ್ರಿಯೆಯಲ್ಲಿ, ಮೊದಲನೆಯದಾಗಿ, ನಿಮ್ಮ ಬಾಹ್ಯ ಪಾವಿತ್ರ್ಯವನ್ನು ಮಾಡಿಕೊಳ್ಳಿ.
ನಂತರ ಸರಸ್ವತಿಯನ್ನು ಪೂಜಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡು, 'ಯಥೋಪಲಬ್ಧಪೂಜನಸಾಮಾಗ್ರೀಭಿಃ ಭಗವತ್ಯಾಃ ಸರಸ್ವತ್ಯಾಃ ಪೂಜನಮಹಂ ಕರಿಶ್ಯೆ' ಈ ಮಂತ್ರವನ್ನು ಓದಿ ನಂತರ ನೀರನ್ನು ಬಿಡಿ.
ಇದರ ನಂತರ, ಗಣೇಶನನ್ನು ಪೂಜಿಸಿ.
ಒಂದು ಪೀಠವನ್ನು ಸ್ಥಾಪಿಸಿ ಮತ್ತು ಅದರಲ್ಲಿ ಸರಸ್ವತಿ ದೇವಿಯನ್ನು ಗೌರವದಿಂದ ಆಹ್ವಾನಿಸಿ. ವೇದ ಅಥವಾ ಪೌರಾಣಿಕ ಮಂತ್ರಗಳನ್ನು ಪಠಿಸುವಾಗ ಭಗವತಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ.
ಪೂಜೆಯ ಸಮಯದಲ್ಲಿ, 'ಶ್ರೀ ಹೃರೀಂ ಸರಸ್ವತ್ಯೈ ಸ್ವಾಹಾ' ಎನ್ನುವ ಅಷ್ಟಾಕ್ಷರ ಮಂತ್ರದೊಂದಿಗೆ ಎಲ್ಲವನ್ನೂ ಶ್ರೀಸರಸ್ವತಿಗೆ ಅರ್ಪಿಸಿ. ಅಂತಿಮವಾಗಿ, ಸರಸ್ವತಿ ದೇವಿಗೆ ಆರತಿ ಮಾಡಿ ಮತ್ತು ಅವಳನ್ನು ಸ್ತುತಿಸಿ.

ಸರಸ್ವತಿ ವಂದನೆ:
'ಸರಸ್ವತಿ ಯಾ ಕುಂಡೆಂದು' ಸರಸ್ವತಿ ದೇವಿಗೆ ಸಮರ್ಪಿತವಾದ ಅತ್ಯಂತ ಪ್ರಸಿದ್ಧ ಸ್ತುತಿ ಮತ್ತು ಪ್ರಸಿದ್ಧ ಸರಸ್ವತಿ ಸ್ತೋತ್ರದ ಭಾಗವಾಗಿದೆ. ವಸಂತ ಪಂಚಮಿಯ ಮುನ್ನಾದಿನದಂದು ಸರಸ್ವತಿ ಪೂಜೆಯ ಸಮಯದಲ್ಲಿ ಇದನ್ನು ಪಠಿಸಲಾಗುತ್ತದೆ.

ವಸಂತ ಪಂಚಮಿ ಪೂಜಾ ಸಾಮಾಗ್ರಿಗಳು:
ಮಂತ್ರ ಪಠಣೆಯ ಹೊರತಾಗಿ, ಸಾಧ್ಯವಾದಷ್ಟು ಸಂಗೀತ ಸೇವೆಗಳನ್ನು ಮಾಡುವ ಮೂಲಕ, ಭಗವತಿಗೆ ಗಂಧ, ಪುಷ್ಪ, ಮಿಷ್ಠಾನ ಮುಂತಾದವುಗಳನ್ನು ಅರ್ಪಿಸಿ. ಪುಸ್ತಕ ಮತ್ತು ಪೆನ್ನ್ನು ಸರಸ್ವತಿ ದೇವಿಯನ್ನು ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಪುಸ್ತಕ ಮತ್ತು ಪೆನ್ನ್ನು ಪೂಜಿಸಬೇಕು. ಸರಸ್ವತಿ ದೆವಿಯನ್ನು ಪೂಜಿಸುವಾಗ ಹೆಚ್ಚಿನ ವಸ್ತುಗಳು ಬಿಲಿ ಬಣ್ಣದಲ್ಲಿರಬೇಕು.
ಹಾಲು, ಮೊಸರು ಬೆಣ್ಣೆ, ಅಕ್ಕಿ, ಬಿಳಿ ಎಳ್ಳಿನ ಲಡ್ಡುಗಳನ್ನು, ಕಬ್ಬು ಮತ್ತು ಕಬ್ಬಿನ ರಸ, ಮಾಗಿದ ಬೆಲ್ಲ, ಜೇನುತುಪ್ಪ, ಬಿಳಿ ಶ್ರೀಗಂಧದ ಮರ, ಬಿಳಿ ಹೂವುಗಳು, ಬಿಳಿ ಉಡುಗೆ, ಬಿಳಿ ಅಲಂಕಾರ, ಖೋವಾ, ಶುಂಠಿ, ಮೂಲಂಗಿ, ಸಕ್ಕರೆ, ಅಕ್ಷತೆ, ಮೋದಕ, ಧೃತ, ಮಾಗಿದ ಬಾಳೆಹಣ್ಣು, ದ್ವಿದಳ ಧಾನ್ಯ, ತೆಂಗಿನಕಾಯಿ, ತೆಂಗಿನ ನೀರು, ಶ್ರೀಫಲ, ಬದರಿಫಲ ಇತ್ಯಾದಿ ವಸ್ತುಗಳನ್ನು ಪೂಜೆಯಲ್ಲಿ ಬಳಸಬೇಕು.

ವಸಂತ ಪಂಚಮಿ ಪ್ರಾಮುಖ್ಯತೆ:
ಜನರು ಜ್ಞಾನವನ್ನು ಪಡೆಯಲು ಮತ್ತು ಆಲಸ್ಯ ಮತ್ತು ಅಜ್ಞಾನವನ್ನು ತೊಡೆದುಹಾಕಲು ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಮಕ್ಕಳಿಗೆ ಶಿಕ್ಷಣವನ್ನು ಪ್ರಾರಂಭಿಸುವ ಅಕ್ಷರ-ಅಭ್ಯಾಸ/ ವಿದ್ಯಾರಂಭ/ ಪ್ರಾಶನ ಎಂದು ಕರೆಯಲಾಗುವ ಆಚರಣೆಯು ವಸಂತ ಪಂಚಮಿಯ ಪ್ರಸಿದ್ಧ ಆಚರಣೆಗಳಲ್ಲಿ ಒಂದಾಗಿದೆ. ದೇವಿಯ ಆಶೀರ್ವಾದ ಪಡೆಯಲು ಶಾಲಾ-ಕಾಲೇಜುಗಳಲ್ಲಿ ಬೆಳಿಗ್ಗೆ ಪೂಜೆಗಳನ್ನು ಏರ್ಪಡಿಸಲಾಗುವುದು. ಜೊತೆಗೆ ಇದು ಎಲ್ಲಾ ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಲು ಮಂಗಳಕರ ದಿನವಾಗಿದೆ.



Click it and Unblock the Notifications